# ಜಾಜ್೯ ನೆನಪು 2#
ಎಲ್ಲಾ ಮಂತ್ರಿಗಳು ದೆಹಲಿಯಲ್ಲಿ ಸಿಕ್ಕರೆ ಜಾಜ್೯ ಮಾತ್ರ ಬೆಳಿಗ್ಗೆ 5 ರಿಂದ 6 ಮಾತ್ರ ಸಿಗುತ್ತಿದ್ದರು.
ಕೇಂದ್ರ ಸಕಾ೯ರದಲ್ಲಿ ಮಂತ್ರಿ ಆದವರನ್ನೆಲ್ಲ ದೆಹಲಿಯಲ್ಲಿ ಭೇಟಿ ಮಾಡಬಹುದು ಆದರೆ ಜಾಜ್೯ರಂತೂ ದೆಹಲಿಯಲ್ಲಿ ಸಿಗುವುದು ತುಂಬಾ ಕಡಿಮೆ.
ಬೆಳಿಗ್ಗೆ 4ಕ್ಕೆ ತಯಾರಾಗುವ ಜಾಜ್೯ ಬೆಳಿಗ್ಗೆ 6ಕ್ಕೆ ಮನೆ ಬಿಟ್ಟು ಬಿಡುತ್ತಿದ್ದರು, ತಮ್ಮ ಹಳೆಯ ಪಿಯಟ್ ಪದ್ಮಿನಿ ಕಾರಿನಲ್ಲಿ ವಿಮಾನ ನಿಲ್ದಾಣ ಸೇರಿ ಅಲ್ಲಿಂದ ವಿಮಾನದಲ್ಲಿ ದೇಶದ ಯಾವುದೋ ಬಾಗ ತಲುಪಿ ಅಲ್ಲಿಂದ ತಡ ರಾತ್ರಿ ದೆಹಲಿ ಸೇರುವುದು ಅವರ ದಿನಚರಿ.
ಇವರ ಪ್ರವಾಸದಲ್ಲಿ ಸಕಾ೯ರಿ ವೆಚ್ಚ ಹೆಚ್ಚಾಗಿ ಶೂನ್ಯದ ಆಸು ಪಾಸು ಆಗಿರುವಂತೆ ಜಾಜ್೯ ನಡೆದು ಕೊಳ್ಳುತ್ತಿದ್ದರು.
ದೂರದ ರಾಜ್ಯ ಪ್ರವಾಸಕ್ಕೆ ಕೇಂದ್ರ ಮಂತ್ರಿ ಆಗಿದ್ದರೂ, ಆಪ್ತ ಸಹಾಯಕರನ್ನು ಕರೆದೊಯ್ತಿರಲಿಲ್ಲ ಎಲ್ಲಾ ಇವರೇ ಸಣ್ಣ ನೋಟ್ ಪುಸ್ತಕದಲ್ಲಿ ಬರೆದುಕೊಂಡು ಬಂದು ಅದನ್ನ ವಿಲೇವಾರಿ ಮಾಡುವುದು ಇವರ ರೂಡಿ.
ಹಾಗಾಗಿ ಜಾಜ್೯ರನ್ನ ಬೇಟಿ ಮಾಡುವವರು ಬೆಳಿಗ್ಗೆ 4ಕ್ಕೆ ದೆಹಲಿಯ ಅವರ ನಿವಾಸದ ಎದರು ಕಾಯುತ್ತಿದ್ದರು.
ಮನೆಗೆ ಬಂದ ಎಲ್ಲರನ್ನ ಮಾತಾಡಿಸಿ ಅವರ ಅಹವಾಲು ಸ್ವೀಕರಿಸಿ ದಿನದ ಮುಂದಿನ ಕೆಲಸಕ್ಕೆ ತೆರಳುತ್ತಿದ್ದರು.
ಪಡೆದ ಪ್ರತಿ ಅಹವಾಲುಗಳನ್ನ ಸ್ವತಃ ಓದಿ ಪರಿಹರಿಸುತ್ತಿದ್ದರು.
ಇದನ್ನ ಭಾಗ 3ರಲ್ಲಿ ಓದಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment