Skip to main content

Blog number 940. ಆನಂದಪುರಂನ ಅತ್ಯುತ್ತಮ ಅಲ್ಯೂಮಿನಿಯಂ ಪಾರ್ಟಿಶನ್, ಎಸಿಪಿ ಗ್ಲಾಸ್ ವಿಂಡೋ -ಡೋರ್, ವಾರ್ಡ್ ರೋಬ್ ಮತ್ತು ಇಟಾಲಿಯನ್ ಕಿಚನ್ ಗಳನ್ನು ಮಾಡುವ ರಾಘವೇಂದ್ರ ಆಚಾರ್ ಎಂಬ ಕಲಾವಿದ.

#ಸಣ್ಣ_ಕೆಲಸ_ಸಣ್ಣ_ಮೊತ್ತ_ಅಂದಾಗ_ಹತ್ತಿರ_ಸುಳಿಯದವರು.

#ದೊಡ್ಡ_ಕೆಲಸ_ಜಾಸ್ತಿ_ಹಣಕ್ಕಾಗಿ_ಮಾತ್ರ_ಹುಡುಕಾಟ_ಮಾಡುವ_ಕೆಲ_ಕುಶಲಕರ್ಮಿಗಳು

#ಪುರಿ_ಜಗನಾಥ_ವಿಗ್ರಹಗಳಿಗೆ_ಗಾಜಿನ_ಹೊದಿಕೆ_ಮಾಡಿಸಲು_ಎಷ್ಟು_ಕಷ್ಟ_ಆಯಿತು_ನೋಡಿ

#ಕೊನೆಗೂ_ಪುರಿ_ಜಗನಾಥ_ವಿಗ್ರಹಕ್ಕೆ_ಸುಂದರ_ಪೀಠ_ಗಾಜಿನ_ಹೊದಿಕೆ_ಮಾಡಿದ_ರಾಘವೇಂದ್ರ_ಆಚಾರ್

  ಒರಿಸ್ಸಾದ ಕಟಕ್ ನ ಉದ್ದಿಮೆದಾರರಾದ ಸರೋಜ್ ಸುಬುದ್ದಿ ನನ್ನ ಹೊಸ ಲಾಡ್ಜ್ ಕೆಲಸದ ಅಡಿಪಾಯ ಹಾಕುವಾಗ ಪುರಿ ಜಗನ್ನಾಥ್ ದೇವಾಲಯದ ದೇವರುಗಳಾದ ಬಲರಾಮ- ಸುಭದ್ರೆ - ಕೃಷ್ಣರ ಮೂಲ ವಿಗ್ರಹದ ಮಾದರಿ,ಬೇವಿನ ಮರದಲ್ಲಿ ಕೆತ್ತನೆ ಮಾಡಿದ ಅಲಂಕೃತ ವಿಗ್ರಹ ಶುಭ ಹಾರೈಸಿ ಕಳಿಸಿದ್ದರು.
https://arunprasadhombuja.blogspot.com/search?q=%E0%B2%AA%E0%B3%81%E0%B2%B0%E0%B2%BF
   ಕಟ್ಟಡ ಕಾಮಗಾರಿ ಮುಗಿಯಲು ಕೊರಾನಾ ಲಾಕ್ ಡೌನ್ ಪ್ರಾರಂಭ ಆಗಿ ಈ ವಿಗ್ರಹ ಮರೆತು ಬಿಟ್ಟಿದ್ದೆ, ಈ ವರ್ಷ ಎರೆಡು ವರ್ಷದ ನಂತರ ಪುರಿ ಜಗನ್ನಾಥ್ ರ ರಥೋತ್ಸವ ನಡೆಯಿತು ಹತ್ತು ಲಕ್ಷ ಜನ ಸೇರಿದರು ಎನ್ನುವ ಸುದ್ದಿಗಳ ಓದಿದಾಗಲೇ ಈ ವಿಗ್ರಹ ಮನೆಯಲ್ಲಿ ಜೋಪಾನವಾಗಿ ಇಟ್ಟಿದ್ದು ನೆನಪಾಗಿ ನನ್ನ ಆಫೀಸಿಗೆ ತಂದೆ.
  ಆದರೆ ಅದನ್ನು ಹಾಗೆ ಇಡುವುದಕ್ಕಿಂತ ಗ್ಲಾಸಿನ ಕವಚ ಹಾಕಿದರೆ ಚೆಂದ ಅಂತ ಅನ್ನಿಸಿ ನಮ್ಮ ಸಂಸ್ಥೆಯಲ್ಲಿ ಹಿಂದೆ ದೊಡ್ಡ ದೊಡ್ಡ ಕೆಲಸ ಮಾಡಿ ದೊಡ್ಡ ಮೊತ್ತದ ಹಣ ಪಡೆದವರಿಗೆ ಹೇಳಿದೆ ಆದರೆ ಅವರಾರಿಗೂ ದೇವರ ವಿಗ್ರಹಕ್ಕೆ ಗಾಜಿನ ಹೊದಿಕೆ ಹಾಕುವುದು ಕ್ಷುಲ್ಲಕ ಕೆಲಸ ಅನ್ನಿಸಿದ್ದರಿಂದಲೋ ಅಥವ ಕನಿಷ್ಟ ಹಣದ ಕೆಲಸ ಅಂತಲೋ ತಪ್ಪಿಸಿಕೊಳ್ಳಲು ಪ್ರಾರಂಬಿಸಿದರು.
  ಕೊನೆಗೆ ಸಿಕ್ಕಿದವರು ಈ ರಾಘವೇಂದ್ರ ಆಚಾರರು ಆನಂದಪುರ೦ನ ಹಳೆ ಸಿನಿಮಾ ಟಾಕೀಸ್ ರಸ್ತೆಯ ವೆಂಕಟರಮಣ ಆಚಾರ್ ಮಗ, ತಂದೆ ಮಗ ಇಬ್ಬರೂ ನಮ್ಮ ವರಸಿದ್ಧಿ ವಿನಾಯಕ ದೇವಸ್ಥಾನದ ರಥ ಮಾಡಿದ ರಥಶಿಲ್ಪಿಗಳು.
  ಈಗ ರಾಘವೇಂದ್ರ ಆಚಾರರು ಆನಂದಪುರಂನಲ್ಲಿ ಅಡೂರು ರಸ್ತೆಯಲ್ಲಿ ಸ್ವಂತ ವರ್ಕ್ ಶಾಪ್ ಮಾಡಿದ್ದಾರೆ, ಅಲ್ಯೂಮಿನಿಯಂ ಪಾರ್ಟಿಶನ್, ಎಸಿಪಿ ಕ್ಲಾಡಿಂಗ್, ವಿಂಡೋ, ಡೋರ್ , ವಾರ್ಡ್ ರೋಬ್ ಮತ್ತು ಇಟಾಲಿಯನ್ ಕಿಚನ್ ಗಳು ಮಾಡುತ್ತಾರೆ ಇವರು ಮಂಗಳೂರಲ್ಲಿ ಮತ್ತು ಬೆಂಗಳೂರಲ್ಲಿ ಒಳ್ಳೆಯ ಕೆಲಸ ಕಲಿತು ಬಂದಿದ್ದರಿಂದ ಇವರ ಕೆಲಸ ಅಷ್ಟು ಚೆನ್ನಾಗಿದೆ ಜೊತೆಯಲ್ಲಿ ಇವರ ಕುಲ ಕಸಬು ಆದ ಮರದ ಕೆಲಸಗಳನ್ನು ಸಣ್ಣಿಂದ ತಂದೆ ಜೊತೆಗೆ ಮಾಡಿದ ಅನುಭವ ಕೂಡ ಇವರ ನಿಪುಣತೆಗೆ ಕಾರಣವಾಗಿದೆ.
  ಪುರಿ ಜಗನ್ನಾಥ್ ವಿಗ್ರಹಗಳಿಗೆ ಸುಂದರ ಪೀಠ ಮಾಡಿ ಅದಕ್ಕೆ ಗಾಜಿನ ಹೊದಿಕೆ ಹಾಕಿ ನನ್ನ ಕಛೇರಿಯಲ್ಲಿ ನಿತ್ಯ ಪೂಜೆಗೆ ಅನುವು ಮಾಡಿಕೊಟ್ಟ ರಾಘವೇಂದ್ರ ಆಚಾರ್ ಕೆಲಸ ನನಗೆ ತುಂಬಾ ಇಷ್ಟವಾಯಿತು, ಮಿತಭಾಷಿ ಮತ್ತು ಇವರ ತಂದೆ ವೆಂಕಟರಮಣ ಆಚಾರರಂತೆ ಶಿಸ್ತು ಬೆಳೆಸಿಕೊಂಡಿರುವ ಈ ಯುವಕ ಮುಂದಿನ ದಿನದಲ್ಲಿ ಯಶಸ್ವಿ ಉದ್ಯಮಿ ಆಗುವುದರಲ್ಲಿ ಅನುಮಾನ ಇಲ್ಲ.
  ನಮ್ಮ ದೇವಾಲಯದಲ್ಲಿ ರಥ ಮಾಡಿದ ಇವರಿಗೆ ನನ್ನ ಕಛೇರಿಯ ಪುರಿ ಜಗನ್ನಾಥ ವಿಗ್ರಹದ ಈ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದರೆ ಪುಣ್ಯದ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಅಂತ ಹಿರಿಯ ಮಿತ್ರರು ಹೇಳಿದ್ದು ನೆನಪಾಯಿತು.
  ನಮ್ಮ ಊರಿನ ಈ ಯುವಕ ರಾಘವೇಂದ್ರ ಆಚಾರ್ ಗೆ ನನ್ನ ಮತ್ತು ನನ್ನ ಅಣ್ಣನ ಮನೆ ಇಟಾಲಿಯನ್ ಕಿಚನ್, ನನ್ನ ಲಾಡ್ಜ್ ನ 33 ಕಿಟಕಿಗಳು, ಮುಂದಿನ ದಿನಗಳಲ್ಲಿ ಲಾಡ್ಜ್ ಮೇಲಿನ ನಾಲ್ಕನೆ ಪ್ಲೋರ್ ನಲ್ಲಿ ಪ್ರಾರಂಬಿಸಲಿರುವ ಮಲ್ಟಿ ಕ್ಯೂಸಿನ್ ರೆಸ್ಟೋರೆಂಟ್ ಪಾರ್ಟಿಷನ್ ಗಳನ್ನು ನನ್ನ ಈ ಸಣ್ಣ ಕೆಲಸ ಸಣ್ಣ ಮೊತ್ತದಾದರೂ ಶ್ರದ್ದೆಯಿಂದ ಮಾಡಿದ ರಾಘವೇಂದ್ರ ಆಚಾರ್ ಗೆ ನೀಡಬೇಕೆಂದು ನಿರ್ದಾರ ಮಾಡಿದೆ.
 ಇಟಾಲಿಯನ್ ಕಿಚನ್ ಮತ್ತಿತರ ಕೆಲಸಕ್ಕಾಗಿ ವಿಚಾರಿಸಲು
  ಇವರ ಸಂಪರ್ಕ ಪೋನ್ ನಂಬರ್ 83103 58522

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...