Blog number 2010. ನನ್ನ ಪೂರ್ವಜರ ಅನುಗ್ರಹ ಮತ್ತು ದೇವರ ಕೃಪೆಯಿಂದ ಬುದ್ಧಗಯಾದಲ್ಲಿ ನನ್ನ ವಂಶದಲ್ಲಿ ಅಗಲಿದ ಹಿರಿಯರಿಗೆ ಪಿತೃತರ್ಪಣ ಅರ್ಪಿಸುವ ಕ್ಷಣಗಳಿಗೆ ಕಾಯುತ್ತಿದ್ದೇನೆ.
#ಬುದ್ದ_ಗಯಾದಲ್ಲಿ_ಪಿತೃ_ತರ್ಪಣ #ಹನ್ನೆರೆಡು_ಪೂರ್ವಜರಿಗೆ #ಹಿಂದೂ_ಧರ್ಮಿಯರು_ಒಂದು_ಬಾರಿ_ಆದರೂ_ಕಾಶಿ_ಗಯಾದಲ್ಲಿ #ತಂದೆ_ತಾಯಿಯರಿಗಾಗಿ_ನೆರವೇರಿಸಲೇ_ಬೇಕಾದದ್ದು #ನಮ್ಮನ್ನಗಲಿದ_ಹಿರಿಯರ_ಮಾರ್ಗದಲ್ಲಿ_ಬಾದಕಗಳಿದ್ದರೆ_ಅದನ್ನು_ಪರಿಹರಿಸಿ #ಎನ್ನುವ_ಪ್ರಾರ್ಥನೆಯೇ_ಪಿತೃತರ್ಪಣ_ಪಿಂಡಪ್ರದಾನ #ಬಿಹಾರದ_ಬುದ್ಧಗಯಾದಲ್ಲಿ_ರಾಮ_ತನ್ನ_ತಂದೆ_ದಶರಥನಿಗೆ_ಪಿತೃತರ್ಪಣ_ನೀಡುತ್ತಾನೆ #ಶ್ರೀಕೃಷ್ಣ_ಧರ್ಮರಾಯನಿಗೆ_ಗಯಾದಲ್ಲಿಯೇ_ಪಿತೃತರ್ಪಣ_ಮಾಡಲು_ಮಾಗ೯ದರ್ಶನ_ಮಾಡುತ್ತಾನೆ #ಹಾಗಾಗಿ_ಬುದ್ಧಗಯಾದಲ್ಲಿ_ಮಾಡುವ_ಪಿತೃತರ್ಪಣವೇ_ಶ್ರೇಷ್ಟ_ಎಂಬ_ನಂಬಿಕೆ #ಇಲ್ಲಿಯೇ_ಗೌತಮ_ಬುದ್ಧನಿಗೆ_ಜ್ಞಾನೋದಯ_ಆಗಿದ್ದು #ಇಲ್ಲಿ_ಸಾಕ್ಷತ್_ವಿಷ್ಣು_ಪಾದಗಳಿದೆ_ಎಂಬ_ಪ್ರತೀತಿ_ಹಿಂದೂ_ಧರ್ಮಿಯರಲ್ಲಿದೆ. #ನನ್ನ_ಪೂರ್ವಜರಿಗೆ_ಪಿತೃತರ್ಪಣ_ಗಯಾ_ಮತ್ತು_ಕಾಶಿಯಲ್ಲಿ_ನೆರವೇರಿಸುವ_ಸಂಕಲ್ಪ_ನನ್ನದು ಅನಾಥ ಶಿಶುವಾಗಿದ್ದ ನನ್ನ ತಂದೆಯನ್ನು ಸಾಕಿದ ಸಾಕು ತಾಯಿ ತಂದೆಯರಾದ ಅಬ್ಬಕ್ಕ ಮತ್ತು ಸುಬ್ಬಣ್ಣ ಆಚಾರ್ ಅವರಿಗೆ ಕಾಶಿ ಮತ್ತು ಗಯಾದಲ್ಲಿ ಪಿತೃತರ್ಪಣ ಮಾಡಬೇಕೆಂಬ ಇಚ್ಛೆ ನನ್ನ ತಂದೆಯದ್ದಾಗಿತ್ತು. ನಮ್ಮ ತಂದೆಯನ್ನು ಇಡೀ ಭಾರತ ದೇಶದ ದರ್ಶನ ಮಾಡಿಸ ಬೇಕೆಂಬ ಆಸೆ ನನ್ನ ಮನಸ್ಸಲ್ಲಿ ಬಾಲ್ಯದಲ್ಲೇ ಮೂಡಿತ್ತು ಆದರೆ ನನ್ನ ದುರಾದೃಷ್ಟ ನಾನು ಜನಪರ ಹೋರಾಟ -ರಾಜಕಾರಣದಲ್ಲಿ ಸಕ್ರೀಯನಾಗಿದ್ದರಿಂದ ಅದು ಈಡೇರಲೇ ಇಲ್ಲ ಆ ಪಶ್ಚಾತ್ತಾಪ ನನಗೆ...