Skip to main content

Blog number 1997. ಕಪ್ಪ- ಮರಗೆಣಸು - ಟ್ಯಾಪಿಯೋಕ ಎನ್ನುವ ಬ್ರಿಜಿಲ್ ಗೆಣಸು 1880 ರ ಬೀಕರ ಬರಗಾಲದಲ್ಲಿ ಕೇರಳಕ್ಕೆ ಪರಿಚಯಿಸಿದ ತ್ರಿವೆಂಕೂರ್ ರಾಜನ ಸಹೋದರ...ಈ ಮರ ಗೆಣಸು ನಮ್ಮ ಪ್ರೀತಿಯ ಶಂಭೂರಾಮನಿಗೂ ಇಷ್ಟವಾಯಿತು

#ನನ್ನ_ಪ್ರೀತಿಯ_ಶಂಭೂರಾಮ_ಮರಗೆಣಸು_ಸೇವಿಸುತ್ತಾನೆ

#ಕೇರಳಿಗರು_ಕಪ್ಪ_ಎನ್ನುವ_ಟ್ಯಾಪಿಯೋಕ

#ಕೇರಳದಲ್ಲಿ_ಬೀಕರ_ಬರಗಾಲ_ಬಂದಾಗ_1880ರಲ್ಲಿ_ತಿರುವಾಂಕೂರ್_ರಾಜರ

#ಕಿರಿಯ_ಸಹೋದರ_ವಿಶಾರಾಮ_ತಿರುಮಲ_ರಾಮವರ್ಮ_ರಾಜ್ಯಕ್ಕೆ_ಪರಿಚಯಿಸುತ್ತಾರೆ

#ಅನ್ನಕ್ಕೆ_ಪರ್ಯಾಯ_ಉಪ್ಪಿಟ್ಟು_ಚಿಪ್ಸ್

#ಸಾಮೆ_ಅಕ್ಕಿ_ಸ್ಟಾರ್ಚ್_ವೋಡ್ಕಾ_ತಯಾರಿಸುತ್ತಾರೆ

#ಬ್ರಿಜಿಲ್_ಮೂಲ

#ಎರಡನೆ_ಮಹಾಯುದ್ಧದಲ್ಲಿ_ಸೌತ್_ಈಸ್ಟ್_ಏಷಿಯಾದ_ಬಹಳಷ್ಟು_ನಿರಾಶ್ರಿತರು_ಇದರಿಂದ_ಬದುಕಿದರು.

https://youtu.be/cVQrIuQYc-s?feature=shared

 

   ಮರಗೆಣಸು ಬೆಳೆದವರು ತಂದು ಕೊಟ್ಟಿದ್ದನ್ನು ಅದರ ಸಿಪ್ಪೆ ನಿವಾರಿಸಲು ಕುಳಿತಾಗ ತಟ್ಟೆ ಚಾಕು ಶಬ್ದ ಮತ್ತು ಅದರ ವಾಸನೆ ಗ್ರಹಿಸಿ ನನ್ನ ಪ್ರೀತಿಯ ಶಂಭೂರಾಮ ನನ್ನ ಬದಿಗೆ ಬಂದು ಕುಳಿತ.
   ನಾವು ತಿನ್ನುವ ಎಲ್ಲಾ ತರಕಾರಿ ತಿನ್ನುವ ಈ ರಾಟ್ ವೀಲರ್ ಶಂಭೂರಾಮನಿಗೆ ಈವರೆಗೆ ಇದನ್ನು ಕೊಟ್ಟಿರಲಿಲ್ಲ, ನಾನು ಮಲೆಯಾಳಿ ಗೆಳೆಯ ಕುಟ್ಟೀಚನ್ ಹೇಳಿಕೊಟ್ಟ ಸುಲಭ ವಿಧದಲ್ಲಿ ಮರಗೆಣಸಿನ ದಪ್ಪ ಸಿಪ್ಪೆ ನಿವಾರಿಸಿ ತೆಗೆದ ನಂತರ ಶಂಭೂರಾಮನಿಗೆ ನೀಡಿದೆ.
  ಕಟುಂ - ಕುಟುಂ ಅಂತ ಮರಗೆಣಸು ತನ್ನ ಬಲಿಷ್ಟ ದವಡೆಯಲ್ಲಿ ತುಂಡರಿಸಿ ಕರ0-ಕುರಂ ಅಂತ ಚಪ್ಪರಿಸಿ ನುಂಗಿ ರಿಪೀಟ್ ದಿ ಕೋರ್ಸ್ ಅಂದ!...
  ಮರಗೆಣಿಸಿನ ಸುಲಭ ರುಚಿಕರ ಅಡುಗೆ ರೆಸಿಪಿಗಾಗಿ ಈ ಕೆಳಗಿನ ನನ್ನ ಬ್ಲಾಗ್ ಕ್ಲಿಕ್ ಮಾಡಿ https://arunprasadhombuja.blogspot.com/2023/07/blog-number-1636.html
  ಬ್ರಿಜಿಲ್ ಮೂಲದ ಈ ಬೆಳೆ ಪೋರ್ಚುಗಿಸರಿಂದ ಟ್ಯಾಪಿಯೋಕ ಎಂಬ ಹೆಸರಾಯಿತು.
  ಕಪ್ಪಾ ಅಂತ ಕೇರಳದವರು ಕರೆಯುವ ಕನ್ನಡಿಗರ ಬಾಯಲ್ಲಿ ಮರಗೆಣಸು ಆಗಿರುವ ಇದರ ಮೂಲ ಬ್ರಿಜಿಲ್, ಅತಿ ಕಡಿಮೆ ಮಳೆ ಆಶ್ರಿತ ಬೆಳೆ, ಹೆಚ್ಚು ಪೈಬ್ರಾಯಿಡ್ ಹೊಂದಿದೆ.
 1880 - 85 ರಲ್ಲಿ ದಕ್ಷಿಣ ಕೇರಳ ಟ್ರೂವೆಂಕೂರ್ ರಾಜ್ಯದಲ್ಲಿ ಬೀಕರ ಬರಗಾಲ ಬಂದಾಗ ಅಲ್ಲಿನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ ಇದನ್ನು ಕೇರಳಕ್ಕೆ ಪರಿಚಯಿಸುತ್ತಾರೆ ಸ್ವತಃ ಸಸ್ಯ ಶಾಸ್ತ್ರಜ್ಞರಾದ ಇವರು ರಾಜನಿಂದ ಸ್ಟತಃ ಅಡಿಗೆ ಮಾಡಿ ತಿಂದು ತೋರಿಸಿದ್ದರಿಂದ ಜನ ದೈಯ೯ದಿಂದ ಬೆಳೆದು ಬೆಳೆಸಿ ತಿನ್ನುತ್ತಾರಂತೆ.
 ಎರಡನೇ ಮಹಾಯುದ್ಧದಲ್ಲಿ ಸೌತ್ ಈಸ್ಟ್ ಏಷಿಯಾದಲ್ಲಿ ಬಹಳಷ್ಟು ನಿರಾಶ್ರಿತರು ಇದರಿಂದ ಬದುಕಿದ ಇತಿಹಾಸ ಇದೆ.
  ಹಾಗಾಗಿ ಕೇರಳದ ಮಲೆಯಾಳಿಗಳಿಗೆ ಈ ಮರಗೆಣಸು ಹೆಚ್ಚು ಪರಿಚಿತ ಆಹಾರ ಆಗಿದೆ ಆದರೆ ಇದರ ಇತಿಹಾಸ ಅವರಾರಿಗೂ ನೆನಪಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...