Skip to main content

Posts

Showing posts from August, 2022

Blog number 951. ಹೊಸನಗರ ತಾಲ್ಲುಕಿನ ಮೂಗುಡ್ತಿಯ ಶ್ಯಾಮರಾವ್ ಮತ್ತು ಆನಂದಪುರಂ ಕೋಮಲ ವಿಲಾಸ್ ರಾಮಕಿಣಿಯವರ ಸಹೋದರಿ ಸುನಂದಾ ದಂಪತಿ ಪುತ್ರ ರಘುನಾಥ ಶೆಣೈ ಆನಂದಪುರಂನಲ್ಲೆ ಪ್ರಾಥಮಿಕ ವಿದ್ಯಾಭ್ಯಾಸ ಕಲಿತು ಬೆಂಗಳೂರಿನ ಬುಲ್ ಟೆಂಪಲ್ ರೋಡಿನ ಸಕ್ಸಸ್ ಆಫ್ ಟೆಂಪಲ್ ಸಂಸ್ಥೆ ಸ್ಥಾಪಿಸಿ ಸಾಯಿದತ್ತ ರಘುನಾಥ ಗುರೂಜಿ ಎಂದು ಪ್ರಸಿದ್ದರಾಗಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.

#ಟೆಂಪಲ್_ಆಫ್_ಸಕ್ಸಸ್‌_ಸಾಯಿದತ್ತ_ರಘುನಾಥ_ಗುರೂಜಿ_ಇನ್ನು_ನೆನಪು_ಮಾತ್ರ. #ಹೊಸನಗರ_ತಾಲ್ಲೂಕಿನ_ಮೂಗುಡ್ತಿ_ಸ್ಪಂತ_ಊರು #ಪ್ರಾಥಮಿಕ_ಶಿಕ್ಷಣ_ಸಾಗರ_ತಾಲ್ಲೂಕಿನ_ಆನಂದಪುರಂನಲ್ಲಿ #ರಿಪ್ಪನ್ಪೇಟೆಯಲ್ಲಿ_1998ರವರೆಗೆ_ಇವರ_ಶಾಂಭವಿ_ಪೈನಾನ್ಸ್_ಪ್ರಸಿದ್ಧಿ_ಪಡೆದಿತ್ತು #ಇಪ್ಪತ್ಮೂರು_ವರ್ಷದ_ಹಿಂದೆ_ಬೆಂಗಳೂರು_ತಲುಪಿಸಿದ_ನನ್ನ_ನೆನಪು.     ನಿನ್ನೆ ಬೆಂಗಳೂರಿನ ಪ್ರಖ್ಯಾತ ಗುರೂಜಿ #ಸಾಯಿದತ್ತ_ರಘುನಾಥ_ಗುರೂಜಿ ನಿನ್ನೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.    ಸೆಪ್ಟೆಂಬರ್ 2 ರಂದು ಮಣಿಪಾಲಿನಲ್ಲಿ ಅವರ ತಾಯಿಯ ಸಮಾದಿಯ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಭಕ್ತ ಸಮುದಾಯ ಘೋಷಿಸಿದೆ.     ಆನಂದಪುರಂನಲ್ಲಿ 1960ರಿಂದ 1978ರ ತನಕ ಪ್ರಸಿದ್ದವಾಗಿದ್ದ #ಕೋಮಲ_ವಿಲಾಸ್ ಉಪಹಾರ ಗೃಹದ ಮಾಲಿಕರಾಗಿದ್ದ #ರಾಮಕಿಣಿಯವರ ಸಹೋದರಿ ಸುನಂದ ಮತ್ತು ಹೊಸನಗರ ತಾಲೂಕಿನ ಮೂಗುಡ್ತಿಯ ಶ್ಯಾಮರಾಯ ದಂಪತಿಗಳ ಮೊದಲ ಪುತ್ರ ರಘುನಾಥ ಶೆಣೈ ಇವರ ಇನ್ನೊಬ್ಬ ಪುತ್ರ ರಮಾನಾಥ ಶಾನುಬೋಗ್ ಉದಯವಾಣಿ ಗ್ರೂಪ್ ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಮಣಿಪಾಲಿನಲ್ಲಿ ನೆಲೆಸಿದ್ದಾರೆ.    ರಘುನಾಥ ಶೆಣೈ ತಮ್ಮ ಹೆಚ್ಚಿನ ಬಾಲ್ಯ ಮತ್ತು ವಿದ್ಯಾಭ್ಯಾಸ ಆನಂದಪುರಂನ ಅವರ ಸೋದರ ಮಾವ ರಾಮಕಿಣಿ ಅವರ ಮನೆಯಲ್ಲೇ ಉಳಿದು ಆನಂದಪುರಂನ ಸಕಾ೯ರಿ ಶಾಲೆಗಳಲ್ಲಿ ಮಾಡಿದ್ದರು.    ನಂತರ ಇವರು ಪೋಟೋಗ್

Blog number 950. ಸರ್ವರಿಗೂ 2022ರ ಗೌರಿ-ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು, ಜಾತಿ ಆಚರಣೆ ಮನೆಯ ಒಳಗಿರಲಿ ಪ್ರೀತಿ ಎಲ್ಲರ ಮೇಲಿರಲಿ, ದಯೆಯೇ ಧರ್ಮದ ಮೂಲ ಮತ್ತು ದೇವರು ಸನ್ಮಾರ್ಗ ತೋರಿಸುತ್ತಾರೆಂಬ ನಂಬಿಕೆ ನಮ್ಮೆಲ್ಲರದ್ದು ಆಗಿರಲಿ.

#ಗೌರಿ_ಗಣೇಶ_ಚತುರ್ಥಿ_ಶುಭಾಷಯಗಳು. #ವರ_ಸಿದ್ದಿ_ಅನುಗ್ರಹಿಸು_ವರಸಿದ್ದಿ_ವಿನಾಯಕ #ವಿಘ್ನಗಳ_ನಿವಾರಿಸು_ವಿನಾಯಕ. #GOD_SHOWS_GOODWAYS.    ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಲ್ಲರಿಗೂ ಹಾರೈಸುತ್ತೇನೆ, ನನ್ನ ಪೂರ್ವಜರ ಪುಣ್ಯದಿಂದ 16 ವರ್ಷದ ಹಿಂದೆ ನಮ್ಮ ಊರಲ್ಲಿ ಶ್ರೀವರಸಿದ್ಧಿ ವಿನಾಯಕ ದೇವರ ದೇವಸ್ಥಾನ ನಿರ್ಮಿಸಿ ಊರಿಗೆ ಸಮರ್ಪಿಸುವ ಪುಣ್ಯದ ಕೆಲಸ ನನಗೆ ದೇವರೇ ದಯಪಾಲಿಸಿದ್ದು.   ನಿಮಾ೯ಣದ ವಾಸ್ತು, ಕೃಷ್ಣ ಶಿಲಾ ವರಸಿದ್ಧಿವಿನಾಯಕ ದೇವರ ಶಿಲ್ಪ ಕೋಲಾರದ ಶಿವಾರಪಟ್ಟಣದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿಯಿಂದ ಮಾಡಿಸಿ, ನಮ್ಮ ಹಳ್ಳಿಯಲ್ಲಿ ಪ್ರತಿಷ್ಟಾಪಿಸಿ, ದೇವಾಲಯದ ಉದ್ಘಾಟನ ದಿನ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ದಂಪತಿ ಮತ್ತು ನಮ್ಮ ಊರ ಹಿರಿಯ ಗನ್ನಿಸಾಹೇಬರಿಂದ ದೇವಾಲಯದ ಗೋಪುರದ ಕಲಶಕ್ಕೆ ಕಲಶಾಭಿಷೇಕ ಮಾಡಿಸಿ ಇವತ್ತಿನವರೆಗೆ ನಿರ್ವಿಘ್ನವಾಗಿ ಭಕ್ತಿಯಿಂದ ಭಕ್ತರು ಪೂಜಿಸುವಂತ ನಮ್ಮ ಹಳ್ಳಿಯ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನದ ನೇತೃತ್ವವಹಿಸಿದ್ದ ಬೆಂಗಳೂರಿನ ವಿಜಯನಗರದ ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳಿಗೆ ಯಾವತ್ತೂ ಸ್ಮರಿಸುತ್ತಾ ಅವರ ಆಶ್ರೀವಾದ ಬೇಡುತ್ತೇನೆ ಈಗ ಅಮೇರಿಕಾದಲ್ಲಿ ಪುತ್ರನ ಮನೆ ಗೃಹ ಪ್ರವೇಶಕ್ಕೆ ದಂಪತಿಗಳು ಹೋಗಿದ್ದಾರೆ.    ದೇವಾಲಯದ ಕಲಶ ನೀಡಿದವರು ತ್ಯಾಗರ್ತಿಯ ಇನಾಂದಾರರಾಗಿದ್ದ ಗುರುಮೂರ್

Blog number 949. ಹಬ್ಬಗಳಲ್ಲಿ ಆಚರಿಸುವ ದೇಹ ದಂಡನೆಯ ಉಪವಾಸ ಇತ್ಯಾದಿ ಭಕ್ತಿ ಮಾರ್ಗದಲ್ಲಿ ದೇಹದ ಶುದ್ಧಿ ಕೂಡ ಅಡಗಿದೆ, ಶ್ರಾವಣ ಮಾಸದಲ್ಲಿ ಟೀ-ಕಾಫಿ ಕೂಡ ತ್ಯಜಿಸುವ ನಾನು ಮತ್ತು ಇಡೀ ಮಾಸ ಕೇವಲ ಹಾಲು - ಹಣ್ಣು ಮಾತ್ರ ಸೇವಿಸುವ ನನ್ನ ಮ್ಯಾನೇಜರ್ ಅನಿಲ್ ಮುಂದೆ ನನ್ನ ಆಚರಣೆ ಏನೇನೂ ಅಲ್ಲ.

#ಗಟಾರಿ_ಅಮಾವಸ್ಯೆಗೆ_ಶುರುವಾದ_ಶ್ರಾವಣ_ನಿನ್ನೆ_ಅಮಾವಸ್ಯೆಗೆ_ಮುಕ್ತಾಯ  #ಪ್ರತಿ_ಶ್ರಾವಣದಲ್ಲಿ_ಒಂದು_ತಿಂಗಳು_ನಾನು_ಕಾಫಿ_ಟೀ_ಕೂಡ_ಕುಡಿಯುವುದಿಲ್ಲ #ಆದರೆ_ನಮ್ಮ_ಮ್ಯಾನೇಜರ್_ಕೇವಲ_ಹಾಲು_ಹಣ್ಣಿನಲ್ಲೆ_ಶ್ರಾವಣ_ಆಚರಿಸುತ್ತಾರೆ.   ದೇಹ ದಂಡನೆಯ ಮೂಲಕ ದೇವರ ಆರಾದನೆ ಎಲ್ಲಾ ದರ್ಮಿಯರಲ್ಲೂ ಇದೆ ಇದು ಭಕ್ತಿ ಮಾರ್ಗವೂ ಹೌದು ಇನ್ನೊಂದು ಇದರಿಂದ ದೇಹದ ಆರೋಗ್ಯ ಕೂಡ ಉತ್ತಮಗೊಳಿಸುವ ವ್ಯವಸ್ಥೆ.   ನಾನು ನಮ್ಮ ಹಬ್ಬದ ದಿನಗಳನ್ನೆ ನನ್ನ ಆರೋಗ್ಯಕ್ಕಾಗಿ ನಿಗದಿ ಮಾಡುತ್ತೇನೆ ಇದರಿಂದ ದಿನಗಳು ಲೆಖ್ಖ ಮಾಡಲು ಸುಲಭ ಮತ್ತು ಹಬ್ಬ ನನ್ನ ಆಚರಣೆಗೆ ಮಹತ್ವ ನೀಡುವುದರಿಂದ ಆಯ್ಕೆ ಮಾಡಿಕೊಳ್ಳುತ್ತೇನೆ ಉದಾಹರಣೆಗೆ  2020 ರ ಶಿವರಾತ್ರಿಯಂದು ನಾನು ನನ್ನ ರಾತ್ರಿ ಊಟ ತ್ಯಜಿಸಿದೆ ಮುಂದಿನ 2023ರ ಶಿವರಾತ್ರಿಗೆ ಮೂರು ವರ್ಷ.    ಪ್ರತಿ ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಾನು ಬೇರೆಲ್ಲ ಆಹಾರ ನಿಯಮದ ಜೊತೆ ಕಾಫಿ ಮತ್ತು ಟೀ ಕೂಡ ತ್ಯಜಿಸುತ್ತೇನೆ ಇದರಿಂದ ಸ್ವಯ೦ ನಿಯಂತ್ರಣ ಸಾಬೀತು ಮತ್ತು ದೇಹಕ್ಕೆ ಆಡಿಕ್ಟ್ ಆದ ಕೆಫಿನ್ ನಿಂದ ಹೊರಬರಲು ಒಂದು ಪ್ರಯತ್ನ ಕೂಡ.     ಶ್ರಾವಣದ ಮೊದಲ ಒಂದು ವಾರ ಕಾಫಿ-ಟೀ ಬಿಟ್ಟ ಪರಿಣಾಮ ಕೆಫಿನ್ ಇಲ್ಲದ ದೇಹ ಉಲ್ಲಾಸ ಮತ್ತು ಉತ್ಸಾಹ ಕಳೆದುಕೊಳ್ಳುತ್ತದೆ,ಕ್ರಮೇಣ ಹೊಂದಿಕೊಳ್ಳುತ್ತದೆ ಶ್ರಾವಣದ ಮೊದಲ ದಿನ ಪುನಃ ಕಾಫಿ ಕುಡಿದಾಗ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ.    ದಾರ್ಮಿಕ ಆಚರಣೆಯಲ್ಲಿ ಮಹಾರಾಷ್ಟ್ರೀಯರು

Blog number 948. ಆಸಮಾನ್ಯ ಡೊಳ್ಳಿನ ಕಲಾವಿದರಾದ ಕಣ್ಣೂರಿನ ಜೆ.ಸಿ.ಮಂಜಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬಾರದೇಕೆ? ಮ೦ಜಪ್ಪರ ರಷ್ಯಾ ಪ್ರವಾಸದ ಅನುಭವಗಳು, ಕು.ಶಿ.ಹರಿದಾಸ ಭಟ್ಟರ "ರಷ್ಯಾದಲ್ಲಿ ಡೊಳ್ಳಿನ ದಿಗ್ವಿಜಯ" ಪುಸ್ತಕದಲ್ಲಿ ಪ್ರಮುಖ ಕಲಾವಿದ ಜೆ.ಸಿ.ಮಂಜಪ್ಪ ಅಂತಲೇ ದಾಖಲಿಸಿದ್ದಾರೆ.

#ಅಸಮಾನ್ಯ_ಡೊಳ್ಳಿನ_ಕಲಾವಿದರು. #ಜಿ_ಸಿ_ಮಂಜಪ್ಪ_ಕಣ್ಣೂರು #ರಷ್ಯಾದಲ್ಲಿ_ಡೊಳ್ಳಿನ_ಪ್ರದರ್ಶನ_ನೀಡಿದವರು #ಕು_ಶಿ_ಹರಿದಾಸ_ಭಟ್ಟರು_ಬರೆದ_ರಷ್ಯಾದಲ್ಲಿ_ಡೊಳ್ಳಿನ_ದಿಗ್ವಿಜಯ_ಪುಸ್ತಕದಲ್ಲಿ_ಮುಖ್ಯಕಲಾವಿದ_ಜಿ_ಸಿ_ಮಂಜಪ್ಪ #ಎಂದೇ_ದಾಖಲಿಸಿದ್ದಾರೆ. #ಈ_ಬಾರಿಯ_ರಾಜ್ಯೋತ್ಸವ_ಪ್ರಶಸ್ತಿ_ಇವರಿಗೆ_ನೀಡ_ಬಾರದೇಕೆ ?    ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಗಳು ಎಂ.ಪಿ.ಪ್ರಕಾಶ್ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದಾಗ ರಷ್ಯಾ ಮತ್ತು ಭಾರತ ಕಲ್ಚರಲ್ ಎಕ್ಸ್ಚೆಂಜ್ ಪ್ರೋಗ್ರಾಂನಲ್ಲಿ ನಮ್ಮ ರಾಜ್ಯದಿಂದ ರಷ್ಯಾಕ್ಕೆ ಆಯ್ಕೆ ಆದ ತಂಡ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಕಣ್ಣೂರಿನ ಡೊಳ್ಳಿನ ತಂಡ ಮಾತ್ರ.    ಆಗಿನ ಕುಗ್ರಾಮದ ಗಂಡುಕಲೆ ಡೊಳ್ಳಿನ ಕಲಾವಿದರು ರಷ್ಯಾದಂತ ವಿದೇಶಕ್ಕೆ ವಿಮಾನದಲ್ಲಿ ಹೋಗುತ್ತಾರೆ ಅಲ್ಲಿ ಮೂರು ತಿಂಗಳು ಮಾಸ್ಕೋ- ತಾಷ್ಕೆಂಡ್ ಮುಂತಾದ ಪ್ರದೇಶದಲ್ಲಿ ನಮ್ಮ ರಾಜ್ಯದ ಕಲಾ ಪ್ರದರ್ಶನ ನೀಡುತ್ತಾರೆನ್ನುವ ಸುದ್ದಿಯೇ ರೋಮಾಂಚನವಾದ ಕಾಲ.   1987 ರಲ್ಲಿ ಉಡುಪಿಯ ಕು.ಶಿ.ಹರಿದಾಸ ಭಟ್ಟರು ಆಯ್ಕೆ ಆದ ಈ ಕಲಾವಿದರ ತಂಡದ ಮುಖ್ಯಸ್ಥರಾಗಿ ಹೋಗಿದ್ದರು.   ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಮತ್ತು ಎಂ.ಪಿ.ಪ್ರಕಾಶ್ ಮಾಸ್ಕೋದಲ್ಲಿ ನಡೆದ ಇವರ ಪ್ರದರ್ಶನ ನೋಡಲು ಹೋಗಿದ್ದರು, ಎಂ.ಪಿ.ಪ್ರಕಾಶ್ ನಮ್ಮ ಕಣ್ಣೂರಿನ ಡೊಳ್ಳಿನ ಕಲಾವಿದರ ಜೊತೆ ಕುಣಿದು ಕುಪ್ಪಳಿಸಿ ಕಲಾವಿದರಿಗೆ ಹುರುಪುOಟು ಮಾಡಿದ್ದರ

Blog number 947. ಖ್ಯಾತ ಸಾಹಿತಿ ವಿಮರ್ಶಕ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಅವರು ನನ್ನ ಕಥಾ ಸಂಕಲನ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಓದಿ ವಸ್ತು ನಿಷ್ಟ ವಿಮರ್ಶೆ ಬರೆದದ್ದು ನನಗೆ ಅತ್ಯಂತ ಸಂತೋಷ ತಂದಿದೆ.

#ಇದಕ್ಕಿ೦ತ_ಸಂತೋಷ_ಬೇರೆ_ಇಲ್ಲ #ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನ #ಸಾಹಿತಿ_ವಿಮರ್ಷಕ_ಉದಯಕುಮಾರ್_ಹಬ್ಬು_ನನ್ನ_ಕಥಾ_ಸಂಕಲನದ_ವಿಮರ್ಶೆ_ಬರೆದಿದ್ದಾರೆ. #ದಿನಕ್ಕೆ_ಕನಿಷ್ಟ_ನೂರು_ಪುಟ_ಓದುವ_ನಿತ್ಯ_ಒಂದೆರೆಡು_ಪುಸ್ತಕ_ವಿಮರ್ಶೆ_ಮಾಡುತ್ತಾರೆ. #ಸಾವಿರಾರು_ಪುಸ್ತಕ_ಓದಿದ್ದಾರೆ #ಅವರು_ಬರೆದು_ಪ್ರಕಟಿಸಿದ_ಪುಸ್ತಕಗಳೇ_ಶತಕದ_ಹತ್ತಿರ_ಹತ್ತಿರ.     ಶ್ರೀಯುತ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು ಇವರು ಇವತ್ತು ನನ್ನ ಎರಡನೆ ಪುಸ್ತಕ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಎಂಬ ಸಣ್ಣ ಕಥಾ ಸಂಕಲನವನ್ನು ಎರೆಡು ದಿನ ಸಂಪೂರ್ಣ ಓದಿ ವಸ್ತು ನಿಷ್ಟ ವಿಮರ್ಶೆ ಅವರ ಪೋಸ್ಟಿನಲ್ಲಿ ಪ್ರಕಟಿಸಿದ್ದಾರೆ.   ನಾನು ಅಂತಹ ಬರಹಗಾರನಲ್ಲ ಕೇವಲ ಹವ್ಯಾಸದ ಹುಕಿಯಲ್ಲಿ ಬರೆದ ಕಾದಂಬರಿ "ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ" #ಬೆಸ್ತರ_ರಾಣಿ_ಚಂಪಕಾ ಮತ್ತು ಈ ಸಣ್ಣ ಕಥಾ ಸಂಕಲನ ಆದರೆ ದೊಡ್ಡ ದೊಡ್ಡ ವಿದ್ವಾಂಸರಿಂದ ವಿಮರ್ಶೆಗಳು ಬಂದಾಗ ಅದು ನನಗೊಂದು ಕಿರೀಟದಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚು ಬರೆಯಲು ಬೆನ್ನುತಟ್ಟಿ ಪ್ರೋತ್ಸಾಹಿಸಿದಂತೆ ಆದ್ದರಿಂದ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.    ಖ್ಯಾತ ಬರಹಗಾರರು, ವಿಮರ್ಶಕರಾದ ಇವರು ಬರೆದ ಪುಸ್ತಕಗಳು ಅನೇಕ ಅವುಗಳಲ್ಲಿ #ಪ್ರಕಟವಾದ_ಪುಸ್ತಕಗಳು ಬಿ

Blog number 946. ದೇಶಿ ಕುಂಬಾರಿಕೆಗೆ ಆದುನಿಕತೆಯ ಸ್ಪರ್ಷ, ಗುಜರಾತಿನ ಮೊರ್ಬಿಯ ಕೈಗಾರಿಕೆಗಳ ಮಣ್ಣಿನ ಪಾತ್ರೆಗಳು ಅದುನಿಕ ಅಡುಗೆ ಮನೆಗೆ ಹೊಸ ಶೋಭೆ ತರುತ್ತಿದೆ.

#ದೇಸಿ_ಕುಂಬಾರಿಕೆಗೆ_ಮಾಡರ್ನ್_ಟಚ್ #ಗುಜರಾತಿನ_ಮೊರ್ಬಿಯಲ್ಲಿ_ತಯಾರಕ_ಘಟಕಗಳು. #ದೇಶದಾದ್ಯಂತ_ಮಾರಾಟ_ಮಾಡುವ_ರಾಜಸ್ಥಾನಿ_ಬುಡಕಟ್ಟು_ಪಂಗಡಗಳು #ಕಡಿಮೆ_ದರ_ಗರಿಷ್ಟ_ಆರೋಗ್ಯದ_ಮಣ್ಣಿನ_ತವಾ_ಟೀಕಪ್  #ಐವತ್ತು_ರೂಪಾಯಿಗೆ_ಒಂದು_ತವಾ.    ನಿನ್ನೆ ನಮ್ಮ ಲಾಡ್ಜ್ ಎದುರಿನಲ್ಲಿ ಒಂದು ಮಿನಿ ಟ್ರಕ್ ಬಂದು ನಿಂತಿತು, ಅದರ ತುಂಬಾ ಆಕರ್ಷಕವಾದ ಹ್ಯಾ೦ಡಲ್ ಜೋಡಿಸಿದ ಮಣ್ಣಿನ ತವಾ ಮತ್ತು ಮಣ್ಣಿನ ಟೀ ಕಪ್ ಗಳನ್ನು ಮಾರಾಟಕ್ಕೆ ತಂದಿದ್ದರು, ನಿನ್ನೆ ಬೆಳಿಗ್ಗೆ ಸಾಗರದಲ್ಲಿ ಸುಮಾರು 200 ತವಾ ಮಾರಾಟ ಮಾಡಿ ಸಂಜೆ ಆನಂದಪುರಂಗೆ ಬಂದು ಮಾರಾಟ ಮಾಡಿ ಶಿವಮೊಗ್ಗಕ್ಕೆ ಹೋದರು.     ಮಣ್ಣಿನ ತವಾ ಅದಕ್ಕೆ ಹಿಡಿ ಅಳವಡಿಸಿ ತಯಾರಿಸುವ ಅನೇಕ ಘಟಕಗಳು ಗುಜರಾತಿನ ಮೊರ್ಬಿಯಲ್ಲಿದೆ ಅಲ್ಲಿಂದ ಸಾವಿರಾರು ತವಾ ಮತ್ತು ಟೀ ಕಪ್ ಗಳನ್ನು ತಮ್ಮ ತಮ್ಮ ವಾಹನದಲ್ಲಿ ಖರೀದಿಸಿ ದೇಶದಾದ್ಯಂತ ಮಾರಾಟ ಮಾಡುವ ನೂರಾರು ರಾಜಸ್ಥಾನದ ಕುಟುಂಬಗಳು ಸ್ವಯ೦ ಉದ್ಯೋಗಿಗಳಾಗಿದ್ದಾರೆ.    ಒಂದು ತವಾಕ್ಕೆ ಕೇವಲ 50 ರೂಪಾಯಿ ಆದ್ದರಿಂದ ಇವರು ಹೋದಲ್ಲೆಲ್ಲ ಭರಪೂರ ವ್ಯಾಪಾರ, ಮಣ್ಣಿನ ಟೀ ಕಪ್ ಅರ್ದ ಡಜನ್ ಗೆ 250 ರೂಪಾಯಿ, ನಾನು 4 ತವಾ ಮತ್ತು ಅರ್ಧ ಡಜನ್ ಟೀ ಕಪ್ ಖರೀದಿಸಿದೆ, ಮಾರಾಟದ ತಂಡದ ಮುಖ್ಯಸ್ಥ ಕಿಷನ್ ಲಾಲ್ ಗೆ ಚಹಾ ನೀಡಿ ಮಾತಾಡಿಸಿದ ವಿಡಿಯೋ ಇಲ್ಲಿ ಪೋಸ್ಟ್ ಮಾಡಿದ್ದೇನೆ ನೋಡಿ.   ಸಂಪ್ರದಾಯಿಕ ಕುಂಬಾರಿಕೆ ಈ ರೀತಿ ಅದುನಿಕರಣದಿಂದ ಹ

Blog number 945. ಆಗಸ್ಟ್ 23 ಆಪ್ತ ಸಿಬ್ಬಂದಿ ಪಶ್ಚಿಮ ಬಂಗಾಳದ ಪುರೋಲಿಯದ ಕೌಷಿಕ್ ಹುಟ್ಟು ಹಬ್ಬದ ಆಚರಣೆಯಲ್ಲಿ ಮರೆತು ಹೋದ ನನ್ನ 33 ನೇ ವರ್ಷದ ವೈವಾಹಿಕ ಜೀವನದ ವಾರ್ಷಿಕೋತ್ಸವ

#ನಿನ್ನೆ_ಆಗಸ್ಟ್_23 #ಏನೋ_ಮರೆತೆ_ಅನ್ನುವಾಗ_ನನ್ನ_ಆಪ್ತ_ಸಿಬ್ಬಂದಿ_ಕೌಷಿಕ್_ಹುಟ್ಟು_ಹಬ್ಬದ_ಸಿಹಿ_ನೀಡಿದರು. #ನಾನು_ಇವರ_ಹುಟ್ಟು_ಹಬ್ಬಕ್ಕಾಗಿ_ಎಲ್ಲಾ_ಸಿಬ್ಬಂದಿಗೆ_ಕೀರು_ಮಾಡಿ_ಬಡಿಸಲು_ಹೇಳಿದೆ. #ರಾತ್ರಿ_ನೆನಪಾಯಿತು_ಆಗಸ್ಟ್_23_ನನ್ನ_33ನೇ_ವೈವಾಹಿಕ_ವರ್ಷ_ಅಂತ.    ನಾವ್ಯಾರು ಹುಟ್ಟಿದ ಹಬ್ಬ, ಮ್ಯಾರೇಜ್ ಆನಿವರ್ಸರಿ ಆಚರಿಸುವುದಿಲ್ಲವಾದರು ಆ ದಿನದ ನೆನಪು ಕೆಲವೊಮ್ಮೆ ಆದೀತು ಅಥವ ಎಷ್ಟೋ ದಿನದ ನಂತರವೋ ನೆನಪಾಗುತ್ತದೆ ಆಗ ಎಷ್ಟು ವರ್ಷ ಆಯಿತೆಂಬ ಲೆಖ್ಖ ಹಾಕುವುದಷ್ಟೆ.     ನಿನ್ನೆ ಆಗಸ್ಟ್ 23 ಈ ದಿನ ಏನೋ ಮರೆತೆ ಅನ್ನಿಸುತ್ತಿದ್ದಾಗಲೇ ನನ್ನ ಆಪ್ತ ಸಿಬ್ಬಂದಿ ಪಶ್ಚಿಮ ಬಂಗಾಳದ ಪುರೋಲಿಯದ ಕೌಷಿಕ್ ತನ್ನ ಹುಟ್ಟುಹಬ್ಬ ಅಂತ ಸಿಹಿ ನೀಡಿದರು ಅವರಿಗೆ ಶುಭ ಹಾರೈಸಿದೆ, ಎಲ್ಲಾ ಸಿಬ್ಬಂದಿಗೂ ಕೀರು ಮಾಡಿ ಬಡಿಸಿದರು ಜೊತೆಗೆ ಹುಟ್ಟುಹಬ್ಬ ಆಚರಿಸುವ ಕೌಷಿಕ್ ತಂದ ಚಂಪಾಕಲಿ ಸೇರಿತ್ತು.    ಕೌಷಿಕ್ ಹುಟ್ಟುಹಬ್ಬವೇ ನಿನ್ನೆಯ ವಿಶೇಷ ಆಯಿತು ಇದರ ಮದ್ಯೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಬೇರೆ ಬೇರೆ ಜನರು ಬಂದಿದ್ದರಿಂದ ನಾನು ಬ್ಯುಸಿ ಆದೆ, ಸಂಜೆ ಕೌಷಿಕ್ ಗೆ ಎರೆಡು ಪ್ಯಾಂಟ್ ಹುಟ್ಟುಹಬ್ಬದ ಉಡುಗರೆ ಆಗಿ ನೀಡಿದೆ.   ಆದರೂ ಏನೋ ಮರೆತಂತೆ ಅಷ್ಟರಲ್ಲಿ ನನ್ನ ಮುಂದಿನ ಕನಸಿನ ಯೋಜನೆಗೆ ಟ್ರೇಡ್ ನೇಮ್ & ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್ ಕೆಲಸ ಬಾಕಿ ಉಳಿದಿತ್ತು ಕಾರಣ ನನಗೆ ಬೇಕಾದ ಹೆಸರು ಸಿಗುತ್ತಿರಲಿಲ್ಲ ನಿನ್ನೆ ನಮ್

Blog number 944.ಸರ್ಕಾರಗಳು ಮತ್ತು ಸರ್ಕಾರ ರಚಿಸುವ ಪಕ್ಷಗಳು ಹೀಗೆ ವರ್ತಿಸಬಾರದಾಗಿತ್ತು

#ಚಳವಳಿ_ಹುಟ್ಟಡಗಿಸಲು_ವಾಮ_ಮಾರ್ಗ...    ವಿರೋದ ಪಕ್ಷದ ಚಳವಳಿ ದಿನ          ತನ್ನದೇ ಪಕ್ಷದ ಚಳವಳಿಗೆ ಕರೆ              ಅವರದೇ ಸರ್ಕಾರ ಕಾನೂನು                    ಸುವ್ಯವಸ್ಥೆಗಾಗಿ  ಕಪ್ಯೂ೯                          ಹಾಕುವುದು... ಹೇಗಿದೆ!    ಸರ್ಕಾರ ನಡೆಸುವವರು ಅವರ ಪಕ್ಷದವರಿಗೆ ಅದೇ ದಿನ ಕಾರ್ಯಕ್ರಮ ನಡೆಸದಂತೆ ತಿಳಿ ಹೇಳದಷ್ಟು ಅವರ ಪಕ್ಷದ ಮೇಲಿನ ನಿಯಂತ್ರಣ ಕಳೆದುಕೊಂಡಿರಲಾರರು.     ಮರುದಿನ ವಿರೋದ ಪಕ್ಷದ ಹೋರಾಟಕ್ಕೆ ಉತ್ತರ ನೀಡುವಂತೆ ಕಾರ್ಯಕ್ರಮ ಮಾಡು ಬಹುದಾಗಿತ್ತು.    ಈಗಿನ ವಿದ್ಯಾವಂತ ಯುವ ಜನಾಂಗ ಈ ಇಬ್ಬಂದಿ ನೀತಿ ಗಮನಿಸದೇ ಇರುತ್ತಾರ?

Blog number 943. ಇಪ್ಪತ್ತೈದು ವರ್ಷದ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಅತಿ ಹೆಚ್ಚು ತೆರೆದ ಬಾವಿ ನಿರ್ಮಿಸಿದ್ದಕ್ಕೆ ಪಂಚಾಯತ್ ರಾಜ್ ಇಲಾಖೆ ತನಿಖೆ ಮಾಡಿತ್ತು, ರೈತರ ಕುಡಿಯುವ ನೀರಿನ ಮೂಲವಾಗಿದ್ದ ಕೆಸರು ಹೊಂಡಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕ್ಕ ಗಾತ್ರದ ಕಡಿಮೆ ಆಳದ ಕಾಂಕ್ರಿಟ್ ರಿಂಗ್ ಬಾವಿ ನಿರ್ಮಿಸಿದ್ದು ಹೆಚ್ಚು ಉಪಯೋಗವಾಗಿತ್ತು

#ಜಿಲ್ಲಾ_ಪಂಚಾಯತ್_ಸದಸ್ಯನಾಗಿದ್ದಾಗ_ನಿರ್ಮಿಸಿದ_ಕುಡಿಯುವ_ನೀರಿನ_ಬಾವಿಗಳು. #ರೈತರು_ತಮ್ಮ_ಕೃಷಿ_ಗದ್ದೆಯ_ಹೊಂಡದ_ಕೆಸರು_ನೀರು_ಕುಡಿಯುವ_ಕಾಲ #ಮಲೆನಾಡಿನಲ್ಲಿ_ದೂರ_ದೂರಕ್ಕೊಂದು_ಮನೆ_ಬಯಲುಸೀಮೆಯಂತೆ_ಗುಂಪು_ಮನೆಗಳು_ಇರುವುದಿಲ್ಲ. #ಕೆಸರು_ಗದ್ದೆ_ಹೊಂಡಗಳಿಗೆ_ರಿಂಗ್_ಇಳಿಸಿ_ತುಂಡು_ಬಾವಿ_ನಿರ್ಮಾಣ #ಇಪ್ಪತ್ತೈದು_ವಷ೯ವಾದರೂ_ಈ_ಬಾವಿಗಳು_ಗಟ್ಟಿಮುಟ್ಟಾಗಿದೆ    ನಾನು 1995 - 2000 ಇಸವಿ ಶಿವಮೊಗ್ಗ ಜಿಲ್ಲಾ ಪಂಚಾಯತ್  ಸದಸ್ಯನಾಗಿದ್ದಾಗ (ಆನಂದಪುರಂ ಕ್ಷೇತ್ರ) ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರಿನ ಬಾವಿಗಳು ಇಲ್ಲದೆ ಜನ ಕಷ್ಟ ಪಡುತ್ತಿದ್ದರು, ಮಲೆನಾಡಿನಲ್ಲಿ ಕಿಲೋ ಮೀಟರ್ ಗೊಂದು ಮನೆ, ಬೊರ್ ವೆಲ್ ವಿಫಲವಾಗುತ್ತಿದ್ದ ಕಾಲ ಆದು.    ನಾನು ಇಡೀ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಾಲು ನಡಿಗೆಯಲ್ಲಿ ಪ್ರತಿ ಮನೆಗಳನ್ನು ಸಂದರ್ಶಿಸಿದ್ದರಿಂದ ಈ ಸಮಸ್ಯೆ ಅರಿತುಕೊಳ್ಳಲು ಸಾಧ್ಯವಾಗಿತ್ತು.       ಆಗಿನ ಚೆನ್ನಗಿರಿ - ಹೊನ್ನಾಳಿ - ಭದ್ರಾವತಿ - ಶಿವಮೊಗ್ಗ - ಶಿಕಾರಿಪುರ ತಾಲ್ಲೂಕಿನಲ್ಲಿ ಅಂತರ್ಜಲ ತುಂಬಾ ತಳಮಟ್ಟ ಮುಟ್ಟಿರುವುದರಿಂದ ಅಲ್ಲಿ ತೆರೆದ ಬಾವಿಗೆ ಬರುತ್ತಿದ್ದ ಅನುದಾನ ಬಳಕೆ ಆಗುತ್ತಿರಲಿಲ್ಲ, ಅದನ್ನೆಲ್ಲ ನನ್ನ ಕ್ಷೇತ್ರದಲ್ಲಿ ಬಳಸಿ ನನ್ನ 5 ವರ್ಷದ ಅವಧಿಯಲ್ಲಿ ಸುಮಾರು 700 ತೆರೆದ ಬಾವಿ ಮತ್ತು ಸುಮಾರು 400ಕ್ಕೂ ಹೆಚ್ಚು ತುಂಡು ಬಾವಿ ಅಂದರೆ ಗದ್ದೆಯಲ್ಲಿ ನೆಲಮಟ್ಟದಲ್ಲಿ ಜಲ ಇರುವಲ್ಲಿ ಗರಿಷ್ಟ 10ಅಡಿ ಆಳದ

Blog number 942.ಸಾವ೯ಜನಿಕ ಶೌಚಾಲಯ ನಿರ್ಮಾಣಕ್ಕಿಂತ ನಿರ್ವಹಣೆ ಅತಿ ಮುಖ್ಯ, ಮನೆಯಲ್ಲಿನ ಶೌಚಾಲಯ ನಿರ್ವಹಿಸದವರು ಸಾರ್ವಜನಿಕ ಶೌಚಾಲಯ ಹೇಗೆ ಬಳಸಿಯಾರು? ಹಾಗೆಯೇ ಸರ್ಕಾರಕ್ಕೆ ತೆಗಳದೆ ನಾವು ನಾವೇ ಸ್ಥಳಿಯರು ಸಾವ೯ಜನಿಕ ಶೌಚಾಲಯಗಳ ನಿರ್ವಣಾ ವ್ಯವಸ್ಥೆ ಮಾಡಿಕೊಳ್ಳಬಾರದೇಕೆ? ನನ್ನ ಹದಿನಾಲ್ಕು ವರ್ಷದ ನಮ್ಮ ಸಂಸ್ಥೆಯ ಶೌಚಾಲಯ ನಿರ್ವಹಣೆಯ ಅನುಭವಗಳು.

#ಶೌಚಾಲಯ_ನಿಮಾ೯ಣಕ್ಕಿಂತ_ನಿರ್ವಹಣೆ_ಅತಿ_ಮುಖ್ಯ #ಹತ್ತು_ವರ್ಷದಲ್ಲಿ_ನನ್ನ_ಪ್ರಯೋಗ_ಅನುಭವ #ಶೌಚಾಲಯ_ಅವೈಜ್ಞಾನಿಕವಾಗಿ_ಬಳಸುವವರಿಂದಲೂ_ಸಮಸ್ಯೆ #ಶೌಚಾಲಯ_ಸ್ಟಚ್ಚತೆ_ಕೂಡ_ಒಂದು_ಕಲೆ.   1989 ರಲ್ಲಿ ನಮ್ಮ ಹಳೆಯ ವಾಸದ ಮನೆ ನವೀಕರಣ ಮಾಡಿದಾಗ ಅಟ್ಯಾಚ್ಡ್ ಟಾಯಿಲೆಟ್ ಕಟ್ಟಿಸಿದ್ದೆವು ಆಗ ಅನೇಕರು ವಿರೋದ ವ್ಯಕ್ತಪಡಿಸಿದ್ದರು ಆದರೂ ನಿರ್ಮಿಸಿ ಸರಿಯಾಗಿ ನಿವ೯ಹಿಸಿದೆವು.   ನಂತರ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದಾಗ ಸ್ಥಳಿಯ ಕೆಲಸಗಾರರು ಶೌಚಾಲಯ ಸ್ವಚ್ಚತೆ ಮಾಡುವ ಕೆಲಸ ಮಾತ್ರ ತಾವು ಮಾಡುವುದಿಲ್ಲ ಎಂಬ ಖಡಾಖಂಡಿತ ಮಾತುಗಳಿಂದ ನಾವೇ ಕುಟುಂಬದವರೇ ಸೇರಿ ಶೌಚಾಲಯ ಸ್ವಚ್ಚತೆ ಮಾಡಲು ಪ್ರಾರಂಬಿಸಿದೆವು ಇದು ನಮಗೆ ಒಳ್ಳೆಯ ಹೆಸರೇ ತಂದಿತು.    ಒಂದು ಮದುವೆಗೆ ಭಾಗವಹಿಸಲು ಬಂದ ಹೊರನಾಡು ಬೀಮೇಶ್ವರ ಜೋಶಿಯವರು ಮೊದಲು ಶೌಚಾಲಯಗಳನ್ನು ನೋಡಲು ಹೋದರಂತೆ (ಕಲ್ಯಾಣ ಮಂಟಪದ ನಿರ್ವಹಣೆಯ ಗುಣ ಮಟ್ಟ ಪರೀಕ್ಷಿಸಲು) ಅದನ್ನೆಲ್ಲ ನೋಡಿದ ನಂತರ ನಮ್ಮ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಶಭಾಷ್ ಹೇಳಿದ್ದರು.   ನಂತರ ಲಾಡ್ಜ್ ಪ್ರಾರಂಬಿಸಿದೆ ಆಗ ನಮ್ಮ ಸಿಬ್ಬಂದಿಗಳು ಸಂಸ್ಥೆಯ ಮಾಲಿಕರೇ ಶೌಚಾಲಯ ಸ್ಟಚ್ಚ ಮಾಡುತ್ತಾರೆಂದರೆ... ಅಂತ ಯೋಚಿಸಿ ಅವರೆಲ್ಲ ಶೌಚಾಲಯ ಸ್ವಚ್ಚ ಮಾಡಲು ಮುಂದೆ ಬಂದರು ಆಗ ಅವರಿಗೆಲ್ಲ ಸೂಕ್ತ ತರಬೇತಿ ನೀಡಿದ್ದರಿಂದ ಮತ್ತು ಅವರು ಸ್ವಚ್ಚಗೊಳಿಸಿದ್ದನ್ನು ಪುನಃ ಇನ್ನೊಂದು ತಂಡ ಪರಿಶೀಲಿಸಿ Ok ಮಾಡಿದ ಮೇಲೆ

Blog number 941. ನನಗೆ ಕಡೆಗೋಲು ಕೃಷ್ಣನ ಪಂಚಲೋಹದ ವಿಗ್ರಹ ನೀಡಿದ ಪ್ರದೀಪ್ ಕುಮಾರ್ ಕಲ್ಕೂರರು ಪ್ರತಿ ವರ್ಷ ಮಂಗಳೂರಿನಲ್ಲಿನ ಕದ್ರಿ ದೇವಸ್ಥಾನದಲ್ಲಿ ನಡೆಸುವ ಕೃಷ್ಣ ವೇಷ ಸ್ಪರ್ದೆ ತುಂಬಾ ಪ್ರಸಿದ್ಧಿ ಪಡೆದಿದೆ.

#ಕೃಷ್ಣ_ಜನ್ಮಾಷ್ಟಮಿ_ನನ್ನ_ನೆನಪುಗಳು. #ಮ೦ಗಳೂರಿನ_ಪ್ರದೀಪ್_ಕುಮಾರ್_ಕಲ್ಕೂರರು_ನೀಡಿದ_ಕಡಗೋಲು_ಕೃಷ್ಣ_ಪಂಚಲೋಹ_ವಿಗ್ರಹ #ಮ೦ಗಳೂರಿನ_ಕದ್ರಿ_ದೇವಸ್ತಾನದಲ್ಲಿ_ಇವರ_ಪ್ರತಿಷ್ಠಾನ_ನಡೆಸುವ_ಕೃಷ್ಣವೇಷ_ಸ್ಪರ್ದೆ_ಪ್ರಖ್ಯಾತ  #ಪಂಜಾಬಿನ_ಜಲಂದರ್_ಲ್ಲಿ_ನಡೆಯುವ_ಕೃಷ್ಣ_ಜನ್ಮಾಷ್ಟಮಿ_ಅತ್ಯಂತ_ವೈಭವದ್ದು.    ಕೃಷ್ಣ ನನ್ನ ಅತ್ಯಂತ ಪ್ರೀತಿಯ ದೇವರು, ನಮ್ಮ ತಂದೆ ಹೆಸರು, ಭಾವನ ಹೆಸರು ಅಷ್ಟೇಕೆ ನನ್ನ ಮಗನ ಹೆಸರೂ ಕೃಷ್ಣ , ಉಡುಪಿ ಕೃಷ್ಣನು ಒಲಿದ ಕನಕದಾಸರ ಭಕ್ತನೂ ನಾನು, ಕನಕದಾಸರ ಹುಟ್ಟಿದ ಸ್ಥಳ, ಅವರ ಕೋಟೆ, ಅವರು ನೆಟ್ಟಿದ ಅರಳಿ ಮರ, ಅವರು ಬಳಸಿದ ಶಂಖ, ಮರದ ಬಿಕ್ಷಾಪಾತ್ರೆ ಮತ್ತು ಅವರ ಸಮಾದಿಯನ್ನು ಸಂದರ್ಶಿಸಿದ್ದೇನೆ.    ಪಂಜಾಬಿನ ಜಲಂದರ್ ಪಟ್ಟಣದಲ್ಲಿ ನಾನು ನೋಡಿದ ಜನ್ಮಾಷ್ಟಮಿಯಷ್ಟು ದೊಡ್ಡ ವೈಭವ ನಾನು ಬೇರೆಲ್ಲೂ ನೋಡಿಲ್ಲ, ಆ ದಿನ ಜಲಂದರ್ ನ ಮುಖ್ಯ ರಸ್ತೆಯಲ್ಲಿ ಸಾಗುವ ಬೃಹತ್ ಮೆರವಣಿಗೆಯಿಂದ ರಸ್ತೆ ದಾಟಲು ಗಂಟೆಗಟ್ಟಲೆ ಕಾಯಬೇಕು, ಅತಿ ಹೆಚ್ಚು ಸರ್ದಾರ್ಜಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವುದು ನಾನು ಕಣ್ಣಾರೆ ನೋಡಿದ್ದೇನೆ.    ನಾನು ಪ್ರತಿ ದಿನ ಪೂಜಿಸುವ ಪಂಚಲೋಹದ ಕಡೆಗೋಲು ಕೃಷ್ಣ ವಿಗ್ರಹ ನೀಡಿದವರು ಮಂಗಳೂರಿನ ಪ್ರದೀಪ್ ಕುಮಾರ್ ಕಲ್ಕೂರರು, ಕಾಸರಗೋಡಿನಲ್ಲಿ ನಡೆದ ದಾಸ ಸಾಹಿತ್ಯದ ಒ0ದು ಸಭೆಯಲ್ಲಿ ಕಾಸರಗೋಡಿನ ಕನ್ನಡ ಸಂಘಟನೆಯ ಶಿವರಾಂ ಕಾಸರಗೋಡು ನನ್ನನ್ನು ಆಗಿನ ದ.ಕ.ಜಿಲ್ಲೆಯ ಸಾಹಿತ್ಯ

Blog number 940. ಆನಂದಪುರಂನ ಅತ್ಯುತ್ತಮ ಅಲ್ಯೂಮಿನಿಯಂ ಪಾರ್ಟಿಶನ್, ಎಸಿಪಿ ಗ್ಲಾಸ್ ವಿಂಡೋ -ಡೋರ್, ವಾರ್ಡ್ ರೋಬ್ ಮತ್ತು ಇಟಾಲಿಯನ್ ಕಿಚನ್ ಗಳನ್ನು ಮಾಡುವ ರಾಘವೇಂದ್ರ ಆಚಾರ್ ಎಂಬ ಕಲಾವಿದ.

#ಸಣ್ಣ_ಕೆಲಸ_ಸಣ್ಣ_ಮೊತ್ತ_ಅಂದಾಗ_ಹತ್ತಿರ_ಸುಳಿಯದವರು. #ದೊಡ್ಡ_ಕೆಲಸ_ಜಾಸ್ತಿ_ಹಣಕ್ಕಾಗಿ_ಮಾತ್ರ_ಹುಡುಕಾಟ_ಮಾಡುವ_ಕೆಲ_ಕುಶಲಕರ್ಮಿಗಳು #ಪುರಿ_ಜಗನಾಥ_ವಿಗ್ರಹಗಳಿಗೆ_ಗಾಜಿನ_ಹೊದಿಕೆ_ಮಾಡಿಸಲು_ಎಷ್ಟು_ಕಷ್ಟ_ಆಯಿತು_ನೋಡಿ #ಕೊನೆಗೂ_ಪುರಿ_ಜಗನಾಥ_ವಿಗ್ರಹಕ್ಕೆ_ಸುಂದರ_ಪೀಠ_ಗಾಜಿನ_ಹೊದಿಕೆ_ಮಾಡಿದ_ರಾಘವೇಂದ್ರ_ಆಚಾರ್   ಒರಿಸ್ಸಾದ ಕಟಕ್ ನ ಉದ್ದಿಮೆದಾರರಾದ ಸರೋಜ್ ಸುಬುದ್ದಿ ನನ್ನ ಹೊಸ ಲಾಡ್ಜ್ ಕೆಲಸದ ಅಡಿಪಾಯ ಹಾಕುವಾಗ ಪುರಿ ಜಗನ್ನಾಥ್ ದೇವಾಲಯದ ದೇವರುಗಳಾದ ಬಲರಾಮ- ಸುಭದ್ರೆ - ಕೃಷ್ಣರ ಮೂಲ ವಿಗ್ರಹದ ಮಾದರಿ,ಬೇವಿನ ಮರದಲ್ಲಿ ಕೆತ್ತನೆ ಮಾಡಿದ ಅಲಂಕೃತ ವಿಗ್ರಹ ಶುಭ ಹಾರೈಸಿ ಕಳಿಸಿದ್ದರು. https://arunprasadhombuja.blogspot.com/search?q=%E0%B2%AA%E0%B3%81%E0%B2%B0%E0%B2%BF    ಕಟ್ಟಡ ಕಾಮಗಾರಿ ಮುಗಿಯಲು ಕೊರಾನಾ ಲಾಕ್ ಡೌನ್ ಪ್ರಾರಂಭ ಆಗಿ ಈ ವಿಗ್ರಹ ಮರೆತು ಬಿಟ್ಟಿದ್ದೆ, ಈ ವರ್ಷ ಎರೆಡು ವರ್ಷದ ನಂತರ ಪುರಿ ಜಗನ್ನಾಥ್ ರ ರಥೋತ್ಸವ ನಡೆಯಿತು ಹತ್ತು ಲಕ್ಷ ಜನ ಸೇರಿದರು ಎನ್ನುವ ಸುದ್ದಿಗಳ ಓದಿದಾಗಲೇ ಈ ವಿಗ್ರಹ ಮನೆಯಲ್ಲಿ ಜೋಪಾನವಾಗಿ ಇಟ್ಟಿದ್ದು ನೆನಪಾಗಿ ನನ್ನ ಆಫೀಸಿಗೆ ತಂದೆ.   ಆದರೆ ಅದನ್ನು ಹಾಗೆ ಇಡುವುದಕ್ಕಿಂತ ಗ್ಲಾಸಿನ ಕವಚ ಹಾಕಿದರೆ ಚೆಂದ ಅಂತ ಅನ್ನಿಸಿ ನಮ್ಮ ಸಂಸ್ಥೆಯಲ್ಲಿ ಹಿಂದೆ ದೊಡ್ಡ ದೊಡ್ಡ ಕೆಲಸ ಮಾಡಿ ದೊಡ್ಡ ಮೊತ್ತದ ಹಣ ಪಡೆದವರಿಗೆ ಹೇಳಿದೆ ಆದರೆ ಅವರಾರಿಗೂ ದೇವರ

Blog number 939. ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಾರ್ಗದ ಮದ್ಯದಲ್ಲಿರುವ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಅಜಿನೋಮೊಟೊ, ಕೃತಕ ಬಣ್ಣ - ಪ್ಲೇವರ್ ಬಳಸದೆ ತಯಾರಿಸುವ ದಕ್ಷಿಣ ಭಾರತೀಯ ಮತ್ತು ಉತ್ತರ ಬಾರತೀಯ ಆಹಾರಗಳು.

#ನಮ್ಮ_ಮಲ್ಲಿಕಾ_ವೆಜ್_ರೆಸ್ಟೋರೆಂಟಲ್ಲಿ_ಒಂದೂವರೆ_ವರ್ಷದ_ನಂತರ_ಪ್ರಾರಂಭ_ಆಗಿದೆ #ತಂದೂರಿ_ರೋಟಿ_ಉತ್ತರ_ಭಾರತೀಯ_ತಿನಿಸುಗಳು. #ತಂದೂರಿ_ರೋಟಿ_ಮೂಲ_ಇಂಡಸ್_ಕಣಿವೆಯ_ಮೆಸಪೋಟಾಮಿಯ #ಇಂಡಿಯನ್_ಬ್ರೆಡ್_ಎಂದೇ_ಪ್ರಖ್ಯಾತ  Mallika Veg https://maps.app.goo.gl/zEftqmawuji4AhuX8      2020 ಮಾರ್ಚ್ ನಿಂದ ಎರೆಡು ಬಾರಿ ಕೊರಾನಾ ಲಾಕ್ ಡವನ್ ನಿಂದ ಹೋಟೆಲ್ ಉದ್ಯಮ ತಲ್ಲಣಿಸಿತು, ಅನೇಕ ಹೋಟೆಲ್ ಗಳು ಖಾಯಂ ಆಗಿ ಬಂದ್ ಆಯಿತು, ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮಗಳು ಜೀವ ಹಿಡಿದು ಬದುಕಿದೆ.   ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮದ್ಯದ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಇದೆ, ನಮಗೆ ಪ್ರವಾಸಿಗಳೇ ಅನ್ನದಾತರು.    ಕಳೆದ 16 ತಿಂಗಳ ನಂತರ ನಮ್ಮ ರೆಸ್ಟೋರೆಂಟ್ ನಲ್ಲಿ ಉತ್ತರ ಭಾರತೀಯ ತಿನಿಸುಗಳು ತಂದೂರಿ ರೋಟಿ ಪುನಾರಾರಂಭವಾಗಿದೆ ಇದನ್ನು ತಯಾರಿಸುವ ಅನುಭವಿ ಸಿಬ್ಬಂದಿಗಳು ದೂರದ ಪಶ್ಚಿಮ ಬಂಗಾಳದ ರಾಜ್ಯದಿಂದ ಬಂದಿದ್ದಾರೆ.    ಮದ್ಯಾಹ್ನ ಮತ್ತು ಸಂಜೆ  ಆಶ್ರೀವಾದ ಬ್ರಾಂಡಿನ ಶುದ್ಧ ಗೋದಿ ಹಿಟ್ಟಿನಿಂದ ತಂದೂರಿ ಭಟ್ಟಿಯಲ್ಲಿ ತಂದೂರಿ ರೋಟಿ ಚಾರ್ ಕೋಲಿನಿಂದ, ತಯಾರಿಸುವಾಗ ಹೋಟೆಲ್ ಸುತ್ತ ಪಸರಿಸುವ ಅದರ ಸುವಾಸನೆಯೆ ಚೇತೋಹಾರಿ ಆಗಿರುತ್ತದೆ, ತಂದೂರಿ ರೋಟಿ ಜೊತೆ ಪನೀರ್ - ಕಾಜು-ಮಶ್ರೂಮ್ - ಬೇಬಿಕಾರ್ನ್ - ಆಲೂ- ಮಿಕ್ಸ್ ವೆಜ್ ನ ವಿವಿದ ರೀತಿಯ ಮಸ

Blog number 938. ನನ್ನ ರಾಜದೂತ್ ಬೈಕ್ ಪುರಾಣ

#ರಾಜದೂತ್_ಬೈಕ್_ಪುರಾಣ ಒ0ದು ಹಳೆಯ ರಾಜದೂತ್ ಬೈಕ್ ಖರೀದಿಸಿದ್ದೆ ನಂತರ ಅದನ್ನ ನಿಭಾಯಿಸಲಾಗದೆ ನಮ್ಮ ಹಳೆಯ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದೆ.  ಒ0ದು ದಿನ ಬೆಳ್ಳಂಬೆಳಿಗ್ಗೆ ಹೆಬ್ಬೋಡಿ ಗಣಪತಿ ಮತ್ತು ಅವನ ಮಗ ಬಂದರು ಆಗ ನನ್ನ ತಲೆ ಸೆಲೂನ್ ಕೃಷ್ಣನ ಕೈಯಲ್ಲಿತ್ತು, "ಏನ್ ಗಣಪತಿ ಬೆಳಗೇನೆ ಅಪ್ಪ ಮಗ ಎಲ್ಲಿಗೋ ಹೊರಟಿದೀರಿ" ಅಂದೆ ಎಲ್ಲೂ ಇಲ್ಲ ನಿಮ್ಮಲ್ಲಿಗೆ ಬಂದೆವು ಅಂದ, ಏನು ವಿಚಾರ ? ಅಂದದ್ದಕ್ಕೆ ನಿಮ್ಮ ಹತ್ತಿರ ಇರೋ ಹಳೇ ರಾಜದೂತ್ ಬೈಕ್ ಕೊಡುತೀರಾ? ಅಂದ, ನನಗೆ ಒಂದು ತರ ಖುಷಿ ಆಯಿತು ಹೆಂಗಿದ್ದರೂ ನನಗೆ ಬೇಡ ಆಗಿತ್ತು ಅದಕ್ಕೆ ಗಿರಾಕಿ ಬಂತಲ್ಲ ಅಂತ.   ಬೆಲೆ ಎಷ್ಟು ಅಂದಾಗ ನಾನು ಖರೀದಿಸಿದ್ದು 7 ಸಾವಿರಕ್ಕೆ ನೀನು 2 ಸಾವಿರ ಕಡಿಮೆ ಕೊಡು ಅಂದೆ ತಕ್ಷಣ ಮಗನಿಗೆ ಅಂಗಡಿಗೆ ಹೋಗು ಎಲೆ ಅಡಿಕೆ ತಾ, ಮುಂಗಡ ಕೊಡದೆ ಯಾವುದೇ ವಸ್ತು ಖರೀದಿಸ ಬಾರದು ಅಂತ ಮಗನಿಗೆ ಹೇಳುವಾಗಲೇ ಗೊತ್ತಾಯಿತು ಇವತ್ತು ಪೂಣ೯ ಹಣ ಕೊಡೊಲ್ಲ ಅಂತ.   ಏನಾದರಾಗಲಿ ಬೈಕ್ ಮಾರಾಟ ಆಯಿತಲ್ಲ ಹೆಂಗಿದ್ದರೂ ಒಂದೆರೆಡು ಸಾವಿರ ಮುಂಗಡ ಬರುತ್ತದಲ್ಲ ಅಂತ ಸುಮ್ಮನಾದೆ ಗಣಪತಿ ಎಲೆ ಅಡಿಕೆ ಮೇಲೆ 5 ರೂಪಾಯಿ ಮತ್ತು 25 ಪೈಸೆ ನಾಣ್ಯ ಇಟ್ಟು ಕೊಟ್ಟಾಗ ಕೋಪ ಬಂತು ಆದರೆ ಗಣಪತಿ ಮುಂದಿನ ವಾರದಲ್ಲಿ ತಪ್ಪದೇ ಪಾವತಿ ಮಾಡುವುದಾಗಿ ಭರವಸೆ ನೀಡಿ ರಾಜದೂತ್ ಬೈಕ್ ಚಾಲು ಮಾಡಿದ ಮಗನ ಹಿಂದೆ ಕುಳಿತು ಹೋದವನು ಎಷ್ಟು ದಿನವಾದರೂ ಬರಲಿಲ್ಲ.   ಒಮ್ಮೆ ಅವರ ಮನೆ

Blog number 937. ಆನಂದಪುರಂ ಇತಿಹಾಸ ಸಂಖ್ಯೆ 80. ಸೆಕ್ಷನ್ V ಮೈಸೂರು ಗೆಜೆಟಿಯರ್ ನಲ್ಲಿ ಆನಂದಪುರಂ ಉಲ್ಲೇಖದ ಯಥಾ ನಕಲು ಸುವರ್ಣ ಸ್ವಾತಂತ್ರ್ಯ ಜ್ಯೋತಿ 1996 ರಲ್ಲಿ ಸುಭಾಷ್ ಚಂದ್ರರ ಅನುಯಾಯಿ ಐಎನ್ಎ ರಾಮರಾವ್ ನೇತೃತ್ವದಲ್ಲಿ ಆನಂದಪುರಂಗೆ ಬಂದಾಗ ಸ್ಟಾಗತಿಸಿ ಪ್ರಸ್ತಾವಿಕ ನುಡಿಗಳ ಜೊತೆ ವಾಚಿಸಿದ ಸವಿ ನೆನಪು

#ಆನಂದಪುರಂ_ಇತಿಹಾಸ_ಸಂಖ್ಯೆ_80 #ಸೆಕ್ಷನ್_V_ಮೈಸೂರು_ಗೆಜೆಟಿಯರನಲ್ಲಿ_ಆನಂದಪುರಂ_ಯಥಾ_ನಕಲು #ಸ್ಟಾತಂತ್ರ್ಯದ_ಅಮೃತೋತ್ಸವದ_ಸಂದರ್ಭದಲ್ಲಿ_ಆನಂದಪುರಂನ_ಸ್ಟಾತಂತ್ರ_ಹೋರಾಟಗಾರರ_ನೆನಪು #ಸುವರ್ಣಸ್ವಾತೊಂತ್ರೊತ್ಸವದ_ಸಂದರ್ಭದಲ್ಲಿ_ಸುವರ್ಣಸ್ವಾತಂತ್ರ_ಜ್ಯೋತಿ_ಆನಂದಪುರಂಗೆ_ಬಂದಿತ್ತು. #ಇದರ_ನೇತೃತ್ವ_ಸುಭಾಷಚಂದ್ರಬೋಸರ_ಇಂಡಿಯನ್_ನ್ಯಾಷನಲ್_ಆರ್ಮಿಯ_ಐಎನ್ಎ_ರಾಮರಾವ್_ಬಂದಿದ್ದರು. #ಆನಂದಪುರಂ_ಬಸ್_ನಿಲ್ದಾಣದಲ್ಲಿ_ಸಭೆ_ಆಯೋಜಿಸಲಾಗಿತ್ತು.     ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಆನಂದಪುರಂ ಬದರಿನಾರಾಯಣ ಅಯ್ಯಂಗಾರ್ ಸ್ವಾತಂತ್ರ್ಯ ನಂತರ  ಶಾಸಕರು, ಸಂಸದರು ಮತ್ತು ಮಂತ್ರಿಗಳಾಗಿದ್ದು ಇತಿಹಾಸ ಇವರ ಜೊತೆ ಆನಂದಪುರಂನ ರಾಮರಾವ್ (ಟೈಲರ್ ರಾಮಣ್ಣ), ಕೃಷ್ಣಮೂರ್ತಿ ಮಾಸ್ತರ್ (ಕನ್ನಡ ಸಂಘದ ಲಕ್ಷ್ಮೀಷ್ ತಂದೆ), ಟೈಲರ್ ಪುಟ್ಟಪ್ಪನವರು (ಎಲೆಕ್ಟ್ರಿಕ್ ಗುತ್ತಿಗೆದಾರ ಸಿರಿ ಮತ್ತು ಅಂಗನವಾಡಿ ಶಿಕ್ಷಕಿ ವಿಮಲಾಕ್ಷಿ ತಂದೆ) ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಆನಂದಪುರಂನ ಸರ್ವಕಾಲಿಕ ಗೌರವಾನ್ವಿತರು.    ಸ್ಟಾತ೦ತ್ರ್ಯೋತ್ಸವದ ಬೆಳ್ಳಿ ಹಬ್ಬ (25ನೇ ಸ್ವಾತಂತ್ರ ದಿವಸ) 1972 ರಲ್ಲಿ ಆನಂದಪುರಂನಲ್ಲಿ ಅತ್ಯಂತ ಅದ್ದೂರಿಯಾದ ಎಲ್ಲಾ ಶಾಲಾ ಮಕ್ಕಳನ್ನು ಸೇರಿಸಿ ನಡೆಸಿದ ಪ್ರಭಾತ್ ಪೇರಿಯನ್ನು ಮಾದರಿ ಆನಂದಪುರ೦ ರಚನೆಗೆ ಕಾರಣರಾದ ದೈಹಿಕ ಶಿಕ್ಷರಾದ SRK ಎಂದೇ ಜನ ಕರ