Skip to main content

Blog number 1998. ಶಾಂತವೇರಿ ಗೋಪಾಲಗೌಡರ 101 ನೇ ಜನ್ಮ ದಿನಾಚಾರಣೆ 14 ಮಾರ್ಚ್... ಕಳೆದ ವರ್ಷ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆಯ ಅಶ್ವಾಸನೆ ಈಡೇರಲೇ ಇಲ್ಲ.

#ನಾಳೆ_ದಿನಾಂಕ_14_ಮಾರ್ಚ್_ಶಾಂತವೇರಿಗೋಪಾಲಗೌಡರ_101ನೇ_ಹುಟ್ಟುಹಬ್ಬ.

#ಸಾಗರ_ಹೋಟೆಲ್_ವೃತ್ತದಲ್ಲಿ_ಶಾಂತವೇರಿ_ಗೋಪಾಲ_ಗೌಡರ_ಪ್ರತಿಮೆ_ಸ್ಥಾಪನೆ

#ಆಗ_ಗೃಹ_ಸಚಿವ_ಆರಗ_ಜ್ಞಾನೇಂದ್ರ_ಮತ್ತು_ಶಾಸಕರಾಗಿದ್ದ_ಹರತಾಳು_ಹಾಲಪ್ಪರಿಂದ

#ಶಾಂತವೇರಿ_ಗೋಪಾಲಗೌಡರ_ಜನ್ಮ_ಶತಮಾನೋತ್ಸವದಲ್ಲಿ_ಸಾಗರದಲ್ಲಿ_ನೀಡಿದ್ದ_ಭರವಸೆ.

#ಇದಕ್ಕಾಗಿ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯರಿಂದ_ಒಂದು_ಸಾವಿರ_ಟೋಕನ್_ಅಡ್ವಾನ್ಸ್_ನೀಡಿದ್ದರು

#ಸಾಗರ_ಹೊಸನಗರ_ತೀರ್ಥಹಳ್ಳಿ_ವಿದಾನಸಭಾ_ಕ್ಷೇತ್ರದ_ಮೊದಲ_ಶಾಸಕರು

#ಸಾಗರ_ಹೊಸನಗರದಲ್ಲಿ_ಶಾಂತವೇರಿ_ಗೋಪಾಲಗೌಡರ_ಪ್ರತಿಮೆ_ಸ್ಥಾಪನೆ_ಮಾಡಲಾಗದ್ದು_ದುರಂತ.


    ಶಾಂತವೇರಿ ಗೋಪಾಲಗೌಡರನ್ನು ನಾನು ನೋಡಿಲ್ಲ ಆದರೆ ಅವರ ಒಡನಾಟದ ಮತ್ತು  ಹೋರಾಟದ ಜೊತೆಗಾರರಾಗಿದ್ದ  ಗಣಪತಿಯಪ್ಪ, ಅವರ ಆತ್ಮಚರಿತ್ರೆ #ಜೀವಂತ_ಜ್ಜಾಲೆ ಬರೆದ  ಕೊಣಂದೂರು ವೆಂಕಪ್ಪ ಗೌಡರ  ಒಡನಾಟದಿಂದ ಶಾಂತವೇರಿ ಗೋಪಾಲಗೌಡರ ಬಗ್ಗೆ ಅನೇಕ ವಿಚಾರ ತಿಳಿಯಲು ಸಾಧ್ಯವಾಯಿತು.
    ಗೋಪಾಲಗೌಡರು ಮೊದಲ ವಿದಾನ ಸಭೆಗೆ ಆಯ್ಕೆ ಆದ  ಕ್ಷೇತ್ರದವನು ನಾನು, ಗೋಪಾಲಗೌಡರು ಸೋಲಿಸಿದ ಅವರ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿ ನಮ್ಮ ಊರಿನವರಾದ ಆನಂದಪುರಂ ಬದರಿನಾರಾಯಣ ಅಯ್ಯಂಗಾರರನ್ನು.
    ಸಾಗರ ಮತ್ತು  ಹೊಸನಗರದಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಲು ಈ ವರೆಗೆ ಸಾಧ್ಯವಾಗಲಿಲ್ಲ ಎಂಬುದು ಬೇಸರದ ವಿಷಯ.
    ಕಳೆದ ವರ್ಷ ಸಾಗರದಲ್ಲಿ ದಿನಾಂಕ 11 ಮಾರ್ಚ್ 2023ರಂದು ಸಾಗರದ ಶಿವಾನಂದ ಕುಗ್ವೆ ಮತ್ತು ರೈತ ಸಂಘದ ಎನ್.ಡಿ. ವಸಂತ ಕುಮಾರ್  ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ನಡೆಸಿದ್ದರು.
    ಅವತ್ತು ಈ ಕಾಯ೯ಕ್ರಮಕ್ಕೆ ಅತಿಥಿಗಳಾಗಿದ್ದ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರು ಸಭೆಗೆ ಹೋಗುವ ಮೊದಲು ಪೋನ್ ಮಾಡಿದ್ದರು, ಅವರಿಗೆ ನಾನು ಈ ಸಭೆಯಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪನೆಯ ಪ್ರಸ್ಥಾಪನೆ ಮಾಡಲು ವಿನಂತಿಸಿದ್ದೆ ಅದಕ್ಕೆ ಪುಟ್ಟಯ್ಯನವರು ಅದನ್ನೆಲ್ಲ ನಿರೀಕ್ಷಿಸಲು ಸಾಧ್ಯವಾ? ಎಂಬ ಅನುಮಾನ ವ್ಯಕ್ತಪಡಿಸಿದರು, ಏನಾದರಾಗಲಿ ಪ್ರಸ್ತಾವನೆ ಆಗಲಿ ಅಂದಿದ್ದೆ.
   ಸಂಜೆ ಪುಟ್ಟಯ್ಯನವರು ಹೇಳಿದ್ದು ಅವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರರ ಪಕ್ಕದಲ್ಲೇ ಸಂಘಟಕರು ಆಸನ ವ್ಯವಸ್ಥೆ ಮಾಡಿದ್ದರಿಂದ ಸಚಿವರಿಗೇ ತಮ್ಮ ಪ್ರಸ್ತಾವನೆ ಹೇಳಿದಾಗ ಆರಗ ಜ್ಞಾನೇಂದ್ರ ಸಹಮತ ಸೂಚಿಸಿ ಸ್ಥಳಿಯ ಶಾಸಕರ ಜೊತೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರಂತೆ.
   ಇದರಿಂದ ಪ್ರೇರೇಪಿತರಾದ ಪುಟ್ಟಯ್ಯನವರು ಸಾಗರ ತಾಲ್ಲೂಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಮತ್ತು ಶಾಂತವೇರಿ ಗೋಪಾಲಗೌಡರ ಕಿರಿಯ ಒಡನಾಡಿ ಬಿ.ಆರ್.ಜಯ೦ತ್ ಹಸ್ತ ತಮ್ಮ ಪ್ರಥಮ ದೇಣಿಗೆ ಆಗಿ ಒಂದು ಸಾವಿರ ರೂಪಾಯಿ ನೀಡಿದಾಗ, ಪ್ರತಿಮೆಯ ನಿರ್ಮಾಣದ ಭರವಸೆಯನ್ನು ಆರಗ ಜ್ಞಾನೇಂದ್ರರು ತಮ್ಮ ಸಭಾ ಬಾಷಣದಲ್ಲಿ ಘೋಷಣೆ ಮಾಡಲು ಪುಟ್ಟಯ್ಯರ ವಿನಂತಿಗೆ ಒಪ್ಪಿದ್ದರಂತೆ.
  ಆದರೆ ಅವರು ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲು ಮರೆತು ಭಾಷಣ ಮುಗಿಸಿ ಪುಟ್ಟಯ್ಯರ ಪಕ್ಕದಲ್ಲಿ ಅಸೀನರಾದಾಗ, ಪುಟ್ಟಯ್ಯನವರು ಪುನಃ ಜ್ಞಾಪಿಸಿದರಂತೆ ಆಗ ಪುನಃ ವೇದಿಕೆಗೆ ಹೋಗಿ ಮೈಕ್ ನಲ್ಲಿ ಗೃಹ ಮಂತ್ರಿ ಜ್ಞಾನೇಂದ್ರರು ಘೋಷಣೆ ಮಾಡಿದ್ದಾರೆ "ನಾನು ಮತ್ತು ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪನವರು ಸೇರಿ ಸಾಗರದಲ್ಲಿ ಶಾ೦ತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ಸಾಗರದ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ನಿರ್ಮಿಸುತ್ತೇವೆ" ಅಂತ.
   ಬಹುಶಃ ಈ ಮಾತುಗಳು ಕಾರ್ಯಗತವಾಗದೇ ಭರವಸೆಯಾಗೆ ಉಳಿದಿದೆ,ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯರಿಗೆ ಸಾರ್ವಜನಿಕ ಸಮಾರಂಭದಲ್ಲಿ ನೀಡಿದ ಭರವಸೆ ಮತ್ತು ಅವರು ನೀಡಿದ ಒಂದು ಸಾವಿರ ಮುಂಗಡ ಹಣ ಶಾಂತವೇರಿ ಗೋಪಾಲಗೌಡರ ಪ್ರತಿಮೆ ನಿರ್ಮಾಣ ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖಂಡರಿಗೆ ನೆನಪಾಗಲಿ ಎಂದು ಶಾಂತವೇರಿ ಗೋಪಾಲಗೌಡರ 101ನೆ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಆಶಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ