Skip to main content

Posts

Showing posts from May, 2017

ಹಿರೇಬಾಸ್ಕಾರ ಡ್ಯಾಮ್ ಲಿಂಗನಮಕ್ಕಿ ಡ್ಯಾ೦ನಿ೦ದ ಶರಾವತಿ ನದಿಯಲ್ಲಿ ಮುಳುಗಿದ ಕಥೆ

#ಇದು ಸಾಗರ ತಾಲ್ಲೂಕಿನ ಶ್ರೀ ಗಜಾನನ ಶಮಾ೯ರ ಪೇಸ್‌ಬುಕ್ ಪೋಸ್ಟ್#      ಶರಾವತಿ ನದಿ ನೀರು ಮಳೆ ಇಲ್ಲದೆ ಬತ್ತಿದಾಗ ಕಾಣುವ ಲಿಂಗನಮಕ್ಕಿ ಪೂವ೯ದ ಜಲ ವಿದ್ಯುತ್ ಯೋಜನೆ ಆಗಿದ್ದ ಹಿರೇಬಾಸ್ಕರ ಬಗ್ಗೆ ಅತ್ಯುತ್ತಮ ಮಾಹಿತಿ ಇದಾಗಿದೆ, ಅಲ್ಲಿಗೆ ತಲುಪುವುದು ದುಸ್ತರ ಆದರು ಅಲ್ಲಿಗೆ ಹೋಗಿ ಅಮೂಲ್ಯ ಚಿತ್ರ ತೆಗೆದಿದ್ದಾರೆ ಮುಂದಿನ ಪೀಳಿಗೆಗಾಗಿ ಈ ಲೇಖನ ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೇನೆ.     # ಅರ್ಧ ಶತಮಾನದಿಂದ  ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಆಣೆಕಟ್ಟು.#                              ಅದು ೧೯೩೭-೩೮ ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ  ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ ೪೫ ಮೆಗಾವಾಟ್ಟಿಗೆ ಮುಟ್ಟುವ ಹಂತ.ಶಿಂಷಾದಲ್ಲಿ ೧೭.೨ ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ.ಮಹಾರಾಜರು ನಿವೃತ್ತ ಮುಖ್ಯ ಇಂಜಿನಿಯರ್ ಎಸ್ ಕೆ ಶೇಷಾಚಾರ್ ನೇತೃತ್ವದಲ್ಲಿ ಪವರ್ ಕಮಿಟಿಯೊಂದನ್ನು ನೇಮಕ ಮಾಡಿ, ವಿದ್ಯುತ್ ಕೊರತೆ ಉಂಟಾಗದಂತೆ ಕೈಗೊಳ್ಳಬೇಕಿರುವ ಉಪಕ್ರಮಗಳ ಕುರಿತು ಸಲಹೆ ನೀಡಲು ಸೂಚಿಸಿದಾಗ ಆ ಕಮಿಟಿ ನೀಡಿದ ಸಲಹೆ ಶರಾವತಿಯನ

#ಗೋರಕ್ ಪುರದ ಬಾರಾಪ೦ತದ ಸಂತ ಸೋಮನಾಥ ಪೀರ್ ಬಾವೋಜಿ#

       ಸೋಮನಾಥ ಪೀರ್ ಬಾವೊಜಿ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥದ ಮಠದಲ್ಲಿ ಮಠಾದೀ ಶರಾಗಿದ್ದರು.   ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ  ಉತ್ತರ ಪ್ರದೇಶದ ಗೋರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.     ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ತಾರೆ.     ಬಹುಶಃ 1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಬಂದವರು, ನನ್ನ ಅವರ ಸಂಪಕ೯ 1997ರ ನಂತರದ್ದು, ಶಿವಮೊಗ್ಗ ಜಿಲ್ಲೆಯ ಕುಣುಬಿ ಎಂಬ  ಸಣ್ಣ ಗುಡ್ಡಗಾಡು ಜನಾಂಗದ ಸಂಘಟನೆ, ಅಭಿವೃದ್ಧಿಗಾಗಿ ಓಡಾಡುವಾಗ ಅವರಲ್ಲಿ ಇವರ ಬಗ್ಗೆ, ನಾಥಪಂಥತ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತು.       ನನ್ನ ಬಗ್ಗೆ ಕೂಡ ಸ್ವಾಮಿಗಳು ಆ ಜನರಿಂದ ತಿಳಿದುಕೊಂಡಿದ್ದರು ಹಾಗೆ ಒಮ್ಮೆ ಅವರ ಸಂದಶ೯ನವ

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲಿ ಲಾಡ್೯ ರಿಪ್ಪನ್  ಯೋಜಿತ ರೈಲು ಮಾಗ೯ ವೀಕ್ಷಣೆಗೆ ಬರುವ ಕಾಯ೯ಕ್

ಶಿವಮೊಗ್ಗದ ಅಚ್ಚುತ ರಾವ್ ಲೇಔಟ್ ಕಥೆ

#ಇದು ಶಿವಮೊಗ್ಗದ 1961ರ ರಿಯಲ್ ಎಸ್ಟೇಟ್ ಕಥೆ.#    ಇವರು ಶ್ರೀನಿವಾಸ್ ರಾವ್ ವಯಸ್ಸು 74 ವಷ೯ ಇವರಿಗೆ ಕಣ್ಣಿನ ತೊಂದರೆ ಹುಟ್ಟಿನಿಂದ ಇದೆ, ಇವರ ತಾಯಿ ಇದ್ದಾರೆ 96 ವಷ೯ ಅವರ ಹೆಸರು ಶ್ರೀಮತಿ ಅನ್ನಪೂಣ೯ ಅವರ ಪತಿ ದಿವ೦ಗತ ಶ್ರೀ ಅಚ್ಚುತ ರಾವ್ ಬ್ರಿಟಿಷ್ ಭಾರತೀಯ ಸೈನ್ಯದಲ್ಲಿ ವೆಟರ್ನರಿ ಡಾಕ್ಟರ್ ಆಗಿದ್ದರು, ಸೈನ್ಯದ ಕುದುರೆಗಳ ಆರೈಕೆಗೆ ಇವರು ಅನಿವಾಯ೯.1944ರಲ್ಲಿ ಕಿವಿ ಸಮಸ್ಯೆಯಿ೦ದ ನಿವೃತ್ತರಾದರು, ಪಾಕಿಸ್ತಾನದ ಪೇಶಾವರದಲ್ಲಿ ಬಹಳ ಕಾಲ ಇದ್ದರು.      ಆಚ್ಚುತ್ ರಾವ್ ರವರ ತಂದೆ ಶ್ರೀ ಸೀತಾರಾಮಯ್ಯ ಆಗಿನ ಕಾಲದಲ್ಲಿ ಶಿವಮೊಗ್ಗದ ಖ್ಯಾತ ವಕೀಲರು ಅವರಿಗೆ ಈಗಿನ ನಂಜಪ್ಪ ಆಸ್ಪತ್ರೆ ಎದುರು ಮೂರುವರೆ ಎಕರೆ ವಿಸ್ತಿಣ೯ದ ಮಾವಿನ ತೋಪು ಅದರಲ್ಲಿ ದೊಡ್ಡ ಬಂಗಲೆ ಇತ್ತು.     1960ರಲ್ಲಿ ಈಜಾಗವನ್ನ ನಿವೇಶನವಾಗಿ ಪರಿವತಿ೯ಸಿ 30 X 90 ಅಡಿ ನಿವೇಶನ ಮಾಡಿದರು ಅದೇ ಇವತ್ತಿನ ಅಚ್ಚುತ ರಾವ್ ಲೇ ಔಟ್ ಆಗ ಮಾರಟ ಮಾಡಿದ ನಿವೇಶನದ ಬೆಲೆ 300 ರೂಪಾಯಿ !.      ಅಚ್ಚುತ ರಾವ್ ರಿಗೆ ಐದು ಗಂಡು, ನಾಲ್ಕು ಹೆಣ್ಣು ಮಕ್ಕಳು ಮಕ್ಕಳಿಗೆ ಒಂದೇ ಒಂದು ಸೈಟ್ ಕೊಡದೆ ಮಾರಾಟ ಮಾಡಿದ್ದರು, ಹಣ ಬಂಗಾರ ಸೈಟ್ ಗಿಂತ ಉತ್ತಮ ಎಂಬುದು ಆ ಕಾಲದ ನಂಬಿಕೆ ಆಗಿತ್ತು.     ನಂತರ ಕಾಲಾನಂತರ ಈ ಶ್ರೀನಿವಾಸ ರಾವ್ ಅಡಿಕೆ ಮಂಡಿ ಗುಮಸ್ತರಾಗಿ ಕೆಲಸ ಮಾಡಿದರು ಅವರ ಸಹೋದರರು ಉತ್ತಮ ವ್ಯಾಸಂಗದಿಂದ ದೊಡ್ಡ ಹುದ್ದೆ ಹೊಂದಿದರು, ಶ್ರೀನಿವಾಸ್ ರಾವ್ರರ ಹುಟ್ಟಿನಿಂದ ಬ

ಬೆಂಕಿ ಚೆಂಡಿನ೦ತ ಪೂಯಾ೯ ನಾಯಕ್

ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಪೂರ್ಯಾ ನಾಯಕರು 1995 ರಿಂದ 2000 ಅವದಿಯಲ್ಲಿ ನನ್ನ ಜೊತೆಗಾರರು ಆದರೆ ಅವದಿಗೂ ಮುನ್ನ ಅವರು ದೆಹಲಿಯಲ್ಲಿ ಇಹಲೋಕ ತ್ಯಜಿಸಿದರು, ಅವರು ದೆಹಲಿಗೆ ಹೋಗಿದ್ದು ಮತ್ತು ಅವರ ಸಾವಿನ ರಹಸ್ಯ ಇವತ್ತಿಗೂ ಗೊತ್ತಾಗಲಿಲ್ಲ.    ಮ್ರತ ದೇಹ ದೆಹಲಿಯಿ೦ದ ತರಲು ಆಗಿನ ಮುಖ್ಯಮಂತ್ರಿ ಪಟೇಲರು ವಿಶೇಷ ಸಹಾಯ ಮಾಡಿದ್ದು ಮರೆಯುವಂತಿಲ್ಲ, ಅವತ್ತು ಅಂಜನಾಪುರದ ಅವರ ಮೂಲ ಮನೆಯಲ್ಲಿ ಅಂತಿಮ ದಶ೯ನಕ್ಕೆ 20 ಸಾವಿರಕ್ಕೂ ಅಧಿಕ ಜನ ಸೇರಿದ್ದು ನಾನೇ ಕಣ್ಣಾರೆ ಕಂಡಿದ್ದ ಸತ್ಯ.    ಈಗಲೂ ಇವರ ಅಭಿಮಾನಿಗಳಲ್ಲಿ ಒಂದು ಅನುಮಾನ ಹಾಗೆ ಉಳಿದಿದೆ, ರಾಜಕೀಯವಾಗಿ ಅವರನ್ನ ಕೊಲೆ ಮಾಡಲಾಗಿದೆ ಅಂತ ಆದರೆ ಅದರ ಸತ್ಯಾಸತ್ಯತೆ ದೇವರಿಗೆ ಗೊತ್ತು.    ಶಿಕಾರಿಪುರ ಕ್ಷೇತ್ರದಿಂದ ಶಾಸಕರಾಗಬೇಕೆಂಬ ಅವರ ಬಯಕೆ ಈಡೇರಲಿಲ್ಲ ಆದರೆ ಅವರ ಪತ್ನಿ ಶ್ರೀಮತಿ ಶಾರದಾ ಪೂಯಾ೯ನಾಯಕರು ಶಿವಮೊಗ್ಗ ಗ್ರಾಮಾಂತರದಿಂದ ಜೆ.ಡಿ.ಎಸ್.ಶಾಸಕರಾಗಿರುವುದು ಅವರ ಆತ್ಮಕ್ಕೆ ಖಂಡಿತಾ ನೆಮ್ಮದಿ ತಂದಿರ ಬಹುದು.     ನೇರ, ದಿಟ್ಟ ಸ್ವಭಾವದ ನಾಯಕರು ಆ ಸಂದಭ೯ದಲ್ಲಿ ನಮಗೆಲ್ಲ ನಮ್ಮ ಹೋರಾಟದಲ್ಲಿ ಬೆಂಬಲಿಸುತ್ತಿದ್ದರು, ಯಾರನ್ನಾದರೂ ಎದುರಿಸಬಹುದು ಆದರೆ ನಮ್ಮ ನಮ್ಮ ತಾಲ್ಲೂಕಿನ ಆಡಳಿತರೂಡ ರಾಜಕಾರಣಿಗಳನ್ನ ಎದುರಿಸುವುದು ಕಷ್ಟ ಅಂತ ನನ್ನ ಮತ್ತು ಕಾಗೋಡರ ಸಂಘಷ೯ದಲ್ಲಿ ಎಚ್ಚರಿಸುತ್ತಿದ್ದರು.     ಶಾಲೆಗಳು, ಪೆಟ್ರೋಲ್ ಪಂಪ ,ಜಲ್ಲಿ ಕ್ರಷರ್ ಹೊಂದಿದ್ದ ಅವರು ಶಿವಮೊಗ್