Skip to main content

Blog number 948. ಆಸಮಾನ್ಯ ಡೊಳ್ಳಿನ ಕಲಾವಿದರಾದ ಕಣ್ಣೂರಿನ ಜೆ.ಸಿ.ಮಂಜಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬಾರದೇಕೆ? ಮ೦ಜಪ್ಪರ ರಷ್ಯಾ ಪ್ರವಾಸದ ಅನುಭವಗಳು, ಕು.ಶಿ.ಹರಿದಾಸ ಭಟ್ಟರ "ರಷ್ಯಾದಲ್ಲಿ ಡೊಳ್ಳಿನ ದಿಗ್ವಿಜಯ" ಪುಸ್ತಕದಲ್ಲಿ ಪ್ರಮುಖ ಕಲಾವಿದ ಜೆ.ಸಿ.ಮಂಜಪ್ಪ ಅಂತಲೇ ದಾಖಲಿಸಿದ್ದಾರೆ.

#ಅಸಮಾನ್ಯ_ಡೊಳ್ಳಿನ_ಕಲಾವಿದರು.

#ಜಿ_ಸಿ_ಮಂಜಪ್ಪ_ಕಣ್ಣೂರು

#ರಷ್ಯಾದಲ್ಲಿ_ಡೊಳ್ಳಿನ_ಪ್ರದರ್ಶನ_ನೀಡಿದವರು

#ಕು_ಶಿ_ಹರಿದಾಸ_ಭಟ್ಟರು_ಬರೆದ_ರಷ್ಯಾದಲ್ಲಿ_ಡೊಳ್ಳಿನ_ದಿಗ್ವಿಜಯ_ಪುಸ್ತಕದಲ್ಲಿ_ಮುಖ್ಯಕಲಾವಿದ_ಜಿ_ಸಿ_ಮಂಜಪ್ಪ
#ಎಂದೇ_ದಾಖಲಿಸಿದ್ದಾರೆ.

#ಈ_ಬಾರಿಯ_ರಾಜ್ಯೋತ್ಸವ_ಪ್ರಶಸ್ತಿ_ಇವರಿಗೆ_ನೀಡ_ಬಾರದೇಕೆ ?

   ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಗಳು ಎಂ.ಪಿ.ಪ್ರಕಾಶ್ ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದಾಗ ರಷ್ಯಾ ಮತ್ತು ಭಾರತ ಕಲ್ಚರಲ್ ಎಕ್ಸ್ಚೆಂಜ್ ಪ್ರೋಗ್ರಾಂನಲ್ಲಿ ನಮ್ಮ ರಾಜ್ಯದಿಂದ ರಷ್ಯಾಕ್ಕೆ ಆಯ್ಕೆ ಆದ ತಂಡ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಕಣ್ಣೂರಿನ ಡೊಳ್ಳಿನ ತಂಡ ಮಾತ್ರ.
   ಆಗಿನ ಕುಗ್ರಾಮದ ಗಂಡುಕಲೆ ಡೊಳ್ಳಿನ ಕಲಾವಿದರು ರಷ್ಯಾದಂತ ವಿದೇಶಕ್ಕೆ ವಿಮಾನದಲ್ಲಿ ಹೋಗುತ್ತಾರೆ ಅಲ್ಲಿ ಮೂರು ತಿಂಗಳು ಮಾಸ್ಕೋ- ತಾಷ್ಕೆಂಡ್ ಮುಂತಾದ ಪ್ರದೇಶದಲ್ಲಿ ನಮ್ಮ ರಾಜ್ಯದ ಕಲಾ ಪ್ರದರ್ಶನ ನೀಡುತ್ತಾರೆನ್ನುವ ಸುದ್ದಿಯೇ ರೋಮಾಂಚನವಾದ ಕಾಲ.
  1987 ರಲ್ಲಿ ಉಡುಪಿಯ ಕು.ಶಿ.ಹರಿದಾಸ ಭಟ್ಟರು ಆಯ್ಕೆ ಆದ ಈ ಕಲಾವಿದರ ತಂಡದ ಮುಖ್ಯಸ್ಥರಾಗಿ ಹೋಗಿದ್ದರು.
  ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಮತ್ತು ಎಂ.ಪಿ.ಪ್ರಕಾಶ್ ಮಾಸ್ಕೋದಲ್ಲಿ ನಡೆದ ಇವರ ಪ್ರದರ್ಶನ ನೋಡಲು ಹೋಗಿದ್ದರು, ಎಂ.ಪಿ.ಪ್ರಕಾಶ್ ನಮ್ಮ ಕಣ್ಣೂರಿನ ಡೊಳ್ಳಿನ ಕಲಾವಿದರ ಜೊತೆ ಕುಣಿದು ಕುಪ್ಪಳಿಸಿ ಕಲಾವಿದರಿಗೆ ಹುರುಪುOಟು ಮಾಡಿದ್ದರಂತೆ.
   1987 ರಲ್ಲಿ ರಷ್ಯಾ ಪ್ರವಾಸ ಮುಗಿಸಿ ಬಂದ ಈ ಕಲಾವಿದರಿಗೆ ಆನಂದಪುರಂ ಕನ್ನಡ ಸಂಘದಿಂದ ಸ್ಟಾಗತ ಸನ್ಮಾನಗಳು ಹಮ್ಮಿಕೊಂಡಿದ್ದರು ಕಲಾವಿದರೆಲ್ಲ ಸೂಟು-ಬೂಟಿನಲ್ಲಿ ಮಿಂಚುತ್ತಿದ್ದದ್ದು ಆ ಕಾಲದಲ್ಲಿ ದೊಡ್ಡ ಸುದ್ದಿ.
   ಕು.ಶಿ.ಹರಿದಾಸ ಭಟ್ಟರು ಡೊಳ್ಳಿನ ಕಲಾವಿದರ ರಷ್ಯಾ ಪ್ರವಾಸದ ಬಗ್ಗೆ ಸಚಿತ್ರ ಪುಸ್ತಕ #ರಷ್ಯಾದಲ್ಲಿ_ಡೊಳ್ಳಿನ_ದಿಗ್ವಿಜಯ ಎ೦ಬ ಪುಸ್ತಕ ಪ್ರಕಟಿಸಿದ್ದರು ಅದರಲ್ಲಿ ಜಿ.ಸಿ. ಮಂಜಪ್ಪ ಮುಖ್ಯ ಕಲಾವಿದ ಎಂದು ದಾಖಲಿಸಿದ್ದಾರೆ.
   ಜಿ.ಸಿ. ಮಂಜಪ್ಪ ಅಂದರೆ ಘಟ್ಟದ ಚೆನ್ನಪ್ಪರ ಮಗ ಮಂಜಪ್ಪ ಅಂತ, ಘಟ್ಟದ ಕೆಳಗಿನ ಬೈಂದೂರಿನ ಚೆನ್ನಪ್ಪ ತನ್ನ ಅಜ್ಜಂದಿರ ಜೊತೆ ಮೀನು ಎಣ್ಣೆ ಇತ್ಯಾದಿ ವ್ಯಾಪಾರಕ್ಕೆ ಬಂದವರು ಕಣ್ಣೂರಿನಲ್ಲಿ ನೆಲೆಸುತ್ತಾರೆ ಈ ಕುಟುಂಬದ ಮೂರನೆ ತಲೆಮಾರಿನ ಮಂಜಪ್ಪ ಓದುವುದರಲ್ಲಿ, ಕ್ರೀಡೆಯಲ್ಲಿ ಯಾವಾಗಲೂ ಮುಂದು ನಂತರ ಡೊಳ್ಳಿನ ಕಲೆಯಲ್ಲಿ ಅಂತರಾಷ್ಟ್ರೀಯ ಕಲಾವಿದರೂ ಆಗುತ್ತಾರೆ.
  1981ರಲ್ಲಿ ತಾಲ್ಲೂಕ್ ಯುವ ಜನ ಮೇಳ, 1982 ಮತ್ತು 1986 ರಲ್ಲಿ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಪ್ರಥಮ ಸ್ಥಾನ ಇವರ ತಂಡ ಗಳಿಸುತ್ತದೆ.
  1986 ರಲ್ಲಿ ದೂರದರ್ಶನ ಚಂದನದಲ್ಲಿ ಇವರ ಸಂದರ್ಶನ ಮತ್ತು ಆಕಾಶವಾಣಿಯಲ್ಲಿ ವರ್ಷದಲ್ಲಿ ಮೂರು ಸಾರಿ ಡೊಳ್ಳಿನ ಪದ ಇವರು ಹಾಡುವ ಕಾರ್ಯಕ್ರಮ ಪ್ರಸಾರವಾಗಿತ್ತು.
  ಡ್ರಂಸ್ ಆಪ್ ಇಂಡಿಯಾ, ಏಷ್ಯನ್ ಕ್ರೀಡೋತ್ಸವ, ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಪೆರೇಡ್ ಗಳಲ್ಲಿ ಇವರ ನೇತೃತ್ವದ ಡೊಳ್ಳಿನ ತಂಡ ಭಾಗವಹಿಸಿದ ಹಿರಿಮೆ ಇವರದ್ದು.
   ದೇಶದ ಎಲ್ಲಾ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ ಇವರು ಅನೇಕ ಶಾಲಾ ಮಕ್ಕಳ ಮತ್ತು ಇತರ ತಂಡಗಳಿಗೂ ತರಬೇತಿ ನೀಡಿದ್ದಾರೆ.
  ಮೊನ್ನೆ ನನ್ನ ಬೇಟಿಗೆ ಬಂದಾಗ ಇದೆಲ್ಲ ನಮ್ಮಿಬ್ಬರ ನಡುವಿನ ಮಾತು ಕಥೆಗಳಲ್ಲಿ ಮರುಕಳಿಸಿತು ಅವರ ಜೊತೆ ರಷ್ಯಾದ ಅವರ ಮೂರು ತಿಂಗಳ ಅವರ ಸ್ವಾರಸ್ಯ ಅನುಭವದ ಜೊತೆ ಇವರು ರಷ್ಯಾದಲ್ಲಿದ್ದಾಗಲೇ ಊರಲ್ಲಿ ಇವರ ತಂದೆಯ ಕಾಲು ಗ್ಯಾಂಗ್ರಿನ್ ನಿಂದ ತೆಗೆದದ್ದು ಇವರು ಊರಿಗೆ ಬಂದಾಗಲೇ ಗೊತ್ತಾಗಿದ್ದು ಇವರಿಗೆ ದೊಡ್ಡ ಶಾಕ್ ಆಗಿತ್ತಂತೆ ಈ ವಿಚಾರ ತನ್ನ ಮಗನಿಗೆ ತಿಳಿಸದಂತೆ ಇವರ ತಂದೆ ಕು.ಶಿ.ಹರಿದಾಸ ಭಟ್ಟರಿಗೆ ಸುದ್ದಿ ತಿಳಿಸಿದ್ದರಂತೆ ಯಾಕೆಂದರೆ ಹಳ್ಳಿ ಹುಡುಗರು ತಮ್ಮ ವಿದೇಶ ಪ್ರವಾಸದಲ್ಲಿ ಈ ಸುದ್ದಿ ತಿಳಿದು ದುಃಖಪಟ್ಟರೆ ಸರಿಯಾದ ಕಲಾ ಪ್ರದರ್ಶನ ಮಾಡಲಾರರು ಮತ್ತು ಊರಿಗೆ ವಾಪಾಸ್ ಕಳಿಸಿ ಅಂತ ಹಠ ಹಿಡಿದಾರೆಂಬ ಭಯ ಮತ್ತು ಕು.ಶಿ.ಹರಿದಾಸ ಭಟ್ಟರಿಗೆ ಮುಖ್ಯ ಕಲಾವಿದ ಜಿ.ಸಿ ಮ೦ಜಪ್ಪ ಇಲ್ಲದಿದ್ದರೆ ರಷ್ಯಾ ಪ್ರವಾಸ ವಿಫಲವಾದೀತೆಂಬ ಭಯವೂ ಇತ್ತಂತೆ.
    ಜಿ.ಸಿ ಮಂಜಪ್ಪ ಕೃಷಿ ಮಾಡುತ್ತಿದ್ದಾರೆ ವೃದ್ದಾಪ್ಯದ ಅಂಚು ತಲುಪಿದ್ದಾರೆ, ಕಲಾವಿದರ ಮಾಷಾಸನ ಬರುತ್ತಿದೆ, ಹೃದಯದ ಶಸ್ತ್ರಚಿಕಿತ್ಸೆ ಆಗಿದೆ.
   ಇವರ ಜೊತೆ ಬಂದಿದ್ದ ಜೊತೆಗಾರರಿಗೆ ಜಿ.ಸಿ. ಮಂಜಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಅನ್ನುವ ಬಯಕೆ ಸ್ವತಃ ಮಂಜಪ್ಪರಿಗೆ ವಯಸ್ಸು ಮತ್ತು ಕಾಯಿಲೆಯಿಂದ ಯಾವುದಕ್ಕೂ ಹುಮ್ಮಸ್ಸಿಲ್ಲ ಆದರೆ ಜೊತೆಗಾರರ ಒತ್ತಾಯಕ್ಕೆ ಸಾಗರದ ಶಾಸಕರಾದ ಹರತಾಳು ಹಾಲಪ್ಪರನ್ನು ಬೇಟಿ ಮಾಡಿ ಅರ್ಜಿ ಸಲ್ಲಿಸಲಿದ್ದಾರೆ.
   ಇಂತಹ ನಮ್ಮ ಊರಿನ ಆಸಮಾನ್ಯ ಡೊಳ್ಳಿನ ಕಲಾವಿದ ಮಂಜಪ್ಪರಿಗೆ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಬಾರದೇಕೆ? ಘಟ್ಟದ ಚೆನ್ನಪ್ಪ ಮ೦ಜಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ.
  ಇವರ ಸಂಪರ್ಕ ಸಂಖ್ಯೆ 8762884782

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ