Skip to main content

Blog number 947. ಖ್ಯಾತ ಸಾಹಿತಿ ವಿಮರ್ಶಕ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಅವರು ನನ್ನ ಕಥಾ ಸಂಕಲನ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಓದಿ ವಸ್ತು ನಿಷ್ಟ ವಿಮರ್ಶೆ ಬರೆದದ್ದು ನನಗೆ ಅತ್ಯಂತ ಸಂತೋಷ ತಂದಿದೆ.

#ಇದಕ್ಕಿ೦ತ_ಸಂತೋಷ_ಬೇರೆ_ಇಲ್ಲ

#ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನ

#ಸಾಹಿತಿ_ವಿಮರ್ಷಕ_ಉದಯಕುಮಾರ್_ಹಬ್ಬು_ನನ್ನ_ಕಥಾ_ಸಂಕಲನದ_ವಿಮರ್ಶೆ_ಬರೆದಿದ್ದಾರೆ.

#ದಿನಕ್ಕೆ_ಕನಿಷ್ಟ_ನೂರು_ಪುಟ_ಓದುವ_ನಿತ್ಯ_ಒಂದೆರೆಡು_ಪುಸ್ತಕ_ವಿಮರ್ಶೆ_ಮಾಡುತ್ತಾರೆ.

#ಸಾವಿರಾರು_ಪುಸ್ತಕ_ಓದಿದ್ದಾರೆ

#ಅವರು_ಬರೆದು_ಪ್ರಕಟಿಸಿದ_ಪುಸ್ತಕಗಳೇ_ಶತಕದ_ಹತ್ತಿರ_ಹತ್ತಿರ.

    ಶ್ರೀಯುತ ಉದಯ ಕುಮಾರ್ ಹಬ್ಬು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು ಇವರು ಇವತ್ತು ನನ್ನ ಎರಡನೆ ಪುಸ್ತಕ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಎಂಬ ಸಣ್ಣ ಕಥಾ ಸಂಕಲನವನ್ನು ಎರೆಡು ದಿನ ಸಂಪೂರ್ಣ ಓದಿ ವಸ್ತು ನಿಷ್ಟ ವಿಮರ್ಶೆ ಅವರ ಪೋಸ್ಟಿನಲ್ಲಿ ಪ್ರಕಟಿಸಿದ್ದಾರೆ.
  ನಾನು ಅಂತಹ ಬರಹಗಾರನಲ್ಲ ಕೇವಲ ಹವ್ಯಾಸದ ಹುಕಿಯಲ್ಲಿ ಬರೆದ ಕಾದಂಬರಿ "ಕೆಳದಿ ಇತಿಹಾಸ ಸಾಮ್ರಾಜ್ಯ ಮರೆತ" #ಬೆಸ್ತರ_ರಾಣಿ_ಚಂಪಕಾ ಮತ್ತು ಈ ಸಣ್ಣ ಕಥಾ ಸಂಕಲನ ಆದರೆ ದೊಡ್ಡ ದೊಡ್ಡ ವಿದ್ವಾಂಸರಿಂದ ವಿಮರ್ಶೆಗಳು ಬಂದಾಗ ಅದು ನನಗೊಂದು ಕಿರೀಟದಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚು ಬರೆಯಲು ಬೆನ್ನುತಟ್ಟಿ ಪ್ರೋತ್ಸಾಹಿಸಿದಂತೆ ಆದ್ದರಿಂದ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
   ಖ್ಯಾತ ಬರಹಗಾರರು, ವಿಮರ್ಶಕರಾದ ಇವರು ಬರೆದ ಪುಸ್ತಕಗಳು ಅನೇಕ ಅವುಗಳಲ್ಲಿ

#ಪ್ರಕಟವಾದ_ಪುಸ್ತಕಗಳು
ಬಿಟ್ಟೇನೆಂದರೂ ಬಿಡದಿ ಮಾಯೆ(ದ್ರೋಣ ಮತ್ತು‌ ಏಕಲವ್ಯ ಕುರಿತು)
ವಿದುರ ಪರ್ವ (ವಿದುರನ ಸಮಗ್ರ ಬದುಕಿನ‌‌ಕುರಿತು ಕಾದಂಬರಿ)
ದ್ರೋಣಲವ್ಯ. ಮಹಾಭಾರತದ ಏಕಲವ್ಯನ ಕುರಿತು ಹೊಸ ವ್ಯಾಖ್ಯಾನದ ಕತೆ‌
ವಿಮರ್ಶೆ ಗ್ರಂಥಗಳು
ಪುಸ್ತಕ ಪ್ರೀತಿ
ಮೊದಲ ಕಲ್ಲು,..
ದೇವನೂರು ಮಹಾದೇವರ ಕತೆಗಳು ಕಾದಂಬರಿಗಳು- ಒಂದು ವಿಶ್ಲೇಷಣೆ
ಜಂಬು ಜೋಂಕಿಣಿ- ವಡ್ಡಗೆರೆ ನಾಗರಾಜಯ್ಯ ಅವರ "ಆಸಾದಿ" ಖಂಡ ಕಾವ್ಯದ ವ್ಯಾಖ್ಯಾನ

#ಕವಿತಾ_ಸಂಕಲನಗಳು
೧. ಅನ್ವೇಷಣೆ
೨. ರಥೋತ್ಸವ
೩. ನನ್ನದೆ ಆಕಾಶ ನನ್ನದೆ ರೆಕ್ಕೆ

#ಸಂಶೋಧನೆ 
ನಾಥಪಂಥ -ಸಿದ್ಧಾಂತಗಳು ಮತ್ತು ಅಚರಣೆಗಳು
ಬೌದ್ಧ ಗ್ರಂಥಗಳು
ಬುದ್ಧತ್ವ -ಸಂತೋಷಕ್ಕೆ ಒಂದೆ ದಾರಿ
ವಿಪಶ್ಶನ -ಅರಿವಿನ ದಾರಿ
ಭಗವಾನ್ ಬುದ್ಧ- ಬದುಕು ಮತ್ತು ಬೋಧನೆಗಳು
ನಾಗಾರ್ಜುನ,-ಜೀವನ ಚರಿತ್ರೆ ಮತ್ತು ತತ್ವಗಳು
ಶೂನ್ಯತೆಯ ಶೂನ್ಯತೆ- ಚಂದ್ರಕೀರ್ತಿ ಮತ್ತು ನಾಗಾರ್ಜುನ- ಒಂದು ತಾತ್ವಿಕ  ಅನುಸಂಧಾನ
ಬೌದ್ಧ ಧ್ಯಾನ- ಮಾನಸಿಕ ಒತ್ತಡಗಳಿಗೆ ನಿವಾರಣೆ
ಅಂಗುತ್ತರ ನಿಕಾಯ ತಿಕಣಿ ಪಾತಳಿ
ಪಾಲಿಭಾಷೆಯಿಂದ ಕನ್ನಡಕ್ಕೆ ಅನುವಾದ
ರೂಮಿ ಕವಿತೆ- ಅನುವಾದಿತ ಕವನಗಳು
ಬಸವಣ್ಣ ಮತ್ತು ನಾರಾಯಣ ಗುರು- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ದಯಾನಂದ ಸರಸ್ವತಿ- ತೌಲ‌ನಿಕ #
ಬಸವಣ್ಣ ಮತ್ತು ಕನ್ಫ್ಯೂಷಿಯಸ್- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ಜಾಗತಿಕ ದರ್ಶನಗಳು ತೌಲನಿಕ ಅಧ್ಯಯನ
ಪ್ರಾಚೀನ ಭಾರತೀಯ ತತ್ವದರ್ಶನಗಳು
ಯೋಗ ಮತ್ತು ತಂತ್ರ
ವಾಸ್ತು ಫೆಂಗಶ್ಯೂಯಿ- ಒಂದು ತೌಲನಿಕ ಅಧ್ಯಯನ
 ಕಪ್ಪು ದೇವತೆ- ಸಾಮಾಜಿಕ ಕಾದಂಬರಿ

#ಕಥಾ_ಸಂಕಲನಗಳು
೧. ಸಂಬಂಧಗಳು
೨. ಕಣ್ಣುಗಳು
೩. ಬಿಳಿ ಕಾಗೆ ಮತ್ತು ಇತರ ಕತೆಗಳು
.೪. ಮುಸ್ಸಂಜೆಯ ಕತೆಗಳು
ವ್ಯಕ್ತಿತ್ವ ವಿಕಸನ ಗ್ರಂಥಗಳು
೧. ಯಶಸ್ವಿ ಜೀವನದ ರಹಸ್ಯ.
೨. ನಿಮ್ಮ ಹಣ ನಿಮ್ಮ ಕೈಯಲ್ಲಿ
‌ಮಕ್ಕಳ ಸಾಹಿತ್ಯ
೧ಕಪ್ಪೆ ರಾಜಕುಮಾರಿ ಮತ್ತು ಇತರ ಕತೆಗಳು
೨‌ ಲುಂಡೀರಿಯಾ- ಮಕ್ಕಳ ಕಾದಂಬರಿ
ಜಾನಪದ
ಭೂಮಿಯ ಸುತ್ತ
ಈಶಾನ್ಯ ಗಡಿ ರಾಜ್ಯಗಳ ಜಾನಪದ ಕತೆಗಳು...
ಶಿಕ್ಷಣ- ಶಿಕ್ಷಣ ತಜ್ಞರ ಅಭಿಪ್ರಾಯಗಳ ಒಂದು ಚಿಂತನೆ

#ಇಂಗ್ಲೀಷ್_ನಲ್ಲಿ 
Niyoga ಮತ್ತು Lingering Illusions- ಇದು ತ್ಯಕ್ತ ಕಾದಂಬರಿಯ ಅನುವಾದ.

ಕನ್ನಡಿ- ಇದು ಮೊದಲ ಕಲ್ಲು ಪುಸ್ತಕದ ಬಗ್ಗೆ ವಿವಿಧ ಲೇಖಕರು ಬರೆದ ವಿಮರ್ಶಾ ಬರಹಗಳ ಸಂಗ್ರಹ
ಅಚ್ಚಿನಲ್ಲಿ ಬಸವಣ್ಣ ಮತ್ತು ಕನಕದಾಸ
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ನನ್ನದೆ ಆಕಾಶ ಮತ್ತು ನನ್ನದೆ ರೆಕ್ಕೆಗಳು
ಸಿಟ್ಟಿಂಗ್ ಬುಲ್- ಅನುವಾದಿತ ಜನಾಂಗೀಯ ಅಧ್ಯಯನ
ದಾರಾ ಶುಕೊಹ್ ನ ಕನಸುಗಳು ಐತಿಹಾಸಿಕ ಕಾದಂಬರಿ‌.
"ಬೆಳಕು ಮಾರುವ ಹುಡುಗ" ಕವಿತಾ ಸಂಕಲನ‌. 

#ಪ್ರಶಸ್ತಿಗಳು
೧. ರಾಜ್ಯಮಟ್ಟದ ಉತ್ತಮ ಕಥೆಗೆ ಪ್ರಥಮ ಪ್ರಶಸ್ತಿ- ಮೈಸೂರು ಮಕ್ಕಳ ಸಂಗಮ
೨. ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ಸಣ್ಣ ಕಥೆಗೆ- ಅವಸ್ಥೆ- ಹಣತೆ ವೇದಿಕೆ,ಹೊನ್ನಾವರ
೩. ರಾಜ್ಯಮಟ್ಟದ ಕವಿತಾ ಸ್ಪರ್ಧೆಯಲ್ಲಿ ತುಮುಕೂರಿನ ಜನ ಮಿತ್ರ ಪತ್ರಿಕೆಯ ಆಶ್ರಯದಲ್ಲಿ ನಡೆದದ್ದು‌ ಪ್ರಥಮ ಪ್ರಶಸ್ತಿ
೪. ಕಾಂತಾವರ ಕನ್ನಡ ಸಂಘ- ಸಾಹಿತ್ಯ ಪುರಸ್ಕಾರ
೫. ಸಿದ್ದರಾನ ಹೊನ್ಕಲ್ ರಾಜ್ಯ ಪ್ರಶಸ್ತಿ. ಬೊಪ್ಪ ನನ್ನನ್ನು ಕ್ಷಮಿಸು- ಆತ್ಮಚರಿತ್ರೆ ಗಾಗಿ
ದೇವನೂರು ಮಹಾದೇವರ ಕತೆಗಳು ಮತ್ತು ಕಾದಂಬರಿಗಳು- ಒಂದು ಅವಲೋಕನ- ವಿಮರ್ಶೆ ಕೃತಿಗೆ, ಬೆಂಗಳೂರು ಕಲಾ ಸಾಂಸ್ಕೃತಿಕ ಸಾಹಿತ್ಯ ಸಾಮಾಜಿಕ ವೇದಿಕೆ, ಚಾಮರಾಜ ಪೇಟೆ, ಇವರಿಂದ ರಾಜ್ಯಮಟ್ಟದ ಪ್ರಶಸ್ತಿ
ಕಪ್ಪು ದೇವತೆ ಕಾದಂಬರಿಗೆ ೨೦೦೦ ನ ವರ್ಷದ ಯುವ ಕಾದಂಬರಿಕಾರ ಪ್ರಶಸ್ತಿ- ಉದಯವಾಣಿ
ಮಿಂಚುಳ್ಳಿ ಪ್ರಕಾಶನ- ಉತ್ತಮ ರಾಜ್ಯಮಟ್ಟದ ಕವಿತಾ ಪ್ರಶಸ್ತಿ ‌
ಮಕ್ಕಳ ಸಾಹಿತ್ಯ ಅಕಾಡೆಮಿ ಇವರ ಹಿರಿಯರು ಬರೆದ ಮಕ್ಕಳ ಕಥಾ ಪ್ರಶಸ್ತಿ‌.
  
   #ಉದಯಕುಮಾರ್‌_ಹಬ್ಬು_ನನ್ನ_ಕಥಾ_ಸಂಕಲದ_ಬಗ್ಗೆ_ಬರೆದ_ಮಿಮರ್ಶೆ

   Arun Prasad  ಇವರ ಮೊದಲ ಕಾದಂಬರಿ "ಬೆಸ್ತರ ರಾಣಿ ಚಂಪಕಾ" " ವನ್ನು ಓದಿ ಇಷ್ಟಪಟ್ಟವನು ನಾನು. ಅರುಣ್ ಪ್ರಸಾದ್ ಬಹುಮುಖ ಪ್ರತಿಭೆಯ ವ್ಯಕ್ತಿ. ಅವರು ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಅಂತೆಯೆ ಓರ್ವ ರಾಜಕಾರಣಿಯೂ ಹೌದು‌
ಈ ಕಥಾ ಸಂಕಲನವು ಆನಂದಪುರ ಎಂಬ ಅಭಿವೃದ್ಧಿ ಹೊಂದುತ್ತಿರುವ ಗ್ರಾಮದ ತಳಮೂಲದ ನೈಜ ಚಿತ್ರಣವು ಹಲವಾರು ಪಾತ್ರಗಳ ಮೂಲಕ, ಘಟನೆಗಳ ಮೂಲಕ ವ್ಯಕ್ತಗೊಂಡಿದೆ. ಗ್ರಾಮ ಜಗತ್ತು ಸಿನೆಮಾದಲ್ಲಿ  ಕಾಣಿಸುವಂತೆ ರೊಮ್ಯಾಂಟಿಕ್ ಆಗಿಯೂ ಇಲ್ಲ, ನಗರಕ್ಕಿಂತ ಹಳ್ಳಿಯೇ ಮೇಲೂ ಎಂಬುದು ಹುಸಿಕಲ್ಪನೆ . ಹಾಗಂತ ಅಲ್ಲಿನ ತಳಮೂಲದ ಜನರ ಬದುಕು ಹೇಗಿದೆ, ಆ ತಳಮೂಲದ ಜನಸಾಮಾನ್ಯರಾದ ಹಾವಾಡಿಗರು, ಹಕ್ಕಿ ಪಿಕ್ಕಿ ಜನಾಂಗದವರು ಮತ್ತು ಕುರ್ ಕುರ್ ಮಾಮಾ ಎಂಬ ಭವಿಷ್ಯ ನುಡಿಯುವವರ ಬದುಕಿನ ಬವಣೆಯನ್ನು ಕಥೆಗಾರರು ಸೂಕ್ಷ್ಮ ಕಣ್ಣುಗಳಿಂದ ನೋಡಿ ನಮ್ಮ ಮುಂದೆ ಇಟ್ಟಿದ್ದಾರೆ. ಹಾವಾಡಿಗನು ಜನರಿಗೆ ಮೋಸ ಮಾಡುವುದು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು, ಒಬ್ಬರ ಹೆಂಡತಿಯನ್ನು ಇನ್ನೊಬ್ಬನು ಕರೆದುಕೊಂಡು ಹೋಗುವುದು, ಹೆಂಡತಿ ಅವನೊಡನೆ ಕೆಲ ಕಾಲ ಇದ್ದು ಮತ್ತೆ ಮೊದಲಿನ ಗಂಡನ ಬಳಿಯೆ ಬರುವುದು ಇಂಥವೆಲ್ಲ ತಳಮೂಲ ಸಂಸ್ಕೃತಿಯ ಆನಂದಪುರವೆಂಬ ಗ್ರಾಮದಲ್ಲಿ ನಡೆದ ಸಂಗತಿಗಳು.‌ಭಾತರದ ಹಳ್ಳಿಗಳ ಜನರು ಜನಸಾಮಾನ್ಯರು ಸೆರೆ ಅಥವಾಮದ್ಯದ ದಾಸರು. ಮದ್ಯಕ್ಕಾಗಿ ಪುರುಷರು ತಮ್ಮ ಹೆಚ್ಚಿನ ಸಂಪಾದನೆಯನ್ನು ವ್ಯಯಿಸುವವರು. ಹೀಗೆ ಹಳ್ಳಿಯೊಂದರಲ್ಲೆ ನಡೆಯುವ ಮೋಸ,ವಂಚನೆ, ಅವರು ಬೋಳೆ ಶಂಕರರಲ್ಲ. ಮೊಗಸಾಲೆಯವರು ಸೀತಾಪುರ ಎಂಬ ಕಾಲ್ಪನಿಕ ಗ್ರಾಮದಲ್ಲಿ ನಡೆಯುವ ಘಟನೆಗಳನ್ನು ಚಿತ್ರಿಸಿದರೆ ಅರುಣ್ ಪ್ರಸಾದ್ ಆನಂದಪುರ ಎಂಬ ಹಳ್ಳಿಯ ನೈಜ ಚಿತ್ರಣ ಕೊಡುತ್ತಾರೆ. ಭಾರತೀಯ ಇಂಗ್ಲಿಷ್ ಕಾದಂಬರಿಕಾರ ರಾಜಾ  ರಾವ್ ಕಾಂತಾಪುರ‌ ಎಂಬ ಗ್ತಾಮದ ಚಿತ್ರಣ ಮೊಡುತ್ತಾರೆ.ಅರುಣ್ ಪ್ರಸಾಧರ ಕಥೆಗಳು ಕೆಲವೊಮ್ಮೆ ಪ್ರಬಂಧಗಳಂತೆ ಅನಿಸುತ್ತವೆ‌ ಭಾರತದ ಮಾದರಿ ಹಳ್ಳಿಯೊಂದರ ಚಿತ್ರಣ ಅರುಣ್ ಪ್ರಸಾದ್ ಅವರ ಕಥಾನಕದಿಂದ ತಿಳಿಯುತ್ತದೆ. ಶಿವರಾಮ ಕಾರಂತರು ತಮ್ಮ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಗ್ರಾಮಾಭಿವೃದ್ದಿಯ ಕಾರ್ಯಕ್ರಮಗಳಲ್ಲಿ ದಲಿತರಿಗೆ ಬಾವಿ ಅಗೆದು ಕೊಡಲು ಭೂಮಾಲಿಕ ಜಮೀಂದಾರರು ಅಡ್ಡಪಡಿಸಿದ್ದನ್ನು ಹೇಳುತ್ತಾರೆ. ಅಂತೆಯೆ ಆನಂದಪುರದ ಸಾಮಾನ್ಯ ಜನರು ನಾವು ತಿಳಿದಂತೆ ಮುಗ್ಧರಲ್ಲ. ಎಲ್ಲ ಬಗೆಯ ಸಂಚು ಒಳಸಂಚುಗಳನ್ನು ಬಲ್ಲವರು. ಮತ್ತು ಗೌಡರು ಗೌಡರ ನಡುವೆ ಸಂಘರ್ಷ ಮತ್ತು ದ್ವೇಷಗಳಿವೆ. ರಾಜಕೀಯ ದ್ವೇಷ. ಮತ್ತು ಆ ದ್ವೇಷವನ್ನು ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯನ್ನು ನಿರ್ಧರಿಸಿ ತಾವು ಪ್ರಧಾನರಾಗಬೇಕೆಂದು ಆರಿಸಿಹೋದ ಪರಿಶಿಷ್ಟ ಮಹಿಳೆಗೆ ಹಣ ಕೊಟ್ಟು ತಮಗೆ  ಮತ ಹಾಕುವಂತೆ ಹೇಳುತ್ತಾರೆ. ಎರಡೂ  ವಿರೋಧಿ ಪಕ್ಷದ ಗೌಡರು ಚುನಾಯಿತ ಮಹಿಳೆಗೆ ಹಣ ಕೊಡುವ ಮೋಜಿನ ಸಂಗತಿ ಇಲ್ಲಿದೆ.
ಅರುಣ್ ಪ್ರಸಾದ್ ಅವರು ಸ್ವತಃ ರಾಜಕಾರಣಿಯಾದ್ದರಿಂದ ಅವರಿಗೆ ತನ್ನ ಊರಿನ ಎಲ್ಲ ಜನಸಾಮಾನ್ಯರ ಸ್ಥಿತಿ ಗತಿ ಗೊತ್ತು. ಆದ್ದರಿಂದ ಇಲ್ಲಿ ಚಿತ್ರಣಗೊಂಡ ಎಲ್ಲ ಪಾತ್ರಗಳೂ ನಿಜ ಜೀವನದಲ್ಲಿ ಅರುಣ್ ಪ್ರದಾದ್ ಕಂಡವರಷ್ಟೆ ಅಲ್ಲ ಅವರೊಡನೆ ಆತ್ಮೀಯವಾಗಿ ಒಡನಾಡಿದವರು. ಹಾಗಾಗಿ ಇಲ್ಲಿನ ಕಥಾನಕಗಳಿಗೆ ಒಂದು ಅಧಿಕೃತತೆ ಇದೆ.
ಏಮಾರಿಸುವ ಕಕ್ಷಿದಾರರ ಕೇಸನ್ನು ವರ್ಷಗಟ್ಟಲೆ ಮುಂದುವರಿಸುವ ಕಂತ್ರಿ ವಕೀಲರು,ಮತಾಂತರ ಎಂಬ  ಹತ್ಯಾರ ಹೇಗೆ ಪುರುಷನನ್ನು ಇಡಿ ಸಮಾಜವನ್ನು ಎದುರು ಹಾಕುವ ಧೈರ್ಯ ಕೊಡುತ್ತದೆ,ಮತಾಂತರ ಅಸಾಧ್ಯ ಎನ್ನುವ ಮತಾಂತರಗೊಂಡ ವ್ಯಕ್ತಿಯ ಸಮುದಾಯದವರು, ಕೋಮುಗಲಭೆ ಆಗುವ ಸಂಭಾವ್ಯ ಊರು, ಇವೆಲ್ಲವನ್ನು ಅರುಣ್ ಪ್ರಸಾದ್ ನೋಡಿ ತಮ್ಮ ವಿಶಿಷ್ಟ ಶೈಲಿಯಿಂದ ದಾಖಲಿಸುತ್ತಾರೆ.‌ನಿಧಿ ಶೋಧ ಎಂಬ ಪ್ರಹಸನಬರುತ್ತದೆ. ಅಲ್ಲಿ ಕೇರಳದ ಪುದುವಾಳರು ಅಷ್ಟಮಂಗಲ, ಅಂಜನ ಎಂಬ ಮಂಗನಾಟವನ್ನು ಆಡಿ ‌ಜನಸಾಮಾನ್ಯರನ್ನು ವಂಚಿಸುತ್ತಾರೆ ಎಂಬ ಚಿತ್ರಣ ಇದೆ.
ಹೇಗೆ ದೇವರ ಭಯವನ್ನು ಅನೇಕ ಜನ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಪ್ರಕರಣವು ಕಲ್ಲುಕುಟಿಕ ದೇವರೂ ಕಮಲಿ ಎಂಬ ಮೆಂಬರು,ಮುರಘಾ ಮಠ ಮುರಗಿ ಮಠ ಕತೆಯಲ್ಲಿ ಈ ಮಠದ ಹೆಸರಿನ ಕುರಿತಾಗಿಯೆ ಸಂಘರ್ಷ ಕೊಮು ಗಲಭೆಯಾಗುವುದರ ಕುರಿತು ನೈಜ ಚಿತ್ರಣ ಕೊಡುತ್ತಾರೆ. ಅಗಲೇ ಹೇಳಿದ ಹಾಗೆ ಗ್ರಾಮದ ಶ್ರಮಿಕರಾದ ತಳಸಮುದಾಯದವರಾದ ವಾಲಗದವರು ಕುರಿತಾದ ಸ್ವಾರಸ್ಯಕರ ಕತಾನಕ ಇಲ್ಲಿದೆ ಸುಶೀಲಾಳ ಸರಾಯಿ ಅಂಗಡಿ ಮತ್ತು ಸಿಗಂದೂರು ಚೌಡೇಶ್ವರಿ ಕತೆಯಲ್ಲಿ ಗ್ರಾಮೀಣ ಜನತೆ ಕುಡಿತಕ್ಕೆ ದಾಸರು‌ ಸುಶೀಲಾ ಕೆಲವರಿಗೆ ಕಡವಾಗಿ ಸೆರೆ ಕೊಡಲಿಲ್ಲ ಎಂದು ಕೆಲವರು ಅವಳ ಶರಾಬು ಅಂಗಡಿ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಜನ ಕುಡಿದು ಅವರ ಸಂಸಾರ ಹಾಳಾಗುತ್ತಿದೆ. ಸುಶಿಲಾಳ ಸರಾಬು ಅಂಗಡಿ ನಿಲ್ಲಬೇಕು. ಎಂದು ಠರಾವು ಪಾಸ್ ಮಾಡುತ್ತಾರೆ. ಆಗ ಸುಶಿಲಾ ಒಂದು ಕರಾರು ಹಾಕುತ್ತಾಳೆ. ಈ ಎಲ್ಲವರೂ ಚೌಡೇಶ್ವರಿ ದೇವಿಯ ಎದುರಿಗೆ ಇ‌ನ್ನು ಮುಂದೆ ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಲಿ ಎನ್ನುತ್ತಾಳೆ. ಹುಟ್ಟಾ ಕುಡುಕರಾದ ಜನರು ತಪ್ಪಿಸಿಕೊಳ್ಳುತ್ತಾರೆ. ಸುಶಿಲಾಳ ಶರಾಬು ಅಂಗಡಿ ಮುಂದುವರಿಯುತ್ತದೆ‌
ಭೂತ ದೆವ್ವ ಕೊಳ್ಳಿ ದೆವ್ವಗಳ ನಂಬಿಕೆಗಳು ಸ್ವಾರಸ್ಯಕರವಾಗಿ ನಿರೂಪಿತಗೊಂಡಿದೆ‌ 
ಪಾಳೆಗಾರಿಕೆಯ ಜಮೀಂದಾರ ಊರಿನ ಸಂಸ್ಥೆಗಳ ಎಲ್ಲ ಅಧ್ಯಕ್ಷ ಮತ್ತು ಚೇರ್ ಮ್ಯಾನ್ ಹುದ್ದೆಗೆ ತಮ್ಮ ಸಹೋದರರನ್ನು ಕುಳ್ಳಿರಿಸಿ ಜನರನ್ನು ಶೋಷಣೆ ಮಾಡಲು ತೊಡಗಿದಾಗ ಭಾಷಾ ಎಂಬ ಮುಸ್ಲಿಂ ಯುವಕ ಜನರ ಬೆಂಬಲದೊಂದಿಗೆ ಜಮೀಂದಾರರ ವಿರುದ್ಧ ನಡೆದಾಗ ಆ ಜಮೀಂದಾರನು ಅದಕ್ಕೆ ಕೋಮುಗಲಭೆಯ ಬಣ್ಣ ಕೊಟ್ಟು ಪಾಪದ ಬಾಷಾನನ್ನು  ಅಪರಾಧಿಯಾಗಿ ನಿಲ್ಲಿಸಿ ಶಾಂತಿ ಸಭೆಯಲ್ಲಿ ಆರೋಪಿಸುತ್ತಾರೆ. ಜನರೆಲ್ಲ ಅಸಹಾಯಕರಾಗುತ್ತಾರೆ.‌ಜಮೀಂದಾರನಿಗೆ ಪೊಲಿಸ್ ಠಾಣೆಯ ಅಧಿಕಾರಿಗಳ ಕುಮ್ಮುಕ್ಕು. ಈ ಕಥೆಗೆ "ಶಾಂತಿ ಸಭೆ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ ಅರುಣ್ ಪ್ರಸಾದ್ ‌ಆ‌ ಘಟನೆಯ ಕುರಿತಾಗಿ ನಿರೂಪಕ ಹೇಳುತ್ತಾರೆ:" ತಲತಲಾಂತರದಿಂದ ಮುಗ್ಧರನ್ನು ಶೋಷಿಸುತ್ತಿದ್ದಾರೆ. ಅಧಿಕಾರದಿಂದ,  ದರ್ಪದಿಂದ , ಶ್ರೀಮಂತಿಕೆಯಿಂದ ಈಗ‌ ಅದೆಲ್ಲ ಇಲ್ಲದಿದ್ದರೂ ಅಧಿಕಾರ ಇರೋ ಪೋಲಿಸರಿಂದ ಶೋಷಣೆ ಮುಂದುವರಿಸಿದ್ದಾರೆ‌.. ಇದನ್ನು ಹೆಸರು ಬದಲಿಸಿ ಸಣ್ಣ ಕತೆಯನ್ನಾಗಿ ಬರೆದಿದ್ದೇನೆ." ಎನ್ನುತ್ತಾರೆ ಕೃತಿಕಾರರು ಗ್ರಾಮಭಾರತದ ಎಲ್ಲ ರೊಮ್ಯಾಂಟಿಕ್ ಚಿತ್ರಣವನ್ನು ಒಡೆದು, ಭಾರತದ ಹಳ್ಳಿಗಳ ನೈಜ ಚಿತ್ರಣವನ್ನು   ಕೊಟ್ಟಿದ್ದಾರೆ. ಇಲ್ಲಿ ಬರುವ ಹಲವಾರು ಪಾತ್ರಗಳು ಅರುಣ್ ಒ್ರಸಾದ್ ನಿತ್ಯ ಕಾಣುವ ವ್ಯಕ್ತಿಗಳೇ ಆಗಿದ್ದಾರೆ. ಅವರ ಕಥೆಗಳು ಸತ್ವಯುತವಾಗಿವೆ.ಭ್ರಷ್ಟಾಚಾರ ಹಳ್ಳಿಯವರಲ್ಲೂ ಇದೆ‌ ಒಬ್ಬ ಬೀಡಾಡಿ ನಾಯಿಗಳನ್ನು ಕೊಲ್ಲುವ ಕಾಂಟ್ರಾಕ್ಟ್  ತೆಗೆದುಕೊಂಡವನು ಹತ್ತು ನಾಯಿಗಳನ್ನು ಕೊಂದು ೨೦೦ ನಾಯಿಗಳ ಕೊಂದ ೫೦'೦೦೦ ಮೊತ್ತವನ್ನು ಪಡೆಯುತ್ತಾನೆ‌.
ನಿಜ ಗ್ರಾಮದ ಚಿತ್ರಣ ಈ ಕಥಾನಕಗಳಲ್ಲಿದೆ. ಇಂತಹ ಉತ್ತಮ ಪುಸ್ತಕವನ್ನು ಓದುವ ಅವಕಾಶ ನೀಡಿದ ಅರುಣ್ ಪ್ರಸಾದರಿಗೆ ನಮಸ್ಕಾರ‌

ಈ ಕತಾ ಸಂಕಲನದ ಬಗ್ಗೆ ಒಂದು ವಿಚಾರಗೊಷ್ಠಿಯನ್ನು ಏರ್ಪಡಿಸಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ