Skip to main content

Blog number 945. ಆಗಸ್ಟ್ 23 ಆಪ್ತ ಸಿಬ್ಬಂದಿ ಪಶ್ಚಿಮ ಬಂಗಾಳದ ಪುರೋಲಿಯದ ಕೌಷಿಕ್ ಹುಟ್ಟು ಹಬ್ಬದ ಆಚರಣೆಯಲ್ಲಿ ಮರೆತು ಹೋದ ನನ್ನ 33 ನೇ ವರ್ಷದ ವೈವಾಹಿಕ ಜೀವನದ ವಾರ್ಷಿಕೋತ್ಸವ

#ನಿನ್ನೆ_ಆಗಸ್ಟ್_23

#ಏನೋ_ಮರೆತೆ_ಅನ್ನುವಾಗ_ನನ್ನ_ಆಪ್ತ_ಸಿಬ್ಬಂದಿ_ಕೌಷಿಕ್_ಹುಟ್ಟು_ಹಬ್ಬದ_ಸಿಹಿ_ನೀಡಿದರು.

#ನಾನು_ಇವರ_ಹುಟ್ಟು_ಹಬ್ಬಕ್ಕಾಗಿ_ಎಲ್ಲಾ_ಸಿಬ್ಬಂದಿಗೆ_ಕೀರು_ಮಾಡಿ_ಬಡಿಸಲು_ಹೇಳಿದೆ.

#ರಾತ್ರಿ_ನೆನಪಾಯಿತು_ಆಗಸ್ಟ್_23_ನನ್ನ_33ನೇ_ವೈವಾಹಿಕ_ವರ್ಷ_ಅಂತ.

   ನಾವ್ಯಾರು ಹುಟ್ಟಿದ ಹಬ್ಬ, ಮ್ಯಾರೇಜ್ ಆನಿವರ್ಸರಿ ಆಚರಿಸುವುದಿಲ್ಲವಾದರು ಆ ದಿನದ ನೆನಪು ಕೆಲವೊಮ್ಮೆ ಆದೀತು ಅಥವ ಎಷ್ಟೋ ದಿನದ ನಂತರವೋ ನೆನಪಾಗುತ್ತದೆ ಆಗ ಎಷ್ಟು ವರ್ಷ ಆಯಿತೆಂಬ ಲೆಖ್ಖ ಹಾಕುವುದಷ್ಟೆ.
    ನಿನ್ನೆ ಆಗಸ್ಟ್ 23 ಈ ದಿನ ಏನೋ ಮರೆತೆ ಅನ್ನಿಸುತ್ತಿದ್ದಾಗಲೇ ನನ್ನ ಆಪ್ತ ಸಿಬ್ಬಂದಿ ಪಶ್ಚಿಮ ಬಂಗಾಳದ ಪುರೋಲಿಯದ ಕೌಷಿಕ್ ತನ್ನ ಹುಟ್ಟುಹಬ್ಬ ಅಂತ ಸಿಹಿ ನೀಡಿದರು ಅವರಿಗೆ ಶುಭ ಹಾರೈಸಿದೆ, ಎಲ್ಲಾ ಸಿಬ್ಬಂದಿಗೂ ಕೀರು ಮಾಡಿ ಬಡಿಸಿದರು ಜೊತೆಗೆ ಹುಟ್ಟುಹಬ್ಬ ಆಚರಿಸುವ ಕೌಷಿಕ್ ತಂದ ಚಂಪಾಕಲಿ ಸೇರಿತ್ತು.
   ಕೌಷಿಕ್ ಹುಟ್ಟುಹಬ್ಬವೇ ನಿನ್ನೆಯ ವಿಶೇಷ ಆಯಿತು ಇದರ ಮದ್ಯೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಬೇರೆ ಬೇರೆ ಜನರು ಬಂದಿದ್ದರಿಂದ ನಾನು ಬ್ಯುಸಿ ಆದೆ, ಸಂಜೆ ಕೌಷಿಕ್ ಗೆ ಎರೆಡು ಪ್ಯಾಂಟ್ ಹುಟ್ಟುಹಬ್ಬದ ಉಡುಗರೆ ಆಗಿ ನೀಡಿದೆ.
  ಆದರೂ ಏನೋ ಮರೆತಂತೆ ಅಷ್ಟರಲ್ಲಿ ನನ್ನ ಮುಂದಿನ ಕನಸಿನ ಯೋಜನೆಗೆ ಟ್ರೇಡ್ ನೇಮ್ & ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್ ಕೆಲಸ ಬಾಕಿ ಉಳಿದಿತ್ತು ಕಾರಣ ನನಗೆ ಬೇಕಾದ ಹೆಸರು ಸಿಗುತ್ತಿರಲಿಲ್ಲ ನಿನ್ನೆ ನಮ್ಮ ಕನ್ಸಲ್ಟೆಂಟ್ ಪೋನು ಮಾಡಿ ನನ್ನ ಹೆಸರು ಆಯ್ಕೆ ಆದ ಶುಭಸುದ್ದಿ ತಿಳಿಸುತ್ತಿದ್ದಂತೆ ಅದನ್ನು ರಿಜಿಸ್ಟರ್ ಮಾಡುವ ಕೆಲಸ ಮಾಡಿದೆ.
  ಆದರೂ ಏನೋ ಮರೆತನಲ್ಲ ಅಂತ ಮನಸ್ಸಲ್ಲಿ, ಮನೆಗೆ ಹೋದಾಗ ನೆನಪಾಯಿತು ಇವತ್ತು ನಾನು ವಿವಾಹ ಆಗಿ 33 ವಷ೯ ಆಯಿತು ಅಂತ!!.
    ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದಲ್ಲಿ ಮಹೂರ್ತ ಇಲ್ಲದ ವೇಳೆ ಅನಿವಾರ್ಯವಾಗಿ ತಾಳಿ ಕಟ್ಟಿದ್ದು, ಪುರೋಹಿತರು ವಿಶ್ವ ಹಿಂದೂ ಪರಿಷತ್ ನ ರಾಜ್ಯ ಸಂತ ಸಮಾವೇಶದ ಸಂಚಾಲಕರಾದ ಶ್ರೀ ನರಸಿಂಹ ಮೂರ್ತಿ ಅಯ್ಯ೦ಗಾರರು https://arunprasadhombuja.blogspot.com/search?q=%E0%B2%A8%E0%B2%A8%E0%B3%8D%E0%B2%A8+%E0%B2%B5%E0%B2%BF%E0%B2%B5%E0%B2%BE%E0%B2%B9
  ಕಷ್ಟ ಸುಖ ಅಂತ ನಾವು ಬಾವಿಸುವ ಹಗಲು ರಾತ್ರಿಯ ದೀಘ೯ 33 ವರ್ಷದ 12045(ಹನ್ನೆರೆಡು ಸಾವಿರದ ನಲವತ್ತ್ಯೆದು ದಿನ) ದಿನಗಳು ಕಳೆದು ಹೋಗಿದೆ, ವೃದ್ದಾಪ್ಯದ ಅಂಚು ತಲುಪಾಯಿತು, ಒಂದು ಸಮಾದಾನ ಇಷ್ಟು ವರ್ಷದಲ್ಲಿ ಸಂಸಾರದಲ್ಲಿ ಕೋಪಾ ತಾಪಗಳಿದ್ದರು ಹೆಂಡತಿಗೆ ಹೊಡೆಯಲಿಲ್ಲ, ನನ್ನ ದಾಂಪತ್ಯ ಜೀವನದಲ್ಲಿ ನನ್ನದು ಕಟ್ಟುನಿಟ್ಟಿನ ಏಕ ಪತ್ನಿ ವೃತಸ್ಥ ಆಗಿ ಉಳಿದಿರುವುದು.
   ವೃದ್ದಾಪ್ಯದ ವಾನಪ್ರಸ್ತಾಶ್ರಮಕ್ಕೆ ತಯಾರಾಗಬೇಕು ಈಗಾಗಲೇ ರಾತ್ರಿ ಊಟ ತ್ಯಜಿಸಿದ್ದೇನೆ, ನನ್ನದೆ ಕೆಲ ಚೌಕಟ್ಟು ಜೀವನಕ್ಕೆ ಹಾಕಿಕೊಂಡಿದ್ದೇನೆ, ತಿರುಗಾಟಗಳೆಲ್ಲ ಕಡಿಮೆ ಮಾಡಿದ್ದೇನೆ, ನನ್ನ ತಲೆ ಕ್ಷೌರ ಎರೆಡು ವರ್ಷದಿಂದ ನಾನೇ ಮಾಡಿಕೊಳ್ಳುವುದು ಕಲಿತೆ, ಟೀವಿ ಚಾನಲ್ ವೀಕ್ಷಣೆ 2015 ರಿಂದ ಇಲ್ಲ, ಈಗ ಎರೆಡು ತಿಂಗಳಿಂದ ವೃತ್ತ ಪತ್ರಿಕೆ ತರಿಸುವುದಿಲ್ಲ,ಮಾತೂ ಕಡಿಮೆ ಆಗಿದೆ ಹೀಗೆ ಸಾಗಿದೆ ನನ್ನ ಸಂತೃಪ್ತ ಜೀವನ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...