Skip to main content

Blog number 931. ಪ್ರಸಿದ್ದ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬೆಗೆ ಬಣ್ಣ ಮಾಡುವುದು ಶಕುಂತಳಾ ಗುಡಿಗಾರ್ ಎಂಬ ಮಹಿಳೆ, ಸರ್ಪಸುತ್ತು ಕಾಯಿಲೆಗೆ ಆಸ್ಥಳದಲ್ಲಿ ಗರುಡ ಬಿಡಿಸಿ ಕಟ್ಟು ಚಿಕಿತ್ಸೆ ಮಾಡುವ ಇವರ ಕುಟುಂಬದ ವೈದ್ಯ ಪದ್ದತಿಯಲ್ಲೂ ಇವರು ಪ್ರಸಿದ್ದರು.

#ಗುಡಿಗಾರರೆಂಬ_ಶ್ರೀಗಂದದ_ಕೆತ್ತನೆಗಾರರು.

#ಜಡೆ_ಊರಿಂದ_ಕುರುಬರಲಿ೦ಗಣ್ಣ_ಮತ್ತು_ಪುತ್ತೂರಾಯರು_ಸಾಗರಕ್ಕೆ_ಕರೆತಂದ_ಅಣ್ಣಪ್ಪಗುಡಿಗಾರ_ಕುಟುಂಬ

#ಶ್ರೀಗಂದವೇ_ಇಲ್ಲದ_ಈ_ಕಾಲದಲ್ಲಿ_ತಮ್ಮ_ಕುಲಕಸಬು_ಬಿಡುತ್ತಿರುವ_ಗುಡಿಗಾರರು

#ಇಪ್ಪತ್ತೈದು_ವರ್ಷದ_ಹಿಂದೆ_ಅಣ್ಣಪ್ಪಗುಡಿಗಾರರ_ಮಗ_ದೇವಿಪ್ರಸಾದಗುಡಿಗಾರರ_ಬಗ್ಗೆ_ಪತ್ರಿಕೆಗಳಲ್ಲಿ_ಲೇಖನ_ಬರೆದಿದ್ದೆ

#ದೇವಿಪ್ರಸಾದಗುಡಿಗಾರರ_ಮರಣ_ನಂತರ_ಕುಟುಂಬದ_ಹೊಣೆ_ಹೊತ್ತ_ಅವರ_ಸಹೋದರಿ_ಶಕುಂತಲಾಗುಡಿಗಾರ್

#ಪ್ರಸಿದ್ಧ_ಸಾಗರದ_ಮಾರಿಕಾಂಬೆ_ಜಾತ್ರೆಯಲ್ಲಿ_ದೇವರ_ವಿಗ್ರಹಕ್ಕೆ_ಬಣ್ಣ_ಮಾಡುವ_ಶಕುಂತಲಾಗುಡಿಗಾರ್_ಎಂಬ_ಸಾಹಿಸಿ.

#ಸಪ೯ಸುತ್ತು_ಕಾಯಿಲೆಗೆ_ಬಣ್ಣದಿಂದ_ಗರುಡ_ಬಿಡಿಸಿ_ಕಟ್ಟು_ಮಾಡುವ_ಇವರ_ವಂಶಪಾರಂಪರ್ಯ_ಚಿಕಿತ್ಸೆ

   ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಒಂದು ಕಾಲದಲ್ಲಿ ಶ್ರೀಗಂದದ ಮರದ ವಿಗ್ರಹಗಳ ಕೆತ್ತನೆಗಾರರಿಗೆ ಕೈ ತುಂಬಾ ಕೆಲಸ ಅವರು ಕೆತ್ತಿದ ವಿಗ್ರಹಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ.
  ಸುವಾಸನೆಯ ಶ್ರೀಗಂದದ ಬಗ್ಗೆ ಗಾದೆಯೂ ಇದೆ "ಸಗಣಿಯವನ ಕೈಯಲ್ಲಿ ಗುದ್ದಾಡುವುದಕ್ಕಿಂತ ಗಂದದವನ ಕೈಯಲ್ಲಿ ಗುದ್ದಾಡುವುದು ಲೇಸು" ಅಂತ ಇದರ ಗೂಡಾರ್ಥ ಏನೇ ಇರಲಿ ಇದು ಶ್ರೀಗಂಧದ ಶ್ರೇಷ್ಟತೆ ಹೇಳುತ್ತದೆ.
   ಆದರೆ ಈಗ ಶ್ರೀಗಂದ ವಿರಳ, ಅರಣ್ಯದಲ್ಲಿನ ಶ್ರೀಗಂದ ಇಲ್ಲವೇ ಇಲ್ಲ, ಸರ್ಕಾರದಲ್ಲಿ ಕೂಡ ಬೇಕಾದಷ್ಟು ಶ್ರೀಗಂದದ ದಾಸ್ತಾನು ಇಲ್ಲ, ಶ್ರೀಗಂದದ ಇವತ್ತಿನ ಸರ್ಕಾರಿ ಬೆಲೆ ಹತ್ತು ಸಾವಿರ ದಾಟಿದೆ.
  ಸುಮಾರು 25 ವರ್ಷದ ಹಿಂದೆ ದೇವಿಪ್ರಸಾದ ಗುಡಿಗಾರ ಎಂಬ ಪ್ರಖ್ಯಾತ ಕಲಾವಿದರ ಬಗ್ಗೆ ಪತ್ರಿಕೆಗಳಿಗೆ ಚಿತ್ರ ಸುದ್ದಿ ಬರೆದಿದ್ದೆ ಇವರು ಜಡೆ ಅಣ್ಣಪ್ಪ ಗುಡಿಗಾರರ ಪುತ್ರ.
   ನಿನ್ನೆ ಇವರ ತಂಗಿ ಶಕುಂತಲಾ ಗುಡಿಗಾರ್ ಬಂದಿದ್ದರು ಅವರು ತನ್ನಣ್ಣ ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಈಡಾದ ಬಗ್ಗೆ ತಮ್ಮ ದುಃಖ ವ್ಯಕ್ತಪಡಿಸಿದರು ಈಗ ಅಣ್ಣನ ಮಗ ಕಾರ್ತಿಕ್ ಗುಡಿಗಾರ್ ಪ್ರವರ್ದಮಾನಕ್ಕೆ ಬರುತ್ತಿದ್ದು ಮರ ಮತ್ತು ಶಿಲ್ಪದಲ್ಲಿ ಕೆತ್ತನೆ ಮಾಡುತ್ತಿರುವ ಬಗ್ಗೆಯೂ ತಿಳಿಸಿದರು.
   ಅವರಿಗೆ ಅವರಣ್ಣನ ಬಗ್ಗೆ ನಾನು ಬರೆದ ಲೇಖನ ಇವತ್ತಿಗೂ ಅವರಿಗೆ ಅವರಣ್ಣನ ಸಾದನೆ ಹೇಳುವ ಏಕೈಕ ನೆನಪಿನ ಸಾದನವಾಗಿದೆ ಅಂದರು.
   ತಂದೆ ನಂತರ ಅಣ್ಣ ಮೃತರಾದಾಗ ಅಣ್ಣನ ಪತ್ನಿಗೆ ಚಿಕ್ಕ ಚಿಕ್ಕ ಮಕ್ಕಳು, ವಯಸ್ಸಾದ ತಾಯಿ, ವಿವಾಹ ಆಗದ ಇವರಿಬ್ಬರು ಸಹೋದರಿಯರು ತಮ್ಮ ಭವಿಷ್ಯ ಅಷ್ಟು ಮಾತ್ರ ಅಲ್ಲ ಇವರ ನಿತ್ಯದ ಹೊಟ್ಟೆಪಾಡಿಗೂ ಕಟಂಕವಾದಾಗ ಈ ಹೆಣ್ಣು ಮಗಳು ಅನಿವಾರ್ಯವಾಗಿ ಹೊಟ್ಟೆಪಾಡಿಗಾಗಿ ತನ್ನ ತಂದೆ ಮತ್ತು ಅಣ್ಣ ಮಾಡುತ್ತಿದ್ದ ಮಾರಿಕಾಂಬಾ ದೇವಿಗೆ ಬಣ್ಣ ಮಾಡುವ ಕೆಲಸ, ಬಾಸಿಂಗ, ಚೌತಿ ಹಬ್ಬಕ್ಕೆ ಗಣಪತಿ ಮಾಡುವುದು ಮತ್ತು ಜೊತೆಗೆ ಸರ್ಪಸುತ್ತು ಕಾಯಿಲೆಗೆ ಇವರ ಕುಟುಂಬದಲ್ಲಿ ಬಂದ ಚಿಕಿತ್ಸೆ ಮುಂದುವರಿಸಿದರು. ಇದರಿಂದ ಇಲ್ಲಿಯವರೆಗೆ ಕುಟುಂಬದ ರಥ ಎಳೆದು ತಂದಿದ್ದಾರೆ ಈಗ ಅಣ್ಣನ ಮಗನ ದುಡಿಮೆಯಿಂದ ಕಷ್ಟದ ದಿನಗಳಿಂದ ಹೊರಬಂದರೂ ಕಲಾವಿದರ ಕುಟುಂಬಗಳ ಕಷ್ಟ ಪರಿಹಾರ ಆಗುವುದೇ ಇಲ್ಲ.
   ಸಾಗರದ ಐತಿಹಾಸಿಕ ಮಾರಿಕಾಂಬಾ ಜಾತ್ರೆ ಜಗತ್ ಪ್ರಸಿದ್ದವಾಗಿದೆ ಈ ಜಾತ್ರೆಯ ಬೃಹತ್ ಮರದ ಮಾರಿಕಾಂಬಾ ಮೂರ್ತಿಗೆ ಪ್ರತಿ ಜಾತ್ರೆಯಲ್ಲಿ ಈ ಹೆಣ್ಣು ಮಗಳೇ ಬಣ್ಣದ ಕೆಲಸ ಮಾಡುತ್ತಾರೆಂದರೆ ನಿಜಕ್ಕೂ ಆಶ್ಚಯ೯ವೇ ಸರಿ.
   ಸಾಗರದ ಮಾರಿಕಾಂಬಾ ದೇವಿ ಮಾತ್ರ ಅಲ್ಲ ನಮ್ಮ ಊರಿನ ಆನಂದಪುರಂ -ಮೆಳವರಿಗೆ - ಕೆಳದಿ-ಬೇಳೂರು - ಬರೂರು - ತ್ಯಾಗರ್ಥಿ - ಗೌತಮಪುರ - ಹಿರಿಯರಕ ದುರ್ಗಮ್ಮ - ಹಾನಗಲ್ ಧ್ಯಾಮಮ್ಮ - ಚಾಮೇನಳ್ಳಿ - ಕುಂಸಿ - ಕುಗ್ವೆ - ಚೋರಡಿ-ಚಂದ್ರಗುತ್ತಿ - ಹರೀಶಿ ಚನ್ನಪಟ್ಟಣ ಹೀಗೆ ಅನೇಕ ಊರುಗಳ ದೇವಿ ವಿಗ್ರಹಗಳು ಈ ಹೆಣ್ಣು ಮಗಳ ಕೈಯಲ್ಲಿ ಸುಂದರ ಆಕರ್ಷಕ ಬಣ್ಣವಾಗುತ್ತದೆ.
  ಕಳೆದ ಜಾತ್ರೆಯಲ್ಲಿ ಆನಂದಪುರಂನಲ್ಲಿ ಇವರಿಗೆ 23 ಸಾವಿರ ಇವರ ಸಂಬಾವನೆ ಆದರೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಇವರು ಪಡೆದ ಸಂಬಾವನೆ ಹತ್ತಿರ ಹತ್ತಿರ 80 ಸಾವಿರ, ಇತ್ತೀಚಿಗೆ ಪ್ರತಿ 8 ವರ್ಷಕ್ಕೊಮ್ಮೆ ನಡೆಯುವ ಕುಗ್ವೆಯ ಮಾರಿಕಾಂಬಾ ಜಾತ್ರೆಯಲ್ಲಿ ಗರಿಷ್ಟ ಒಂದೂಕಾಲು ಲಕ್ಷ ರೂಪಾಯಿ ಸಂಬಾವನೆ ಇವರಿಗೆ ಸಿಕ್ಕಿದೆ.
  ದೇವಿಯ ಬಣ್ಣದಲ್ಲೂ ಅನೇಕ ನಂಬಿಕೆ ಆಚರಣೆ ಇದೆ ತಿಂಗಳುಗಟ್ಟಲೆ ಕೆಲಸವಾಗುತ್ತದೆ ಅಂತಿಮವಾಗಿ ದೇವಿ ತವರು ಮನೆಯಿಂದ ಹೊರಡುವ ಸಮಯಕ್ಕೆ ಸ್ವಲ್ಪ ಮುಂಚೆ ಪುರೋಹಿತರು ನಿಗದಿ ಮಾಡಿದ ಸಮಯದಲ್ಲಿ ದೇವಿಗೆ ಜೀವ ಕಳೆ ನೀಡುವ ಅಂತಿಮ ಕೆಲಸ ಕುತೂಹಲಕಾರಿಯಾಗಿದೆ ಅದೇನೆಂದರೆ ಸುಮಹೂರ್ತದಲ್ಲಿ ದೇವಿ ಎದರು ಬಾಳೆ ಗೊನೆ ಕಟ್ಟುತ್ತಾರೆ, ಗುಡಿಗಾರರು ಆಗ ನೇರವಾಗಿ ದೇವಿಯ ವಿಗ್ರಹ ನೋಡುವುದಿಲ್ಲ ಕನ್ನಡಿಯಲ್ಲಿ ದೇವಿ ಪ್ರತಿಬಿಂಬ ನೋಡುತ್ತಾ ಕುರಿ ಅಥವ ಕೋಳಿಯ ರಕ್ತ ಲೇಪಿಸಿದ ಕುಂಚದಿಂದ ದೇವಿಯ ಕಣ್ಣು ಬರೆಯುತ್ತಾರೆ, ನೇರವಾಗಿ ನೋಡಿದ ಅನೇಕರು ಪ್ರಜ್ಞೆ ತಪ್ಪುತ್ತಾರೆ ಎಂಬ ಪುರಾತನ ಕಾಲದ ಭಯ ಇವರಲ್ಲಿದೆ ಈ ಕೆಲಸ ಇವರ ಅಣ್ಣನ ಮಗ ಕಾರ್ತಿಕ ಗುಡಿಗಾರ್ ರದ್ದು.
 ನಂತರ ದೇವಿ ಗಂಡನ ಮನೆಗೆ ಬಂದಾಗ ಕೋರೆ ಮತ್ತು ಬೊಟ್ಟುಗಳನ್ನು ಇವರೇ ಹಚ್ಚಬೇಕು, ಸಾಗರದ ಮಾರಿಕಾಂಬೆಗೆ ಆನೆ ದಂತದ ಕೊರೆ ಮತ್ತು ಬೊಟ್ಟುಗಳು ಮಾಡಿಸಿದ್ದಾರೆ.
  ಇತ್ತೀಚೆಗೆ ಗ್ರಾಮದೇವರುಗಳು, ಬೂತಗಳ ಮುಖಗಳಿಗೆ ಆರಿದ್ರ ಮಳೆ ಹಬ್ಬದಲ್ಲಿ ಬಣ್ಣ ಮಾಡುವ ಕೆಲಸವೂ ಇವರದ್ದೆ.
  ಇವರ ಕುಟುಂಬದಲ್ಲಿ ಸರ್ಪಸುತ್ತು ಕಾಯಿಲೆಗೆ ಒ0ದು ವಿಶೇಷ ಚಿಕಿತ್ಸೆ ಪರಂಪರ ವೈದ್ಯ ಪದ್ಧತಿ ಇದೆ ಅದೇನೆಂದರೆ ಸರ್ಪ ಸುತ್ತು ಆದವರಿಗೆ ಇವರು ವಿಶೇಷ ಬಣ್ಣದಿಂದ ಕಟ್ಟುಹಾಕುತ್ತಾರೆ ಅದು ಹೇಗೆಂದರೆ ಸರ್ಪ ಸುತ್ತು ಇಡೀ ಒಂದು ಸುತ್ತು ಬಂದು ಸೇರಿದರೆ ಸರ್ಪ ಸುತ್ತಾದವರು ಬದುಕುವುದಿಲ್ಲ ಎಂಬ ನಂಬಿಕೆ ಇದೆ ಆದ್ದರಿಂದ ಇವರು ಸರ್ಪಸುತ್ತು ಸೇರದಂತೆ ಅದನ್ನು ಬಣ್ಣದಿಂದ ಕಟ್ಟುಹಾಕಿ ಗರುಡ ಚಿತ್ರ ಬಿಡಿಸುತ್ತಾರೆ ಇದರಿಂದ ಅನೇಕರು ಗುಣವಾಗಿದೆ ಎನ್ನುತ್ತಾರೆ ಆದರೆ ಈ ಗರುಡ ಚಿಕಿತ್ಸೆ ಮಾಡುವುದರಿಂದ ಚಿಕಿತ್ಸೆ ಮಾಡುವವರಿಗೆ ಸರ್ಪ ದೋಷ ಬರುತ್ತೆಂದು ಅನೇಕರು ಭಯ ಪಡುತ್ತಾರೆ ಇದನ್ನು ಈ ಹೆಣ್ಣು ಮಗಳು ಮುಂದುವರಿಸಿದ್ದಾರೆ ಇವರ ಸಂಪರ್ಕ ಸಂಖ್ಯೆ  90191 62808.
   ಸಂಕಷ್ಟದಲ್ಲಿ ಇಡೀ ಕುಟುಂಬದ ನಾವೆಯ ಚುಕ್ಕಾಣಿ ಹಿಡಿದು ದಡ ಸೇರಿಸಲು ಈ ಹೆಣ್ಣು ಮಗಳು ಮಾಡಿದ ಸಾಹಸ ಸಣ್ಣದಲ್ಲ, ಸ್ಥಳಿಯ ಸಂಘ ಸಂಸ್ಥೆಗಳು ಇವರ ಸಾಹಸಕ್ಕೆ ಗೌರವಿಸುವ ಕೆಲಸ ಮಾಡಬೇಕು ಎಂತಂತವರಿಗೆಲ್ಲ ಪ್ರಶಸ್ತಿ ಪುರಸ್ಕಾರ ನೀಡುವ ಸರ್ಕಾರ ಇವರಿಗೆ ಯಾಕೆ ಪರಿಗಣಿಸಬಾರದು?

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ