Skip to main content

Blog number 2010. ನನ್ನ ಪೂರ್ವಜರ ಅನುಗ್ರಹ ಮತ್ತು ದೇವರ ಕೃಪೆಯಿಂದ ಬುದ್ಧಗಯಾದಲ್ಲಿ ನನ್ನ ವಂಶದಲ್ಲಿ ಅಗಲಿದ ಹಿರಿಯರಿಗೆ ಪಿತೃತರ್ಪಣ ಅರ್ಪಿಸುವ ಕ್ಷಣಗಳಿಗೆ ಕಾಯುತ್ತಿದ್ದೇನೆ.

#ಬುದ್ದ_ಗಯಾದಲ್ಲಿ_ಪಿತೃ_ತರ್ಪಣ

#ಹನ್ನೆರೆಡು_ಪೂರ್ವಜರಿಗೆ

#ಹಿಂದೂ_ಧರ್ಮಿಯರು_ಒಂದು_ಬಾರಿ_ಆದರೂ_ಕಾಶಿ_ಗಯಾದಲ್ಲಿ

#ತಂದೆ_ತಾಯಿಯರಿಗಾಗಿ_ನೆರವೇರಿಸಲೇ_ಬೇಕಾದದ್ದು

#ನಮ್ಮನ್ನಗಲಿದ_ಹಿರಿಯರ_ಮಾರ್ಗದಲ್ಲಿ_ಬಾದಕಗಳಿದ್ದರೆ_ಅದನ್ನು_ಪರಿಹರಿಸಿ

#ಎನ್ನುವ_ಪ್ರಾರ್ಥನೆಯೇ_ಪಿತೃತರ್ಪಣ_ಪಿಂಡಪ್ರದಾನ

#ಬಿಹಾರದ_ಬುದ್ಧಗಯಾದಲ್ಲಿ_ರಾಮ_ತನ್ನ_ತಂದೆ_ದಶರಥನಿಗೆ_ಪಿತೃತರ್ಪಣ_ನೀಡುತ್ತಾನೆ

#ಶ್ರೀಕೃಷ್ಣ_ಧರ್ಮರಾಯನಿಗೆ_ಗಯಾದಲ್ಲಿಯೇ_ಪಿತೃತರ್ಪಣ_ಮಾಡಲು_ಮಾಗ೯ದರ್ಶನ_ಮಾಡುತ್ತಾನೆ

#ಹಾಗಾಗಿ_ಬುದ್ಧಗಯಾದಲ್ಲಿ_ಮಾಡುವ_ಪಿತೃತರ್ಪಣವೇ_ಶ್ರೇಷ್ಟ_ಎಂಬ_ನಂಬಿಕೆ

#ಇಲ್ಲಿಯೇ_ಗೌತಮ_ಬುದ್ಧನಿಗೆ_ಜ್ಞಾನೋದಯ_ಆಗಿದ್ದು

#ಇಲ್ಲಿ_ಸಾಕ್ಷತ್_ವಿಷ್ಣು_ಪಾದಗಳಿದೆ_ಎಂಬ_ಪ್ರತೀತಿ_ಹಿಂದೂ_ಧರ್ಮಿಯರಲ್ಲಿದೆ.

#ನನ್ನ_ಪೂರ್ವಜರಿಗೆ_ಪಿತೃತರ್ಪಣ_ಗಯಾ_ಮತ್ತು_ಕಾಶಿಯಲ್ಲಿ_ನೆರವೇರಿಸುವ_ಸಂಕಲ್ಪ_ನನ್ನದು

  ಅನಾಥ ಶಿಶುವಾಗಿದ್ದ ನನ್ನ ತಂದೆಯನ್ನು ಸಾಕಿದ ಸಾಕು ತಾಯಿ ತಂದೆಯರಾದ  ಅಬ್ಬಕ್ಕ ಮತ್ತು ಸುಬ್ಬಣ್ಣ ಆಚಾರ್ ಅವರಿಗೆ ಕಾಶಿ ಮತ್ತು ಗಯಾದಲ್ಲಿ ಪಿತೃತರ್ಪಣ ಮಾಡಬೇಕೆಂಬ ಇಚ್ಛೆ ನನ್ನ ತಂದೆಯದ್ದಾಗಿತ್ತು.
  ನಮ್ಮ ತಂದೆಯನ್ನು ಇಡೀ ಭಾರತ ದೇಶದ ದರ್ಶನ ಮಾಡಿಸ ಬೇಕೆಂಬ ಆಸೆ ನನ್ನ ಮನಸ್ಸಲ್ಲಿ ಬಾಲ್ಯದಲ್ಲೇ ಮೂಡಿತ್ತು ಆದರೆ ನನ್ನ ದುರಾದೃಷ್ಟ ನಾನು ಜನಪರ ಹೋರಾಟ -ರಾಜಕಾರಣದಲ್ಲಿ ಸಕ್ರೀಯನಾಗಿದ್ದರಿಂದ ಅದು ಈಡೇರಲೇ ಇಲ್ಲ ಆ ಪಶ್ಚಾತ್ತಾಪ ನನಗೆ ಕಾಡುತ್ತಿದೆ.
  ಅಗಲಿದ ಹಿರಿಯರನ್ನ ಅವರ ಪ್ರಾರಬ್ದ ಕರ್ಮದಿಂದ ಕಾಪಾಡು ಎನ್ನುವ ಪೂಜೆಯೆ ಪಿತೃ ಪೂಜೆ, ಅಗಲಿದ ಹಿರಿಯರ ಮಾರ್ಗದಲ್ಲಿ ಬಾದಕವಿದ್ದರೆ ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ ಇದನ್ನು ಹಿಂದೂ ಧರ್ಮದ ಶೂದ್ರ - ವೈಶ್ಯ-ಕ್ಷತ್ರಿಯ-ಬ್ರಾಹ್ಮಣರಾದಿಯಾಗಿ ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ನೆರವೇರಿಸಲೇ ಬೇಕು
  ಈಗ ನನ್ನ ತಂದೆ ತಾಯಿಯರು ಸೇರಿ 12 ತಲೆಮಾರಿನವರಿಗೆ ಬಿಹಾರದ ಪಾಟ್ನಾ ಸಮೀಪದ ಬುದ್ಧ ಗಯಾದಲ್ಲಿ ಪಿತೃ ತರ್ಪಣ ಮಾಡುವ ಸಂಕಲ್ಪ ಮಾಡಿದ್ದೇನೆ.
   ಬುದ್ದಗಯಾದ ಮಹಾಬೋದಿ ವೃಕ್ಷದ ಕೆಳಗೆ ಗೌತಮ ಬುದ್ಧನಿಗೆ ಜ್ಞಾನೋದಯ ಆಗವುದರಿಂದ ಬುದ್ಧಗಯಾ ಬೌದ್ಧ ಧರ್ಮಿಯರಿಗೆ ಪವಿತ್ರ ಸ್ಥಳವಾಗಿದೆ.
  ಚಕ್ರವರ್ತಿ ಅಶೋಕರ ಮಗಳು ಸಂಗಮಿತ್ರ ಈ ವೃಕ್ಷದ ಕೊಂಬೆ ಇಲ್ಲಿಂದ ಒಯ್ದು ಶ್ರೀಲಂಕಾದ ಅನುರಾದಪುರದಲ್ಲಿ ಸ್ಥಾಪಿಸಿದ್ದು ಈಗಲೂ ಆ ಪುರಾತನ ವೃಕ್ಷ ಜೀವಂತವಾಗಿದೆ.
  ಚಕ್ರವರ್ತಿ ಅಶೋಕರ ರಾಣಿ ತಿಸ್ಸಾರಕಾ ಗಯಾದಲ್ಲಿನ ಗೌತಮ ಬುದ್ಧನಿಗೆ ಜ್ಞಾನೋದಯವಾದ ಸ್ಥಳದ ಬೋದಿವೃಕ್ಷ 254 BC ಯಲ್ಲಿ ನಾಶ ಮಾಡಿಸುತ್ತಾಳೆ ಅವಳಿಗೆ ಅಶೋಕ ಚಕ್ರವರ್ತಿಯ  ಬೌದ್ಧ ದರ್ಮದ ಒಲವು ಇಷ್ಟವಾಗುವುದಿಲ್ಲ.
  ಇದು ಇತಿಹಾಸವಾದರೆ ಹಿಂದೂ ಧರ್ಮದಲ್ಲಿ ಮಹಾ ವಿಷ್ಣುವಿನ ಪಾದಗಳು ಇಲ್ಲಿದೆ ಎಂಬ ಭಕ್ತಿಯ ನಂಬಿಕೆ ಇದೆ ಮತ್ತು ಇಲ್ಲಿಯೇ ಶ್ರೀ ರಾಮಚಂದ್ರ ತನ್ನ ತಂದೆ ಇಹಲೋಕ ತ್ಯಜಿಸಿದಾಗ ಪಿತೃತರ್ಪಣ ನೀಡಿದ್ದು ಮತ್ತು ಮಹಾಭಾರತದಲ್ಲಿ ಪಾಂಡವ ಯುದಿಷ್ಟರನಿಗೆ ಶ್ರೀಕೃಷ್ಣ ಗಯಾದಲ್ಲೆ ಪಿತೃತರ್ಪಣ ನೆರವೇರಿಸಲು ಮಾರ್ಗದರ್ಶನ ನೀಡುತ್ತಾನೆ ಆದ್ದರಿಂದ ಧರ್ಮರಾಯ ಗಯಾದಲ್ಲಿ ತನ್ನ ಅಗಲಿದ ಹಿರಿಯರಿಗೆ ಗಯಾದಲ್ಲಿ ಪಿತೃತರ್ಪಣ ಅರ್ಪಿಸುತ್ತಾನೆ.
  ಗಯಾದಲ್ಲಿ ಪವಿತ್ರ ಫಲ್ಗು ನದಿ ಹರಿಯುತ್ತದೆ, ಗಯಾದ ಅಕ್ಷಯವತ್ ಎಂಬ ಪವಿತ್ರ ಅಂಜೂರದ ವೃಕ್ಷದ ಕೆಳಗೆ ಶ್ರೀರಾಮ ಪಿಂಡ ಪ್ರದಾನ ಮಾಡಿದ್ದರಿಂದ ಇದನ್ನ ಪೂಜಿಸುತ್ತಾರೆ.
  ಇಲ್ಲಿನ ಪ್ರೇತ್ವಿಲಾ ಎಂಬ ಬೆಟ್ಟದಲ್ಲಿ ಧರ್ಮರಾಯ ಪಿಂಡ ಪ್ರಧಾನ ಮಾಡಿದ್ದರಿಂದ ಅಲ್ಲಿಗೂ ಭಕ್ತರು ಬೇಟಿ ನೀಡುತ್ತಾರೆ.
  ಗಯಾದಲ್ಲಿನ ಫಲ್ಗು ನದಿಯಲ್ಲಿ ತರ್ಪಣೆ ಬಳಿಕ ಮೃತರು ಶಾಂತಿಯಿಂದ ನೆಲೆಸುವಂತೆ ಹಾಗೂ ಭವಿಷ್ಯದಲ್ಲಿ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡದಂತೆ ಬೇಡಿ ಕೊಳ್ಳುತ್ತಾರೆ ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂಬ ನಂಬಿಕೆ ಹಿಂದೂ ದರ್ಮದಲ್ಲಿದೆ.
   ನನ್ನ ಹಿರಿಯರ ಅನುಗ್ರಹ ಮತ್ತು ದೇವರ ಕೃಪೆ ಇದ್ದರೆ ನಾನು ನನ್ನ ಪತ್ನಿ ಹಾಗೂ ನನ್ನಣ್ಣ ಅತ್ತಿಗೆ ಬುದ್ದಗಯಾಕ್ಕೆ ಹೋಗಿ ಪಿತೃತರ್ಪಣ ನೆರವೇರಿಸಿ ಅಲ್ಲಿಂದ ಕಾಶಿಯಾತ್ರೆ ಮತ್ತು ಆಯೋಧ್ಯೆಯ ರಾಮ ಮುಂದಿರ ದರ್ಶನದ ಸಂಕಲ್ಪ ನೆರವೇರಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ