Skip to main content

Blog number 935. ದೇಶದ ಸ್ವಾತಂತ್ರ್ಯ ಮಹೋತ್ಸವದ ಬೆಳ್ಳಿಹಬ್ಬ, ಸುವಣ೯ ಮಹೋತ್ಸವ ಮತ್ತು ಈಗಿನ ಅಮೃತ ಮಹೋತ್ಸವದಲ್ಲಿ ನಾನು ಭಾಗಿಯಾದೆ ಎಂಬ ಹೆಮ್ಮೆ ಹಾಗೂ ಕಟ್ಟುನಿಟ್ಟಿನ ದ್ವಜ ಸಂಹಿತೆ ತಿದ್ದುಪಡಿಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಖ್ಯಾತ ಉದ್ದಿಮೆದಾರ ನವೀನ್ ಜಿಂದಾಲ್ ಗೆ ದೇಶವಾಸಿಗಳ ಸಲಾಂ .

#ದೇಶದ_ಪ್ರತಿ_ಮನೆ_ಮನದಲ್ಲಿ_ತ್ರಿವರ್ಣ

#ಇದಕ್ಕಾಗಿ_ನ್ಯಾಯಾಲಯದಲ್ಲಿ_ಸುದೀರ್ಘ_ಹೋರಾಟ_ಮಾಡಿದ_ಉದ್ಯಮಿ_ನವೀನ್_ಜಿಂದಾಲ್

#ಸರ್ವೋಚ್ಚ_ನ್ಯಾಯಾಲಯದ_ಆದೇಶದಂತೆ_ದ್ವಜ_ಸಂಹಿತೆ_ಮಾರ್ಪಾಡು.

#ಹಗಲು_ರಾತ್ರಿ_ತ್ರಿವರ್ಣಧ್ವಜ_ಹಾರಿಸಬಹುದು

#ಯ೦ತ್ರದಲ್ಲಿ_ತಯಾರಿಸಿದ_ಪಾಲಿಯೆಸ್ಟರ್_ಉಣ್ಣೆ_ಬಟ್ಟೆಯ_ದ್ವಜ_ಬಳಸಬಹುದು

#ದ್ವಜಕ್ಕೆ_ಅಗೌರವ_ಮಾಡಿದರೆ_ಮೂರು_ವರ್ಷ_ಜೈಲು_ದಂಡ_ಬದಲಾಗಿಲ್ಲ_ಎಚ್ಚರ.

#ಸ್ವಾತಂತ್ರದ_ಬೆಳ್ಳಿಹಬ್ಬ_ಸುವರ್ಣಮಹೋತ್ಸವ_ಅಮೃತಮಹೋತ್ಸವಕ್ಕೂ_ನಾನು_ಸಾಕ್ಷಿ_ಆದ_ಹೆಮ್ಮೆ_ನನ್ನದು
    
  ಗ್ರಾಮ ಪಂಚಾಯತ್, ಅಂಚೆ ಇಲಾಖೆ, ಬಿಜೆಪಿ ಪಕ್ಷ, ಕಾಂಗ್ರೇಸ್ ಪಕ್ಷಗಳು ತ್ರಿವರ್ಣ ಧ್ವಜಗಳನ್ನು ನಿಗದಿತ ಬೆಲೆಯಲ್ಲಿ ಮತ್ತು ರಾಜಕೀಯ ಪಕ್ಷಗಳು ಉಚಿತವಾಗಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆ ಮನೆಗಳಲ್ಲಿ ದ್ವಜ ಹಾರಿಸಲು ಅನುವು ಮಾಡುತ್ತಿದೆ.
  ನಮ್ಮ ಮನೆಗೂ ಬೆಳಿಗ್ಗೆ ಒಂದು ದ್ವಜ ಉಚಿತವಾಗಿ ಕಾಂಗ್ರೇಸ್ ಪಕ್ಷದ ಮಾಜಿ ಸದಸ್ಯರಾದ ಅಮೀರ್ ಸಾಹೇಬರ ಮಗ ತಂದು ಕೊಟ್ಟಿದ್ದಾಗಿ ನಮ್ಮ ಸಿಬ್ಬಂದಿ ಕಣ್ಣೂರಿನ ನಾಗರಾಜ್ ತಿಳಿಸಿ ಅದನ್ನು ಮನೆ ಎದರು ಹಾರಿಸಲಾಗಿದೆ, ನಮ್ಮ ಹಳ್ಳಿಯ ಎಲ್ಲಾ ಮನೆಗಳ ಎದರೂ ರಾಷ್ಟ್ರ ಧ್ವಜ ಸಾಲಾಗಿ ಹಾರುತ್ತಿದೆ.
   ನಮ್ಮ ಹಳ್ಳಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಮನೆಗಳು ಹೆಚ್ಚು ಎಲ್ಲರ ಮನೆಯ ಮೇಲೂ ತ್ರಿವರ್ಣ ಹಾರುತ್ತಿದೆ.
  ಈ ರೀತಿ ಸುಲಭವಾಗಿ ರಾಷ್ಟ್ರ ದ್ವಜ ಜನರ ಕೈ ಸೇರಲು, ಹಗಲು ರಾತ್ರಿ ಮನೆ ಮನೆಗಳಲ್ಲಿ ತ್ರಿವರ್ಣ ಹಾರುವಂತಾಗಲು ಮುಖ್ಯ ಕಾರಣ ಭಾರತಿಯ ಖ್ಯಾತ ಉದ್ಯಮಿ ನವೀನ್ ಜಿಂದಾಲರು ನ್ಯಾಯಾಲಯದಲ್ಲಿ ನಡೆಸಿದ ಹೊರಾಟ.
  ದೆಹಲಿ ಹೈಕೋರ್ಟ್ ತನ್ನಲ್ಲಿಗೆ ಸಲ್ಲಿಸಿದ ಮನವಿಯನ್ನು ಸವೋ೯ಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು 2002ರಲ್ಲಿ ಸವೋ೯ಚ್ಚ ನ್ಯಾಯಾಲಯ ನವೀನ್ ಜಿಂದಾಲರ ಮನವಿ ಪುರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ತಿದ್ದುಪಡಿಗೆ ಆದೇಶಿಸಿದ್ದರಿಂದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಖಾಸಾಗಿ ಸ್ಥಳಗಳಲ್ಲಿ, ಖಾಸಾಗಿ ಸಂಸ್ಥೆಗಳು, ಗೃಹಗಳಲ್ಲೂ ತ್ರಿವರ್ಣ ಧ್ವಜ ಅನಾವರಣ ಮಾಡುವ ಅವಕಾಶ ನೀಡಿತ್ತು.
  ಆದರೆ ನಿರ್ದಿಷ್ಟ ಖಾದಿ ಗ್ರಾಮೋದ್ಯೋಗ ಮಂಡಳಿಯು ತಯಾರಿಸಿದ ಖಾದಿ ಬಟ್ಟೆಯ ದ್ವಜ ಮಾತ್ರ ಬಳಸುವ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಿನ ಅವಧಿ ಮಾತ್ರ ಬದಲಾಗಿರಲಿಲ್ಲ.
  ಡಿಸೆಂಬರ್ 2021 ರಲ್ಲಿ ಕೇಂದ್ರ ಸರ್ಕಾರ ಯಂತ್ರದಲ್ಲಿ ತಯಾರಿಸಿದ ಪಾಲಿಯೆಸ್ಟರ್ ಮತ್ತು ಉಣ್ಣೆ ದ್ವಜ ಬಳಸಲು ತಿದ್ದುಪಡಿ ತಂದು 26 ಜನವರಿ 2022 ರಿಂದ ಜಾರಿಗೆ ತಂದಿದೆ.
  ಪುನಃ 20 ಜುಲೈ 2022 ರಂದು ತಿದ್ದುಪಡಿ ಮಾಡಿ ಹಗಲು ರಾತ್ರಿ ಕೂಡಾ ತ್ರಿವರ್ಣ ದ್ವಜ ಹಾರಿಸಲು ಅನುಮತಿ ನೀಡಿದ್ದರಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಹೊಸ ಹುರುಪು ಹೊಳಪು ಬಂದಿದೆ.
  ಎಲ್ಲೆಡೆ ರಾಷ್ಟ್ರ ದ್ವಜ ಪ್ರದರ್ಶನ ಆಗುತ್ತಿದ್ದರು ರಾಷ್ಟ್ರ ದ್ವಜ ಸಂಹಿತೆಯಲ್ಲಿ ಇರುವ ರಾಷ್ಟ್ರ ದ್ವಜ ಅಗೌರವಕ್ಕೆ ಮೂರು ವರ್ಷ ಜೈಲು ಮತ್ತು ದಂಡ ಬದಲಾಗಿಲ್ಲ ಆದ್ದರಿಂದ ಜನತೆ ಈ ರಾಷ್ಟ್ರ ದ್ವಜಗಳ ಬಳಕೆ ನಂತರ ಎಲ್ಲೆಂದರಲ್ಲಿ ಒಗಿಯುವಂತಿಲ್ಲ, ನೆಲಕ್ಕೆ ಮತ್ತು ನೀರಿಗೆ ತಾಗಿಸುವಂತಿಲ್ಲ ಹಾಳಾದ ದ್ವಜ ಖಾಸಾಗಿಯಾಗಿ ಗೌರವಯುತವಾಗಿ ವಿಲೇವಾರಿ ಮಾಡಬಹುದಾಗಿದೆ.
  ದೇಶದ ಮನೆ ಮನಗಳಲ್ಲಿ ತ್ರಿವರ್ಣ ಧ್ವಜ ಹಾರುತ್ತಿದೆ ನಾನು 3 ನೇ ತರಗತಿಯಲ್ಲಿದ್ದಾಗ ಸ್ವಾತಂತ್ರ್ಯದ ಬೆಳ್ಳಿ ಹಬ್ಬದ ಪ್ರಬಾತ್ ಪೇರಿಯಲ್ಲಿ ಭಾಗವಹಿಸಿದ್ದೆ, 1997ರಲ್ಲಿ ಸುವರ್ಣ ಸ್ವಾತಂತ್ರ್ಯೋತ್ಸವದ ಜಿಲ್ಲಾ ಪಂಚಾಯತ್ ನ ನಡು ರಾತ್ರಿಯ ಸಮಾವೇಶದಲ್ಲಿ ಮತ್ತು ಆಗ ರಾಜ್ಯದಾದ್ಯಂತ ಸುವರ್ಣ ಮಹೋತ್ಸವದ ಅಂಗವಾಗಿ ಸುಭಾಷ್ ಚಂದ್ರ ಬೋಸರ ಜೊತೆಗಾರ ಐಎನ್ಎ ರಾಮರಾವ್ ನಡೆಸಿದ ಸುವರ್ಣ ಸ್ವಾತಂತ್ರ ಜ್ಯೋತಿ ಯಾತ್ರೆ ನಮ್ಮ ಊರಿನ ಬಸ್ ಸ್ಟಾಂಡ್ ನಲ್ಲಿ ಸ್ವಾಗತಿಸಿ ಆನಂದಪುರಂ ಇತಿಹಾಸದ ಬಗ್ಗೆ ನನ್ನ ಲೇಖನ ಓದಿದ್ದೆ ರಾತ್ರಿ ನಮ್ಮ ಊರ ಪ್ರವಾಸಿ ಮಂದಿರದಲ್ಲಿ ಅವರ ತಂಡ ತಂಗಿಸಿ ಉಪಚರಿಸಿದ್ದು ನೆನಪು ಈಗ ಸ್ಟಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಅನಾವರಣ ಮಾಡಿದ್ದು ಸದಾ ನೆನಪಿನಲ್ಲಿ ಉಳಿಯಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ