#ಇವತ್ತು ಪ್ರೋಫೆಸರ್ ನಂಜು೦ಡಸ್ವಾಮಿಯವರ 15 ನೇ ಪುಣ್ಯತಿಥಿ# 1999 ರಲ್ಲಿ ನನ್ನ ಮನೆಗೆ ಅವರು ಬಂದದ್ದು ನನಗಿOತ ನನ್ನ ತಂದೆಗೆ ತುಂಬಾ ಸಂತೋಷ ಆಗಿತ್ತು, ಇವರ ಬಾಷಣ ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ಹೋಗುತ್ತಿದ್ದರು, ಇವರ ಜೈಲ್ ಬರೋ ಕರೆಯಿಂದ ಜೈಲಿಗೂ ಹೋಗಿದ್ದರು ಅವತ್ತು ಪ್ರೋಫೆಸರ್ ಗೆ ನಮ್ಮ ತಂದೆ ಹೂವಿನ ಹಾರ ಹಾಕಿದರು ಯಾರಿಂದಲೂ ಹಾರ ಸ್ವೀಕರಿಸದ ಅವರು ನಮ್ಮ ತಂದೆಯ ಅನಾರೋಗ್ಯ, ವಯಸ್ಸು ಮತ್ತು ಅಭಿಮಾನಕ್ಕಾಗಿ ಹಾರ ಹಾಕಿಸಿಕೊಂಡೆ ಎಂದು ನಗು ಬೀರಿದರು. ಒಮ್ಮೆ ಮೈಸೂರಿಗೆ ಹೋಗುವಾಗ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್ ಮತ್ತು ನಾನು ಪ್ರೊಫೆಸರ್ ವಾಸಿಸುತ್ತಿದ್ದ ರಾಜರಾಜೇಶ್ವರಿ ನಗರದ ಅವರ ಮನೆಗೆ ಹೋಗಿದ್ದೆವು, ತುಂಬಾ ಕೆಮ್ಮು ಕಾಡುತ್ತಿತ್ತು ಅವರಿಗೆ ಟೀಪಾಯಿ ಮೇಲೆ ಬೀಡಿ ಇಟ್ಟುಕೊಂಡಿದ್ದರು, ಸಿಗರೇಟು ಬಿಟ್ಟಿರಾ? ಎಂದೆ ಅದಕ್ಕೆ ಅವರು ತುಂಬಾ ಕೆಮ್ಮು ಅದಕ್ಕೆ ಈ ತಂಬಾಕು ಇಲ್ಲದ ನೀಲಗಿರಿ ಸೊಪ್ಪಿನ ಬೀಡಿ ಸೇ ಯುತ್ತಾ ಇದ್ದೇನೆ ಅಂದರು, ವಾಪಾಸು ನಾವು ಹೊರಟಾಗ ನನಗೆ ಒಂದು ಕಟ್ಟು ಬೀಡಿ ಕೊಟ್ಟರು, ನಾನು ದೂಮಪಾನ ಮಾಡುವುದಿಲ್ಲ ಆದರೆ ಅದೇನು ಹೇಳದೆ ಸ್ಟೀಕರಿಸಿದೆ, ಆ ಬೀಡಿ ಹೆಸರು ವದ೯ಮಾನ ಬಿಡಿ ಎಂದು ನೆನಪು. ಅವರ ಬಂಡಿ ಯಾತ್ರೆ (ಕನ್ಯಾಕುಮಾರಿಯಿ೦ದ ಮು೦ಬೈ ವರೆಗೆ) ಸಾಗರ ತಾಲ್ಲೂಕಿಗೆ ಬಂದಾಗ ನನ್ನ ಮನೆ ಯಡೇಹಳ್ಳಿಯಿಂದ ಸ್ವಾಗತಿಸಿ ಸಭೆ ನಡೆಸಿ ಸಾಗರದವರೆಗೆ ನಾನು, ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ