Skip to main content

Blog number 935. ದೇಶದ ಸ್ವಾತಂತ್ರ್ಯ ಮಹೋತ್ಸವದ ಬೆಳ್ಳಿಹಬ್ಬ, ಸುವಣ೯ ಮಹೋತ್ಸವ ಮತ್ತು ಈಗಿನ ಅಮೃತ ಮಹೋತ್ಸವದಲ್ಲಿ ನಾನು ಭಾಗಿಯಾದೆ ಎಂಬ ಹೆಮ್ಮೆ ಹಾಗೂ ಕಟ್ಟುನಿಟ್ಟಿನ ದ್ವಜ ಸಂಹಿತೆ ತಿದ್ದುಪಡಿಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಖ್ಯಾತ ಉದ್ದಿಮೆದಾರ ನವೀನ್ ಜಿಂದಾಲ್ ಗೆ ದೇಶವಾಸಿಗಳ ಸಲಾಂ .

#ದೇಶದ_ಪ್ರತಿ_ಮನೆ_ಮನದಲ್ಲಿ_ತ್ರಿವರ್ಣ

#ಇದಕ್ಕಾಗಿ_ನ್ಯಾಯಾಲಯದಲ್ಲಿ_ಸುದೀರ್ಘ_ಹೋರಾಟ_ಮಾಡಿದ_ಉದ್ಯಮಿ_ನವೀನ್_ಜಿಂದಾಲ್

#ಸರ್ವೋಚ್ಚ_ನ್ಯಾಯಾಲಯದ_ಆದೇಶದಂತೆ_ದ್ವಜ_ಸಂಹಿತೆ_ಮಾರ್ಪಾಡು.

#ಹಗಲು_ರಾತ್ರಿ_ತ್ರಿವರ್ಣಧ್ವಜ_ಹಾರಿಸಬಹುದು

#ಯ೦ತ್ರದಲ್ಲಿ_ತಯಾರಿಸಿದ_ಪಾಲಿಯೆಸ್ಟರ್_ಉಣ್ಣೆ_ಬಟ್ಟೆಯ_ದ್ವಜ_ಬಳಸಬಹುದು

#ದ್ವಜಕ್ಕೆ_ಅಗೌರವ_ಮಾಡಿದರೆ_ಮೂರು_ವರ್ಷ_ಜೈಲು_ದಂಡ_ಬದಲಾಗಿಲ್ಲ_ಎಚ್ಚರ.

#ಸ್ವಾತಂತ್ರದ_ಬೆಳ್ಳಿಹಬ್ಬ_ಸುವರ್ಣಮಹೋತ್ಸವ_ಅಮೃತಮಹೋತ್ಸವಕ್ಕೂ_ನಾನು_ಸಾಕ್ಷಿ_ಆದ_ಹೆಮ್ಮೆ_ನನ್ನದು
    
  ಗ್ರಾಮ ಪಂಚಾಯತ್, ಅಂಚೆ ಇಲಾಖೆ, ಬಿಜೆಪಿ ಪಕ್ಷ, ಕಾಂಗ್ರೇಸ್ ಪಕ್ಷಗಳು ತ್ರಿವರ್ಣ ಧ್ವಜಗಳನ್ನು ನಿಗದಿತ ಬೆಲೆಯಲ್ಲಿ ಮತ್ತು ರಾಜಕೀಯ ಪಕ್ಷಗಳು ಉಚಿತವಾಗಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆ ಮನೆಗಳಲ್ಲಿ ದ್ವಜ ಹಾರಿಸಲು ಅನುವು ಮಾಡುತ್ತಿದೆ.
  ನಮ್ಮ ಮನೆಗೂ ಬೆಳಿಗ್ಗೆ ಒಂದು ದ್ವಜ ಉಚಿತವಾಗಿ ಕಾಂಗ್ರೇಸ್ ಪಕ್ಷದ ಮಾಜಿ ಸದಸ್ಯರಾದ ಅಮೀರ್ ಸಾಹೇಬರ ಮಗ ತಂದು ಕೊಟ್ಟಿದ್ದಾಗಿ ನಮ್ಮ ಸಿಬ್ಬಂದಿ ಕಣ್ಣೂರಿನ ನಾಗರಾಜ್ ತಿಳಿಸಿ ಅದನ್ನು ಮನೆ ಎದರು ಹಾರಿಸಲಾಗಿದೆ, ನಮ್ಮ ಹಳ್ಳಿಯ ಎಲ್ಲಾ ಮನೆಗಳ ಎದರೂ ರಾಷ್ಟ್ರ ಧ್ವಜ ಸಾಲಾಗಿ ಹಾರುತ್ತಿದೆ.
   ನಮ್ಮ ಹಳ್ಳಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಮನೆಗಳು ಹೆಚ್ಚು ಎಲ್ಲರ ಮನೆಯ ಮೇಲೂ ತ್ರಿವರ್ಣ ಹಾರುತ್ತಿದೆ.
  ಈ ರೀತಿ ಸುಲಭವಾಗಿ ರಾಷ್ಟ್ರ ದ್ವಜ ಜನರ ಕೈ ಸೇರಲು, ಹಗಲು ರಾತ್ರಿ ಮನೆ ಮನೆಗಳಲ್ಲಿ ತ್ರಿವರ್ಣ ಹಾರುವಂತಾಗಲು ಮುಖ್ಯ ಕಾರಣ ಭಾರತಿಯ ಖ್ಯಾತ ಉದ್ಯಮಿ ನವೀನ್ ಜಿಂದಾಲರು ನ್ಯಾಯಾಲಯದಲ್ಲಿ ನಡೆಸಿದ ಹೊರಾಟ.
  ದೆಹಲಿ ಹೈಕೋರ್ಟ್ ತನ್ನಲ್ಲಿಗೆ ಸಲ್ಲಿಸಿದ ಮನವಿಯನ್ನು ಸವೋ೯ಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು 2002ರಲ್ಲಿ ಸವೋ೯ಚ್ಚ ನ್ಯಾಯಾಲಯ ನವೀನ್ ಜಿಂದಾಲರ ಮನವಿ ಪುರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ತಿದ್ದುಪಡಿಗೆ ಆದೇಶಿಸಿದ್ದರಿಂದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಖಾಸಾಗಿ ಸ್ಥಳಗಳಲ್ಲಿ, ಖಾಸಾಗಿ ಸಂಸ್ಥೆಗಳು, ಗೃಹಗಳಲ್ಲೂ ತ್ರಿವರ್ಣ ಧ್ವಜ ಅನಾವರಣ ಮಾಡುವ ಅವಕಾಶ ನೀಡಿತ್ತು.
  ಆದರೆ ನಿರ್ದಿಷ್ಟ ಖಾದಿ ಗ್ರಾಮೋದ್ಯೋಗ ಮಂಡಳಿಯು ತಯಾರಿಸಿದ ಖಾದಿ ಬಟ್ಟೆಯ ದ್ವಜ ಮಾತ್ರ ಬಳಸುವ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಿನ ಅವಧಿ ಮಾತ್ರ ಬದಲಾಗಿರಲಿಲ್ಲ.
  ಡಿಸೆಂಬರ್ 2021 ರಲ್ಲಿ ಕೇಂದ್ರ ಸರ್ಕಾರ ಯಂತ್ರದಲ್ಲಿ ತಯಾರಿಸಿದ ಪಾಲಿಯೆಸ್ಟರ್ ಮತ್ತು ಉಣ್ಣೆ ದ್ವಜ ಬಳಸಲು ತಿದ್ದುಪಡಿ ತಂದು 26 ಜನವರಿ 2022 ರಿಂದ ಜಾರಿಗೆ ತಂದಿದೆ.
  ಪುನಃ 20 ಜುಲೈ 2022 ರಂದು ತಿದ್ದುಪಡಿ ಮಾಡಿ ಹಗಲು ರಾತ್ರಿ ಕೂಡಾ ತ್ರಿವರ್ಣ ದ್ವಜ ಹಾರಿಸಲು ಅನುಮತಿ ನೀಡಿದ್ದರಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಹೊಸ ಹುರುಪು ಹೊಳಪು ಬಂದಿದೆ.
  ಎಲ್ಲೆಡೆ ರಾಷ್ಟ್ರ ದ್ವಜ ಪ್ರದರ್ಶನ ಆಗುತ್ತಿದ್ದರು ರಾಷ್ಟ್ರ ದ್ವಜ ಸಂಹಿತೆಯಲ್ಲಿ ಇರುವ ರಾಷ್ಟ್ರ ದ್ವಜ ಅಗೌರವಕ್ಕೆ ಮೂರು ವರ್ಷ ಜೈಲು ಮತ್ತು ದಂಡ ಬದಲಾಗಿಲ್ಲ ಆದ್ದರಿಂದ ಜನತೆ ಈ ರಾಷ್ಟ್ರ ದ್ವಜಗಳ ಬಳಕೆ ನಂತರ ಎಲ್ಲೆಂದರಲ್ಲಿ ಒಗಿಯುವಂತಿಲ್ಲ, ನೆಲಕ್ಕೆ ಮತ್ತು ನೀರಿಗೆ ತಾಗಿಸುವಂತಿಲ್ಲ ಹಾಳಾದ ದ್ವಜ ಖಾಸಾಗಿಯಾಗಿ ಗೌರವಯುತವಾಗಿ ವಿಲೇವಾರಿ ಮಾಡಬಹುದಾಗಿದೆ.
  ದೇಶದ ಮನೆ ಮನಗಳಲ್ಲಿ ತ್ರಿವರ್ಣ ಧ್ವಜ ಹಾರುತ್ತಿದೆ ನಾನು 3 ನೇ ತರಗತಿಯಲ್ಲಿದ್ದಾಗ ಸ್ವಾತಂತ್ರ್ಯದ ಬೆಳ್ಳಿ ಹಬ್ಬದ ಪ್ರಬಾತ್ ಪೇರಿಯಲ್ಲಿ ಭಾಗವಹಿಸಿದ್ದೆ, 1997ರಲ್ಲಿ ಸುವರ್ಣ ಸ್ವಾತಂತ್ರ್ಯೋತ್ಸವದ ಜಿಲ್ಲಾ ಪಂಚಾಯತ್ ನ ನಡು ರಾತ್ರಿಯ ಸಮಾವೇಶದಲ್ಲಿ ಮತ್ತು ಆಗ ರಾಜ್ಯದಾದ್ಯಂತ ಸುವರ್ಣ ಮಹೋತ್ಸವದ ಅಂಗವಾಗಿ ಸುಭಾಷ್ ಚಂದ್ರ ಬೋಸರ ಜೊತೆಗಾರ ಐಎನ್ಎ ರಾಮರಾವ್ ನಡೆಸಿದ ಸುವರ್ಣ ಸ್ವಾತಂತ್ರ ಜ್ಯೋತಿ ಯಾತ್ರೆ ನಮ್ಮ ಊರಿನ ಬಸ್ ಸ್ಟಾಂಡ್ ನಲ್ಲಿ ಸ್ವಾಗತಿಸಿ ಆನಂದಪುರಂ ಇತಿಹಾಸದ ಬಗ್ಗೆ ನನ್ನ ಲೇಖನ ಓದಿದ್ದೆ ರಾತ್ರಿ ನಮ್ಮ ಊರ ಪ್ರವಾಸಿ ಮಂದಿರದಲ್ಲಿ ಅವರ ತಂಡ ತಂಗಿಸಿ ಉಪಚರಿಸಿದ್ದು ನೆನಪು ಈಗ ಸ್ಟಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಅನಾವರಣ ಮಾಡಿದ್ದು ಸದಾ ನೆನಪಿನಲ್ಲಿ ಉಳಿಯಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...