Skip to main content

Blog number 927. ಕೆಳದಿ ಅರಸರ ಇತಿಹಾಸ ಸಂಪೂರ್ಣವಾಗಿ ಸಂಕ್ಷಿಪ್ತವಾಗಿ ಶೇಷ ಮತ್ತು ಸೂರಿ ಎಂಬಿಬ್ಬರ ಸಂಬಾಷಣೆಯಲ್ಲಿ ಕೆಳದಿ ಅರಸರ ಕೋಶಾಧಿಕಾರಿ ಪುರುಶೋತ್ತಮಯ್ಯರ ವಂಶಸ್ಥರಾದ ನಗರದ ಸುದೀಂದ್ರ ಭಂಡಾರ್ಕರ್ ಸಶೇಷ ಎಂಬ ಐತಿಹಾಸಿಕ ಕಾದಂಬರಿ ಓದಲೇ ಬೇಕಾದ ಪುಸ್ತಕ.

ಕೆಳದಿ ಸಾಮ್ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐತಿಹಾಸಿಕ ಕಾದಂಬರಿ ಸಶೇಷ.
ಕೆಳದಿ ಸಾಮ್ರಾಜ್ಯದ ಅನೇಕ ಸತ್ಯಗಳು ಉದ್ದೇಶ ಪೂರ್ವ ಕವಾಗಿ ಮರೆ ಮಾಚಿದೆ.
 ಕೆಲವು ಇತಿಹಾಸಕಾರರ ದಿನಚರಿ, ರಾಜರ ಆಸ್ಥಾನದ ಕವಿಗಳು ರಚಿಸಿದ ಕೃತಿಗಳು ಮಾತ್ರ ಸಂಶೋದಕರು ಬಳಸುವ ಸತ್ಯ ಆಗಿದೆ.
  ಈ ಸಾಮ್ರಾಜ್ಯದಲ್ಲಿ ಸೇವೆ ಸಲ್ಲಿಸಿದ ಅನೇಕ ಕುಟುಂಬದ ಪಳಯುಳಿಕೆಗಳು ಈಗಲೂ ಈ ಭಾಗದಲ್ಲಿ ಉಳಿದಿದ್ದಾರೆ ಆದರೆ ಅವರ ಕುಟುಂಬದ ಕಥೆ ಹೇಳಲು ನಾಲ್ಕು ನೂರು ವರ್ಷ ಬೇಕಾಯಿತು.
    ಕೆಳದಿ ಅರಸರ ರಾಜಧಾನಿ ಆಗಿದ್ದ ಬಿದನೂರು ನಗರದಲ್ಲಿನ ಸುದೀಂಂದ್ರ ಭಂಡಾರ್ಕರ್ ಕೆಳದಿ ರಾಜರ ಭಂಡಾರ ನಿರ್ವಹಿಸುತ್ತಿದ್ದ ವಂಶದವರು, ರಾಣಿ ಚೆನ್ನಮ್ಮಾಜಿ ಆಳ್ವಿಕೆ ಕಾಲದಲ್ಲಿ ಕೋಶಾಧಿಕಾರಿ ಆಗಿದ್ದ ಪುರುಶೋತ್ತಮಯ್ಯರ ಇತಿಹಾಸ ಸಂಶೋದನೆಯ ಮುಖಾಂತರ ತಮ್ಮ ಮನೆತನದ ಇತಿಹಾಸ ದಾಖಲಿಸುವ ಜೊತೆಗೆ ಈ ಐತಿಹಾಸಿಕ ಕಾದಂಬರಿ ಸಶೇಷದಲ್ಲಿ ಕೆಳದಿ ಇತಿಹಾಸದ ಬೇರೆ ಬೇರೆ ಘಟನಾವಳಿಗಳನ್ನು ತುಂಬಾ ಸುಂದರವಾಗಿ ಶೇಷ ಮತ್ತು ಸೂರಿ ಎಂಬ ಎರೆಡು ಪಾತ್ರಗಳಲ್ಲಿ ಸಂಬಾಷಣೆಯಲ್ಲಿ ಕುತೂಹಲದಿಂದ ಓದಿಸಿ ಕೊಳ್ಳುವಂತ ಕಾದಂಬರಿ ಬರೆದಿದ್ದಾರೆ.
  ಈ ಎರೆಡು ಪಾತ್ರದಲ್ಲಿರುವ ಸೂರಿ ವರ್ತಮಾನದ ಕಾದಂಬರಿ ಕತ೯ರಾದ ಸುದೀಂಂದ್ರ ಭಂಡಾರ್ಕಾರ್ ಆಗಿದ್ದರೆ ಕುಣುಬಿ ಶೇಷ ಭೂತಕಾಲದ ಅಂದರೆ ಕೆಳದಿ ಆಳ್ವಿಕೆಯ 200 ವರ್ಷಗಳ ಎಲ್ಲಾ ಘಟಾನಾವಳಿಗಳನ್ನು ಪ್ರತ್ಯಕ್ಷವಾಗಿ ನೋಡಿದ ಕಾಲಾತೀತ ವ್ಯಕ್ತಿ.
  ವಿಶೇಷ ಅಂದರೆ ಇವರಿಬ್ಬರ ಸಂಬಾಷಣೆ ನಡೆಯುವುದು ಇತಿಹಾಸದ ಕಥೆ ನಡೆದ ಪ್ರದೇಶದ ಕೋಟೆ ಕೊತ್ತಲಗಳ ಈಗಿನ ಪಾಳುಬಿದ್ದ ಆಗಿನ ಘಟನಾವಳಿಗಳ ಸಾಕ್ಷಿಯಾಗಿ ಇರುವ ಪ್ರದೇಶದಲ್ಲಿ.
   ಈ ಕಾದಂಬರಿಯಲ್ಲಿ ಬರುವ ವಿಶೇಷ ಘಟನೆಗಳಲ್ಲಿ ರಾಜ ಸೋಮಶೇಖರ ನಾಯಕರು ಮೃತರಾದಾಗ ರಾಣಿ ಚೆನ್ನಮ್ಮ ಸತಿ ಪದ್ಧತಿ ವಿರೋದಿಸಿ ಬದುಕಿ ರಾಣಿಯಾದದ್ದು.
  ಮೈಸೂರಿನ ಪೂರ್ಣಯ್ಯನವರಿಂದ ಕೆಳದಿ ಸಾಮ್ರಾಜ್ಯ ಸಂಪೂರ್ಣ ನಶಿಸಿ ಹೋಗುವುದು.
   ಆ ಕಾಲದಲ್ಲಿ ನಡೆಯುವ ಪಂಚಾಯಿತಿ ಏನೂ ಅರಿಯದ ಬಾಲೆಗೆ ಅವಳ ತಾಯಿ ನೀಡಿದ ಅಶ್ವಾಸನೆಯಂತೆ ಗೌಡನನ್ನ ಗುಂಡಿಕ್ಕಿ ಕೊಂದ ದೀವರ ಹುಡುಗನಿಗೆ ತಾಳಿ ಕಟ್ಟಿಸಿ ಅದೇ ಕ್ಷಣದಲ್ಲಿ ಗೌಡನಿಗೆ ಗು0ಡಿಕ್ಕಿದ ದೀವರ ಹುಡುಗನಿಗೆ ಪಂಚಾಯಿತಿ ಕಟ್ಟೆಯ ಮರಕ್ಕೆ ನೇಣು ಹಾಕುತ್ತಾರೆ ಪತಿ ಸತ್ತ ಮೇಲೆ ಸತಿ ಸಹಗಮನವನ್ನು ಆ ಬಾಲಕಿಗೆ ಮಾಡಿಸುವ ಪ೦ಚಾಯಿತಿದಾರರ ದೂರ್ತತನ ಜಾತಿಯತೆ ಮನ ಕಲಕುತ್ತದೆ ಈ ನಿಜ ಕಥೆಯ ಸ್ಮಾರಕವಾಗಿ ಅಲ್ಲಿ ನೊಂದ ಅಕ್ಕಮ್ಮಳ ಗುಡಿಯೂ ಅಲ್ಲಿದೆ.
   ವೀರಮ್ಮಾಜಿ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಪೂನಾದಲ್ಲಿ ಆಶ್ರಯ ಪಡೆಯುತ್ತಾಳೆ ನಂತರ ಗದುಗಿನ ಸಮೀಪ ಅವಳ ಸಮಾಧಿ ಇದೆ ಎಂಬ ಸಂಶೋದಕರು ಹೇಳುತ್ತಾರೆ ಇಲ್ಲಿ ವೀರಮ್ಮಾಜಿ ಮತ್ತು ಅವಳ ಮಗನನ್ನು ಕುತಂತ್ರದಿಂದ ಅಪಹರಿಸಿ ಕೋಟೆ ಕೆರೆಯ ಮೊಸಳೆಗೆ ಆಹಾರ ಮಾಡಿದ್ದಾಗಿ ದಾಖಲಿಸಿದ್ದಾರೆ.
  ರಾಣಿ ಚೆನ್ನಮ್ಮಾಜಿ ಆ ಕಾಲದ ಮಠಗಳು ರಾಜ್ಯಬಾರದಲ್ಲಿ ಹಸ್ತಕ್ಷೇಪ ಮಾಡುವುದು ಸಹಿಸದೆ ಸ್ಥಳಿಯ ಆಡಳಿತದ ನಾಡ ಕಚೇರಿಗಳ ಸ್ಥಾಪಿಸುವುದು ಕೆಳದಿ ಅರಸರ ಆಡಳಿತ ಚಾಣಕ್ಷತೆಗೆ ಒಂದು ಉಧಾಹರಣಿ.
    ಆ ಕಾಲದಲ್ಲಿ ನೂರಾರು ಮಠಗಳಿದ್ದು ಅವುಗಳು ಪ್ರಜೆಗಳಿಗೆ ವಿದ್ಯಾಬ್ಯಾಸ ಯುದ್ದ ಕಲೆಯ ತರಬೇತಿ ನೀಡುತ್ತಿದ್ದವು.
  ಕೆಳದಿ ಇತಿಹಾಸದ ದಾಖಲೆ ಕೆಳದಿ ನೃಪವಿಜಯದಲ್ಲಿ ಕೆಳದಿ ರಾಜದಾನಿ ನಗರ ಸಮೀಪದ ರಾಮಚಂದ್ರ ಮಠದ ಉಲ್ಲೇಖವೇ ಇಲ್ಲ.
  ಎನೇ ಆಗಲಿ ಕೆಳದಿ ಸಾಮ್ರಾಜ್ಯ ಪ್ರಾರಂಭವಾಗಿ ನಾಲ್ಕುನೂರು ವರ್ಷದ ನಂತರ ಕೆಳದಿ ಇತಿಹಾಸದ ಕಥೆಯ ಅನೇಕ ಘಟನೆಗಳು ಪುಸ್ತಕವಾಗಿ ಬರುತ್ತಿದೆ ಎನ್ನುವುದು ಸಂತೋಷದ ವಿಚಾರ.
   ಕೆಳದಿ ಇತಿಹಾಸದ ಎಲ್ಲಾ ವಿಚಾರಗಳೂ ಇವರಿಬ್ಬರ ಸಂಭಾಷಣೆಯ ಮೂಲಕ ಕೆಳದಿ ಸಾಮ್ರಾಜ್ಯದ ಇತಿಹಾಸ ಹೇಳುವ ಈ ಐತಿಹಾಸಿಕ ಕಾದಂಬರಿ ಎಲ್ಲರೂ ಓದಬೇಕು.
  ನಾನು ಈಜು ಕಲಿತದ್ದು ಕೆಳದಿ ಅರಸರು ನಿಮಿ೯ಸಿದ ನಗರ ಸಮೀಪದ ದೇವಗಂಗೆ ಈಜು ಕೊಳದಲ್ಲಿ ಮತ್ತು ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಚಂಪಕ ಸರಸ್ಸುವಿನ ಹಿಂದಿನ ಕಥೆ ಇಲ್ಲಿನ ಜನಪದಲ್ಲಿದ್ದದ್ದನ್ನು ಕಾಲ್ಪನಿಕ ಕಾದಂಬರಿ ರೂಪದಲ್ಲಿ ಎರೆಡು ವರ್ಷದ ಹಿಂದೆ ಪ್ರಕಟಿಸಿದ್ದರಿಂದ ಸುದೀಂದ್ರ ಭಂಡಾರ್ಕರ್ ಅವರ ಸಶೇಷ ತುಂಬಾ ಆಸಕ್ತಿಯಿಂದ ಓದಿದೆ.
  ಆಸಕ್ತರು ಈ ಕಾದಂಬರಿಯನ್ನು ಸುದೀಂದ್ರ ಭಂಡಾರ್ಕರ್ ರ  94488 85151 ಈ ಸೆಲ್ ನಂಬರ್ ಗೆ ಸಂಪರ್ಕಿಸಿ ಪಡೆಯಬಹುದು 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...