Skip to main content

Blog number 1218. ಹಿರಿಯ ಮಿತ್ರ ರೈಲ್ವೆ ಕಾಮಿ೯ಕ ನಿವೃತ್ತ - ಸಂತೃಪ್ತ ಜೀವನದಲ್ಲಿ ಭದ್ರಾವತಿಯಲ್ಲಿ ನೆಲೆಸಿರುವ ತಾನೂ ನಗುತ್ತಾ ಎಲ್ಲರನ್ನೂ ನಗಿಸುವ ಆಶು ಕವಿ ಸ್ಯೆಯದ್ ಸಾಲಿ ಬೇಟಿ 30 ವರ್ಷದ ನಂತರ

https://youtu.be/MzHEHqZOxAs

#ಮೂವತ್ತು_ವರ್ಷದ_ನಂತರ_ಬೇಟಿ

#ಸ್ಯೆಯದ್_ಸಾಲಿ_ರೈಲ್ವೆ_ಕಾರ್ಮಿಕರು

#ಕಷ್ಟದ_ದಿನಗಳಲ್ಲಿ_ತಮ್ಮ_ಹಾಸ್ಯದ_ಮ್ಯಾನರಿಸಂನಿಂದ_ಎಲ್ಲರ_ಮುಖದಲ್ಲಿ_ನಗು_ತರಿಸುವಾತ,

#ಭದ್ರಾವತಿಯಲ್ಲಿ_ನಿವೃತ್ತ_ಸಂತೃಪ್ತ_ಜೀವನದಲ್ಲಿ

#ಆ_ಕಾಲದ_ರೈಲ್ವೆ_ಕಾರ್ಮಿಕರ_ಸಂಕಷ್ಟ_ಜೀವನ

 1990 ರ ವರೆಗೆ ರೈಲ್ವೆ ಕಾರ್ಮಿಕರ ಜೀವನ ಸುಖಮಯ ಆಗಿರಲಿಲ್ಲ, ರೈಲ್ವೆ ಗ್ಯಾಂಗ್ ಮನ್ ಗಳ ಮತ್ತು ಗೇಟ್ ಮನ್ ಗಳ ಸಂಬಳ ಮಾಸಿಕ 11 ಸಾವಿರ ದಾಟಿರಲಿಲ್ಲ.
   ಬೆಳಿಗ್ಗೆ ಹೆಗಲ ಮೇಲೆ ದೊಡ್ಡ ಹ್ಯಾಮರ್, ಶಾವೆಲ್, ಸಬ್ಬಲ್ , ಸ್ವಾನರ್ ಗಳನ್ನು ಹೇರಿಕೊಂಡು ತಂಡವಾಗಿ ನಾಲ್ಕು ಕಿಲೋ ಮೀಟರ್ ದೂರದವರೆಗೆ ರೈಲ್ವೆ ಮಾರ್ಗ ಪರಿಶೀಲನೆ, ದುರಸ್ತಿ ಮತ್ತು ಜಲ್ಲಿಕಲ್ಲುಗಳನ್ನು ಸಮತಟ್ಟು ಮಾಡಿ ವಾಪಾಸು 4 ಕಿ.ಮಿ. ನಡೆದು ಬರುವಾಗ ಸಂಜೆ ಆಗುತ್ತಿತ್ತು.
   ಹಾಸಿದರೆ ಹೊದೆಯಲು ಇಲ್ಲ ಹೊದೆದರೆ ಹಾಸಲಿಲ್ಲ ಎಂಬ ಜಂಜಾಟದ ಜೀವನ ಅವರದ್ದು, ವಾಸಕ್ಕೆ ಕ್ವಾರ್ಟರ್ಸ್ ಮತ್ತು ಚಿಕಿತ್ಸೆಗೆ ಮೈಸೂರಿನ ರೈಲ್ವೆ ಕಾರ್ಮಿಕರ ಆಸ್ಪತ್ರೆ ಅವರಿಗಿದ್ದ ಅವತ್ತಿನ ಸುದಾರಣೆ ಆಗಿತ್ತು.
   ಪ್ರತಿ ತಿಂಗಳು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಸಂಬಳ ಆನಂದಪುರಂ ರೈಲ್ವೆ ಸ್ಟೇಷನ್ ಗೆ ಬರುತ್ತಿದ್ದ ವಿಶೇಷ ರೈಲಿನಲ್ಲಿ ಬಟಾವಡೆ ಮಾಡುತ್ತಿದ್ದರು, ದಸರಾದಲ್ಲಿ ಇದೇ ರೀತಿ ಬೋನಸ್ ಸಂಬಳ ಕೂಡ.
  ಈ ಕಾರಣದಿಂದ ರೈಲ್ವೆ ಕಾರ್ಮಿಕರಿಗೆ ಆನಂದಪುರಂ ದಿನಸಿ ವ್ಯಾಪಾರಿಗಳು, ಸೆಲೂನ್ ನವರು, ಬಟ್ಟೆ ಅಂಗಡಿಯಲ್ಲಿ, ಕುರಿ ಮಾಂಸದ ಅಂಗಡಿಯಲ್ಲಿ, ಸರಾಯಿ ಅಂಗಡಿಯಲ್ಲಿ ಬರಪೂರ ಸಾಲ ಸೌಲಭ್ಯವೂ ದೊರಕುತ್ತಿತ್ತು.
  ಆದರೆ ಅವರೆಲ್ಲ ರೈಲ್ವೆ ಕಾರ್ಮಿಕರ೦ತೆ ಸಂಬಳದ ರೈಲು ಕಾಯಬೇಕಿತ್ತು ತಪ್ಪಿದರೆ ಅವರ ಸಾಲದ ಮರುಪಾವತಿಗೆ ಮುಂದಿನ ತಿಂಗಳ ಸಂಬಳದ ರೈಲು ಗತಿಯಾಗುತ್ತಿತ್ತು.
   ಶ್ರಮದ ಕೆಲಸ, ತುಂಬು ಕುಟುಂಬದ ಪಾಲನೆ, ಕುಡಿತ- ಜುಗಾರಿ ವ್ಯಸನಗಳಿಂದ ಇವರೆಲ್ಲರ ಜೀವನ ಕಲ್ಲು ಮುಳ್ಳಿನಂತ ಜೀವನದ ದಾರಿ ಆಗಿತ್ತು ಅದನ್ನು ಮರೆಯಲು ಸರಾಯಿ ಒಂದೇ ಮನೋರಂಜನೆ ಇವರಿಗೆ.
  ಇವರೆಲ್ಲ ನನ್ನ ಆತ್ಮೀಯರಾಗಿದ್ದರು ನಾನು ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರಿಂದ 1985 ರಿಂದ 2000ದವರೆಗಿನ ಆನಂದಪುರಂನ ರೈಲ್ವೆ ಸಿಬ್ಬಂದಿಗಳು ನನಗೆ ಆಪ್ತರು.
   ಇವರಲ್ಲಿ ಈ ಭದ್ರಾವತಿಯ ಸಾಲಿ ವಿಶಿಷ್ಟ ವ್ಯಕ್ತಿ, ನಿತ್ಯದ ಬದುಕಿನಲ್ಲಿ ಇಡೀ ಸಿಬ್ಬಂದಿಗಳು ಸಾಲ-ಸೋಲ - ಕಷ್ಟ-ನಷ್ಟ - ಅವಮಾನಗಳಿಂದ ಕುಗ್ಗುತ್ತಿದ್ದರು ಆದರೆ ಸಾಲಿ ಮಾತ್ರ ಸ್ವತಃ ಅದೇ ಕಷ್ಟದಲ್ಲಿದ್ದರೂ ಜೋಕುಗಳು, ಹಾಡುಗಳು, ರಾಮಾಯಣ, ಮಹಾಭಾರತದ ಹಾಡುಗಳನ್ನು ಹಾಡುತ್ತಾ ಇಡೀ ಗುಂಪಿನ ದುಃಖಗಳನ್ನು ನಗುವಾಗಿಸಿ ಹಗುರಾಗಿಸುವ ಸಂಪನ್ನ ವ್ಯಕ್ತಿ.
  ಮೊನ್ನೆ ನನ್ನ ಕಲ್ಯಾಣ ಮಂಟಪದಲ್ಲಿ ಅವರ ಸಂಬಂದಿ ಮದುವೆಗೆ ಬಂದಾಗ ಸುಮಾರು 30 ವರ್ಷದ ನಂತರ ಬೇಟಿ ಆಯಿತು, ಇಬ್ಬರು ಗಂಡು ಮಕ್ಕಳೂ ಮದುವೆ ಆಗಿದ್ದಾರೆ ಅಂದಾಗ ಸೊಸೆಯಿಂದಿರು ಚೆನ್ನಾಗಿ ನೋಡಿಕೊಳ್ತಾರ? ಅಂದದ್ದಕ್ಕೆ ಆಶು ಕವಿ ಸಾಲಿ ಒಂದು ಹಾಡೇ ಹೇಳಿದರು ಅದನ್ನು ಇನ್ನೊಮ್ಮೆ ಹೇಳಿಸಿ ಮಾಡಿದ ವಿಡಿಯೋ ಇಲ್ಲಿದೆ.
  ನಾನು ಬರೆದ ಕಥೆ - ಕಾದಂಬರಿ ತೆಗೆದುಕೊಂಡು ಹೋಗಿದ್ದಾರೆ ಓದಿ ಪೋನ್ ಮಾಡುತ್ತಾರಂತೆ.
  ಅಳುವ ಕಡಲಲೂ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ಎಂಬ ಕವಿವಾಣಿಯಂತ ನನ್ನ ಹಿರಿಯ ಮಿತ್ರ ಸಾಲಿ ಬೇಟಿ 30 ವರ್ಷದ ನಂತರವಾದರೂ ನಗದೇ ಇರಲಾಗಲಿಲ್ಲ ಅವತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...