Blog number 2135. ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ, ಇವರ ಸಹಾಯ ಆ ಕುಟುಂಬಕ್ಕೆ ಆ ಕ್ಷಣಕ್ಕೆ ದೊಡ್ಡ ಆಸರೆ.
#ವೃತ್ತಿಯಿಂದ_ನಿವೃತ್ತರಾದರೂ #ಸಮಾಜ_ಸೇವೆ_ಸಹಾಯ_ಮಾಡುವುದರಲ್ಲಿ #ಸಕ್ರಿಯರಾಗಿರುವ_ಬಾಲಕೃಷ್ಣ_ಶ್ರೀನಿವಾಸರು News first Karnataka ದಲ್ಲಿ ಹುಬ್ಬಳ್ಳಿಯ ಅಂಜಲಿ ಸಹೋದರಿ ತನ್ನ ಅಕ್ಕನ ಹತ್ಯೆಯ ನಂತರ ತಾವಿರುವ ಬಾಡಿಗೆ ಮನೆ ತೆರವು ಮಾಡಲು ಮನೆ ಮಾಲಿಕರು ಒತ್ತಾಯ ಮಾಡುತ್ತಿರುವ ಬಗ್ಗೆ ವಿವರಿಸುತ್ತಿದ್ದಾಗ ನೋಡಿದವರ ಹೃದಯ ಹಿಂಡುತ್ತಿತ್ತು. ಇದನ್ನು ನೋಡಿದವರು ಅನೇಕರು ಪ್ರತಿಕ್ರಿಯಿಸುತ್ತಿದ್ದರು ಆಗಲೇ ಒಬ್ಬರ ಪ್ರತಿಕ್ರಿಯೆ ಗಮನ ಸೆಳೆಯಿತು " ನಿಮ್ಮ owner G pay ನಂ ಕೊಡು ಅಮ್ಮ... 3 ತಿಂಗಳ ಬಾಡಿಗೆ ಕಟ್ಟಿ ನಿಮಗೆ ತಿಳಿಸುತ್ತೇನೆ.... ಚಾನಲ್ ನಲ್ಲಿ ನಿಮ್ಮ ಫೋನ್ ನಂಬರ್ ಕೇಳಿದ್ದೇನೆ. My Contact number 9845085667.Bendigere (ಹುಬ್ಬಳ್ಳಿ) ಪೋಲಿಸ್ ಸ್ಟೇಷನ್ ನಾಳೆ A/C ನಂ ತಿಳಿಸುವುದಾಗಿ ತಿಳಿಸಿದ್ದಾರೆ ಅಂತ ಬಾಲಕೃಷ್ಣ ಶ್ರೀನಿವಾಸ್ ಪ್ರತಿಕ್ರಿಯೆ ನೋಡಿ ಮನಸ್ಸು ಹಗುರಾಗಿತ್ತು. ನಾನು ಅವರಿಗೆ "ನಿಮ್ಮ ಸಹೃದಯದ ಮಾತಿಗೆ ಅನಂತಾನಂತ ಧನ್ಯವಾದಗಳು ಈ ತಕ್ಷಣದ ಪರಿಹಾರ ಅವರಿಗೆ ದೊಡ್ಡ ಸಹಾಯ ಆಗಲಿದೆ ಮತ್ತು ಅನೇಕರಿಗೆ ಸಹಾಯ ಮಾಡಲು ಪ್ರೇರಣೆ ಆಗಿದೆ" ಎಂದು ಬರೆದಿದ್ದೆ ಅವರು thanks ದಾಖಲಿಸಿದ್ದರು. ನಂತರ 20 - ಮೇ - 2024ರಂದು ಅವರು "ನಾನು ಗಂಗವ್ವ ಅಂಬಿಗೇರ್ ಅಕೌಂಟ್ ನಂಬರ್ 17061556687 ಗೆ ರೂ 15000 ಜಮ ಮಾಡಿದ್ದೇನೆ ಎಂ...