ಕೊರಾನಾ ಲಾಕ್ ಡೌನ್ ಗಾಗಿ ತಾತ್ಕಾಲಿಕವಾಗಿ ಊರಿಗೆ ಮರಳುವವರಿಗೆ ಬೇಕಾಗಿದೆ ಆತ್ಮವಿಶ್ವಾಸದ ಬೆನ್ನು ತಟ್ಟುವ ಮಾತುಗಳು ಈಗ ಸಾಗರದ ಶಾಸಕರಾದ ಹರತಾಳು ಹಾಲಪ್ಪ ರ ಈ ಪತ್ರಿಕಾ ಹೇಳಿಕೆ ನಿಜಕ್ಕೂ ಹೃದಯಸ್ಪಷಿ೯.
#ಇಂತಹ_ಮಾತುಗಳೇ_ನಿರಾಸೆ_ಹೊಡೆದೋಡಿಸುವ_ಮತ್ತು_ಆತ್ಮವಿಶ್ವಾಸ_ಹೆಚ್ಚಿಸುವುದು #ಬೆಂಗಳೂರಿಂದ_ಬರುವವರಿಗೆ_ಹೃದಯಸ್ಪಷಿ೯_ಬೆಂಬಲ_ಸಹಕಾರ_ನೀಡಿದ_ಸಾಗರದ_ಶಾಸಕರಾದ_ಹರತಾಳುಹಾಲಪ್ಪನವರು ಮಲೆನಾಡಿನಿಂದ ರಾಜಧಾನಿಗೆ ತಮ್ಮ ಭವಿಷ್ಯ ಹುಡುಕಿ ಹೋಗುವ ಯುವಕ/ಯುವತಿಯರೆಲ್ಲ ನಮ್ಮ ಸಹೋದರ ಸಹೋದರಿಯರೆ, ರೈತರು ಮತ್ತು ಕೃಷಿ ಕಾಮಿ೯ಕ ಕುಟುಂಬದವರೆ. ಅವರೆಲ್ಲರ ಕನಸು ಹೆತ್ತವರಿಗೆ ಅಥಿ೯ಕ ಸಹಾಯ ಮಾಡಿ ಮನೆಯಲ್ಲಿನ ಕೃಷಿ ಅಭಿವೃದ್ದಿ, ಹೊಸ ಮನೆ ಕಟ್ಟುವುದು, ಸಹೋದರ / ಸಹೋದರಿಯರ ವಿದ್ಯಾಬ್ಯಾಸ ಅವರ ಮದುವೆ, ಮನೇನಲ್ಲಿ ಕಾಯಿಲೆ ಇದ್ದವರಿಗೆ ಚಿಕಿತ್ಸೆ, ಮನೆಯಲ್ಲಿ ಮಾಡಿದ ಬ್ಯಾಂಕ್ ಅಥವ ಖಾಸಾಗಿ ಸಾಲ ತೀರುಸುವುದು ಮತ್ತು ಹಳ್ಳಿಯಲ್ಲಿ ತಮ್ಮ ಕುಟುಂಬಕ್ಕೆ ಒಂದು ಐಡೆಂಟಿಟಿ ಸಿಗುವಂತೆ ಮಾಡುವುದು. ಆದರೆ ಇದರಲ್ಲಿ ಎಷ್ಟು ಜನ ಯಶಸ್ವಿ ಆಗುತ್ತಾರೆ ಎನ್ನುವುದು ಅವರವರ ಪ್ರಯತ್ನ ಮತ್ತು ಅದೃಷ್ಟದ ಮೇಲೆ ಅವಲಂಬಿಸಿದೆ. ಈಗ ಬಂದಿರುವ ಕೊರಾನಾ ಗಂಡಾಂತರದಿಂದ ಲಾಕ್ ಡೌನ್ ಗಳಿಂದ ಇಡಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿಮಾ೯ಣ ಆಗಿದೆ ಇದರಿಂದ ತಾತ್ಕಾಲಿಕವಾಗಿ ಇದು ನಿಯ೦ತ್ರಣಕ್ಕೆ ಬರುವಷ್ಟು ದಿನ ಊರಿಗೆ ಮರಳಿ ಕೃಷಿಯ ಈ ದಿನದಲ್ಲಿ ಮನೆಯವರಿಗೆ ಸಹಕಾರ ಮಾಡುವ ಉದ್ದೇಶ ಮತ್ತು ಮನೆಯವರ ಆತಂಕ ಕಡಿಮೆ ಮಾಡಲಿಕ್ಕಾಗಿ ಊರಿಗೆ ಮರಳುತ್ತಿದ್ದಾರೆ. ಬೆಂಗಳೂರಿಂದ ಊರಿಗೆ ಬಂದವರು 14 ...