Skip to main content

Blog number 942.ಸಾವ೯ಜನಿಕ ಶೌಚಾಲಯ ನಿರ್ಮಾಣಕ್ಕಿಂತ ನಿರ್ವಹಣೆ ಅತಿ ಮುಖ್ಯ, ಮನೆಯಲ್ಲಿನ ಶೌಚಾಲಯ ನಿರ್ವಹಿಸದವರು ಸಾರ್ವಜನಿಕ ಶೌಚಾಲಯ ಹೇಗೆ ಬಳಸಿಯಾರು? ಹಾಗೆಯೇ ಸರ್ಕಾರಕ್ಕೆ ತೆಗಳದೆ ನಾವು ನಾವೇ ಸ್ಥಳಿಯರು ಸಾವ೯ಜನಿಕ ಶೌಚಾಲಯಗಳ ನಿರ್ವಣಾ ವ್ಯವಸ್ಥೆ ಮಾಡಿಕೊಳ್ಳಬಾರದೇಕೆ? ನನ್ನ ಹದಿನಾಲ್ಕು ವರ್ಷದ ನಮ್ಮ ಸಂಸ್ಥೆಯ ಶೌಚಾಲಯ ನಿರ್ವಹಣೆಯ ಅನುಭವಗಳು.

#ಶೌಚಾಲಯ_ನಿಮಾ೯ಣಕ್ಕಿಂತ_ನಿರ್ವಹಣೆ_ಅತಿ_ಮುಖ್ಯ

#ಹತ್ತು_ವರ್ಷದಲ್ಲಿ_ನನ್ನ_ಪ್ರಯೋಗ_ಅನುಭವ

#ಶೌಚಾಲಯ_ಅವೈಜ್ಞಾನಿಕವಾಗಿ_ಬಳಸುವವರಿಂದಲೂ_ಸಮಸ್ಯೆ

#ಶೌಚಾಲಯ_ಸ್ಟಚ್ಚತೆ_ಕೂಡ_ಒಂದು_ಕಲೆ.

  1989 ರಲ್ಲಿ ನಮ್ಮ ಹಳೆಯ ವಾಸದ ಮನೆ ನವೀಕರಣ ಮಾಡಿದಾಗ ಅಟ್ಯಾಚ್ಡ್ ಟಾಯಿಲೆಟ್ ಕಟ್ಟಿಸಿದ್ದೆವು ಆಗ ಅನೇಕರು ವಿರೋದ ವ್ಯಕ್ತಪಡಿಸಿದ್ದರು ಆದರೂ ನಿರ್ಮಿಸಿ ಸರಿಯಾಗಿ ನಿವ೯ಹಿಸಿದೆವು.
  ನಂತರ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದಾಗ ಸ್ಥಳಿಯ ಕೆಲಸಗಾರರು ಶೌಚಾಲಯ ಸ್ವಚ್ಚತೆ ಮಾಡುವ ಕೆಲಸ ಮಾತ್ರ ತಾವು ಮಾಡುವುದಿಲ್ಲ ಎಂಬ ಖಡಾಖಂಡಿತ ಮಾತುಗಳಿಂದ ನಾವೇ ಕುಟುಂಬದವರೇ ಸೇರಿ ಶೌಚಾಲಯ ಸ್ವಚ್ಚತೆ ಮಾಡಲು ಪ್ರಾರಂಬಿಸಿದೆವು ಇದು ನಮಗೆ ಒಳ್ಳೆಯ ಹೆಸರೇ ತಂದಿತು.
   ಒಂದು ಮದುವೆಗೆ ಭಾಗವಹಿಸಲು ಬಂದ ಹೊರನಾಡು ಬೀಮೇಶ್ವರ ಜೋಶಿಯವರು ಮೊದಲು ಶೌಚಾಲಯಗಳನ್ನು ನೋಡಲು ಹೋದರಂತೆ (ಕಲ್ಯಾಣ ಮಂಟಪದ ನಿರ್ವಹಣೆಯ ಗುಣ ಮಟ್ಟ ಪರೀಕ್ಷಿಸಲು) ಅದನ್ನೆಲ್ಲ ನೋಡಿದ ನಂತರ ನಮ್ಮ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಶಭಾಷ್ ಹೇಳಿದ್ದರು.
  ನಂತರ ಲಾಡ್ಜ್ ಪ್ರಾರಂಬಿಸಿದೆ ಆಗ ನಮ್ಮ ಸಿಬ್ಬಂದಿಗಳು ಸಂಸ್ಥೆಯ ಮಾಲಿಕರೇ ಶೌಚಾಲಯ ಸ್ಟಚ್ಚ ಮಾಡುತ್ತಾರೆಂದರೆ... ಅಂತ ಯೋಚಿಸಿ ಅವರೆಲ್ಲ ಶೌಚಾಲಯ ಸ್ವಚ್ಚ ಮಾಡಲು ಮುಂದೆ ಬಂದರು ಆಗ ಅವರಿಗೆಲ್ಲ ಸೂಕ್ತ ತರಬೇತಿ ನೀಡಿದ್ದರಿಂದ ಮತ್ತು ಅವರು ಸ್ವಚ್ಚಗೊಳಿಸಿದ್ದನ್ನು ಪುನಃ ಇನ್ನೊಂದು ತಂಡ ಪರಿಶೀಲಿಸಿ Ok ಮಾಡಿದ ಮೇಲೆ ಅತಿಥಿಗಳಿಗೆ ನೀಡುವುದರಿಂದ ನಮ್ಮ ಲಾಡ್ಜ್ ಹೈಜನಿಕ್ ಆಗಿರುತ್ತದೆಂಬ ಹೆಸರು ಬಂತು, ವಿದೇಶಿ ಪ್ರವಾಸಿಗಳೂ ಪ್ರಶಂಸಿದ್ದಾರೆ.
  ನಂತರ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನ ಶೌಚಾಲಯ ನಿರ್ವಹಣೆಗೆ ತುಂಬಾ ಕಷ್ಟ ಪಡಬೇಕಾಯಿತು, ಹೋಟೆಲ್ ಗೆ ಬರುವ ಹೆಚ್ಚು ಗ್ರಾಹಕರು ಶೌಚಾಲಯ ಬಳಸುವುದರಿಂದ ಸ್ಟಚ್ಚತೆಗೆ ಹೆಚ್ಚು ಶ್ರಮ ಪಡಬೇಕಾಯಿತು. ಅದರಲ್ಲೂ ಪುರುಷರ ಶೌಚಾಲಯ ಹೆಚ್ಚು ಸಮಸ್ಯೆ ತರುತ್ತದೆ,ಅಲ್ಲಿ ಮೂತ್ರ ಮಾಡಿದ ನಂತರ ಪುರುಷರು ನೀರು ಪ್ಲಶ್ ಮಾಡಲು ಮರೆಯುತ್ತಾರೆ, ಗುಟಕಾ ಪಾನ್ ಅದರಲ್ಲೇ ಉಗುಳುವುದು, ಅದರ ಖಾಲಿ ಪ್ಯಾಕೆಟ್ ಅಲ್ಲೇ ಹಾಕುವುದು, ಗುಟ್ಟಾಗಿ ಮದ್ಯ ಸೇವನೆ ಮಾಡಿ ಶೌಚಾಲಯದಲ್ಲೆ ಹಾಕುವುದು ಮಾಡುತ್ತಾರೆ.
 ನಾವು ರೆಸ್ಟೋರೆಂಟ್  ಶೌಚಾಲಯಗಳ ಶುಚಿ ಈ ರೀತಿ ಮಾಡುತ್ತೇವೆ, ಬೆಳಿಗ್ಗೆ 7ಕ್ಕೆ ಒಮ್ಮೆ ಶೌಚಾಲಯ ಸೋಪು ನೀರಿಂದ ತೊಳೆದು ನಂತರ ಬ್ಲೀಚಿಂಗ್ ಪೌಡರ್ ಹಾಕಿ ಬ್ರಷ್ ಮಾಡಿ 20 ನಿಮಿಷ ಬಿಟ್ಟು ಪುನಃ ತೊಳೆದು, ವೈಪರ್ ನಿಂದ ವೈಪ್ ಮಾಡಿ ನೀರು ತೆಗೆಯುವುದು, ನಂತರ ಪಿನಾಯಿಲ್ ಹಾಕುವುದು, ಡೆಟಾಲ್ ಸಿಂಪಡನೆ ನಂತರ ಏರ್ ಪ್ರೆಶನರ್ ಹಾಕುತ್ತೇವೆ, ಕೈ ತೊಳೆಯುವ ಸಿಂಕ್ ನಲ್ಲಿ ಹ್ಯಾ೦ಡ್ ವಾಷ್ ತುಂಬಿಸಿಡಬೇಕು, ಡಸ್ಟ್ ಬಿನ್ನಿನ ತುಂಬಿದ ಗಾರ್ಬೇಜ್ ತೆಗೆದು ಡಸ್ಟ್ ಬಿನ್ ತೊಳೆದು ಅದಕ್ಕೆ ಹೊಸ ಗಾರ್ಬೇಜ್ ಬ್ಯಾಗ್ ಹಾಕುತ್ತೇವೆ.
  ದಿನಕ್ಕೆ 5- 6 ಸಾರಿ ಈ ರೀತಿ ಸ್ವಚ್ಚ ಮಾಡಬೇಕು, ರಾತ್ರಿ ರೆಸ್ಟೋರೆಂಟ್ ಬಾಗಿಲು ಹಾಕುವಾಗ ಅಂತಿಮವಾಗಿ ಒಂದು ಬಾರಿ ಸ್ವಚ್ಚ ಮಾಡಬೇಕು.
  15 ದಿನಕ್ಕೊಮ್ಮೆ ಪ್ಲಶ್ ಮೇಟ್, ಟಾಯಿಲೆಟ್ ಪ್ರೆಶನರ್, ನ್ಯಾಪ್ತಾ ಬಾಲ್ ಬದಲಿಸುತ್ತೇನೆ, ಯುರಿನಲ್ ಗಳಿಗೆ ಯುರಿನಲ್ ಕೇಕ್ ಕೂಡ 15 ದಿನಕ್ಕೆ ಒಮ್ಮೆ ಹಾಕಬೇಕು.
  ಪುರುಷರ ಮೂತ್ರಾಲಯದಲ್ಲಿ ದುಭಾರಿ ಬೆಲೆಯ ಸೆನ್ಸಾರ್ ಮೂತ್ರಿ ಅಳವಡಿಸಿದ್ದೇನೆ ಅದು ಮೂತ್ರ ಮಾಡಿದ ನಂತರ ಸ್ವಯಂಚಾಲಿತವಾಗಿ ನೀರು ಹರಿಸುವುದರಿಂದ ಶೌಚಾಲಯ ಯಾವಾಗಲೂ ಸ್ವಚ್ಚವಾಗಿಡುತ್ತದೆ.
  ಈಗ ನಮ್ಮ ಕಾಟೇಜ್ ಗಳು, ಹೊಸ ಲಾಡ್ಜ್ ಗಳ ನಿರ್ಮಾಣದಿಂದ ಈಗಿರುವ ಒಟ್ಟು ಶೌಚಾಲಯಗಳ ಸಂಖ್ಯೆ 57 ಮತ್ತು ಮೂತ್ರಿಗಳು 7 ಇದೆ ಇವುಗಳಿಗೆ ಪ್ರತಿ ತಿಂಗಳು ನಾವು ಖರೀದಿಸುವ ಪಿನಾಲ್, ಬ್ಲಿಚಿಂಗ್, ಡೆಟಾಲ್, ಟಾಯಲೆಟ್ ಪ್ರೆಶನರ್, ಪ್ಲಶ್ ಮೇಟ್, ರೂಂ ಪ್ರೆಶನರ್, ಹ್ಯಾಂಡ್ ವಾಷ್, ಡಸ್ಟಬಿನ್ ಗಾರ್ಬೇಜ್ ಬ್ಯಾಗ್ ಗಳಿಗೆ ಸುಮಾರು 15 ಸಾವಿರ ವೆಚ್ಚವಾಗುತ್ತದೆ, ಶೌಚಾಲಯದಲ್ಲಿ ಏನೇ ಹಾಳಾದರೂ ತಕ್ಷಣ ಪ್ಲಂಬರ್ ಕರೆಸಿ ಬದಲಿಸುತ್ತೇವೆ ಇದರ ಮೈ೦ಟನೆನ್ಸ್ ವೆಚ್ಚ ಮತ್ತು ನಿತ್ಯ ನಿರ್ವಹಣೆ ಮಾಡುವ ಸಿಬ್ಬಂದಿ ವೇತನ ಪ್ರತ್ಯೇಕ ಆದ್ದರಿಂದ ನಮ್ಮ ಸಂಸ್ಥೆಯ ಶೌಚಾಲಯ ಅಷ್ಟು ಹೈಜನಿಕ್ ಆಗಿರುತ್ತದೆ.
   ಹತ್ತು ವರ್ಷದಲ್ಲಿ 3 ಬಾರಿ ರೆಸ್ಟೋರೆಂಟ್ ಶೌಚಾಲಯ ನವೀಕರಣ ಮಾಡಿದ್ದೇವೆ.
   ಹೀಗೆ ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿದರೆ ನಮ್ಮ ವ್ಯವಹಾರ ಕೂಡ ಹೆಚ್ಚಾಗುವುದರಲ್ಲಿ ಅನುಮಾನ ಬೇಡ ಒಮ್ಮೆ ಬಂದ ಅತಿಥಿ ಇನ್ನೊಮ್ಮೆ ಅವರೇ ನಮ್ಮ ರೆಸ್ಟೋರೆಂಟ್ ಗೆ  ಹುಡುಕಿಕೊಂಡು ಬರುತ್ತಾರೆ.
  ನನ್ನ ಲಾಡ್ಜ್ ಕಛೇರಿ ಪಕ್ಕದಲ್ಲೇ ರೆಸ್ಟೋರೆಂಟ್ ನ ಪುರುಷ ಮತ್ತು ಮಹಿಳಾ ಶೌಚಾಲಯ ಇದೆ ಅಂತ ಗೊತ್ತೇ ಆಗದಂತೆ ಅಷ್ಟು ಶುಚಿಯಾಗಿ ನಮ್ಮ ಸಿಬ್ಬಂದಿಗಳು ನಿರ್ವಹಿಸುತ್ತಿದ್ದಾರೆ.
  ಸಾರ್ವಜನಿಕ ನಿಲ್ದಾಣಗಳ ಶೌಚಾಲಯಗಳು, ಸರ್ಕಾರಿ ಕಛೇರಿ, ಶಾಲಾ ಶೌಚಾಲಯಗಳಂತು ಯಾರೂ ಒಳ ಹೋಗದಂತೆ ಅವ್ಯವಸ್ಥೆಯಲ್ಲಿರುವುದು ನಿತ್ಯ ನೋಡುತ್ತೇವೆ ಸರ್ಕಾರವನ್ನು ದೂರುತ್ತೇವೆ ಆದರೆ ಸ್ಥಳಿಯರೆ ಸೇರಿ ಅದನ್ನು ಸುಲಭವಾಗಿ ಸ್ವಚ್ಚಗೊಳಿಸುವ ಸದಾ ಶುಚಿಯಾಗಿಡುವ ಪ್ರಯತ್ನ ಮಾತ್ರ ನಾವಾರು ಮಾಡಲು ಮುಂದಾಗದಿರುವುದು ಮಾತ್ರ ವಿಷಾದನೀಯ.
  2013ರಲ್ಲಿ ನಾನು ಮತ್ತು ಗೆಳೆಯರು ಸೇರಿ ಸಾಗರದ ಬಸ್ ನಿಲ್ದಾಣ ತೊಳೆದು ಶುಚಿ ಮಾಡಿದೆವು, 2014 ರ ನಂತರ ಪ್ರದಾನಿ ಮೋದಿಯವರ ಕನಸಿನ ಸ್ವಚ್ಚ ಭಾರತ ಹೆಚ್ಚು ಕಡಿಮೆ ಎಲ್ಲರೂ ಮರೆತಿದ್ದಾರೆ, ಈಗ ಅದರ ಆಚರಣೆ ಸಾಂಕೇತಿಕ ಮಾತ್ರ ಆಗಿದೆ.
  ಸರಿಯಾಗಿ ನಾವೇ ಕಲಿತು ನಂತರ ನಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಿ ನಮ್ಮ ನಮ್ಮ ಸಂಸ್ಥೆಗಳ ಶೌಚಾಲಯ ಸುಲಭವಾಗಿ ನಿರ್ವಹಣೆ ಮಾಡಬಹುದು ಅದೇ ರೀತಿ ನಮ್ಮ ನಮ್ಮ ಮನೆಗಳ ಶೌಚಾಲಯ ಕೂಡ ಪರಿಶುದ್ಧವಾಗಿಟ್ಟು ಕೊಳ್ಳಬೇಕು ಇದರಿಂದ ಹೊರ ಹೋದಾಗ ಸಾರ್ವಜನಿಕ ಶೌಚಾಲಯ ಆರೋಗ್ಯಕರವಾಗಿ ಬಳಸುವ ಅಭ್ಯಾಸವೂ ಆಗುತ್ತದೆ
   ಸಾರ್ವಜನಿಕ ಶೌಚಾಲಯ ನಿರ್ವಹಣೆ ಸವಾಲೂ ಹೌದು, ಶೌಚಾಲಯ ಬಳಸುವವರು ಬಳಸುವ ಮೊದಲು ಮತ್ತು ಬಳಸಿದ ನಂತರವೂ ನೀರನ್ನು ಪ್ಲಶ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಬಳಸಿ ಬಿಸಾಡುವ ಯಾವುದೇ ವಸ್ತು ಶೌಚಾಲಯದ ಒಳಗೆ ಬಿಸಾಡದೆ ಶೌಚಾಲಯದಲ್ಲಿಡುವ ಡಸ್ಟ್ ಬಿನ್ ಒಳಗೆ ಹಾಕಬೇಕು ಅದರಿಂದ ನಂತರ ಬರುವ ಬಳಕೆದಾರನಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.
  ನಾನು ಈ ಎಲ್ಲಾ ವಸ್ತುಗಳನ್ನು ಖರೀದಿಸುವಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ತಿರುವಿನ #ಶೋಬಾ_ಸ್ಟೋರ್ ಮಾಲಿಕರು ಯಾವಾಗಲೂ ಹೇಳುತ್ತಿರುತ್ತಾರೆ ಶಿವಮೊಗ್ಗದ ಯಾವ ಲಾಡ್ಜ್ ರೆಸ್ಟೋರೆಂಟ್ ನವರೂ ನಿಮ್ಮಷ್ಟು ಕಾಳಜಿಯಿಂದ ಇಷ್ಟೆಲ್ಲ ಖರೀದಿಸುವುದಿಲ್ಲ ಅನ್ನುತ್ತಾರೆ ಇದು ಪ್ರಶಂಸೆ ಅಲ್ಲ ನಮ್ಮ ದುಡಿಮೆಯ ಕೆಲ ಬಾಗ ಗ್ರಾಹಕರ ಸಂತೃಪ್ತಿಗಾಗಿ  ಪ್ರವಾಸೋದ್ಯಮದಲ್ಲಿ ಉದ್ಯಮ ಕಂಡುಕೊಂಡವರೆಲ್ಲಾ ವೆಚ್ಚ ಮಾಡಲೇ ಬೇಕು ಆಗಲೇ ಸ್ಟಚ್ಚ ಭಾರತದ ನಿಜ ಅನೂಷ್ಟಾನ ಆಗುವುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ