Skip to main content

Blog number 1225. ಇತಿಹಾಸ ಪ್ರಸಿದ್ಧ ಕೆಳದಿ ರಾಜವಂಶಸ್ಥರ ಕುಲದೇವತೆ ಸಾಗರದ ಮಾರಿಕಾಂಭಾ ಚರಿತ್ರೆ, ಸಾಗರ ಪಟ್ಟಣ ನಿಮಾ೯ತೃ ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸ ಆಗಬೇಕಾಗಿದೆ.

#ಸಾಗರದ_ಮಾರಿಕಾಂಭಾ_ದೇವಿ_ಚರಿತ್ರೆ

#ಸಾಗರ_ಪಟ್ಟಣ_ನಿರ್ಮಿಸಿದ_ಕೆಳದಿ_ರಾಜ_ವೆಂಕಟಪ್ಪನಾಯಕರಿಂದ_ಆರಾದಿಸಲ್ಪಟ್ಟಿತ್ತು.

#ರಾಜ_ವೆಂಕಟಪ್ಪನಾಯಕ_ಯುದ್ಧಕ್ಕೆ_ಹೋಗುವಾಗ_ಕುಲದೇವತೆ_ಆಗಿ_ಸ್ವೀಕರಿಸುತ್ತಾರೆ.

#ಯುದ್ದ_ಗೆದ್ದು_ಬಂದಾಗ_ಊರ_ಹೊರಗಿದ್ದ_ದೇವಿಯ_ಹೆಜ್ಜೆ_ಗುರುತು_ಊರ_ಒಳಗೆ_ತಂದು_ಪ್ರತಿಷ್ಟಾಪಿಸಿದರು.

#ಈ_ದೇವಾಲಯ_1950ರಲ್ಲಿ_ಪುನಃ_ಊರ_ಹೊರಗೆ_ಸ್ಥಳಾಂತರಿಸುವ_ಪ್ರಯತ್ನ_ಪ್ಲೇಗ್_ರೋಗ_ಹರಡಿದ್ದರಿಂದ_ಕೈಬಿಡಲಾಯಿತು.

#ಸಾಗರದ_ಕುಲುಮೆ_ಪಾಪಣ್ಣ_1960ರಲ್ಲಿ_ಎಂಟು_ಸಾವಿರ_ರೂಪಾಯಿ_ವೆಚ್ಚದಲ್ಲಿ_ದೇವಾಲಯ_ಸ್ವರೂಪ_ನೀಡಿದರು.

#ಗುಡಿಗಾರ_ಜಡೆಮ೦ಜಪ್ಪರಿಂದ_1989ರಿಂದ_ಶಾಶ್ವತ_ಮರದ_ವಿಗ್ರಹ_ಕೆತ್ತಿಸಲಾಯಿತು.

#ಶಿವಮೊಗ್ಗದ_ಪ್ರಖ್ಯಾತ_ಶಿಲ್ಪಿ_ಕಾಶೀನಾಥರಿಂದ_72ಸಾವಿರ_ವೆಚ್ಚದಲ್ಲಿ_ನೂತನ_ಗೋಪುರ_ನಿಮಾ೯ಣವಾಯಿತು.

#ಪ್ರಮುಖರಾದ_ನೀಲಪ್ಪ_ಬೋಜಪ್ಪ_ಲಿಂಗಪ್ಪ_ಪುತ್ತೂರಾಯರು_ಜಿ_ಆರ್‌_ಜಿ_ನಗರ್_ಮುಂತಾದವರು
#ಹೊರತಾಲ್ಲೂಕಿನ_ದಾನಿಗಳಿಂದಲೂ_ದೇಣಿಗೆ_ಸಂಗ್ರಹಿಸಿದ್ದರು.

#ಉತ್ತರಕನ್ನಡ_ಜಿಲ್ಲೆಯ_ಸಿರ್ಸಿ_ಶಿವಮೊಗ್ಗ_ಜಿಲ್ಲೆಯ_ಸಾಗರದ_ಮಾರಿಕಾಂಭಾ_ಜಾತ್ರೆಗಳು_ರಾಜ್ಯದಲ್ಲೇ_ದೊಡ್ಡ_ಜಾತ್ರೆ.


  ಜಾತ್ರೆಯಿ೦ದ ಜಾತ್ರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸೇರುವ ಜನಸ್ತೋಮ ಮತ್ತು ಜಾತ್ರಾ ಸಮಿತಿಯ ಆದಾಯ ದುಪ್ಪಟ್ಟು ಮಾಡುವ ಪರಿ ನೋಡಿದರೆ ಮುಂದಿನ ದಿನಗಳಲ್ಲಿ ಇದು ಇನ್ನೂ ದೊಡ್ಡ ಮಟ್ಟದ ಜಾತ್ರೆ ಆಗುವುದು ನಿಸ್ಸಂಶಯ.
   ಈಗಿನ ಸಾಗರ ಪಟ್ಟಣವನ್ನು ತನ್ನ ಅಜ್ಜ ಕೆಳದಿ ರಾಜ ಸದಾಶಿವ ನಾಯಕರ ಸ್ಮರಣಾರ್ಥವಾಗಿ ನಿರ್ಮಿಸಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು (1582-1629) ಆಗ ಅವರು ಈ ಪಟ್ಟಣಕ್ಕೆ ಸದಾಶಿವ ಸಾಗರ ಎಂದೇ ನಾಮಕರಣ ಮಾಡಿದ್ದರು.
   ಈಗ 450 ವರ್ಷಗಳಲ್ಲಿ ಸದಾಶಿವ ಮರೆತು ಸಾಗರ ಅನ್ನುವುದು ಚಾಲ್ತಿಯಲ್ಲಿದೆ.
   ಆಗ ದೇವಿಯ ಜೋಡು ಹೆಜ್ಜೆ ಗುರುತಿನ ಶಿಲಾ ವಿಗ್ರಹ ಊರ ಹೊರಗೆ ಸಣ್ಣ ಗುಡಿಯಲ್ಲಿ ನಿರ್ಮಿಸಲ್ಪಟ್ಟಿತ್ತು ಯುದ್ದಕ್ಕೆ ಹೋಗುವ ಸಂದರ್ಭ ಬಂದಾಗ ರಾಜ ವೆಂಕಟಪ್ಪ ನಾಯಕರು ಈ ದೇವಿಯನ್ನು ಕುಲದೇವತೆಯಾಗಿ ಸ್ವೀಕರಿಸಿ ಯುದ್ದದ ಗೆಲುವಿಗೆ ಪ್ರಾರ್ಥಿಸುತ್ತಾರೆ.
   ಯುದ್ದದಲ್ಲಿ ಗೆದ್ದು ಬಂದಾಗ ಊರ ಹೊರಗಿನ ದೇವಿಯ ಹೆಜ್ಜೆ ಗುರುತಿನ ಶಿಲಾ ವಿಗ್ರಹಗಳನ್ನು ಈಗಿನ ಸ್ಥಳವಾದ ಪಟ್ಟಣದ ಮಧ್ಯಬಾಗದ ಮೂರು ರಸ್ತೆ ಸೇರುವ ಜಾಗದಲ್ಲಿ ರಾಜ ವೆಂಕಟಪ್ಪ ನಾಯಕರು ಸ್ಥಾಪಿಸುತ್ತಾರೆ.
  ಸಾಂಕ್ರಮಿಕ ರೋಗಗಳು ಉಲ್ಭಣಗೊಂಡಾಗೆಲ್ಲ ಜನ ಈ ದೇವಿಯ ಮೊರೆ ಹೋಗುತ್ತಿದ್ದರು.
  ಸಣ್ಣ ಕಲ್ಲಿನ ಗುಡಿ ಆಗಿದ್ದ ಈ ದೇವಿ ದೇವಾಲಯ 1950 ರಲ್ಲಿ ಸಾಗರದ ಪುರ ಪ್ರಮುಖರು ಸೇರಿ ಪುನಃ ಊರ ಹೊರಗೆ ದೇವಿ ದೇವಸ್ಥಾನ ಸ್ಥಳಾಂತರಿಸುವ ಯೋಚನೆ ಮಾಡುವಾಗಲೇ ಪ್ಲೇಗ್ ರೋಗ ಉಲ್ಬಣಿಸಿದ್ದರಿಂದ ಈ ಯೋಜನೆ ಕೈಬಿಡಲಾಯಿತು.
  1960 ರಲ್ಲಿ ಸಾಗರದ ಕುಲುಮೆ ಪಾಪಣ್ಣ ಎಂಬುವವರು 8 ಸಾವಿರ ರೂಪಾಯಿ ವೆಚ್ಚದಲ್ಲಿ 8 ಸ್ಥಂಭಗಳ ಮೇಲೆ ಛಾವಣಿ ನಿರ್ಮಿಸಿ ಮೊದಲ ಭಾರಿಗೆ ದೇವಾಲಯದ ರೂಪ ಕೊಟ್ಟರು.
  ರಲ್ಲಿ 72 ಸಾವಿರ ವಿನಿಯೋಗಿಸಿ ಶಿವಮೊಗ್ಗದ ಶಿಲ್ಪಿ ಕಾಶೀನಾಥರಿಂದ ನೂತನ ರಥ ಆಕೃತಿಯ ಬೃಹತ್ ಗೋಪುರದ ಸಾಗರದ ಮಾರಿಕಾಂಭಾದೇವಾಲಯ ನಿರ್ಮಾಣವಾಗಿದೆ ಈ ಸಂದರ್ಭದಲ್ಲಿ ಹಿರಿಯರಾದ S. K. ನೀಲಪ್ಪನವರು, ಮಡಿವಾಳ ಸಮಾಜದ ಬೋಜಪ್ಪನವರು, ಕುರುಬರ ಸಮಾಜದ ಲಿಂಗಪ್ಪನವರು, ಉಧ್ಯಮಿ ಪುತ್ತೂರಾಯರು,ಹೋರಾಟಗಾರ ಜಿ.ಆರ್.ಜಿ.ನಗರ್ ಮುಂತಾದವರ ಸೇವೆ ಅವಿಸ್ಮರಣಿಯ ಈ ಗೋಪುರ ನಿರ್ಮಾಣಕ್ಕೆ ಹೊರ ತಾಲ್ಲೂಕುಗಳ ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಲಾಗಿತ್ತು.
  1989 ರಲ್ಲಿ ಪ್ರತಿ ಜಾತ್ರೆಗೆ ಹೊಸದಾಗಿ ಮರದಿಂದ ದೇವಿ ವಿಗ್ರಹ ನಿರ್ಮಿಸುವ ಪದ್ಧತಿ ಬದಲಾಯಿಸಿ ಖಾಯಂ ಮರದ ಮರು ಜೋಡಿಸುವ 14 ಅಡಿ ಎತ್ತರದ ಸುಂದರ ವಿಗ್ರಹವನ್ನು ಆಗಿನ ಪ್ರಖ್ಯಾತ ಗುಡಿಗಾರರಾದ ಜಡೆ ಅಣ್ಣಪ್ಪ ಗುಡಿಗಾರರಿಂದ ನಿರ್ಮಿಸಲಾಗಿದ್ದು 33 ವರ್ಷದಿಂದ (2023ರ ಜಾತ್ರೆಗೆ) ಪ್ರತಿ ಜಾತ್ರೆಗೆ ಬಳಸಲಾಗುತ್ತಿದೆ.
  1949 ರಲ್ಲಿ ಒಂದು ದಿನದ ಮಾರಿಕಾಂಬಾ ಜಾತ್ರೆ ನಂತರ 3 ದಿನದ ಜಾತ್ರೆ, ನಂತರ 5 ದಿನದ ಜಾತ್ರೆ, 7 ದಿನದ ಜಾತ್ರೆ ಆಗಿ ಈಗ 9 ದಿನದ ಜಾತ್ರೆಯಾಗಿದೆ.
   ಕೆಳದಿ ರಾಜವಂಶದ ಕುಲದೇವತೆ ಆಗಿದ್ದ ಸಾಗರದ ಮಾರಿಕಾಂಬಾ ದೇವಿಯ ಚರಿತ್ರೆ ಇದಾಗಿದೆ.
  ಸಾಗರ ಪಟ್ಟಣದ ನಿರ್ಮಾತೃ, ರಾಜವಂಶದ ಕುಲದೇವತೆಯಾಗಿ ಮಾರಿಕಾಂಬಾ ದೇವಿ ಸ್ವೀಕರಿಸಿ ಯುದ್ದದಲ್ಲಿ ಗೆದ್ದು ಬಂದು ಊರ ಹೊರಗಿನ ದೇವಿಯ ಶಿಲಾ ಪಾದುಕೆಗಳ ಗುಡಿ ಸಾಗರದ ಈಗಿನ ಮೂರು ರಸ್ತೆ ಸೇರುವ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಿದ ಕೆಳದಿ ರಾಜ ವೆಂಕಟಪ್ಪ ನಾಯಕರು ಮಾತ್ರ ಮರೆತೇ ಹೋಗಿರುವುದು ವಿಪರ್ಯಾಸವೇ ಸರಿ, ಕೆಳದಿ ರಾಜ ವೆಂಕಟಪ್ಪ ನಾಯಕರ ಸ್ಮರಣೆಯ ಸ್ಮಾರಕವನ್ನು ಮಾರಿಕಾಂಬಾ ಸಮಿತಿ ನಿರ್ಮಿಸಿ ಅವರ ನೆನಪು ಸ್ಮರಣೀಯ ಮಾಡಬಹುದಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ