Skip to main content

Blog number 1409. ಲೋಕಸಭೆಯಿಂದ ತಾಲ್ಲೂಕ್ ಪಂಚಾಯ್ತಿಯ ತನಕ ಜಾತ್ಯಾತೀತ ಜನತಾದಳದ ಅಭ್ಯರ್ಥಿಗಳಿಗೆ ಬಿ ಪಾರಂಗೆ ಇವತ್ತಿಗೂ ಸಹಿ ಮಾಡುವ ಅಧಿಕಾರ ಹೆಚ್.ಡಿ.ದೇವೇಗೌಡರು ಕಾಯ್ದಿರಿಸಿದ್ದಾರೆ, ಹಾಗಾದರೆ ಬಿ ಪಾರಂ ಎಂದರೇನು ?

#ಪ್ರತಿ_ಚುನಾವಣೆಯಲ್ಲಿ_ಮುನ್ನೋಲೆಗೆ_ಬರುವ_ಬಿ_ಪಾರಂ

#ಬಿ_ಪಾರಂ_ಎಂದರೆ_ಏನು?

#ರಾಜಕಾರಣದ_ಚಾಣಕ್ಯ_ದೇವೇಗೌಡರು_ಇವತ್ತಿಗೂ_ಬಿ_ಪಾರಂ_ಸಹಿ_ಮಾಡುತ್ತಾರೆ.

#ಲೋಕ_ಸಭೆಯಿ೦ದ_ತಾಲ್ಲೂಕ್_ಪಂಚಾಯತ್_ತನಕ_ದೇವೇಗೌಡರೇ_ಬಿ_ಪಾರಂ_ನೀಡುತ್ತಾರೆ.

#ರಾಜಕೀಯ_ಪಕ್ಷಗಳ_ಅಭ್ಯರ್ಥಿಗಳು_ನಾಮಪತ್ರ_ಸಲ್ಲಿಕೆಯ_ದಿನ_ಬಿ_ಪಾರಂ_ಲಗತ್ತಿಸಲೇ_ಬೇಕು

#ಬಿ_ಪಾರಂಗೆ_ಅಭ್ಯರ್ಥಿಗಳು_ಪೂಜೆ_ಮಾಡಿಸುತ್ತಾರೆ.

#ರಾಜಕೀಯ_ಪಕ್ಷದ_ಅಧಿಕೃತ_ಅಭ್ಯರ್ಥಿ_ಎಂದು_ಸಾಕ್ಷಿಕರಿಸುವುದು_ಬಿ_ಪಾರ೦

#ಪಕ್ಷದ_ಅಧಿಕೃತ_ಚುನಾವಣಾ_ಚಿಹ್ನೆ_ಬಳಸುವ_ಅನುಮತಿ_ಪತ್ರ

   ವಿಧಾನಸಭಾ ಚುನಾವಣೆಗೆ ನಿನ್ನೆಯಿಂದ ನಾಮ ಪತ್ರ ಸಲ್ಲಿಸಲು ಪ್ರಾರಂಭವಾಗಿದೆ ನಾಳೆಯಿಂದ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಅದಕ್ಕಾಗಿ ಆಯಾ ರಾಜಕೀಯ ಪಕ್ಷಗಳು ಬಿ ಪಾರಂ ವಿತರಣೆ ಪ್ರಾರಂಭ ಮಾಡಿದೆ.
  ಭಾರತೀಯ ಜನತಾ ಪಕ್ಷ ಬಿ ಪಾರಂಗಳನ್ನು ಆಯಾ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಅಧ್ಯಕ್ಷರಿಂದ ಅಭ್ಯರ್ಥಿಗಳಿಗೆ ವಿತರಿಸುತ್ತಿದೆ, ನಾಳೆ ಸಾಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಸಲಿದ್ದಾರೆ ಅದಕ್ಕಾಗಿ ಇವತ್ತು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೇಘರಾಜರಿಂದ ಬಿ ಪಾರಂ ಪಡೆದು ವಿವಿದ ದೇವಾಲಯಕ್ಕೆ ಹೋಗಿ ಬಿ ಪಾರಂ ದೇವರ ಎದುರು ಇಟ್ಟು ಪೂಜೆ ಮಾಡಿಸಿದ್ದಾರೆ.
   ಕಾ೦ಗ್ರೇಸ್ ಪಕ್ಷ ರಾಜ್ಯದಾದ್ಯಂತ ವಿಧಾನ ಸಭೆಗೆ ಸ್ಪರ್ದೆ ಮಾಡುವ ತನ್ನ ಅಭ್ಯರ್ಥಿಗಳಿಗೆ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಸ್ತದಿಂದಲೇ ಬಿ ಪಾರಂ ಪಡೆಯಬೇಕಾಗಿದೆ ಆದ್ದರಿಂದ ಸಾಗರ ವಿಧಾನಸಭಾ ಕಾಂಗ್ರೇಸ್ ಅಭ್ಯರ್ಥಿಗಳಾದ ಬೇಳೂರು ಗೋಪಾಲಕೃಷ್ಣ ಇವತ್ತು ಡಿ.ಕೆ.ಶಿವಕುಮಾರರಿಂದ ಬಿ ಪಾರಂ ಪಡೆದಿದ್ದಾರೆ.
  ಖ್ಯಾತ ಹೈಕೋರ್ಟ್ ವಕೀಲರಾದ ದಿವಾಕರ್ ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅವರು ಅವರ ಪಕ್ಷದ ಬಿ ಪಾರಂ ಪಡೆದಿದ್ದಾರೆ.
   ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ತೀನಾ. ಶ್ರೀನಿವಾಸ್ ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿದ್ದಾರೆ ಪಕ್ಷೇತರ ಅಭ್ಯರ್ಥಿಗಳು ಬಿ ಪಾರಂ ಸಲ್ಲಿಸಬೇಕಾಗಿಲ್ಲ ಅವರು  ಚುನಾವಣೆಗೆ ಲಭ್ಯವಿರುವ ಚಿಹ್ನೆಗಳಲ್ಲಿ ಸೂಚಿಸಿದ ಮೂರು ಚಿಹ್ನೆಯಲ್ಲಿ ಒಂದನ್ನು ಪಡೆಯುತ್ತಾರೆ.
  

   ಹಾಗಾದರೆ ಬಿ ಪಾರಂ ಎಂದರೇನು? .... ಚುನಾವಣಾ ಆಯೋಗಕ್ಕೆ ಪಕ್ಷಗಳ ಸ್ಥಾನಮಾನದ ಅರ್ಹತೆ ಪಡೆದ ರಾಜಕೀಯ ಪಕ್ಷಗಳು ಪಾರಂ - ಎ ನಲ್ಲಿ ತನ್ನ ಅಭ್ಯರ್ಥಿಗಳನ್ನು ಸೂಚಿಸುವ ಅವರಿಗೆ ಆ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ ಬಳಸಲು ಅನುಮತಿ ನೀಡುವ ಪಾರಂ -ಬಿ ಗೆ ಅಧಿಕೃತವಾಗಿ ಸಹಿ ಮಾಡುವ ಘೋಷಣೆಯನ್ನು ಸಲ್ಲಿಸಿರುತ್ತದೆ ಆ ಪ್ರಕಾರವಾಗಿ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿ ಹೆಸರು, ಕ್ಷೇತ್ರ, ವಿಳಾಸ  ಪಾರಂ -ಬಿ ಯಲ್ಲಿ ನಮೂದಿಸಿ ಸಹಿ ಮಾಡುವ ಅಧಿಕಾರ ಪಡೆದ ಪಕ್ಷದ ಅಧ್ಯಕ್ಷ ಅಥವ ಕಾಯ೯ದರ್ಶಿ ಸಹಿ ಮಾಡಿ ನೀಡುವ ಪತ್ರವಾದ ಪಾರಂ -ಬಿ ಯನ್ನೆ ಬಿ ಪಾರಂ ಎಂದು ಕರೆಯುತ್ತಾರೆ.
  ಇದರಲ್ಲಿ ಅಧಿಕೃತ ಅಭ್ಯರ್ಥಿ ನಾಮಪತ್ರ ಸ್ವೀಕೃತವಾಗದಿದ್ದರೆ  ಅವರಿಗೆ ಪಕ್ಷದ ಚಿಹ್ನೆ ಚುನಾವಣಾ ಅಧಿಕಾರಿಗಳು ನೀಡುವುದಿಲ್ಲ ಸದರಿ ಬಿ ಪಾರಂನಲ್ಲಿ ಬದಲಿ ಅಭ್ಯರ್ಥಿ ಹೆಸರೂ ನಮೂದಿಸಬಹುದಾಗಿದೆ, ನಾಮ ಪತ್ರ ಸ್ವೀಕಾರವಾದರೆ ಆ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ ಅಭ್ಯರ್ಥಿಗೆ ಬಳಸುವ ಅವಕಾಶ ಸಿಗುತ್ತದೆ, ಆಯಾ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಎನ್ನುವುದನ್ನು ಪಾರಂ ಬಿ ಸಾಕ್ಷೀಕರಿಸುತ್ತದೆ ಮತ್ತು ಆ ಪಕ್ಷಕ್ಕೆ ಮೀಸಲಿಟ್ಟ ಚಿಹ್ನೆ ಈ ಬಿ- ಪಾರಂ ನೀಡಿದ ಅಭ್ಯರ್ಥಿಗೆ ಚುನಾವಣಾ ಆಯೋಗ ನೀಡುತ್ತದೆ.
   ಇಂತಹ ಬಿ ಪಾರಂಗಾಗಿಯೇ ಅಭ್ಯರ್ಥಿಗಳು ಆಯಾ ರಾಜಕೀಯ ಪಕ್ಷದಲ್ಲಿ ಹೋರಾಟ ಮಾಡುತ್ತಾರೆ.
     ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಪಕ್ಷ ಸ್ಥಾಪನೆ ಮಾಡಿದ ದಿನದಿಂದ ಇವತ್ತಿನ ವರೆಗೂ ಪಕ್ಷದ ಅಭ್ಯರ್ಥಿಗಳಿಗೆ ಬಿ ಪಾರಂ ಸಹಿ ಮಾಡುವ ಅಧಿಕಾರ ಅವರೇ ಇಟ್ಟುಕೊಂಡಿದ್ದಾರೆ!? ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ನಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯ್ತಿಯ ತನಕದ ಬಿ ಪಾರಂ ನೀಡುವವರು ದೇವೇಗೌಡರು ಮಾತ್ರ.
  ಕುಮಾರಸ್ವಾಮಿ, ರೇವಣ್ಣ, ರಾಜ್ಯದ್ಯಾಕ್ಷ ಇಬ್ರಾಹಿಂ ಸಾಹೇಬರಿಗೂ ಈ ಅಧಿಕಾರ ಇಲ್ಲ ಈ ರೀತಿ ದೇವೇಗೌಡರು ಅವರೇ ಸ್ಥಾಪಿಸಿದ ರಾಜಕೀಯ ಪಕ್ಷದ ಲಗಾಮು ಹಿಡಿದಿಡದಿದ್ದರೆ ಅವರ ಮಕ್ಕಳು ದೇವೇಗೌಡರನ್ನು ಯಾವಾಗಲೋ ಮೂಲೆಗೆ ಸೇರಿಸಿ ಬಿಡುತ್ತಿದ್ದರೆಂಬ ಹಾಸ್ಯದ ಮಾತು ರಾಜಕೀಯ ವಲಯದಲ್ಲಿದೆ ಅದು ವಾಸ್ತವ ಕೂಡ ಆದ್ದರಿಂದಲೇ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಸ್ಟಾಮಿ ಘೋಷಣೆ ಮಾಡಿದ ಅಭ್ಯರ್ಥಿ ಬದಲಿಸಿ ತಮ್ಮ ಶಿಷ್ಯ ಕಾಂಗ್ರೇಸ್ ಸೇರಿ ಆ ಪಕ್ಷದ ಟಿಕೇಟು ವಂಚಿತ ದತ್ತಣ್ಣರಿಗೆ ದೇವೇಗೌಡರು ತಮ್ಮ ಪುತ್ರ ಕುಮಾರ್ ಸ್ಟಾಮಿ ವಿರೋದವಿದ್ದರೂ ಬಿ ಪಾರಂ ನೀಡಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...