Blog number 1225. ಇತಿಹಾಸ ಪ್ರಸಿದ್ಧ ಕೆಳದಿ ರಾಜವಂಶಸ್ಥರ ಕುಲದೇವತೆ ಸಾಗರದ ಮಾರಿಕಾಂಭಾ ಚರಿತ್ರೆ, ಸಾಗರ ಪಟ್ಟಣ ನಿಮಾ೯ತೃ ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸ ಆಗಬೇಕಾಗಿದೆ.
#ಸಾಗರದ_ಮಾರಿಕಾಂಭಾ_ದೇವಿ_ಚರಿತ್ರೆ #ಸಾಗರ_ಪಟ್ಟಣ_ನಿರ್ಮಿಸಿದ_ಕೆಳದಿ_ರಾಜ_ವೆಂಕಟಪ್ಪನಾಯಕರಿಂದ_ಆರಾದಿಸಲ್ಪಟ್ಟಿತ್ತು. #ರಾಜ_ವೆಂಕಟಪ್ಪನಾಯಕ_ಯುದ್ಧಕ್ಕೆ_ಹೋಗುವಾಗ_ಕುಲದೇವತೆ_ಆಗಿ_ಸ್ವೀಕರಿಸುತ್ತಾರೆ. #ಯುದ್ದ_ಗೆದ್ದು_ಬಂದಾಗ_ಊರ_ಹೊರಗಿದ್ದ_ದೇವಿಯ_ಹೆಜ್ಜೆ_ಗುರುತು_ಊರ_ಒಳಗೆ_ತಂದು_ಪ್ರತಿಷ್ಟಾಪಿಸಿದರು. #ಈ_ದೇವಾಲಯ_1950ರಲ್ಲಿ_ಪುನಃ_ಊರ_ಹೊರಗೆ_ಸ್ಥಳಾಂತರಿಸುವ_ಪ್ರಯತ್ನ_ಪ್ಲೇಗ್_ರೋಗ_ಹರಡಿದ್ದರಿಂದ_ಕೈಬಿಡಲಾಯಿತು. #ಸಾಗರದ_ಕುಲುಮೆ_ಪಾಪಣ್ಣ_1960ರಲ್ಲಿ_ಎಂಟು_ಸಾವಿರ_ರೂಪಾಯಿ_ವೆಚ್ಚದಲ್ಲಿ_ದೇವಾಲಯ_ಸ್ವರೂಪ_ನೀಡಿದರು. #ಗುಡಿಗಾರ_ಜಡೆಮ೦ಜಪ್ಪರಿಂದ_1989ರಿಂದ_ಶಾಶ್ವತ_ಮರದ_ವಿಗ್ರಹ_ಕೆತ್ತಿಸಲಾಯಿತು. #ಶಿವಮೊಗ್ಗದ_ಪ್ರಖ್ಯಾತ_ಶಿಲ್ಪಿ_ಕಾಶೀನಾಥರಿಂದ_72ಸಾವಿರ_ವೆಚ್ಚದಲ್ಲಿ_ನೂತನ_ಗೋಪುರ_ನಿಮಾ೯ಣವಾಯಿತು. #ಪ್ರಮುಖರಾದ_ನೀಲಪ್ಪ_ಬೋಜಪ್ಪ_ಲಿಂಗಪ್ಪ_ಪುತ್ತೂರಾಯರು_ಜಿ_ಆರ್_ಜಿ_ನಗರ್_ಮುಂತಾದವರು #ಹೊರತಾಲ್ಲೂಕಿನ_ದಾನಿಗಳಿಂದಲೂ_ದೇಣಿಗೆ_ಸಂಗ್ರಹಿಸಿದ್ದರು. #ಉತ್ತರಕನ್ನಡ_ಜಿಲ್ಲೆಯ_ಸಿರ್ಸಿ_ಶಿವಮೊಗ್ಗ_ಜಿಲ್ಲೆಯ_ಸಾಗರದ_ಮಾರಿಕಾಂಭಾ_ಜಾತ್ರೆಗಳು_ರಾಜ್ಯದಲ್ಲೇ_ದೊಡ್ಡ_ಜಾತ್ರೆ. ಜಾತ್ರೆಯಿ೦ದ ಜಾತ್ರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸೇರುವ ಜನಸ್ತೋಮ ಮತ್ತು ಜಾತ್ರಾ ಸಮಿತಿಯ ಆದಾಯ ದುಪ್ಪಟ್ಟು ಮಾಡುವ ಪರಿ ನೋಡಿದರೆ ಮುಂದಿನ ದಿನಗಳಲ್ಲಿ ಇದು ಇನ್ನೂ ದೊಡ್ಡ ಮಟ್ಟದ ಜಾತ್ರೆ ಆಗುವುದು ನಿಸ್ಸಂಶಯ. ...