Skip to main content

Blog number 1355. ನಾರೀ ನಾರಾಯಣಪ್ಪ ಮಿತ ಬಾಷಿ, ಮಾದರಿ ಕೃಷಿಕ ಸಂಪನ್ನ ರೈತರು ಇನ್ನು ನೆನಪು ಮಾತ್ರ

#ಶ್ರದ್ದಾಂಜಲಿಗಳು

#ನಾರಿ_ನಾರಾಯಣಪ್ಪ_ಹಾರ್ನಳ್ಳಿ

#ಮಾಜಿ_ಮಂಡಲ್_ಪಂಚಾಯತ್_ಸದಸ್ಯರು_ಯಡೇಹಳ್ಳಿ

#ಮಿತಬಾಷಿ_ಶ್ರಮಜೀವಿ_ಸಜ್ಜನ_ಕೃಷಿಕರು.

  1985 ರಿಂದ 2000 ಇಸವಿ ತನಕ ನಾನು ನಮ್ಮ ಶ್ರೀ ಕೃಷ್ಣ ರೈಸ್ ಮಿಲ್ ಅಕ್ಕಿ ಗಿರಣಿ ಮಾಲಿಕ ಆಗ ಆನಂದಪುರಂ ಹೋಬಳಿ, ಪಕ್ಕದ ಹೊಸನಗರ ತಾಲ್ಲೂಕಿನ ಹರತಾಳು, ನಂಜವಳ್ಳಿ, ಹುಣಸಳ್ಳಿ, ನವಟೂರು, ಹಾಲುಗುಡ್ಡೆ, ಮಾದಾಪುರ ಈ ಕಡೆ ಶಿವಮೊಗ್ಗ ತಾಲ್ಲೂಕಿನ ಕುಣೇಹೊಸೂರು, ಸನ್ನಿ ವಾಸ, ತುಪ್ಪೂರು, ಬ್ಯಾಡನಳ್ಳ, ಚೊಡನಳ್ಳಗಳ ರೈತರು ತಾವು ಬೆಳೆದ ಭತ್ತ ತಂದು ನಮ್ಮ ಅಕ್ಕಿ ಗಿರಣಿಯಲ್ಲಿ ಅಕ್ಕಿ ಮಾಡಿ ಕೊಂಡು ಹೋಗುತ್ತಿದ್ದರು ಆದ್ದರಿಂದ ಈ ಪ್ರದೇಶದ ಪ್ರತಿ ಮನೆಗಳ ಒಡನಾಟವಿತ್ತು.
  ಆ ಕಾಲದಲ್ಲಿ ಹೊಸೂರು ಗ್ರಾಮದ ಹಂದಿಗ ಹಾರ್ನಳ್ಳಿ ಭಾಗದ ನಾರೀ ನಾರಾಯಣಪ್ಪರ ಕುಟುಂಬ ದೊಡ್ಡದು ಇವರ ತಂದೆ ಮತ್ತು ಅವರ ಸಹೋದರರಾದ ಇವರ ಚಿಕ್ಕಪ್ಪಂದಿರೆಲ್ಲ ಸೇರಿದ ನೂರಕ್ಕೂ ಹೆಚ್ಚಿನ ಅವಿಭಕ್ತ ಕುಟುಂಬ, ದೊಡ್ಡದಾದ ಕೆಲವು ಅಂಕಣದ ಹುಲ್ಲಿನ ಮನೆ, ನೂರಾರು ದನ, ಎಮ್ಮೆಗಳು, ಎತ್ತು, ಕೋಣಗಳು, ಎತ್ತಿನಗಾಡಿಗಳು ಮತ್ತು ಈ ದೊಡ್ಡ ಕುಟುಂಬದ ಅಕ್ಷಯ ಪಾತ್ರೆಯಂತ ಭತ್ತ ಬೆಳೆಯುವ ಜಮೀನುಗಳು.
   ಇಂತಹ ದೊಡ್ಡ ಕುಟುಂಬದ ಯಜಮಾನಿಕೆ ಇವರ ತಂದೆ ನಂತರ ಸಣ್ಣ ವಯಸ್ಸಲ್ಲೇ ನಾರೀ ನಾರಾಯಣಪ್ಪರಿಗೆ ಇವರ ನಾರೀಮನೆತನದ ಇವರ ದೊಡ್ಡಪ್ಪ ಚಿಕ್ಕಪ್ಪಂದಿರು ವಹಿಸಿಕೊಟ್ಟರು.
   ಮಿತ ಬಾಷಿ, ಶ್ರಮಜೀವಿ, ಕೃಷಿಕರಾದ ನಾರೀ ನಾರಾಯಣಪ್ಪ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರು ಇವರು ಸತ್ಯವಂತರು ನ್ಯಾಯದ ಪಕ್ಷಪಾತಿಗಳೆಂದೇ ನಮ್ಮ ಭಾಗದಲ್ಲಿ ಹೆಸರಾದವರು ಆದ್ದರಿಂದಲೇ ಇವರನ್ನು ಹೊಸೂರು - ಯಡೇಹಳ್ಳಿ ಸೇರಿದ ಯಡೇಹಳ್ಳಿ ಮಂಡಲ್ ಪಂಚಾಯಿತನ ಸದಸ್ಯರಿಗೆ ಜನ ಆಯ್ಕೆ ಮಾಡಿದ್ದರು.
  ಯಡೇಹಳ್ಳಿ ಮಂಡಲ್ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಮಾಡುವ ಸಲುವಾಗಿ ನನ್ನ ಇವರ ಒಡನಾಟ ಹೆಚ್ಚು ಆತ್ಮಿಯವಾಯಿತು ಈ ಸಂದರ್ಭದಲ್ಲಿ ನಾರೀ ನಾರಾಯಣಪ್ಪನವರು ಮಂಡಲ್ ಪಂಚಾಯಿತಿ ಅಧ್ಯಕ್ಷರಾಗಲು ಬೇಕಾದ ಅಹ೯ತೆ ಮತ್ತು ಬೇಕಾದ ಸದಸ್ಯ ಬಲದಲ್ಲಿ ನನ್ನ ಪ್ರಭಾವದ ಮೂವರು ಸೇರಿ ನಾರೀ ನಾರಾಯಣಪ್ಪ ಸುಲಭವಾಗಿ ಅಧ್ಯಕ್ಷರಾಗುತ್ತಿದ್ದರು.
  ನಾನು ಮತ್ತು ಆಗಿನ ಅಡೂರು ವಿಲೇಜ್ ಪಂಚಾಯತ್ ನ ನಿರಂತರ 30 ವರ್ಷದ ಛೇರ್ಮನ್ ಆಗಿದ್ದ ಸೊರಗುಂದದ ಈರನಾಯ್ಕರು ನಾರೀ ನಾರಾಯಣಪ್ಪನವರೇ ಅಧ್ಯಕ್ಷರಾಗಲಿ ಅಂತ ಒತ್ತಾಯಿಸಿದರೂ ನಾರೀ ನಾರಾಯಣಪ್ಪ ಒಪ್ಪಲಿಲ್ಲ, ತಮ್ಮ ದೀವರ ಸಮಾಜದ ಪದವೀದರ ಯುವಕ ಕೋವಿ ನಾರಾಯಣಪ್ಪರನ್ನೇ ಅಧ್ಯಕ್ಷರನ್ನಾಗಿಸಲು ತಮಗೆ ಅನಾಯಾಸವಾಗಿ ಒದಗಿ ಬಂದ ಮಂಡಲ್ ಪಂಚಾಯತ್ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದವರು ನಾರೀ ನಾರಾಯಣಪ್ಪ.
  ನಂತರ ಕೃಷಿಯಲ್ಲಿ ಅಭಿವೃಧ್ಧಿ ಮಾಡುತ್ತಾ ತಮ್ಮಂದಿರಿಗೆ ವ್ಯವಸಾಯದ ಜೊತೆ ಟೈಲರಿಂಗ್ - ವ್ಯಾಪಾರ ಇತ್ಯಾದಿ ಮಾಡಲು ಪ್ರೋತ್ಸಾಹಿಸಿ ನಂತರ ಇಡೀ ಕುಟುಂಬಕ್ಕೆ ಆಸ್ತಿ ಸರಿ ಪಾಲು ಹಿಸ್ಸೆ ಮಾಡಿದರು ಈಗ ನಾರೀಯವರ ಇಡೀ ಕುಟುಂಬ ಪ್ರಾಮಾಣಿಕ ಹಾಗೂ ಶ್ರಮದ ಕೃಷಿಯಿಂದ ಅಡಿಕೆ ಶುಂಠಿ ಇತ್ಯಾದಿ ವಾಣಿಜ್ಯ ಬೆಳೆಗಳಿಂದ ಎಲ್ಲರೂ ಶ್ರೀಮಂತರೇ ಆಗಿದ್ದಾರೆ.
   ನಾರೀ ನಾರಾಯಣಪ್ಪರ ಹಿರಿಯ ಪುತ್ರ ನಾರೀ ಲೋಕಪ್ಪ ನನ್ನ ಶಿಷ್ಯ ಕೂಡ ನಿರಂತರವಾಗಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಇವರ ತಮ್ಮ೦ದಿರುಗಳಾದ ನಾರಿ ಗೋಪಾಲ ಸೇರಿ ಬಾಳೆ-ಅಡಿಕೆ ತೋಟಗಳನ್ನು ವಿಸ್ತರಿಸಿದ್ದಾರೆ, ಸ್ವಂತ ಪಿಕ ಅಪ್ ಮಾಡಿ ಬಾಳೆ ಕಾಯಿ ಮಂಗಳೂರು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.
  ನಿನ್ನೆ ನಾರಿ ಗೋಪಾಲ ಪೋನ್ ಮಾಡಿ 5 ನೇ ತಾರೀಖಿನಂದು ನಾರೀ ನಾರಾಯಣಪ್ಪ ಇಹಲೋಕ ತ್ಯಜಿಸಿದ ಶೋಖ ಸಮಚಾರ ತಿಳಿಯಿತು ನಾರೀ ನಾರಾಯಣಪ್ಪರ ಒಡನಾಟವೇ ನನಗೂ ರಾಜಕೀಯ ಕ್ಷೇತ್ರ ಪ್ರವೇಶಕ್ಕೆ ಕಾರಣವಾಗಿತ್ತು.
    ನಾರೀ ನಾರಾಯಣಪ್ಪ ಇನ್ನು ನೆನಪು ಮಾತ್ರ ಅವರಿಗೆ ದೇವರು ಸದ್ಗತಿ ಸ್ವರ್ಗ ಪ್ರಾಪ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...