Skip to main content

Blog number 2007. ಕಿತ್ತಳೆ ಹಣ್ಣಿನ ಸಿಪ್ಪೆಯ ಸ್ವಾದಿಷ್ಟವಾದ ವಿಟಮಿನ್ ಸಿ ಸಮೃದ್ದವಾಗಿರುವ ಚಟ್ನಿ ಪುಡಿ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ.

#ಕಿತ್ತಳೆ_ಹಣ್ಣಿನ_ಸಿಪ್ಪೆಯ_ಸವಿಯಾದ_ಚಟ್ನಿ_ಪುಡಿ

#ಇದರ_ಸುವಾಸನೆಭರಿತ_ರುಚಿ_ಈ_ಚಟ್ನಿ_ಪುಡಿಯ_ವಿಶೇಷ

https://youtu.be/36u-UsyK0VE?feature=shared

  ಸಿರ್ಸಿಯಲ್ಲಿ #ಸುಯೋಗಾಶ್ರಮ ನಡೆಸುವ, ಅನಾಥರಿಗೆ ಆಶಕ್ತರಿಗೆ ತಾಯಿಯಂತೆ ಕಾಡಾಡುವ ಶ್ರೀಮತಿ ಲತಿಕಾ ಭಟ್ಟರು ಆಶ್ರಮವಾಸಿಗಳಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ತಯಾರಿಸಿ ಬಡಿಸಿದ ಪೋಸ್ಟ್ ಹಾಕಿದ್ದರು ಅದಕ್ಕೆ ನಾನು ಕಿತ್ತಳೆ ಹಣ್ಣಿನ ಸಿಪ್ಪೆಯ ಚಟ್ನಿಪುಡಿ ಕೂಡ ಮಾಡುತ್ತಾರೆ ಅಂತ ಪ್ರತಿಕ್ರಿಯಿಸಿದ್ದೆ ....ಅದಕ್ಕೆ ಅವರು ಕಿತ್ತಳೆ ಹಣ್ಣಿನ ಸಿಪ್ಪೆ ಒಣಗಿಸುವುದೆಲ್ಲ ಆಶ್ರಮದಲ್ಲಿ ಕಷ್ಟ ಅಂದಿದ್ದರು.
   ಇದೇ ಪೋಸ್ಟ್ ನಲ್ಲಿ #ಆಕೃತಿ_ಕನ್ನಡ_ಡಾಟ್_ಕಾಮ್ ಶ್ರೀಮತಿ ಶಾಲಿನಿಹೂಲಿ ಅವರು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸುವ ಚಟ್ನಿ ಪುಡಿ ರೆಸಿಪಿ ಕೇಳಿದ್ದರು.
   ಕಿತ್ತಳೆ ಹಣ್ಣು ಏಷ್ಯಾ ಮೂಲದ್ದು ಒಂದು ಕಾಲದಲ್ಲಿ ನಮ್ಮ ಕೊಡಗು ಜಿಲ್ಲೆ ಕಿತ್ತಳೆಗೆ ಪ್ರಸಿದ್ಧಿ ಪಡೆದಿತ್ತು ಈಗ ಮಹಾರಾಷ್ಟ್ರದ ನಾಗಪುರ ಕಿತ್ತಲೆಹಣ್ಣು  ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಪ್ರದೇಶವಾಗಿದೆ.
  ಸೂರ್ಯನ ಬಿಸಿಲು ಕಡಿಮೆ ಬೀಳುವ ಚಳಿ ಪ್ರದೇಶದಲ್ಲಿರುವ ಜನರಿಗೆ ವಿಟಮಿನ್ ಸಿ ಕೊರತೆಯ ಬಾದೆ ಜಾಸ್ತಿ ಅದರಿಂದ ಚರ್ಮದ ಸಮಸ್ಯೆ ಜಾಸ್ತಿ ಆದ್ದರಿಂದ ಆ ಪ್ರದೇಶಗಳಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ (OJ) ಜಾಸ್ತಿ ಬಳಕೆ ಆಗುತ್ತದೆ.
  ಕಿತ್ತಳೆ ಹಣ್ಣಿನ ಚಟ್ನಿ ಪುಡಿಗೆ ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆದು ಒಣಗಿಸ ಬೇಕಾಗಿಲ್ಲ ಹೀಗೆ ಒಣಗಿಸಿದ ಸಿಪ್ಪೆಯಲ್ಲಿ ಕಿತ್ತಳೆ ಹಣ್ಣಿನಲ್ಲಿರುವ ಸುವಾಸನೆ ಮತ್ತು ರುಚಿ ಇರುವುದಿಲ್ಲ ಆದ್ದರಿಂದ ಕಿತ್ತಳೆ ಹಣ್ಣಿನ ಒಣಗಿಸಿದ ಸಿಪ್ಪೆ ಬಳಸಬಾರದು ನೆನಪಿರಲಿ.
  ಎರೆಡು ಕಿತ್ತಳೆ ಹಣ್ಣು ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆದು ಬಟ್ಟೆಯಲ್ಲಿ ಒರೆಸಿ ಇಟ್ಟು ಕೊಳ್ಳಿ ನಂತರ ಅದನ್ನು ಸ್ವಲ್ಪ ಎಣ್ಣೆ ಜೊತೆ ಚೆನ್ನಾಗಿ ಹುರಿದು ತೆಗೆದುಕೊಳ್ಳಿ.
   ಒಂದು ಟೀ ಚಮಚ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆ, 1 ಚಮಚ ಕೊತ್ತುಂಬರಿ ಕಾಳು, ಅರ್ದ ಚಮಚ ಎಳ್ಳು, 8 ಒಣ ಮೆಣಸು, ಸ್ವಲ್ಪ ಒಣ ಕೊಬ್ಬರಿ ತುರಿ ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಿ.
  ಹುಣಸೆ ಹಣ್ಣು ಬಿಸಲಲ್ಲಿ ಚೆನ್ನಾಗಿ ಒಣಗಿಸಿ ಅಥವ ವಾಟೆಹುಳಿ - ಆಮ್ ಚೂರ್ ಜೊತೆ ರುಚಿಗೆ ತಕ್ಕಂತೆ ಬೆಲ್ಲ ಉಪ್ಪು ಸೇರಿಸಿ ಪುಡಿ ಮಾಡಿ ಇದರ ಜೊತೆ ಹುರಿದಿಟ್ಟು ಕೊಂಡ ಎಲ್ಲಾ ಮಸಾಲೆ ಮತ್ತು ಹುರಿದಿಟ್ಟು ಕೊಂಡ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸೇರಿಸಿ ಪುಡಿ ಮಾಡಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಬಹುದು.
   ಒಣ ಕೊಬ್ಬರಿ ಜಾಗದಲ್ಲಿ ತೆಂಗಿನಕಾಯಿ ತುರಿ ಕೂಡ ಬಳಸ ಬಹುದು ಆದರೆ ತೆರೆದ ಪ್ರದೇಶದಲ್ಲಿ ನಾಕಾರು ದಿನದ ಶೆಲ್ಟ್ ಲೈಪ್ ಮಾತ್ರ (ಪ್ರಿಜ್ ನಲ್ಲಿ ಹೆಚ್ಚು ದಿನ ಉಳಿಯುತ್ತದೆ).
   ಈ ಚಟ್ನಿ ಪುಡಿಗೆ ಮೊಸರು, ತುಪ್ಪ ಅಥವ ಎಣ್ಣೆ ಜೊತೆ ಅನ್ನದ ಜೊತೆ ಕಲಿಸಿ ತಿನ್ನಬಹುದು ಅಥವ ರೊಟ್ಟಿ ದೋಸೆ ಇಡ್ಲಿ ಜೊತೆ ತಿನ್ನಬಹುದು ಕಿತ್ತಳೆ ಹಣ್ಣಿನ ಆರೋಮದ ಅಪ್ಯಾಯ ರುಚಿ ಈ ಚಟ್ನಿಯ ವಿಶೇಷ.
  ಈಗ ಕಿತ್ತಳೆ ಹಣ್ಣಿನ ಸೀಸನ್ ಆದ್ದರಿಂದ ತಡವೇಕೆ?


  ಸಿರ್ಸಿಯಲ್ಲಿ #ಸುಯೋಗಾಶ್ರಮ ನಡೆಸುವ, ಅನಾಥರಿಗೆ ಆಶಕ್ತರಿಗೆ ತಾಯಿಯಂತೆ ಕಾಡಾಡುವ ಶ್ರೀಮತಿ ಲತಿಕಾ ಭಟ್ಟರು ಆಶ್ರಮವಾಸಿಗಳಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ತಯಾರಿಸಿ ಬಡಿಸಿದ ಪೋಸ್ಟ್ ಹಾಕಿದ್ದರು ಅದಕ್ಕೆ ನಾನು ಕಿತ್ತಳೆ ಹಣ್ಣಿನ ಸಿಪ್ಪೆಯ ಚಟ್ನಿಪುಡಿ ಕೂಡ ಮಾಡುತ್ತಾರೆ ಅಂತ ಪ್ರತಿಕ್ರಿಯಿಸಿದ್ದೆ ....ಅದಕ್ಕೆ ಅವರು ಕಿತ್ತಳೆ ಹಣ್ಣಿನ ಸಿಪ್ಪೆ ಒಣಗಿಸುವುದೆಲ್ಲ ಆಶ್ರಮದಲ್ಲಿ ಕಷ್ಟ ಅಂದಿದ್ದರು.
   ಇದೇ ಪೋಸ್ಟ್ ನಲ್ಲಿ #ಆಕೃತಿ_ಕನ್ನಡ_ಡಾಟ್_ಕಾಮ್ ಶ್ರೀಮತಿ ಶಾಲಿನಿಹೂಲಿ ಅವರು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸುವ ಚಟ್ನಿ ಪುಡಿ ರೆಸಿಪಿ ಕೇಳಿದ್ದರು.
 ಕಿತ್ತಳೆ ಹಣ್ಣು ಏಷ್ಯಾ ಮೂಲದ್ದು ಒಂದು ಕಾಲದಲ್ಲಿ ನಮ್ಮ ಕೊಡಗು ಜಿಲ್ಲೆ ಕಿತ್ತಳೆಗೆ ಪ್ರಸಿದ್ಧಿ ಪಡೆದಿತ್ತು ಈಗ ಮಹಾರಾಷ್ಟ್ರದ ನಾಗಪುರ ಕಿತ್ತಲೆಹಣ್ಣು  ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಪ್ರದೇಶವಾಗಿದೆ.
  ಸೂರ್ಯನ ಬಿಸಿಲು ಕಡಿಮೆ ಬೀಳುವ ಚಳಿ ಪ್ರದೇಶದಲ್ಲಿರುವ ಜನರಿಗೆ ವಿಟಮಿನ್ ಸಿ ಕೊರತೆಯ ಬಾದೆ ಜಾಸ್ತಿ ಅದರಿಂದ ಚರ್ಮದ ಸಮಸ್ಯೆ ಜಾಸ್ತಿ ಆದ್ದರಿಂದ ಆ ಪ್ರದೇಶಗಳಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ (OJ) ಜಾಸ್ತಿ ಬಳಕೆ ಆಗುತ್ತದೆ.
  ಕಿತ್ತಳೆ ಹಣ್ಣಿನ ಚಟ್ನಿ ಪುಡಿಗೆ ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆದು ಒಣಗಿಸ ಬೇಕಾಗಿಲ್ಲ ಹೀಗೆ ಒಣಗಿಸಿದ ಸಿಪ್ಪೆಯಲ್ಲಿ ಕಿತ್ತಳೆ ಹಣ್ಣಿನಲ್ಲಿರುವ ಸುವಾಸನೆ ಮತ್ತು ರುಚಿ ಇರುವುದಿಲ್ಲ ಆದ್ದರಿಂದ ಕಿತ್ತಳೆ ಹಣ್ಣಿನ ಒಣಗಿಸಿದ ಸಿಪ್ಪೆ ಬಳಸಬಾರದು ನೆನಪಿರಲಿ.
  ಎರೆಡು ಕಿತ್ತಳೆ ಹಣ್ಣು ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆದು ಬಟ್ಟೆಯಲ್ಲಿ ಒರೆಸಿ ಇಟ್ಟು ಕೊಳ್ಳಿ ನಂತರ ಅದನ್ನು ಸ್ವಲ್ಪ ಎಣ್ಣೆ ಜೊತೆ ಚೆನ್ನಾಗಿ ಹುರಿದು ತೆಗೆದುಕೊಳ್ಳಿ.
   ಒಂದು ಟೀ ಚಮಚ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆ, 1 ಚಮಚ ಕೊತ್ತುಂಬರಿ ಕಾಳು, ಅರ್ದ ಚಮಚ ಎಳ್ಳು, 8 ಒಣ ಮೆಣಸು, ಸ್ವಲ್ಪ ಒಣ ಕೊಬ್ಬರಿ ತುರಿ ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಿ.
  ಹುಣಸೆ ಹಣ್ಣು ಬಿಸಲಲ್ಲಿ ಚೆನ್ನಾಗಿ ಒಣಗಿಸಿ ಅಥವ ವಾಟೆಹುಳಿ - ಆಮ್ ಚೂರ್ ಜೊತೆ ರುಚಿಗೆ ತಕ್ಕಂತೆ ಬೆಲ್ಲ ಉಪ್ಪು ಸೇರಿಸಿ ಪುಡಿ ಮಾಡಿ ಇದರ ಜೊತೆ ಹುರಿದಿಟ್ಟು ಕೊಂಡ ಎಲ್ಲಾ ಮಸಾಲೆ ಮತ್ತು ಹುರಿದಿಟ್ಟು ಕೊಂಡ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸೇರಿಸಿ ಪುಡಿ ಮಾಡಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಬಹುದು.
   ಒಣ ಕೊಬ್ಬರಿ ಜಾಗದಲ್ಲಿ ತೆಂಗಿನಕಾಯಿ ತುರಿ ಕೂಡ ಬಳಸ ಬಹುದು ಆದರೆ ತೆರೆದ ಪ್ರದೇಶದಲ್ಲಿ ನಾಕಾರು ದಿನದ ಶೆಲ್ಟ್ ಲೈಪ್ ಮಾತ್ರ (ಪ್ರಿಜ್ ನಲ್ಲಿ ಹೆಚ್ಚು ದಿನ ಉಳಿಯುತ್ತದೆ).
   ಈ ಚಟ್ನಿ ಪುಡಿಗೆ ಮೊಸರು, ತುಪ್ಪ ಅಥವ ಎಣ್ಣೆ ಜೊತೆ ಅನ್ನದ ಜೊತೆ ಕಲಿಸಿ ತಿನ್ನಬಹುದು ಅಥವ ರೊಟ್ಟಿ ದೋಸೆ ಇಡ್ಲಿ ಜೊತೆ ತಿನ್ನಬಹುದು ಕಿತ್ತಳೆ ಹಣ್ಣಿನ ಆರೋಮದ ಅಪ್ಯಾಯ ರುಚಿ ಈ ಚಟ್ನಿಯ ವಿಶೇಷ.
  ಈಗ ಕಿತ್ತಳೆ ಹಣ್ಣಿನ ಸೀಸನ್ ಆದ್ದರಿಂದ ತಡವೇಕೆ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...