Skip to main content

Blog number 1216. ನಮ್ಮ ತಾಲ್ಲೂಕಿನ ಸಜ್ಜನ ರಂಗಕರ್ಮಿ , ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ರಂಗಾಯಣದ ಮಾಜಿ ನಿರ್ದೇಶಕರು ಆದ ಚಿದಂಬರ್ ರಾವ್ ಜಂಬೆ ಆಗಮನ ನನಗೆ ಅತ್ಯಂತ ಖುಷಿ ಕೊಟ್ಟ ಕ್ಷಣ .

#ನಿನ್ನೆ_ಸಂಜೆ_ರಂಗಾಯಣದ_ಮಾಜಿ_ನಿರ್ಧೇಶಕರಾದ_ಜಂಬೆ_ಬಂದಿದ್ದರು.

#ಅವರ_ಬೇಟಿ_ನನಗೆ_ತುಂಬಾ_ಸಂತೋಷ_ತಂದಿತು.

#ದೆಹಲಿಯ_NSD_ವ್ಯಾಸಂಗ

#ಹೆಗ್ಗೋಡಿನ_ನೀನಾಸಂ_ಪ್ರಾಂಶುಪಾಲರು

#ರಂಗಾಯಣದ_ನಿರ್ದೇಶಕರು

#ಕೇಂದ್ರದ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_ವಿಜೇತರು

#ಸಿದ್ದಿ_ಬುಡಕಟ್ಟು_ಜನಾಂಗದ_ಸಿದ್ಧಿ_ಕಲಾವಿದರ_ಹೊರಜಗತ್ತಿಗೆ_ಪರಿಚಯಿಸಿದವರು.

#ಚಿದಂಬರ್_ರಾವ್_ಜ೦ಬೆ_ಶಿವಮೊಗ್ಗ_ಜಿಲ್ಲೆಯ_ನಮ್ಮ_ಸಾಗರ_ತಾಲ್ಲೂಕಿನವರು_ಎಂಬುದು_ನನಗೆ_ಹೆಮ್ಮೆ.

    ನಿನ್ನೆ ಸಂಜೆ ಚಿದಂಬರ್ ರಾವ್ ಜಂಬೆ ಅವರು ಶಿವಮೊಗ್ಗದಿಂದ ಅವರ ಬಾವ ನಿವೃತ್ತ ಭಾರತೀಯ ಸೈನ್ಯದ ಲಕ್ಷ್ಮೀನಾರಾಯಣರ ಜೊತೆ ಬಂದಿದ್ದರು.
  ಸುಮಾರು 25 ವರ್ಷದ ಹಿಂದೆ ಅಂದಾಜು 1997ರಲ್ಲಿ ಹೆಗ್ಗೋಡಿನಲ್ಲಿ ಚರಕ ಸಂಸ್ಥೆಯ ಪ್ರಸನ್ನ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಬಿಸಿದ್ದರು ಕಾರಣ ಅವರ ಮತ್ತು ನೀನಾಸಂ ಕೆ. ವಿ.ಸುಬ್ಬಣ್ಣ ಅವರ ನಡುವೆಯ ವ್ಯವಹಾರಿಕ ಬಿನ್ನಾಭಿಪ್ರಾಯ, ಇನ್ನಾವುದೋ ಚೆಕ್ ಕೇಸ್ ಅಂತಲೂ ಇನ್ನೂ ಕೆಲವರು ಪ್ರಸನ್ನರ ಪರ ಇರುವವರು ಕೆ.ವಿ.ಸುಬ್ಬಣ್ಣನವರ ಅಸಹಕಾರ ಮುಂತಾದ ಸುದ್ದಿಗಳಾಗಿತ್ತು.
  ಆಗ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಪಕ್ಷೇತರರಾಗಿ ಲೋಕಸಭಾ ಸದಸ್ಯರಾಗಿದ್ದರು ಅವರ ಚುನಾವಣೆಗೆ ಮತ್ತಿಕೊಪ್ಪದ ಸಹಕಾರಿ ಬಂದು ಹರನಾಥ ರಾಯರ ನೇತೃತ್ವವಾಗಿತ್ತು ಆ ಕಾರಣದಿಂದ ಒಂದು ಸಂಜೆ ಅವರು ನನ್ನ ಕರೆದುಕೊಂಡು ಉಪವಾಸ ಸತ್ಯಾಗ್ರಹಿ ಚರಕ ಪ್ರಸನ್ನರ ಬೇಟಿಗೆ ಹೋಗಿದ್ದರು.
   ಅವರ ಅಭಿಪ್ರಾಯಗಳ ಕೇಳಿ ನಂತರ ಹೋಗಿದ್ದು ಆಗ ನೀನಾಸಂ ಪ್ರಾಂಶುಪಾಲರಾದ ಚೆದ೦ಬರ್ ರಾವ್ ಜಂಬೆ ಮನೆಗೆ ಹೋಗಿದ್ದೆವು ಎಲ್ಲರ ಉದ್ದೇಶ ಚರಕ ಪ್ರಸನ್ನರ ಉಪವಾಸ ಅಂತ್ಯಗೊಳಿಸಿ ಸುಖಾಂತ್ಯಗೊಳಿಸುವ ಸದುದ್ದೇಶವಾಗಿತ್ತು.
   ಈ ನೆನಪಿನ ಘಟನೆಯ 25 ವರ್ಷದ ನಂತರ ನನ್ನ ಮತ್ತು  ಜಂಬೆಯವರ ಈ ಬೇಟಿ ಆಯಿತು.
  ನಂತರ 2001 ರಲ್ಲಿ ಸಾಗರ ತಾಲೂಕಿನ ಹೆಗ್ಗೋಡಿನ ಚರಕ ಪ್ರಸನ್ನರು ರಂಗಾಯಣದ ನಿರ್ದೇಶಕರಾಗಿ ಆಯ್ಕೆ ಆದರು 2003 ರಲ್ಲಿ ಸರ್ಕಾರದ ವಾರ್ಷಿಕ ಅನುದಾನದ ಕಡಿತ ಪ್ರತಿಭಟಿಸಿ ರಾಜಿನಾಮೆ ನೀಡಿದಾಗ ರಾಜ್ಯ ಸರ್ಕಾರ ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಜಂಬೆಯವರನ್ನು ಇವರಿಬ್ಬರೂ ಒಂದೇ ಊರಿನವರು ಎಂಬುದು ವಿಶೇಷ.
  ರಂಗಾಯಣದ ನಾಲ್ಕನೇ ನಿರ್ದೇಶಕರಾದ ನಂತರ ಚಿದಂಬರ್ ರಾವ್ ಜಂಬೆ ರಾಷ್ಟ್ರ ಮಟ್ಟದಲ್ಲಿ ಕ್ರಿಯಾಶೀಲರಾದರು ನಂತರ 2015ರಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸ್ಟೀಕರಿಸಿದರು.
  ನಾನು ಅವರ ಪ್ರತಿ ಪೇಸ್ ಬುಕ್ ಪೋಸ್ಟ್ ನೋಡುತ್ತೇನೆ ಇತ್ತೀಚೆಗೆ ಅವರ ಪೋಸ್ಟ್ ಒಂದು ವಿಶೇಷವಾಗಿತ್ತು ಅದು ಉತ್ತರ ಕರ್ನಾಟಕದ ಸಿದ್ಧಿ ಜನಾಂಗದ ಕಲಾವಿದರಾದ ಗಿರಿಜಾ ಸಿದ್ದಿ, ಗೀತಾ ಸಿದ್ಧಿ, ಗಿರೀಶ್ ಸಿದ್ದಿ, ರೇಣುಕಾ ಸಿದ್ದಿ, ಪ್ರಶಾಂತ ಸಿದ್ದಿ, ಬಾಗ್ಯ ಸಿದ್ಧಿ ಮುಂತಾದವರು ಹೊರ ಜಗತ್ತಿಗೆ ಬರಲು ಕಾರಣವಾಗಿದ್ದು 1984ರಲ್ಲಿ ಇವರು ಯಲ್ಲಾಪುರ ತಾಲ್ಲುಕಿನ ಮಂಚಿಕೇರಿಯಲ್ಲಿ ಸಿದ್ದಿ ಜನಾ೦ಗದವರಿಗಾಗಿ Things Fall Apart ಕಾದಂಬರಿ ಆದಾರಿತ ನಾಟಕ ಇವರು ಮಾಡಿಸಿದ್ದರು, ಶಿರ ನಾಲೆ ಕಾಡಿನ ಮಧ್ಯ ಕೊಳ್ಳಿ ಬೆಳಕಿನಲ್ಲಿ ನಡೆಸಿದ ಆ ನಾಟಕ ಪ್ರದರ್ಶನ ಆ ಕಾಲಕ್ಕೆ ಒಂದು ಹೊಸ ಅನುಭವ ಆಗಿತ್ತಂತೆ.
  ಈ ನಾಟಕದ ಮುಖ್ಯ ಪಾತ್ರ ಒಕೊಂಕಾ ಮತ್ತು ದೇವಿ ಪಾತ್ರದಾರಿಗಳಾಗಿದ್ದ ಸಿದ್ಧಿ ಜನಾಂಗದ ಬಾಬು (ಪರಶುರಾಮ ಗಿರಗೋವಿ) ಅವರ ತಂಗಿ ಕುಸುಮಾ ಮತ್ತು ಅವರ ಮಗಳು ರೇಣುಕಾ ಅತ್ಯುತ್ತಮ ನಟನೆ ಮಾಡಿದ್ದರಂತೆ ಅವತ್ತು ಮಂಚಿಕೇರಿಯ ರಾಜೇಶ್ವರಿ ಪ್ರೌಡ ಶಾಲೆಯಲ್ಲಿ ನಡೆದ ಔಪಚಾರಿಕ ಸಬೆಯಲ್ಲಿ ಮೊದಲ ಬಾರಿ ಮಾತಾಡಿದ ಕುಸುಮಾ "ಈ ನಾಟಕ ನಮ್ಮನ್ನು ಹೊರ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿದೆ" ಎಂದಿದ್ದರಂತೆ ಅದರ ಮುಂದಿನ 35 ವರ್ಷದಲ್ಲಿ ಸಿದ್ದಿ ಜನಾ೦ಗದ ಕಲಾವಿದರು ನಾಟಕ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ ಇದಕ್ಕೆ ಚಿದಂಬರ್ ರಾವ್ ಜಂಬೆ ಕಾರಣಕರ್ತರು ಕೂಡ.
   ಪ್ರಚಾರ - ಪ್ರಶಸ್ತಿಗಳಿಂದ ದೂರವಿರುವ ರಾಷ್ಟ್ರ ಮಟ್ಟದ ರಂಗಕರ್ಮಿ ಜಂಬೆಯವರು ನಮ್ಮ ತಾಲ್ಲೂಕಿನವರು ಎಂಬುದು ನನಗೆ ಹೆಮ್ಮೆ ಅವರ ಆಗಮನ ಕೂಡ ಅಷ್ಟೇ ಖುಷಿಯ ಸಂಗಾತಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ