ನೋಡಿ ಇದು ಎಲ್ಲಾ ರಾಜಕೀಯ ಪಕ್ಷಗಳ ಆಚರಣೆ ಅವರಿಗೂ ಗೊತ್ತು ಬಂದವರೆಲ್ಲ ಕಾಯ೯ಕತ೯ರಲ್ಲ ಮತದಾರರಲ್ಲ ಅಂತ, ಸಭಿಕರು ಕಡಿಮೆ ಆದರೆ ಪ್ಲಾಪ್ ಶೋ ಅಂತ ಮೀಡಿಯಾದವರು ಬರೀತಾರೆ ಅವರು ಬಿಡಿ ಪೋಲಿಸ್ ಇಲಾಖೆ ಆಡಳಿತ ಪಕ್ಷದ ಸಭೆಯಲ್ಲಿ ಸೇರಿಸಿರುವ ಜನರನ್ನ ಕೆಲವು ಸಾವಿರ ಹೆಚ್ಚು ಮಾಡಿ ವರದಿ ಮಾಡುತ್ತಾರೆ, ಜನಪರ ಹೋರಾಟದಲ್ಲಿ ನಾಕಾರು ಸಾವಿರ ಸೇರಿದರೆ ನಾಕಾರು ನೂರು ಅOತ ವರದಿ ಇಂತ ಕೆಲಸಕ್ಕೆ ಬಾರದ ವರದಿಗಳನ್ನ ಓದಿ ಮತದಾರ ಬದಲಾಗುವುದಿಲ್ಲ ಆದರೆ ಜನ ಬಲ ಇಲ್ಲ ಅನ್ನೋ ಅಪವಾದ ಸ್ವಪಕ್ಷದವರಿ೦ದ ಮುಖ್ಯಮಂತ್ರಿ ಆಗೋ ಅಭ್ಯಥಿ೯ ತಪ್ಪಿಸಿಕೊಳ್ಳಬೇಕು, ಇದಕ್ಕೆಲ್ಲ ಖಚು೯ ಮಾಡೋ ಹಣ ಕ್ಯಾ೦ಡಿಡೇಟ್ ರೇಸ್ನಲ್ಲಿ ಇರೋರಿOದ ವಸೂಲಿ ಮಾಡುತ್ತಾರೆ.ಗೆದ್ದವರು ಇದರ ನೂರು ಸಾವಿರ ಪಟ್ಟು ಜನರಿ೦ದ ವಸೂಲಿ ಮಾಡಿ ಸರಿ ಮಾಡಿಕೊಳ್ಳುತ್ತಾರೆ ಇದು ನಮ್ಮ ಭಾರತ ದೇಶದ ಚುನಾವಣೆ ಎಂಬ ಅಣಕ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment