Skip to main content

Blog number 1267. ಸಾಕುಪ್ರಾಣಿಯಾಗಿ ಬಿಳಿ ಇಲಿ ಸಾಕುವ ವಿಚಾರ ಅನೇಕರಿಗೆ ತಿಳಿದಿಲ್ಲ, ಬಿಳಿ ಇಲಿ ಸಾಕಿದರೆ ಬೇರೆ ಇಲಿ ಬರುವುದಿಲ್ಲ, ವೈಟ್ ಮೌಸ್ ಎನ್ನುವ ಬುದ್ಧಿವಂತ ಇಲಿಗಳು ಮಾಲಿಕರ ಜೊತೆ ಬೇಗ ಹೊಂದಿಕೊಳ್ಳುತ್ತದೆ, ಬೆಂಗಳೂರು ಮೈಸೂರಿನಲ್ಲಿ ಬಿಳಿ ಇಲಿ ಸಾಕುವವರಿದ್ದಾರೆ.

#ಬಿಳಿ_ಇಲಿ_ಮನೆಗಳಲ್ಲಿ_ಸಾಕುಪ್ರಾಣಿಯಾಗಿ_ಸಾಕುತ್ತಾರೆಂಬುದು_ಬಹಳ_ಜನರಿಗೆ_ಗೊತ್ತಿಲ್ಲ.

#ಮೈಸೂರು_ಬೆಂಗಳೂರಲ್ಲಿ_ಮಾತ್ರವಲ್ಲ_ವಿಶ್ವದಾದ್ಯಂತ_ಇಲಿ_ಸಾಕುಪ್ರಾಣಿ.

#ಈ_ಬಗ್ಗೆ_ಬಹಳ_ಹಿಂದೆ_ಬರೆದ_ಲೇಖನ_ಕಳೆದು_ಹೋಗಿದೆ.

#ಇವತ್ತು_ಆಕೃತಿಕನ್ನಡದಲ್ಲಿ_ಇವತ್ತಿನ_ಲೇಖನ_ಇಲಿ_ಪ್ರಬೇದದ_ಬಗ್ಗೆ_ಓದಿ_ನೆನಪಾಯಿತು.

#ಬಿಳಿ_ಇಲಿ_ಸಾಕಿದರೆ_ಬೇರೆ_ಇಲಿ_ಬರುವುದಿಲ್ಲ.

   ಇವತ್ತು ಶಾಲಿನಿ ಹೂಲಿ ಪ್ರದೀಪರ #ಆಕೃತಿ_ಕನ್ನಡದಲ್ಲಿ ಒಂದು ಇಲಿಗಳ ಪ್ರಬೇದದ ಬಗ್ಗೆ #ಶಕುಂತಲಾಶ್ರೀಧರ್ ಅವರ ಅನುಭವದ ಕಥನ ಪ್ರಕಟವಾಗಿತ್ತು ಅದನ್ನು ಓದಿದಾಗಲೇ ಸುಮಾರು 20 ವರ್ಷದ ಹಿಂದೆ ರೈಲಿನ ಸಹ ಪ್ರಯಾಣಿಕರಿಂದ ತಿಳಿದ ಬಿಳಿ ಇಲಿ ಸಾಕು ಪ್ರಾಣಿಯ ವೃತ್ತಾಂತ ನೆನಪಾಯಿತು.
   2010ರಲ್ಲಿ ನನ್ನ ಲ್ಯಾಪ್ ಟಾಪ್ ನಲ್ಲಿ ಪೇಸ್ ಬುಕ್ ನಲ್ಲಿ ಬರೆದ ಲೇಖನ ಹುಡುಕಿದೆ ಆದರೆ ಸಿಗಲಿಲ್ಲ ಆಗ ಬ್ಲಾಗ್ ಇರಲಿಲ್ಲ.
  ಒಮ್ಮೆ ಬೆಂಗಳೂರಿಂದ ರೈಲಿನಲ್ಲಿ ಬರುವಾಗ ಪರಿಚಯವಾದ ಮೈಸೂರಿನ ಸಹ ಪ್ರಯಾಣಿಕರು ತುಮಕೂರಿನ ಮಗಳ ಮನೆಗೆ ಪ್ರಯಾಣಿಸುತ್ತಿದ್ದರು, ತಮ್ಮ ಜೊತೆ ಒಯ್ಯುತ್ತಿದ್ದ ಎರೆಡು ಬಿಳಿ ಇಲಿಗೆ ಕಾಳುಗಳನ್ನು ಕೊಡುವುದು ನೋಡಿ ಆಶ್ಚರ್ಯದಿಂದ ಕೇಳಿದಾಗಲೇ ಗೊತ್ತಾಗಿದ್ದು ಅದು ಅವರು ಸಾಕುತ್ತಿರುವ ಸಾಕು ಪ್ರಾಣಿ ಬಿಳಿ ಇಲಿಗಳು.
  ಅವರ ಪತ್ನಿ ಇಹಲೋಕ ತ್ಯಜಿಸಿದ್ದರಿಂದ ಒಂಟಿ ಜೀವನ ಅವರದ್ದು ಮಗಳ ಮನೆಗೆ ಹೋಗುವಾಗಲೂ ಈ ಬಿಳಿ ಇಲಿಗಳನ್ನು ತೆಗೆದು ಕೊಂಡು ಹೋಗುತ್ತಿದ್ದಾರೆ.
  ಆದರೆ ನನಗೆ ಅಲ್ಲಿ ತನಕ ಗೊತ್ತಿದ್ದಿದ್ದ ಸಾಕು ಪ್ರಾಣಿಗಳೆಂದರೆ ನಾಯಿ - ಬೆಕ್ಕು - ಗಿಳಿ-ಪಾರಿವಾಳ ಆದರೆ ಇಲಿಯೂ ಸಾಕು ಪ್ರಾಣಿ ಅಂತ ಗೊತ್ತಾಗಿದ್ದು ಅವತ್ತೇ ...
  ನಂತರ ಮೈಸೂರು ಬೆಂಗಳೂರಿನ ಕೆಲ ಮನೆಗಳಲ್ಲಿ ಬಿಳಿ ಇಲಿ ಸಾಕುವವರನ್ನು ನೋಡಿದ್ದೆ, ಅದರ ಹೆಸರು ಹಿಡಿದು ಕರೆದಾಗ ಮಾಲಿಕನ ಹತ್ತಿರ ಓಡಿ ಬರುವ, ಕಾಳು ಸ್ವೀಕರಿಸುವ ಬಿಳಿ ಇಲಿಗಳನ್ನು ನೋಡಿದ್ದೇನೆ.
   ಈ ಬಿಳಿ ಇಲಿಗಳು ಇದ್ದಲ್ಲಿ ಬೇರೆ ಇಲಿಗಳು ಬರುವುದಿಲ್ಲವಂತೆ, ಸ್ಟಚ್ಚವಾಗಿ ಬೆಕ್ಕಿನಂತೆ ಇರುವ ಚಿಕ್ಕ ಗಾತ್ರದ ಬಿಳಿ ಇಲಿಗಳು ಸಾಕುವುದು ತುಂಬಾ ಸುಲಭ.
  ಈ ಬಿಳಿ ಇಲಿಗಳು ದಿನದ 75% ಭಾಗ ನಿದ್ದೆಯಲ್ಲಿದ್ದು 25% ಭಾಗ ಮಾತ್ರ ಎಚ್ಚರ ಇರುತ್ತದೆ, ವೈಜ್ಞಾನಿಕವಾಗಿ ಬಿಳಿ ಇಲಿಗಳು ದೃಷ್ಟಿ ದೋಷ ಹೊಂದಿರುತ್ತದೆ ಎಂಬುದು ಸಂಶೋದನೆಯಿಂದ ಸಾಬೀತಾಗಿದೆ ಅಂತೆ.
   ವಾಸನೆ, ಸ್ಪರ್ಷ ಮತ್ತು ಶ್ರವಣ ಅವಲಂಬಿಸಿರುವ ಈ ಬಿಳಿ ಇಲಿಗಳಿಗೆ ವೈಟ್ ಮೌಸ್ ಎಂಬ ಹೆಸರಲ್ಲಿ ಕರೆಯುತ್ತಾರೆ, ವೈಜ್ಞಾನಿಕವಾಗಿ ಇದರ ಹೆಸರು ಆಲ್ಬಿನೋ ರಾಟ್ ಇದನ್ನು ಅನೇಕ ಔಷದಗಳ ಬಳಕೆಯಲ್ಲಿ ಸಂಶೋದನೆಯನ್ನು ಇವುಗಳ ಮೇಲೆ ಮಾಡುತ್ತಾರೆ.
  ಈ ಇಲಿಗಳ ಬಗ್ಗೆ 1553 ರಲ್ಲಿ ಮೊದಲ ವೈಜ್ಞಾನಿಕ ವಿವರ ಪ್ರಕಟಿಸಿದವರು ಸ್ಟಿಸ್ ನೈಸರ್ಗಿಕವಾದಿ ಕಾನ್ರಾಡ್ ಗೆಸ್ನರ್, ಬಿಳಿ ಇಲಿ ಕಾಡಲ್ಲಿದ್ದರೆ ಅದರ ಬಣ್ಣ ಮತ್ತು ದೃಷ್ಟಿ ದೋಷದಿಂದ ಬೇರೆ ಪ್ರಾಣಿಗಳಿಂದ ಸುಲಭವಾಗಿ ಅಕ್ರಮಣಗಳಕ್ಕೆ ಒಳಗಾಗುತ್ತವೆ.
   ಜಗತ್ತಿನಲ್ಲಿ 56 ಜಾತಿ ಪ್ರಬೇದದ ಇಲಿಗಳಿದೆ, ಸಣ್ಣ ಸಸ್ತನಿಗಳಾದ ಇಲಿಗಳು ಪಳಗಿಸಿದರೆ ಅವು ಅತ್ಯಂತ ಸ್ನೇಹ ಜೀವಿ ಅಂತ 19ನೇ ಶತಮಾನದ ಅಂತ್ಯದಿಂದ ಇಲಿ ಸಾಕಲು ಪ್ರಾರಂಭ ಆಯಿತಂತೆ.
  ಈ ಬಿಳಿ ಇಲಿಗಳ ಆಯಸ್ಸು 2 ವರ್ಷದಿಂದ 5 ವರ್ಷ ಅವದಿಯಂತೆ.
  ಬಿಳಿ ಇಲಿಗಳು ಜಪಾನಿನ 7 ಅದೃಷ್ಟ ದೇವತೆಯಲ್ಲಿ ಒಂದು, ಭಾರತದಲ್ಲಿ ರಾಜಸ್ಥಾನದ ಬಿಕನೇರ್ ನ ಕಣಿ೯ ಮಾತಾ ದೇವಾಲಯದಲ್ಲಿ 25 ಸಾವಿರಕ್ಕೂ ಹೆಚ್ಚಿನ ಇಲಿಗಳು ಭಕ್ತರಿಂದ ಪೂಜಿಸುತ್ತಿದೆ ಅಲ್ಲಿ ಬಿಳಿ ಇಲಿ ದರ್ಶನವಾದರೆ ಅದೃಷ್ಟ ಎ೦ಬ ನಂಬಿಕೆ ಇದೆ.
   ಖ್ಯಾತ ಲೇಖಕಿ ಬೀಟ್ರಿಕ್ಟ್ ಪಾಟರ್ ಅವಳ ಬಾಲ್ಯದ ಮುದ್ದಿನ ಇಲಿ ಸ್ಯಾಮಿಗೆ ತಮ್ಮ ಕಥೆ "ದಿ ಟೇಲ್ ಆಪ್ ಸ್ಯಾಮ್ಯೂಯಲ್ ವಿಸ್ಕಾರ್ಸ್" ಅಪಿ೯ಸಿದ್ದಾರೆ.
   ದೆಹಲಿಯ ಗೊರೆಗಾಂವ್ ನಲ್ಲಿ ಒಂದು ಜೊತೆ ಬಿಳಿ ಇಲಿ ಜೋಡಿಗೆ 766 ರೂಪಾಯಿ ಅಂತ ಅಮೇಜಾನಿನಲ್ಲಿದೆ, ಸಾಕುಪ್ರಾಣಿ ಇಲಿಯ ಆಹಾರ ಕೆ.ಜಿ.ಗೆ 328 ರೂಪಾಯಿ ಇದೆ ಅಷ್ಟೇ ಅಲ್ಲ ಈ ಬಿಳಿ ಇಲಿಗಳನ್ನ ಸಾಕುವವರಿಗಾಗಿ ಅವುಗಳ ಆಟಿಕೆ, ಏಣಿ, ಮನೆ ಇತ್ಯಾದಿಗಳು ಕೂಡ ಖರೀದಿಗೆ ಇದೆ.
  ಬಿಳಿ ಇಲಿಗಳು ಬುದ್ದಿವಂತ ಇಲಿಗಳು, ಮಾಲಿಕನ ಜೊತೆ ಬೇಗ ಹೊಂದಿಕೊಳ್ಳುತ್ತದೆ, ಇವುಗಳು ಸಾಕುವುದು ಸುಲಭ, ಕಡಿಮೆ ವಾಸನೆ ಮತ್ತು ಮಾಲಿಕರಿಗೆ ಕಚ್ಚುವುದು ಕೂಡ ಅಪರೂಪ.
  1961 ರಲ್ಲಿ ಪ್ರೆಂಚ್ ಬಾಹ್ಯಾಕಾಶ ಸಂಶೋದನೆಯಲ್ಲಿ ಬಿಳಿ ಇಲಿ ಅಂತರಿಕ್ಷ ಯಾತ್ರೆ ಮುಗಿಸಿ ಯಶಸ್ವಿಯಾಗಿ ವಾಪಾಸು ಬಂದಿದೆ.
   ಬಿಳಿ ಇಲಿ ಸಾಕು ಪ್ರಾಣಿಯಾಗಿ ಸಾಕುವ ವಿಚಾರವೇ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ