Skip to main content

Blog number 1262. ಸಾಗರ ತಾಲ್ಲೂಕ್ ಕೃಷಿಕ ಸಮಾಜದ ಉದ್ದೇಶವನ್ನೆ ಬುಡಮೇಲು ಮಾಡುವ ಸದಾ ಅವರ ಗುಂಪು ಆಡಳಿತ ಮಂಡಳಿಯಲ್ಲಿರುವಂತೆ, ಬೇರಾರು ಹೊಸ ರೈತರು ಕೃಷಿಕ ಸಮಾಜದ ಸದಸ್ಯರಾಗದಂತೆ ನೋಡಿಕೊಳ್ಳುವ ಪಟ್ಟಭದ್ರರಿದ್ದಾರೆ ಈಗ ಸಾಗರ ತಾಲ್ಲೂಕಿನಲ್ಲಿ ಕೃಷಿ ವಿಶ್ವವಿದ್ಯಾಲಯ ಕಾಯಾ೯ರಂಭ ಮಾಡಿದೆ.

# ಸಾಗರ ತಾಲ್ಲೂಕಿನ ಕೃಷಿಕ ಸಮಾಜಕ್ಕೆ ಹೊಸದಾಗಿ ಸದಸ್ಯರಾಗದಂತೆ ನೋಡಿಕೊಂಡು ಅವರವರೇ ಅವಿರೋಧವಾಗಿ ಆಯ್ಕೆ ಆಗುವ ಅಯೋಗ್ಯ ಪದ್ದತಿ.
    
  ಸಾಗರ ತಾಲ್ಲೂಕಿನ ಕೃಷಿ ಇಲಾಖೆ ಅವ್ಯವಹಾರ ಬೆಳಕಿಗೆ ತಂದು ಆಗಿನ ಕೃಷಿ ಸಚಿವರಾದ ಬೈರೇ ಗೌಡರನ್ನ ಸ್ಥಳ ಪರಿಶೀಲನೆಗೆ ಕರೆತಂದು 8 ಜನ ಕೃಷಿ ಇಲಾಖೆ ಅಧಿಕಾರಿಗಳನ್ನ ಜೈಲಿಗೆ ಕಳಿಸಿದ ಹೋರಾಟದಿಂದ ಮುಂದಿನ ದಿನದಲ್ಲಿ ಪಡಬಾರದಷ್ಟು ಕಷ್ಟ ಪ್ರತಿಫಲವಾಗಿ ಪಡೆದೆ.
 ಆ ದಿನದಲ್ಲಿ ಸಾಗರ ತಾಲ್ಲೂಕ್ ಕೃಷಿಕ ಸಮಾಜದ ಅಧ್ಯಕ್ಷರಾದವರೆ ಈಗಲೂ ಅದ್ಯಕ್ಷರು ಅಂದರೆ ಸುಮಾರು 23 ವಷ೯ದಿಂದ ಒಬ್ಬರೆ ಹೇಗೆ ಅಧ್ಯಕ್ಷರು? ಎಂದು ಕೇಳಿದರೆ ಕಾಲ ಕಾಲಕ್ಕೆ ಚುನಾವಣೆ ನಡೆದು ಆಯ್ಕೆ ಆಗಿದ್ದಾರೆ ಎಂಬ ಸಿದ್ದ ಉತ್ತರ ಇದೆ ಆದರೆ ಸುಮಾರು 50 ವಷ೯ದಿಂದ ಮತದಾರರ ಪಟ್ಟಿ ಪರಿಷ್ಕೃತ ಆಗಿಲ್ಲ.
  ಸಾಗರ ತಾಲ್ಲೂಕಿನಲ್ಲಿ ಅನೇಕ ಪ್ರಗತಿ ಪರ ರೈತರಿದ್ದಾರೆ, ಹೊಸ ಪ್ರಯೋಗ ಮಾಡಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾದನೆ ಮಾಡಿದ್ದಾರೆ ಅವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿರ ಬಹುದು ಆದರೆ 230 ಜನರ ಹಳೆ ಪಟ್ಟಿ ಇಟ್ಟುಕೊಂಡಿದ್ದಾರೆ ಇದರಲ್ಲಿ ಅನೇಕರು ಮೃತ ಪಟ್ಟಿದ್ದಾರೆ.
  ಕೃಷಿಕ ಸಮಾಜ ಕೃಷಿ ಇಲಾಖೆಗೆ ಸಮಾನಾ೦ತರವಾಗಿ ಕಾಯ೯ ನಿವ೯ಹಿಸುವ ಜನಪ್ರತಿನಿಧಿ ಸಂಸ್ಥೆ, ತಾಲ್ಲೂಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿದೆ ಮಾಸಿಕ ಪತ್ರಿಕೆ ಇದೆ, ತಾಲ್ಲೂಕ್ ಪಂಚಾಯತ್ ನಂತೆಯೆ ಕೃಷಿ ಇಲಾಖೆ ಪರಿಶೀಲನೆ ಸಲಹೆ ನೀಡಬಹುದಾದ ಈ ಸಂಸ್ಥೆ ರಾಜ್ಯದ ಉತ್ತರ ಕನಾ೯ಟಕ ಬಾಗದಲ್ಲಿ, ಮೈಸೂರು, ಮಂಡ್ಯ, ಹಾಸನ ಮತ್ತು ಕೋಲಾರ ಭಾಗದಲ್ಲಿ ಕ್ರಿಯಾ ಶೀಲವಾಗಿದೆ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಸಾಗರ ತಾಲ್ಲೂಕಿನಲ್ಲಿ ಎಕ್ಕುಟ್ಟಿದೆ.
  ಇಡೀ ರಾಜ್ಯದಲ್ಲೇ ಸಾಗರ ತಾಲ್ಲೂಕ್ನಲ್ಲಿ ನ ಕೃಷಿ ಇಲಾಖೆ ಅವ್ಯವಹಾರದ ಬಗ್ಗೆ ಸಾಗರದ ಕೃಷಿ ಸಮಾಜ ಇವತ್ತಿನವರೆಗೆ ಚಕಾರ ಎತ್ತಿಲ್ಲ ಹಾಗಾಗಿ ಕಳೆದ ಬಾರಿ ಇದನ್ನ ಸರಿ ಮಾಡಲು ಹೋದ ನನ್ನ ಅನುಭವ  ನೀವ್ಯಾರಾದರು ಮು೦ದಿನ ದಿನದಲ್ಲಿ ಇಲ್ಲಿ ಸರಿ ಮಾಡಲು ಪ್ರಯತ್ನ ಮಾಡೋದಾದರೆ ಅನುಕೂಲವಾಗಲಿ ಅಂತ ಇಲ್ಲಿ ನನ್ನ ಅನುಭವ ಹಂಚಿಕೊ೦ಡಿದ್ದೇನೆ.
  ಕಳೆದ ಅವಧಿಯಲ್ಲಿ ಕೃಷಿಕ ಸಮಾಜದ ಚುನಾವಣೆ ಘೋಷಣೆ ಆಗಿತ್ತು ಇದು ಕೃಷಿಕ ಸಮಾಜದ ಪತ್ರಿಕೆಯಲ್ಲಿ ಮಾತ್ರ ಇತ್ತು ಸ್ಥಳಿಯ ಪತ್ರಿಕೆಯಲ್ಲಿ ಚುನಾವಣಾ ಅಧಿಕಾರಿ ಆಗಿದ್ದ ಸಹಾಯಕ ನಿದೇ೯ಶಕರು ಪ್ರಕಟನೆ ಮಾಡಬಹುದಿತ್ತು ಮಾಡಿರಲಿಲ್ಲ ಅವತ್ತೆ ಅಂತಿಮ ದಿನ ಅಜಿ೯ ಹಾಕಲು ನಾನು ಹೋದಾಗ 3 ಗಂಟೆ ಆಗಿತ್ತು 5 ಗಂಟೆಗೆ ಸಮಯ ಮುಗಿಯುತ್ತಿತ್ತು, ಅಜಿ೯ ಪಾರಂ ಪಡೆದು ಭತಿ೯ ಮಾಡಿದ ನಂತರ ಅನುಮೊದಕರು ಬೇಕಿತ್ತು ಅಲ್ಲಿದ್ದವರಾರು ಒಪ್ಪಲಿಲ್ಲ ಕಾರಣ ಅವಿರೋಧ ಆಯ್ಕೆಗಾಗಿ ಅವರೆಲ್ಲ ನನ್ನ ಅಜಿ೯ಸಲ್ಲಿಕೆ ಆದರೆ ಚುನಾವಣೆ ಮಾಡಬೇಕಲ್ಲ ಅಂತ, ಸರಿ ಅಂತ ಸೀದಾ ಒಡನಾಳದ ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪರ ಸೂಚಕರ ಸಹಿ ಪಡೆದೆ, ಅವರು ಕೃಷಿಕ ಸಮಾಜದ ಹಿರಿಯ ಸದಸ್ಯರಾದರೂ ಅವರಿಗೆ ಒಮ್ಮೆಯೂ ಯಾವುದೇ ಮಾಹಿತಿ ಬಂದಿರಲಿಲ್ಲ.
   ನನ್ನ ಅಜಿ೯ಯಿ೦ದ ಖಾಯಂ ಪದಾದಿಕಾರಿಗಳಿಗೆ ಇರಸು ಮುರುಸು ಆಯಿತು ಮುಂದಿನ  ನಾಮಪತ್ರ ವಾಪಾಸು ಪಡೆಯವ ದಿನ ಆಸಲಿಯತ್ತು ಪ್ರಾರಂಭವಾಯಿತು ನನ್ನ ಆಪ್ತರಿಂದ ಪೋನ್ ಮಾಡಿಸಿದರು ನೀವು ಗೆಲ್ಲಲು ಸಾಧ್ಯವಿಲ್ಲ ಯಾಕೆಂದರೆ 230 ಮತದಾರಲ್ಲಿ 50 ಜನ ಬೇರೆ ಜಾತಿಯವರು ಇಲ್ಲ ಅವರೂ ಕೂಡ ಬದುಕಿಲ್ಲ ... ಉಳಿದವರಲ್ಲಿ ಎಲ್ಲರೂ ಬ್ರಾಹಮಣರು ಹಾಗೇ, ಹೀಗೆ ಅಂತ.
   ಅವರಿಗೆಲ್ಲ ನಾನು ನೀಡಿದ ಸಮಜಾಯಿಸಿ ಏನೇoದರೆ ನಾನು ಈ ಚುನಾವಣೆ ಗೆಲ್ಲಲು ಸ್ಪದೆ೯ ಅಲ್ಲ ಜಡ್ಡುಗಟ್ಟಿದ ಈ ಇಲಾಖೆ ವ್ಯಾಪ್ತಿಯ ಕೃಷಿಕ ಸಮಾಜ ಇದೇ ಅಂತ ಗೊತ್ತಾಗಲಿ.. ಮುಂದೆ ಹೆಚ್ಚು ಜನ ಸದಸ್ಯರಾಗಲಿ ಅಂತ ಅಂದೆ.
  ನಾಮಪತ್ರ ವಾಪಾಸು ಪಡೆಯೋ ದಿನ ನಾವೆಲ್ಲ ಸೇರಿ ಒಂದು ತೀಮಾ೯ನಕ್ಕೆ ಬರೋಣ ಅಂತ ಆಗಿನ ಸಾಗರ ಪಿ.ಎಲ್.ಡಿ.ಅಧ್ಯಕ್ಷರಾಗಿದ್ದ ಸುಬ್ರಾವ್, ವರದ ಮೂಲದ ಶ್ರೀದರ್, ಕಣ್ಣುರು ಟಾಕಪ್ಪಾ ಕರೆದಿದ್ದರು, ಅಲ್ಲಿ RSS ಮೂಖಂಡರು ಅಂತ ಒಬ್ಬರು ಅವರ ಸಲಹೆ ಸಹಕಾರದಲ್ಲಿ ಮುಂದುವರಿಯೋಣ ಅಂದರು.
   ಅವರು ಒಬ್ಬರಾದ ಮೇಲೆ ಒಬ್ಬರನ್ನ ಕರೆದು ಅಭಿಪ್ರಾಯ ತಿಳಿದರು ನಾನು ನಾಮಪತ್ರ ವಾಪಾಸು ಪಡೆಯುವುದಿಲ್ಲ ಚುನಾವಣೆ ಆಗಲಿ ಅಂದೆ ಪುನಃ ಸುಬ್ರಾವ್ ಬದಿಗೆ ಕರೆದೊಯ್ದವರು ಪುನಃ ಅದೇ ರಾಗ ಗೆಲ್ಲಲು ಸಾಧ್ಯವೇ ಇಲ್ಲ ಒಂದೇ ಜಾತಿಯ ಮತದಾರರಿದ್ದಾರೆ, ನೀವು ಜಿಲ್ಲಾ ಪಂಚಾಯತ್ ಸದಸ್ಯರಾದವರು, ಶಾಸಕ ಚುನಾವಣೆಗೆ ನಿಂತವರು ನೀವು ಈ ಸಣ್ಣ ಚುನಾವಣೆಗೆ ನಿಂತು ಸೋಲಬಾರದಾಗಿ ನನ್ನ ಮೇಲಿನ ಕಾಳಜಿ ವ್ಯಕ್ತಪಡಿಸಿದರು.
   ನಾನು ಅವರಿಗೆ ನಿಂತ ನೀರಾದ ಈ ವ್ಯವಸ್ಥೆ ಸ್ವಚ್ಚವಾಗಲು ಈ ಚುನಾವಣೆ ಅನಿವಾಯ೯ ಅಂದೆ, ಆಗ ವರದಾ ಮೂಲದ ಶ್ರೀದರ್ ಚುನಾವಣೆ ಆದರೆ ನಮ್ಮ ಜಾತಿ ಓಟು ಜಾಸ್ತಿ ಇದೆ ನೋಡೇ ಬಿಡೋಣ ಎಂಬಂತೆ ದಮಕಿಯ೦ತ ಮಾತು ನನಗೆ ಕೇಳಲಿ ಅಂತ ಮಾತಾಡುತ್ತಿದ್ದರು.
   ಇಂತವರೆಲ್ಲ ಸೇರಿ ತಾಲ್ಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಚುನಾವಣೆ ಬೇಡ ಎಂಬ ಪೋಸು ನೀಡಿ ಒಂದಲ್ಲ ಒಂದು ಸಂಸ್ಥೆಗೆ ಅವಿರೋದ ಆಯ್ಕೆ ಆಗುವುದಷ್ಟೆ ಇವರ ಉದ್ದೇಶ.
   ಸದರಿ ಸಂಘ ಸಂಸ್ಥೆ ವಿಸ್ತರಿಸುವ ಉದ್ದೇಶ ಮಾತ್ರ ಇರುವುದಿಲ್ಲ, ತಮ್ಮ ಬಿಟ್ಟು ಬೇರೆಯವರು ಬರಬಾರದು, ಇದೇ ರೀತಿ ಡಿಸಿಸಿ ಬ್ಯಾಂಕ್, ಹಾಲು ಉತ್ಪಾದಕರ ಸಂಘ, ಪಿಎಲ್ಡಿ ಬ್ಯಾಂಕ್, ಸಹಕಾರಿ ಸಂಘ ಕೂಡ ಆದರೆ ಅಲ್ಲಿ ಸಾಲ ಸೌಲಭ್ಯ ನೀಡಲು ಸದಸ್ಯರ ನೋಂದಾವಣೆ ಕಡ್ಡಾಯ ಆದರೆ ಇಲ್ಲಿ ಯಾವುದೇ ಕಾರಣಕ್ಕೂ ಹೊಸ ನೊಂದಾವಣೆ ಆಗದಂತೆ ನೋಡಿಕೊಳ್ಳುತ್ತಾರೆ ಅವರಿಗೆ ಕೃಷಿ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ಸಹಕರಿಸುತ್ತಾರೆ.
  ನಂತರ ಚುನಾವಣೆಯಾಗಬಾರದು ಆದರೆ ಅವರ ಹುನಾರಗಳು ಜಗಜ್ಜಾಹಿರವಾಗಿ ಇತರ ರೈತರು ನೂರಾರು ಸಂಖ್ಯೆಯಲ್ಲಿ ಕೃಷಿಕ ಸಮಾಜದ ಸದಸ್ಯರಾದರೆ ತಮ್ಮ ಬೇಳೆ ಬೇಯುವುದಿಲ್ಲ ಅಂತ ನನ್ನನ್ನ ಅವಿರೋಧ ಆಯ್ಕ ಮಾಡಲು ಅವರಲ್ಲೇ ಯಾರೋ ಒಬ್ಬರ ನಾಮ ಪತ್ರ ವಾಪಾಸು ಮಾಡಿಸಿದರು.
   ಅದಿಕಾರಿ ವಗ೯ದಲ್ಲಿ ಅನೇಕರು ನಾನು ಅಲ್ಲಿ ಬಂದರೆ ಮುಂದೆ ತೊಂದರೆ ಅಂತ ಅವರೆಲ್ಲರ ಹತ್ತಿರ ಮಾತಾಡುತ್ತಿದ್ದರಂತ ನನ್ನ ಶಿಷ್ಯರು ಕೇಳಿಸಿ ಕೊಂಡವರು ಹೇಳಿದರು.
   ಮುಂದೆ ಅಧ್ಯಕ್ಷರಾಗಿ ಎಂ.ಕೆ.ತಿಮ್ಮಪ್ಪ ಪುನಃ  ಅವಿರೋದವಾಗಿ ಆಯ್ಕೆ ಆದದ್ದು ತಿಳಿಯಿತು ಈ ವರೆಗೆ ನಾನು ಸದರಿ ಕಚೇರಿಗೆ ಹೋಗಲಿಲ್ಲ, ಕೃಷಿ ಇಲಾಖೆ ಹೆಚ್ಚಿನ ಜನರಿಗೆ ಒಂದಲ್ಲ ಒಂದು ಯೋಜನೆಯಲ್ಲಿ ಸಹಾಯಧನ ನೀಡುತ್ತದೆ ಅಂತ ಹ ಫಲಾನುಭವಿಗಳನ್ನು ಕಡ್ದಾಯವಾಗಿ ಸದಸ್ಯರನ್ನ ಮಾಡಲು ಒತ್ತಾಯಿಸಿದೆ.       ತಾಲ್ಲೂಕ್ ಪಂಚಾಯತ್ ಅಧ್ಯಕ್ಷರಿಗೆ ಪತ್ರ ಬರೆದೆ ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.
  ಮತ್ತೆ ಚುನಾವಣೆ ಬರುತ್ತೆ ಮತ್ತೆ ಇದೇ ಪ್ರಸಂಗದ ಪುನರಾವತ೯ನೆ ಇನ್ನು ದೇಶ ಉದ್ದಾರದ ಉದ್ದುದ್ದ ಬಾಷಣ.
  ಸಾಗರ ತಾಲ್ಲೂಕ್ ನ ಅಭಿವೃದ್ಧಿ ಕಾಳಜಿ ಇರುವ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಕಾಯ೯ಕತ೯ರು ಸಾಗರದ ಕೃಷಿ ಇಲಾಖೆಗೆ ಹೋಗಿ ಕೃಷಿಕ ಸಮಾಜದ ಸದಸ್ಯರಾಗಿ ಹೊಸ ಬದಲಾವಣೆಗೆ ಕಾರಣಕತ೯ರಾಗಬಹುದು.
   ಈಗಲೂ ಅದೇ ಹಳೆಯ 230 ಸದಸ್ಯರ ಕೃಷಿಕ ಸಮಾಜದ ಮತದಾರರ ಪಟ್ಟಿಯ ಆದಾರದಲ್ಲಿ ಆರು ವರ್ಷದ ಅವದಿಗೆ ಅಧ್ಯಕ್ಷರು ಪದಾಧಿಕಾರಿಗಳು ಆಗುತ್ತಾರೆ ಅವರವರೇ ಕೃಷಿ ಉದ್ದೇಶದ ಪ್ರವಾಸ ಮಾಡುತ್ತಾರೆ ಅವರಿಗೇ ಎಲ್ಲಾ ಸರ್ಕಾರಿ ಸವಲತ್ತು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಕೃಷಿ ಇಲಾಖಾ ಅಧಿಕಾರಿಗಳದ್ದು.
   ನಮ್ಮ ತಾಲ್ಲೂಕಿನಲ್ಲೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕಾಯಾ೯ರಂಭವೂ ಆಗಿದೆ ಆದರೆ ಕೃಷಿಕ್ ಸಮಾಜಕ್ಕೆ ಹೊಸ ರೈತರನ್ನು ಸದಸ್ಯರನ್ನಾಗಿ ಮಾತ್ರ ಮಾಡುವುದಿಲ್ಲ.
 

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ