Skip to main content

Blog number 928. ಮಲೆನಾಡಿನ ಕಾಡಿನಲ್ಲಿ ವಿವಿದ ಅಣಬೆಗಳ ಕಾಲ, ಅಣಬೆ ಪ್ರಿಯರ ಊಟದ ತಟ್ಟೆಯಲ್ಲಿ ವೈವಿಧ್ಯಮಯ ಅಣಬೆ ಖಾದ್ಯಗಳ ಸರಣಿ .

#ಮು೦ಗಾರ_ಮದ್ಯದಲ್ಲಿ_ಮಷ್ರೂಮ್_ಕಾಲ.

#ಪಶ್ಚಿಮಘಟ್ಟದಲ್ಲಿ_ಹಣ್ಣುಗಳ_ಕಾಲ_ಮುಗಿದು_ಕಳಲೆ_ಮರಕೆಸದ_ನಂತರ_ಅಣಬೆ_ಹುಡುಕಾಟ

#ಇವತ್ತು_ನಮ್ಮ_ರಬ್ಬರ್_ಟ್ಯಾಪರ್_ಆದರ್ಶ_ಮತ್ತು_ಸ್ನೇಕ್_ಪ್ರಬಾಕರ್_ಕಳಿಸಿದ_ಅಣಬೆಗಳು.

   ಬೇಸಿಗೆಯಲ್ಲಿ ಆಲೇಮನೆ ಕಬ್ಬಿನ ಹಾಲು, ಬೆಲ್ಲದ ಸವಿಯ ಜೊತೆ ಉಪ್ಪಿನಕಾಯಿ ಮಿಡಿ ಹುಡುಕುತ್ತಾ ಹುಡುಕುತ್ತಾ ಮಾವಿನ ಹಣ್ಣಿನ ಕಾಲ, ಜೊತೆಗೆ ಹಲಸಿನ ಹಬ್ಬ ಇವೆಲ್ಲದರ ಮಧ್ಯ ಮುಂಗಾರು ಶುರು ಆಗುವಾಗ ನಾಲಿಗೆ ಬಯಸುವ ಕಳಲೆ, ಮರ ಕೆಸುವಿನ ಎಲೆಯ ಪತ್ರೋಡೆ ಇದೆಲ್ಲ ಬೇಸರ ಅನ್ನಿಸುವಾಗಲೇ ಬಿರು ಮಳೆಯ ಮಧ್ಯಕಾಲ ಮುಗಿಯುವಾಗ ಬಿಸಿಲು ಮಳೆ ಕಣ್ಣಾ ಮುಚ್ಚಲೆ ಜೊತೆ ಜೊತೆಯಲ್ಲಿ ಗುಡುಗುಗಳ ಶಬ್ದ ಬಂದಾಗಲೇ ಎಲ್ಲರಿಗೂ ಅಣಬೆ ಬೇಕು ತಿನ್ನಲೇಬೇಕು ಅನ್ನುವ ತವಕ ಪ್ರಾರಂಭ.
  ವರ್ಷ ವರ್ಷ ಅಣಬೆ ಹುಟ್ಟುವ ಜಾಗದಲ್ಲಿ ಬೆಳ್ಳಂಬೆಳಗೆ ಹೋಗಿ ಕಾಯುವ ಕೆಲವರಿಗೆ ನಿರಾಸೆ ಆದರೆ ಕೆಲವರಿಗೆ ಬಂಪರ್ ಬಹುಮಾನ.
  ಈಗ ಹಳ್ಳಿಗಳಲ್ಲೂ ಪಾರಂ ಅಣಬೆ ವರ್ಷ ಪೂರ್ತಿ ಸಿಗುವುದರಿಂದ ಮೊದಲಿನಂತೆ ಅಣಬೆಗೆ ಹಪಾಹಪಿ ಇಲ್ಲವಾದರೂ ಕಾಡಿನ ಜವಾರಿ ಅಣಬೆಯ ರುಚಿ ವಿಬಿನ್ನವಾದ್ದರಿಂದ ಬೇಡಿಕೆ ಜಾಸ್ತಿ ಇದೆ.
  ಮೇಲ್ಪರ್ಗದಲ್ಲಿ ಅಣಬೆ ಬಳಕೆ ನಿಷೇದವಿದೆ, ನಮ್ಮ ಬಾಗದ ಬ್ರಾಹ್ಮಣರು, ಲಿಂಗಾಯಿತರು ಮತ್ತು ಜೈನರು ಆ ಕಾರಣದಿಂದ ಅಣಬೆ ಸೇವಿಸುವುದಿಲ್ಲ ಹಾಗಾಗಿ ಇದು ಮಾಂಸಹಾರಿಗಳಿಗೆ ಹೆಚ್ಚು ಮೀಸಲು.
   ನಮ್ಮ ರಬ್ಬರ್ ತೋಟದ ಟ್ಯಾಪರ್ ಕಿರಿಯ ಮಿತ್ರ ಆದರ್ಶ ಪೋನ್ ಮಾಡಿ ತಮ್ಮ ಜಮೀನಿನಲ್ಲಿ ಅಣಬೆ ಹುಟ್ಟಿದೆ ಬೇಕಾ ಅಂದಾಗ ನಾನು ಹೇಳಿದ್ದು "ಅಣಬೆ ಮತ್ತು ಗಿಣ್ಣಕ್ಕೆ ಅನುಮತಿ  ಯಾವತ್ತೂ ಕೇಳದೆ ತಂದು ಬಿಡಬೇಕು" ಅಂತ ಹೇಳಿ ಪೋನಿಟ್ಟು ಸ್ಟಲ್ಪ ಹೊತ್ತಲ್ಲೇ ಸ್ನೇಕ್ ಪ್ರಬಾಕರ್ ಕೂಡ ಪ್ರತಿ ವರ್ಷದಂತೆ ಅಣಬೆ ಕಳಿಸಿದ್ದೇನೆ ಅಂದರು.
   ಇನ್ನೇನು ನಮ್ಮಲ್ಲಿ ಕಾಡು ಅಣಬೆಯ ಹಬ್ಬವೇ ಆಯಿತು ಜೊತೆಗೆ ಅಕ್ಕಿ ರೊಟ್ಟಿ ಇನ್ನೊಂದು ತಿಂಗಳು ಮಲೆನಾಡಿನಲ್ಲಿ ವಿವಿದ ಅಣಬೆಗಳು ಬೆಳೆಯಲಿದೆ ಅಣಬೆ ಪ್ರಿಯರ ಊಟದ ತಟ್ಟೆಯಲ್ಲಿ ಬಗೆ ಬಗೆಯ ಅಣಬೆ ಖಾದ್ಯಗಳ ಸರಣಿಯ ರಸದೌತಣ!!...

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...