Skip to main content

Blog number 2022. ನಮ್ಮ ರಾಜ್ಯದ ವೃತ್ತಿಯಲ್ಲಿ ವೈದ್ಯರಾಗಿರುವ ಬರಹಗಾರರೂ ಆಗಿರುವ ಕಾಗಿನೆಲೆಯ ಡಾಕ್ಟರ್ ಪ್ರಕಾಶ್ ಬಾರ್ಕಿ ಅವರು ನಮ್ಮ ದೇಶದ ನರ್ಮದಾ ನದಿ ಪರಿಕ್ರಮಣ ತಮ್ಮ ಸೈಕಲ್ ಮೇಲೆ ನೆರವೇರಿಸಿದ್ದಾರೆ ಇವರ ಪರಿಕ್ರಮಣದ ಲೇಖನಗಳ ಕಂತುಗಳಾಗಿ ಆಕೃತಿ ಕನ್ನಡ ಡಾಟ್ ಕಾಮ್ ನಲ್ಲಿ ಪ್ರಕಟವಾಗುತ್ತಿದೆ.

ನರ್ಮದಾ_ನದಿ_ಪರಿಕ್ರಮಣ

#ಇದು_ನದಿ_ಪುರಾಣ

#ಕಾಗಿನೆಲೆಯ_ವೈದ್ಯರೂ_ಬರಹಗಾರರಾದ_ಡಾಕ್ಟರ್_ಪ್ರಕಾಶ್_ಬಾರ್ಕಿ_53_ದಿನಗಳಲ್ಲಿ_ಪೂರೈಸಿದ್ದಾರೆ

#ಆಕೃತಿ_ಕನ್ನಡ_ಡಾಟ್_ಕಾಂ_ಇದನ್ನು_ಕಂತುಗಳಾಗಿ_ಪ್ರಕಟಿಸುತ್ತಿದೆ

#ಇವತ್ತಿಗೆ_23ನೇ_ಕಂತು_ಹಿಂದಿನ_ಕಂತುಗಳನ್ನು_ಓದುವ_ಲಿಂಕ್_ನೀಡಿದ್ದಾರೆ.

#ತುಂಬಾ ಕುತೂಹಲಕಾರಿ ಅನುಭವದ ಲೇಖನ ಮಾಲೆ ತಪ್ಪದೆ ಓದಿ


ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೩)
March 24, 2024  aakrutikannada
ಗುಹೆಯ ಒಳಗೆಲ್ಲಾ ತಂಪು ತಂಪು. ಉದ್ದನೆಯ ಗುಹೆ. ಬಾವಲಿಗಳದ್ದೆ ಸಾಮ್ರಾಜ್ಯ. ಬೃಹತ್ ಬಂಡೆಯ ಅಡಿಯ ಗುಹೆಯಲ್ಲಿ “ಮುನಿಗಳು ತಪಸ್ಸು ಮಾಡುತ್ತಿದ್ದ ರೀತಿ ಕಂಚಿನ ಮೂರ್ತಿ ರಚಿಸಲಾಗಿದೆ. ಗುಹೆಯ ಇನ್ನಷ್ಟು ಒಳಗೆ ಹೋದರೆ ತಾಯಿ ನರ್ಮದೆಯ ಮೂರ್ತಿಯಿದ್ಧು ಸದಾ ಪೂಜೆ ಸಲ್ಲುತ್ತಿರುತ್ತೆ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
   ಅಮರ ಕಂಟಕ್’ದ ಮೃತ್ಯುಂಜಯ ಆಶ್ರಮದಲ್ಲಿ ತುಂಬಾ ಜನ ಪರಿಕ್ರಮವಾಸಿಗಳು ಉಳಿದುಕೊಂಡಿದ್ದರು. ಅದಕ್ಕೆ ಬೆಳಿಗ್ಗೆ 4 ಗಂಟೆಗೆಲ್ಲಾ ಗಲಗಲ ಸದ್ದು. ಎಚ್ಚರವಾಯಿತು..
  ಸರಿ.. ಸ್ನಾನಕ್ಕೆ ಅಂತಾ ಹೊರಟಿದ್ದು “ರಾಮ ಘಾಟ್”ಗೆ. ಮೃತ್ಯುಂಜಯ ಆಶ್ರಮದ ಎದುರಿಗಿದ್ದ ಘಾಟ್ ಇದು.
    ನಾನು ಘಾಟ್’ಗೆ ಹೋಗಿ ತಲುಪುವುದರೊಳಗೆ ಅಲ್ಲಿಯೂ ಸ್ನಾನ ಮಾಡುತ್ತಿದ್ದರು. ಚಳಿ ವಿಪರೀತ. ಆವಾಗ ತಾಪಮಾನ 9 ಡಿಗ್ರಿ. ಚಳಿಗಾಳಿಗೆ ಮೈಯಲ್ಲಿ ಅದುರುವಿಕೆ ಶುರುವಾಗಿತ್ತು. ಹಲ್ಲು ಕಟಕಟಿಸುತ್ತಾ ಪಟ್ ಅಂತ ನದಿಯಲ್ಲಿ ಮುಳುಗಿ ಹಾಕಿ.. ಸ್ನಾನ ಮುಗಿಸಿದೆ. ಸ್ನಾನವಾದ ನಂತರ ಚಳಿಯ ತೀವ್ರತೆ ಕಡಿಮೆಯಾದಂತಾಯಿತು‌. ಬಿಸಿ, ಬಿಸಿ ಚಹಾ ಕುಡಿಯಲು ಅಂಗಡಿಗೆ ಹೋದೆ. ಚಹಾ ಗಂಟಲಲ್ಲಿ ಇಳಿಯುತ್ತಿದ್ದ ಹಾಗೆ ನವಚೈತನ್ಯ. ಉತ್ತರ ತಟದ ಯಾತ್ರೆ ಸಂಪೂರ್ಣವಾಯಿತೆನು ನಿಜ ಆದರೆ ಕಪಿಲಧಾರಾ, ದೂಧ ದಾರಾ ಹೋಗುವುದು ಬಾಕಿ ಇತ್ತು..
  5 ಕಿ.ಮೀ ನಡೆಯುತ್ತಾ ಹೊರಟೆ‌. ಮೈ ತುಂಬಾ ಸ್ವೇಟರ್, ಕೈಗವಸು, ಟೋಪಿ..ತೊಟ್ಟು ಕಾಡಿನ ಕಾಲುದಾರಿಯಲ್ಲಿ ನಡೆಯತೊಡಗಿದೆ. ಸುತ್ತಲೂ ಗಗನಚುಂಬಿ ಹಳೆಯ ಮರಗಳು, ಒಬ್ಬರು ಅನಾಮತ್ತು ತಬ್ಬಿಕೊಂಡರು ಕೈ ಎಟುಕದ ರೀತಿ ದಪ್ಪಗಿವೆ‌. ಒತ್ತೊತ್ತಾಗಿ ಬೆಳೆದುದರಿಂದ ಕಾಡು ಗಂಭೀರವಾಗಿದೆ. ಸೂರ್ಯನ ಕಾರಣಗಳು ಭೂಮಿಗೆ ತಿವಿಯುವುದು ಕಷ್ಟ. ಅಷ್ಟು ಹುಲುಸಾಗಿ ಬೆಳೆದ ಕಾಡು.
   ತೆಳು ಮಂಜು, ಪಕ್ಷಿಗಳ ಕಲರವ, ಮಂಗಗಳ ಚೇಷ್ಟೆ.. ಇವೆಲ್ಲವುಗಳನ್ನು ನೋಡುತ್ತಾ ಹೊರಟೆ. ಪಕ್ಕಕ್ಕೆ ಹರಿಯುತ್ತಿದ್ದ ತಾಯಿ ನರ್ಮದೆಯ ಧಾರೆ ತೀರಾ ತೆಳುವಾಗಿತ್ತು‌. ಒಬ್ಬರು ಜಿಗಿದು ಈ ಕಡೆಯಿಂದ ಆ ಕಡೆಗೆ ಹೋಗುವಷ್ಟು ಚಿಕ್ಕದಾದ ಪಾತ್ರ.
ಕಾರಣ..
  ನದಿ ಹುಟ್ಟಿ ಹರಿಯುವುದು ಇಲ್ಲಿಂದಲೆ, ಆದ್ದರಿಂದ ಧಾರೆ ಚಿಕ್ಕದು‌‌. ಇದನ್ನು ತಾಯಿ ನರ್ಮದೆಯ ಬಾಲ್ಯಸ್ವರೂಪ ಎನ್ನಲಾಗುತ್ತೆ. ಮುಂದೆ ಓಂಕಾರೇಶ್ವರದಲ್ಲಿ ನದಿ ಪಾತ್ರ ಭಯಂಕರ ದೊಡ್ಡದು ಅದು ಯೌವ್ವನ ಸ್ವರೂಪ. ನರ್ಮದಾ ನದಿ ಹರಿದುಕೊಂಡು ಬಂದು ಕಾಡಿನ ಮಧ್ಯದೊಳಗೆ ತಿರುವು ತೆಗೆದುಕೊಳ್ಳುತ್ತೆ. ಕಲ್ಲುಬಂಡೆಗಳ ಎತ್ತರ ಜಾಗದಿಂದ ಕೆಳಗೆ ಹರಿದು “ಜಲಪಾತ” ನಿರ್ಮಾಣವಾಗುತ್ತೆ ಅದುವೆ ಕಪಿಲ ಧಾರಾ‌‌. ಕಪಿಲ ಮುನಿಯು ಇಲ್ಲಿ ತಪಸ್ಸು ಮಾಡಿದ್ದರಂತೆ.
   ಜಲಪಾತ ಎತ್ತರದಿಂದ ಬಿದ್ದು ಹರಿಯುವಾಗ ಸುಂದರ ದೃಶ್ಯ ನಿರ್ಮಾಣವಾಗುತ್ತೆ. ಸೌಮ್ಯವಾಗಿ ಹರಿಯುವ ನರ್ಮದೆ ಇನ್ನೂ ಕೆಳಗೆ ಪ್ರಪಾತದಲ್ಲಿ ಹರಿಯಲು ಪ್ರಾರಂಭಿಸುತ್ತಾಳೆ.
   ಮುಂದೆ ಬಂಡೆ ಕಲ್ಲುಗಳ ಮೇಲಿಂದ ಹರಿಯುತ್ತಿರುವಾಗ ಚಿಕ್ಕ ಚಿಕ್ಕ ಜಲಧಾರೆಗಳು ನಿರ್ಮಾಣವಾಗುತ್ತವೆ.
   ಸ್ವಚ್ಚ, ನಿಚ್ಚಳ.. ನಿಷ್ಕಲ್ಮಶ ಜಲ..
    ಇನ್ನಷ್ಟೂ ಆಳಕ್ಕೆ ಹರಿಯುವ ನದಿ, ಮುಂದೆ ಹರಿಯುತ್ತಾ ಚಿಕ್ಕಚಿಕ್ಕ ಧಾರೆಗಳಾಗಿ ಹರಿಯುತ್ತದೆ…ನೋಡಲು ಹಾಲಿನ ನೊರೆಯಂತೆ ಕಾಣುವುದರಿಂದ “ದೂಧ ಧಾರಾ” ಎಂದು ಹೆಸರು.
ದೂಧ ಧಾರಾದಲ್ಲಿ “ದೂರ್ವಾಸ”ಮುನಿಗಳು ತಪಸ್ಸು ಮಾಡಿದ್ದ ಗುಹೆಯಿದೆ.ಬೆಟ್ಪದ ಅಡಿಗೆ ಸಿಲುಕಿಕೊಂಡ ಬೃಹತ್ ಬಂಡೆಯಲ್ಲಿ “ದೂರ್ವಾಸ ಮುನಿಗಳ” ಗುಹೆಯಿದೆ.
ದಿನದ 24 ಗಂಟೆ ನಿರಂತರ “ಹೋಮ ಕುಂಡದಲ್ಲಿ ಅಗ್ನಿ” (ಧೂನಿ) ಉರಿಯುತ್ತಿರುತ್ತೆ.
ಅಲ್ಲಿನ ಸನ್ಯಾಸಿಗೆ ವಿನಂತಿಸಿಕೊಂಡಾಗ ಗುಹೆಯ ಪ್ರವೇಶ ದೊರೆಯಿತು‌. ಗುಹೆಯ ಒಳಗೆಲ್ಲಾ ತಂಪು ತಂಪು. ಉದ್ದನೆಯ ಗುಹೆ. ಬಾವಲಿಗಳದ್ದೆ ಸಾಮ್ರಾಜ್ಯ. ಬೃಹತ್ ಬಂಡೆಯ ಅಡಿಯ ಗುಹೆಯಲ್ಲಿ “ಮುನಿಗಳು ತಪಸ್ಸು ಮಾಡುತ್ತಿದ್ದ ರೀತಿ ಕಂಚಿನ ಮೂರ್ತಿ ರಚಿಸಲಾಗಿದೆ. ಗುಹೆಯ ಇನ್ನಷ್ಟು ಒಳಗೆ ಹೋದರೆ ತಾಯಿ ನರ್ಮದೆಯ ಮೂರ್ತಿಯಿದ್ಧು ಸದಾ ಪೂಜೆ ಸಲ್ಲುತ್ತಿರುತ್ತೆ.
   ಗುಹೆಯಲ್ಲಿ ಇನ್ನೊಂದಿಷ್ಟು ಗುಪ್ತ ಮಾರ್ಗಗಳಿವೆ. ಇಲ್ಲಿ ಹಲವು ಸಂತರು ಇಂದಿಗೂ ಧ್ಯಾನದಲ್ಲಿ ಮಗ್ನರಾಗಿದ್ದಾರೆ ಎಂಬುದು ಇಲ್ಲಿಯ ಸನ್ಯಾಸಿ ಮಾತು. ಗುಹೆಯಲ್ಲಿ ಪ್ರವೇಶ ಮಾಡಿ ವಿಕ್ಷಿಸಿದ್ದಾಯಿತು. ಪೂಜೆ ಕೈಗೊಂಡು ಹೊರಗೆ ಬಂದೆ. ಅಲ್ಲಿಂದ ಮತ್ತೆ ಮೃತ್ಯುಂಜಯ ಆಶ್ರಮಕ್ಕೆ ಬಂದವನೆ, ನಂದಿಯನ್ನು ತಳ್ಳಿಕೊಂಡು ಹೊರಟೆ. ಇಂದಿಗೆ “ತಾಯಿ ನರ್ಮದೆಯ ಉತ್ತರ ತಟದ ಯಾತ್ರೆ ನಿರ್ವಿಘ್ನವಾಗಿ ಕೊನೆಯಾಯಿತು. ಆದ್ದರಿಂದ ನದಿಯ ಉದ್ಗಮ ಸ್ಥಾನಕ್ಕೆ ಹೋಗಿ ತಟ ಪರಿವರ್ತನೆ ಮಾಡಿ ದಕ್ಷಿಣ ತಟಕ್ಕೆ ಬರುವುದಿತ್ತು.
  ನಂದಿಯನ್ನು ಓಡಿಸಕೊಂಡು, ಒಂದಿಷ್ಟು ಎತ್ತರ ಏರಿ “ಮಾಯಿ ಕಿ ಬಗಿಯಾ” ಎನ್ನುವ ಸ್ಥಳಕ್ಕೆ ಬಂದೆ. ನರ್ಮದಾ ನದಿ ಇಲ್ಲಿಯ ಒಂದು ಚಿಕ್ಕ ಕುಂಡದಲ್ಲಿ ಉದ್ಭವವಾಗಿದ್ದಾಳೆ.
“ಮಾಯಿ ಕಿ ಬಗಿಯಾ”ಸ್ಥಳದಲ್ಲಿ ನಂದಿಯನ್ನು ಉತ್ತರ ತಟದಿಂದ, ದಕ್ಷಿಣ ತಟಕ್ಕೆ ಕರೆದುಕೊಂಡು ಬಂದೆ…. ಒಂದಿಷ್ಟು ಶಾಸ್ತ್ರೋಕ್ತ ಪೂಜೆಯ ನಂತರ.
  ಇಲ್ಲಿಗೆ ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಬಂದೆ ಆದರೆ ನದಿಯನ್ನು ನಡುವೆ ಪಾರು ಮಾಡದೆಯೇ. ದಕ್ಷಿಣ ತಟದಲ್ಲಿ “ಮಾಯಿ ಕಿ ಬಗಿಯಾ” ಸ್ಥಳದಿಂದ ನೇರವಾಗಿ “ನರ್ಮದಾ ಕುಂಡ”ಕ್ಕೆ ಬಂದೆ. ನದಿ ಇಲ್ಲಿ ಸಹ ಉದ್ಭವವಾಗುತ್ತದೆ ಎಂಬ ಮಾತಿದೆ ಆದ್ದರಿಂದ ಎರಡು ಕಡೆ ಪೂಜೆ ಕಡ್ಡಾಯ.
  “ಮಾಯಿ ಕಿ ಬಗಿಯಾ” ಮತ್ತು “ನರ್ಮದಾ ಕುಂಡ” ಎರಡೂ ಪೂಜನೀಯ ಸ್ಥಳಗಳು. ನರ್ಮದಾ ಕುಂಡ ಹೊಂದಿದ ದೇವಸ್ಥಾನ ಸಂಕೀರ್ಣ ಒಟ್ಟು 9 ಚಿಕ್ಕಪುಟ್ಟ ದೇವಸ್ಥಾನಗಳನ್ನು ಹೊಂದಿದೆ. ಕಾಡಿನ ನಡುವೆ ನಿರ್ಮಿತವಾದ ದೇವಸ್ಥಾನಗಳಿವು‌. ರಮಣೀಯ ಕ್ಷೇತ್ರ. ನರ್ಮದಾ ಕುಂಡ ನೋಡಿಕೊಂಡು “ಶ್ರೀ ಯಂತ್ರ ಮಹಾಮೇರು”ವಿಗೆ ಹೋದೆ. ಅಮರಕಂಟಕ್’ನಲ್ಲಿ ಅತೀ ಹೆಚ್ಚು ಜನ ಪ್ರವಾಸಿಗರು ಇಲ್ಲಿಗೆ ಬರುವವರು. ಇದು ಅಮರಕಂಟಕ್’ನ ಮುಖ್ಯ ಗುರುತು ಸಹ ಹೌದು. ಬ್ರಹ್ಮನನ್ನು ಹೋಲುವ ಮೂರ್ತಿ ಕಳಶವಾಗಿದೆ.
   ಸುತ್ತಲೂ ವಿವಿಧ ಬಗೆಯ ವಿನ್ಯಾಸಗಳ ಮೂರ್ತಿಗಳಿವೆ. ಮಂದಿರದೊಳಗೆ ದೇವಿಯ ಮೂರ್ತಿ ರಾರಾಜಿಸುತ್ತದೆ. ಅಲ್ಲಿಂದ.. ಸೋನ ನದಿಯನ್ನು ನೋಡಿಕೊಂಡು….
ಮತ್ತೆ..
   ಕಾಡಿನ ಮಧ್ಯದಲ್ಲಿನ ಟಾರು ರೋಡಿನಲ್ಲಿ ಪ್ರಯಾಣ ಶುರುವಾಯಿತು. ಸುತ್ತ ಮುತ್ತ ಕಾಡು. ಇಳಿಜಾರಿಗಿಂತ ಹೆಚ್ಚು ಏರುಗಳಿದ್ದವು. ಎಲ್ಲವನ್ನೂ ಪಾರು ಮಾಡುವುದರಲ್ಲಿ ಸಂಜೆಯಾಗತೊಡಗಿತು. ಅನೂಪಪುರ ಜಿಲ್ಲೆಯ “ಗಡಸರಯಿ”ಎಂಬ ಊರಿನ “ರೇವಾ ಧರ್ಮಶಾಲೆಯಲ್ಲಿ” ಉಳಿದುಕೊಂಡಿರುವೆ.

ಹಿಂದಿನ ಸಂಚಿಕೆಗಳು :

ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೬)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೭)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೮)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೯)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೦)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೧)
ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೨)
ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...