Skip to main content

Blog number 1409. ಲೋಕಸಭೆಯಿಂದ ತಾಲ್ಲೂಕ್ ಪಂಚಾಯ್ತಿಯ ತನಕ ಜಾತ್ಯಾತೀತ ಜನತಾದಳದ ಅಭ್ಯರ್ಥಿಗಳಿಗೆ ಬಿ ಪಾರಂಗೆ ಇವತ್ತಿಗೂ ಸಹಿ ಮಾಡುವ ಅಧಿಕಾರ ಹೆಚ್.ಡಿ.ದೇವೇಗೌಡರು ಕಾಯ್ದಿರಿಸಿದ್ದಾರೆ, ಹಾಗಾದರೆ ಬಿ ಪಾರಂ ಎಂದರೇನು ?

#ಪ್ರತಿ_ಚುನಾವಣೆಯಲ್ಲಿ_ಮುನ್ನೋಲೆಗೆ_ಬರುವ_ಬಿ_ಪಾರಂ

#ಬಿ_ಪಾರಂ_ಎಂದರೆ_ಏನು?

#ರಾಜಕಾರಣದ_ಚಾಣಕ್ಯ_ದೇವೇಗೌಡರು_ಇವತ್ತಿಗೂ_ಬಿ_ಪಾರಂ_ಸಹಿ_ಮಾಡುತ್ತಾರೆ.

#ಲೋಕ_ಸಭೆಯಿ೦ದ_ತಾಲ್ಲೂಕ್_ಪಂಚಾಯತ್_ತನಕ_ದೇವೇಗೌಡರೇ_ಬಿ_ಪಾರಂ_ನೀಡುತ್ತಾರೆ.

#ರಾಜಕೀಯ_ಪಕ್ಷಗಳ_ಅಭ್ಯರ್ಥಿಗಳು_ನಾಮಪತ್ರ_ಸಲ್ಲಿಕೆಯ_ದಿನ_ಬಿ_ಪಾರಂ_ಲಗತ್ತಿಸಲೇ_ಬೇಕು

#ಬಿ_ಪಾರಂಗೆ_ಅಭ್ಯರ್ಥಿಗಳು_ಪೂಜೆ_ಮಾಡಿಸುತ್ತಾರೆ.

#ರಾಜಕೀಯ_ಪಕ್ಷದ_ಅಧಿಕೃತ_ಅಭ್ಯರ್ಥಿ_ಎಂದು_ಸಾಕ್ಷಿಕರಿಸುವುದು_ಬಿ_ಪಾರ೦

#ಪಕ್ಷದ_ಅಧಿಕೃತ_ಚುನಾವಣಾ_ಚಿಹ್ನೆ_ಬಳಸುವ_ಅನುಮತಿ_ಪತ್ರ

   ವಿಧಾನಸಭಾ ಚುನಾವಣೆಗೆ ನಿನ್ನೆಯಿಂದ ನಾಮ ಪತ್ರ ಸಲ್ಲಿಸಲು ಪ್ರಾರಂಭವಾಗಿದೆ ನಾಳೆಯಿಂದ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಅದಕ್ಕಾಗಿ ಆಯಾ ರಾಜಕೀಯ ಪಕ್ಷಗಳು ಬಿ ಪಾರಂ ವಿತರಣೆ ಪ್ರಾರಂಭ ಮಾಡಿದೆ.
  ಭಾರತೀಯ ಜನತಾ ಪಕ್ಷ ಬಿ ಪಾರಂಗಳನ್ನು ಆಯಾ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಅಧ್ಯಕ್ಷರಿಂದ ಅಭ್ಯರ್ಥಿಗಳಿಗೆ ವಿತರಿಸುತ್ತಿದೆ, ನಾಳೆ ಸಾಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಸಲಿದ್ದಾರೆ ಅದಕ್ಕಾಗಿ ಇವತ್ತು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೇಘರಾಜರಿಂದ ಬಿ ಪಾರಂ ಪಡೆದು ವಿವಿದ ದೇವಾಲಯಕ್ಕೆ ಹೋಗಿ ಬಿ ಪಾರಂ ದೇವರ ಎದುರು ಇಟ್ಟು ಪೂಜೆ ಮಾಡಿಸಿದ್ದಾರೆ.
   ಕಾ೦ಗ್ರೇಸ್ ಪಕ್ಷ ರಾಜ್ಯದಾದ್ಯಂತ ವಿಧಾನ ಸಭೆಗೆ ಸ್ಪರ್ದೆ ಮಾಡುವ ತನ್ನ ಅಭ್ಯರ್ಥಿಗಳಿಗೆ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಸ್ತದಿಂದಲೇ ಬಿ ಪಾರಂ ಪಡೆಯಬೇಕಾಗಿದೆ ಆದ್ದರಿಂದ ಸಾಗರ ವಿಧಾನಸಭಾ ಕಾಂಗ್ರೇಸ್ ಅಭ್ಯರ್ಥಿಗಳಾದ ಬೇಳೂರು ಗೋಪಾಲಕೃಷ್ಣ ಇವತ್ತು ಡಿ.ಕೆ.ಶಿವಕುಮಾರರಿಂದ ಬಿ ಪಾರಂ ಪಡೆದಿದ್ದಾರೆ.
  ಖ್ಯಾತ ಹೈಕೋರ್ಟ್ ವಕೀಲರಾದ ದಿವಾಕರ್ ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅವರು ಅವರ ಪಕ್ಷದ ಬಿ ಪಾರಂ ಪಡೆದಿದ್ದಾರೆ.
   ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ತೀನಾ. ಶ್ರೀನಿವಾಸ್ ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿದ್ದಾರೆ ಪಕ್ಷೇತರ ಅಭ್ಯರ್ಥಿಗಳು ಬಿ ಪಾರಂ ಸಲ್ಲಿಸಬೇಕಾಗಿಲ್ಲ ಅವರು  ಚುನಾವಣೆಗೆ ಲಭ್ಯವಿರುವ ಚಿಹ್ನೆಗಳಲ್ಲಿ ಸೂಚಿಸಿದ ಮೂರು ಚಿಹ್ನೆಯಲ್ಲಿ ಒಂದನ್ನು ಪಡೆಯುತ್ತಾರೆ.
  

   ಹಾಗಾದರೆ ಬಿ ಪಾರಂ ಎಂದರೇನು? .... ಚುನಾವಣಾ ಆಯೋಗಕ್ಕೆ ಪಕ್ಷಗಳ ಸ್ಥಾನಮಾನದ ಅರ್ಹತೆ ಪಡೆದ ರಾಜಕೀಯ ಪಕ್ಷಗಳು ಪಾರಂ - ಎ ನಲ್ಲಿ ತನ್ನ ಅಭ್ಯರ್ಥಿಗಳನ್ನು ಸೂಚಿಸುವ ಅವರಿಗೆ ಆ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ ಬಳಸಲು ಅನುಮತಿ ನೀಡುವ ಪಾರಂ -ಬಿ ಗೆ ಅಧಿಕೃತವಾಗಿ ಸಹಿ ಮಾಡುವ ಘೋಷಣೆಯನ್ನು ಸಲ್ಲಿಸಿರುತ್ತದೆ ಆ ಪ್ರಕಾರವಾಗಿ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿ ಹೆಸರು, ಕ್ಷೇತ್ರ, ವಿಳಾಸ  ಪಾರಂ -ಬಿ ಯಲ್ಲಿ ನಮೂದಿಸಿ ಸಹಿ ಮಾಡುವ ಅಧಿಕಾರ ಪಡೆದ ಪಕ್ಷದ ಅಧ್ಯಕ್ಷ ಅಥವ ಕಾಯ೯ದರ್ಶಿ ಸಹಿ ಮಾಡಿ ನೀಡುವ ಪತ್ರವಾದ ಪಾರಂ -ಬಿ ಯನ್ನೆ ಬಿ ಪಾರಂ ಎಂದು ಕರೆಯುತ್ತಾರೆ.
  ಇದರಲ್ಲಿ ಅಧಿಕೃತ ಅಭ್ಯರ್ಥಿ ನಾಮಪತ್ರ ಸ್ವೀಕೃತವಾಗದಿದ್ದರೆ  ಅವರಿಗೆ ಪಕ್ಷದ ಚಿಹ್ನೆ ಚುನಾವಣಾ ಅಧಿಕಾರಿಗಳು ನೀಡುವುದಿಲ್ಲ ಸದರಿ ಬಿ ಪಾರಂನಲ್ಲಿ ಬದಲಿ ಅಭ್ಯರ್ಥಿ ಹೆಸರೂ ನಮೂದಿಸಬಹುದಾಗಿದೆ, ನಾಮ ಪತ್ರ ಸ್ವೀಕಾರವಾದರೆ ಆ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ ಅಭ್ಯರ್ಥಿಗೆ ಬಳಸುವ ಅವಕಾಶ ಸಿಗುತ್ತದೆ, ಆಯಾ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಎನ್ನುವುದನ್ನು ಪಾರಂ ಬಿ ಸಾಕ್ಷೀಕರಿಸುತ್ತದೆ ಮತ್ತು ಆ ಪಕ್ಷಕ್ಕೆ ಮೀಸಲಿಟ್ಟ ಚಿಹ್ನೆ ಈ ಬಿ- ಪಾರಂ ನೀಡಿದ ಅಭ್ಯರ್ಥಿಗೆ ಚುನಾವಣಾ ಆಯೋಗ ನೀಡುತ್ತದೆ.
   ಇಂತಹ ಬಿ ಪಾರಂಗಾಗಿಯೇ ಅಭ್ಯರ್ಥಿಗಳು ಆಯಾ ರಾಜಕೀಯ ಪಕ್ಷದಲ್ಲಿ ಹೋರಾಟ ಮಾಡುತ್ತಾರೆ.
     ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಪಕ್ಷ ಸ್ಥಾಪನೆ ಮಾಡಿದ ದಿನದಿಂದ ಇವತ್ತಿನ ವರೆಗೂ ಪಕ್ಷದ ಅಭ್ಯರ್ಥಿಗಳಿಗೆ ಬಿ ಪಾರಂ ಸಹಿ ಮಾಡುವ ಅಧಿಕಾರ ಅವರೇ ಇಟ್ಟುಕೊಂಡಿದ್ದಾರೆ!? ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ನಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯ್ತಿಯ ತನಕದ ಬಿ ಪಾರಂ ನೀಡುವವರು ದೇವೇಗೌಡರು ಮಾತ್ರ.
  ಕುಮಾರಸ್ವಾಮಿ, ರೇವಣ್ಣ, ರಾಜ್ಯದ್ಯಾಕ್ಷ ಇಬ್ರಾಹಿಂ ಸಾಹೇಬರಿಗೂ ಈ ಅಧಿಕಾರ ಇಲ್ಲ ಈ ರೀತಿ ದೇವೇಗೌಡರು ಅವರೇ ಸ್ಥಾಪಿಸಿದ ರಾಜಕೀಯ ಪಕ್ಷದ ಲಗಾಮು ಹಿಡಿದಿಡದಿದ್ದರೆ ಅವರ ಮಕ್ಕಳು ದೇವೇಗೌಡರನ್ನು ಯಾವಾಗಲೋ ಮೂಲೆಗೆ ಸೇರಿಸಿ ಬಿಡುತ್ತಿದ್ದರೆಂಬ ಹಾಸ್ಯದ ಮಾತು ರಾಜಕೀಯ ವಲಯದಲ್ಲಿದೆ ಅದು ವಾಸ್ತವ ಕೂಡ ಆದ್ದರಿಂದಲೇ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಸ್ಟಾಮಿ ಘೋಷಣೆ ಮಾಡಿದ ಅಭ್ಯರ್ಥಿ ಬದಲಿಸಿ ತಮ್ಮ ಶಿಷ್ಯ ಕಾಂಗ್ರೇಸ್ ಸೇರಿ ಆ ಪಕ್ಷದ ಟಿಕೇಟು ವಂಚಿತ ದತ್ತಣ್ಣರಿಗೆ ದೇವೇಗೌಡರು ತಮ್ಮ ಪುತ್ರ ಕುಮಾರ್ ಸ್ಟಾಮಿ ವಿರೋದವಿದ್ದರೂ ಬಿ ಪಾರಂ ನೀಡಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ