Skip to main content

Blog number 2029. ನರ್ಮದಾ ನದಿ ಪರಿಕ್ರಮಣ ಯಾತ್ರೆಗೆ ಪುರಾಣದ ನಂಟಿದೆ.

#ನನ್ನನ್ನು_ಹೆಚ್ಚು_ಕಾಡುತ್ತಿರುವ_ನರ್ಮದಾನದಿ_ಪರಿಕ್ರಮ

#ವಿಂದ್ಯಾಪರ್ವತದಲ್ಲಿ_ಹುಟ್ಟಿ_ಪಶ್ಚಿಮಾಬಿ_ಮುಖವಾಗಿ_ಹರಿದು_ಅರಬೀಸಮುದ್ರ_ಸೇರುತ್ತದೆ

#ನರ್ಮದಾ_ನದಿ_1312_ಕಿಮಿ_ಹರಿಯುವ_ನದಿಯ_ಜಲಾಯನ_ಪ್ರದೇಶದ_ವ್ಯಾಪ್ತಿ_38143_ಚದರ_ಮೈಲು

#ಹಿಂದೂ_ಪುರಾಣದಲ್ಲಿ_ನರ್ಮದಾ_ನದಿ_ಗಂಗಾನದಿಯಂತೆ_ಪವಿತ್ರ

#ನರ್ಮದಾ_ನದಿ_ಪರಿಕ್ರಮಣ_ಎಂಬ_ಪುರಾತನ_ಕಾಲದಿಂದ_ನಡೆದು_ಬಂದಿರುವ_ದಾರ್ಮಿಕ_ಯಾತ್ರೆ

#ನರ್ಮದಾ_ನದಿಯ_ಪರಿಕ್ರಮದ_ಯಾತ್ರಾರ್ಥಿ_ತನ್ನ_ಬಲಭಾಗದಲ್ಲಿನ_ನದಿಪಾತ್ರದಲ್ಲಿ_3500_ಕಿಮಿ_ಪರಿಕ್ರಮಿಸುವ_ಯಾತ್ರೆ


   ದೇಶದ ಐದು ಪ್ರಮುಖ ನದಿಗಳಲ್ಲಿ ಒಂದಾದ ಮಧ್ಯಪ್ರದೇಶದ ವಿಂದ್ಯ ಪರ್ವತದ ಅಮರಕಂಟಕ ಬೆಟ್ಟದ ನರ್ಮದ ಕುಂಡದಲ್ಲಿ ಉಗಮಿಸಿ ಮಧ್ಯಬಾರತದಲ್ಲಿ ಹರಿದು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ಹಾದು ಗುಜರಾತ್ ರಾಜ್ಯದ ಭರೂಚ ನಗರದ ಬಳಿ ಅರಬೀ ಸಮುದ್ರ ಸೇರುವ ನರ್ಮದಾ ನದಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಕೆಲವೇ ಕೆಲವು ಅಪರೂಪದ ನದಿಗಳಲ್ಲಿ ಒಂದು.
   ಇದು ಉಗಮ ಸ್ಥಾನದಿಂದ 1312 ಕಿಮಿ ಹರಿದು ಸಮುದ್ರ ಸೇರುತ್ತದೆ ಈ ನರ್ಮದಾ ನದಿಯ ಜಲಾಯಾನ ಪ್ರದೇಶದ ವ್ಯಾಪ್ತಿ ನಾಲ್ಕು ರಾಜ್ಯಗಳಲ್ಲಿ 38143 ಚದರ ಮೈಲು ವಿಸ್ತಿರ್ಣ .
  ಈ ನದಿಗೆ ಸರ್ದಾರ್ ಸರೋವರ ಆಣೆಕಟ್ಟು ನಿರ್ಮಾಣ ವಿರೋದಿಸಿ ನರ್ಮದಾ ಬಚಾವೋ ಆಂದೋಲನ ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್ ನಡೆಸಿದ್ದರು.
  ಈ ನದಿ ಪಾತ್ರದಲ್ಲಿ ಆವರ್ತನದಲ್ಲಿ  (ಕ್ಲಾಕ್ ವೈಸ್)  ಬಲ ಭಾಗದಲ್ಲಿ ನದಿ ಪಾತ್ರದಲ್ಲಿ ಬರಿಗಾಲಲ್ಲಿ ಒಂದು ಸುತ್ತು ಬರುವ ಪುರಾತನ ಕಾಲದಿಂದಲೂ ನಡೆದು ಬಂದಿರುವ ಒಂದು ಯಾತ್ರೆ ವಿಶೇಷವಾಗಿ ನಡೆಯುತ್ತಾ ಇದೆ.
  ಸುಮಾರು 3500 ಕಿಮಿ ದೂರ ಪರಿಕ್ರಮಿಸುವ ಈ ಯಾತ್ರೆಗೆ ನರ್ಮದಾ ಪರಿಕ್ರಮಣ ಯಾತ್ರೆ ಎನ್ನುವ ಹೆಸರಿನಿಂದ ಕರೆಯುತ್ತಾರೆ.
   ಗಂಗಾ ನದಿಯಂತೆ ನರ್ಮದಾ ನದಿ ಹಿಂದೂ ಪುರಾಣಗಳಲ್ಲಿ ನದಿ ದೇವತೆ, ಮತ್ಸ್ಯ ಪುರಾಣದಲ್ಲಿ ನರ್ಮದೆಯ ಉದ್ದಕ್ಕೂ ಇರುವ ಎಲ್ಲಾ ದಡಗಳು ಪವಿತ್ರ.
  ಈ ನದಿಯಲ್ಲಿ ಬಾನಲಿಂಗ ಎನ್ನುವ ಲಿಂಗಾಕಾರದ ಸ್ಪಟಿಕ ಮತ್ತು ಶಿಲಾ ಕಲ್ಲುಗಳು ಸಿಗುವುದು ವಿಶೇಷ.
   ನರ್ಮದಾ ನದಿ ಪರಿಕ್ರಮ ಯಾತ್ರೆಗೆ ಅನೇಕ ನಿಯಮ ಇದೆ ಈ ನದಿಯಲ್ಲಿ ಸ್ನಾನ ವಸ್ತ್ರ ತೊಳೆಯಲು ಸೋಪು ಶಾಂಪೂ ಬಳಸುವಂತಿಲ್ಲ, ಪರಿಕ್ರಮ ಯಾತ್ರೆಯಲ್ಲಿ ನರ್ಮದಾ ನದಿ ನೀರು ಮಾತ್ರ ಸೇವಿಸುವುದು, ನದಿಯಲ್ಲಿ ಈಜ ಬಾರದು, ನಾಲ್ಕು ಅಡಿ ಆಳ ದಾಟಿ ನದಿ ಒಳಗೆ ಪ್ರವೇಶಿಸಬಾರದು.
 ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ಮಾತ್ರ ಯಾತ್ರಿಸುವುದು, ನರ್ಮದಾ ನದಿಗೆ ಉಗಳಲೂ ಬಾರದು, ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ನರ್ಮದಾ ಆರತಿಯಲ್ಲಿ ಭಾಗವಹಿಸುವುದು, ಶ್ವೇತಾ ಅಥವ ಕಿತ್ತಳೆ ಬಣ್ಣದ ವಸ್ತ್ರ ಧರಿಸುವ ಈ ಬರೀಗಾಲ ಈ ಯಾತ್ರೆ 3 ವರ್ಷ 3 ತಿಂಗಳು 16 ದಿನ ಕಾಲ ನಡೆಸುತ್ತಾರೆ.
  ಸಮಯದ ಅಭಾವ ಕಾಲದಲ್ಲಿ ಸೈಕಲ್ ಬೈಕ್ ಕಾರಿನಲ್ಲೂ ಈ ಯಾತ್ರೆ ಮಾಡುತ್ತಾರೆ ಇಡೀ 3500 ಕಿಮಿ ಯಾತ್ರೆ ಸಾಗುವ ಮಾಗ೯ದಲ್ಲಿ ಆಶ್ರಮ - ಮಂದಿರಗಳಲ್ಲಿ - ಮನೆ ಮನೆಗಳಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟೋಪಚಾರ ವಸತಿ ಸೌಲಭ್ಯ ನೀಡುವ ಪದ್ದತಿ ಸಾವಿರಾರು ವರ್ಷದಿಂದ ಆಚರಣೆಯಲ್ಲಿ ಇದೆ ಇದು ಪುಣ್ಯದ ಕೆಲಸ ಎಂಬ ನಂಬಿಕೆ ಅಲ್ಲಿದೆ.
  ಈ ಪರಿಕ್ರಮ ಯಾತ್ರೆಯಲ್ಲಿ ನದಿ ದಾಟಬಾರದು, ಯಾತ್ರೆ ಪ್ರಾರಂಭದಲ್ಲಿ ತಲೆ ಗಡ್ಡ ಬೋಳಿಸಬೇಕು  ಯಾತ್ರೆ ಪೂರ್ಣವಾಗುವ ತನಕ ಕ್ಷೌರ ಮಾಡುವಂತಿಲ್ಲ ಈ ಯಾತ್ರೆ ಒಂದು ತಪಸ್ಸಿನಂತೆ ನಡೆಯುತ್ತದೆ ಮತ್ತು ಈ ಯಾತ್ರೆ ಮುಗಿಸಿದವರು ತಪಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ.
  ನರ್ಮದಾ ವಿಷನ್ ಸ್ಥಾಪಿಸಿ ಸ್ವಚ್ಚ ನರ್ಮದಾ ಅಭಿಯಾನ ಪ್ರಾರಂಬಿಸಿರುವ ಅವದೂತ ದಾದಾ ಗುರು ಯಾವುದೇ ಆಶ್ರಮ ಮಠ ಹೊಂದಿಲ್ಲ ಈಗಾಗಲೇ ನರ್ಮದಾ ನದಿ ಪರಿಕ್ರಮಣ ಆರು ಬಾರಿ ಮುಗಿಸಿದ್ದಾರೆ ಈಗ 7ನೇ ನರ್ಮದಾ ಪರಿಕ್ರಮಣ ಪ್ರಾರಂಬಿಸಿದ್ದಾರೆ ಅವರನ್ನು ಸಾವಿರಾರು ಜನ ಪರಿಸರ ಸಂರಕ್ಷಣೆಯ ವ್ಯಕ್ತಿಗಳು ಹಿಂಬಾಲಿಸುತ್ತಿದ್ದಾರೆ.     
   ಅವರ ಬಗ್ಗೆ ಮಾಹಿತಿ ಇಲ್ಲದೆ ಅನೇಕರು ದಾದಾ ಗುರುಗಳ ಬಗ್ಗೆ ವ್ಯಂಗ್ಯವಾಗಿ ಬರೆಯುತ್ತಿದ್ದಾರೆ,ನರ್ಮದಾ ಬಚಾವೋ ಆಂದೋಲನ ಬೆಂಬಲಿಸಿದ ಕನ್ನಡಿಗರೂ ನರ್ಮದಾ ಮಿಷನ್ ಸ್ಥಾಪಿಸಿ ಇಡೀ ನರ್ಮದಾ ನದಿ ಸಂರಕ್ಷಣೆಯ ದೊಡ್ಡ ಆಂದೋಲನವೇ ಮಾಡುತ್ತಿರುವ ಅವದೂತ ದಾದಾ ಗುರು ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಈ ರೀತಿ ಬರೆದಿರಬಹುದು.
  ಆದ್ದರಿಂದಲೇ ನಾನು ನರ್ಮದಾ ಪರಿಕ್ರಮದ ಬಗ್ಗೆ ಈ ವಿವರವಾದ ಲೇಖನ ಬರೆಯಲು ಕಾರಣವಾಗಿದೆ ಮತ್ತು ಸಾಧ್ಯವಾದರೆ ನನ್ನ ಜೀವಮಾನದಲ್ಲಿ ನರ್ಮದಾ ಪರಿಕ್ರಮಣ ಮಾಡುವ ಇಚ್ಚೆಯೂ ಇದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ