Skip to main content

Blog number 2019. ಬಣ್ಣದ ಹಬ್ಬ ಹೋಳಿ ಹಬ್ಬ.

#ಹೋಳಿ_ಹಬ್ಬ_ಆಚರಣೆಗೆ_ಕಾರಣಗಳು

#ಭಾರತದ_ಮಾಲೆ_ಮೂಲೆಯಲ್ಲಿ_ಆಚರಿಸುತ್ತಾರೆ

#ದಕ್ಷಿಣ_ಭಾರತದಲ್ಲಿ_ಕಾಮದಹನವಾಗಿ_ಆಚರಣೆ

#ವಸಂತಕಾಲದ_ಆಗಮನ_ಆಚರಿಸುವ_ಹಬ್ಬ

#ಬಣ್ಣಗಳ_ಹಬ್ಬ

#ಇದಕ್ಕೆ_ಪುರಾಣದ_ಕಥೆ_ಕಾರಣಗಳೂ_ಇದೆ.

  ಹೋಳಿ ಹಬ್ಬದ ಬಣ್ಣದ ಒಕುಳಿ ಎರೆಚಾಟ ವಿಜೃಂಬಣೆಯಿಂದ ಬಾಲರಿಂದ ವೃದ್ಧರವರೆಗೆ ಆಚರಿಸುತ್ತಾರೆ ಆದರೆ ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯ ಕಾರಣಗಳು ಇದೆ.
  ವಸಂತಕಾಲದ ಆಗಮನ ಸ್ವಾಗತಿಸುವ ಆಚರಿಸುವ ಹಿಂದೂ ದರ್ಮಿಯರ ಬಣ್ಣಗಳ ಹಬ್ಬವಾದ ಹೋಳಿ ಹಬ್ಬ ಭಾರತದ ಮೂಲೆ ಮೂಲೆಗಳಲ್ಲಿ ಆಚರಣೆಯಲ್ಲಿದೆ.
  ಭಗವಾನ್ ವಿಷ್ಣು ಭಕ್ತನಾದ ಪ್ರಹ್ಲಾದನನ್ನ ಹಿರಣ್ಯ ಕಶುಬಿ ನಿಂದ ನರಸಿಂಹ ರಕ್ಷಿಸಿದ ದಿನ.
  ಪ್ರಹ್ಲಾದನ ಚಿಕ್ಕಮ್ಮ ಹೋಲಿಕಾ ಯಾವ ಕಾರಣದಿಂದಲೂ ಅಗ್ನಿಯಿಂದ ದಹಿಸದ ಹೋಲಿ ಎಂಬ ವಸ್ತ್ರ ದೇವರಿಂದ ವರವಾಗಿ ಪಡೆದಿರುತ್ತಾಳೆ ಅವಳು ಮೋಸದಿಂದ ಪ್ರಹ್ಲಾದನನ್ನ ಚಿತೆಯ ಮೇಲೆ ತನ್ನ ಜೊತೆಗೆ ಕುಳ್ಳಿರಿಸಿ ಅವನನ್ನು ಅಗ್ನಿಗೆ ಆಹುತಿ ನೀಡಲು ಹವಣಿಸಿದಾಗ ದೇವತೆಗಳು ಜೋರಾಗಿ ಬಿರುಗಾಳಿ ಬೀಸಿ ಹೋಲಿಕಾ ಹೊದ್ದುಕೊಂಡಿದ್ದ ಅಗ್ನಿ ದಹಿಸದ ಮೇಲು ವಸ್ತ್ರ ಹಾರಿ ಬಂದು ಪ್ರಹ್ಲಾದನನನ್ನ ಮುಚ್ಚಿ ಬಿಡುತ್ತದೆ ಇದರಿಂದ ಪ್ರಹ್ಲಾದನಿಗೆ ಅಗ್ನಿಯಿಂದ ರಕ್ಷಣೆಯಾಗಿ ಹೋಲಿಕಾ ಅಗ್ನಿಗೆ ಆಹುತಿ ಆಗುವ ದಿನ.
   ಶಿವ ಮನ್ಮಥನ ದಹನ ಮಾಡಿದ ದಿನ ವರ್ಷಕ್ಕೊಮ್ಮೆ ಮನ್ಮಥ ಈ ದಿನ ಭೂಮಿಗೆ ಬರುತ್ತಾನೆ ಎಂಬ ನಂಬಿಕೆಯ ಆಚರಣೆಯ ದಿನ. 
   ದಕ್ಷಿಣ ಭಾರತದಲ್ಲಿ ಇದನ್ನು ಕಾಮದಹನ ಹಬ್ಬ (ಕಾಮನ ಹಬ್ಬ) ವಾಗಿ ಆಚರಿಸುತ್ತಾರೆ ಇದಕ್ಕೆ ಪುರಾಣದ ಕಥೆ ಇದೆ...
ಯೋಗ ಮತ್ತು ಆಳವಾದ ಧ್ಯಾನದಲ್ಲಿ ಮಗ್ನನಾದ ಶಿವನನ್ನು ಜಗತ್ತಿಗೆ ತರಲು ಪಾರ್ವತಿದೇವಿ ವಸಂತ ಪಂಚಮಿಯಂದು ಕಾಮ ದೇವ ಎಂಬ ಪ್ರೀತಿಯ ದೇವರ ಸಹಾಯ ಪಡೆದುಕೊಳ್ಳುತ್ತಾಳೆ.
  ಕಾಮ ದೇವ (ಮನ್ಮಥ) ಶಿವನ ಮೇಲೆ ಹೂ ಬಾಣಗಳನ್ನು ಹಾರಿಸುತ್ತಾನೆ ಇದರಿಂದ ಕೋಪಗೊಂಡ ಶಿವ ತನ್ನ ಮೂರನೆ ಕಣ್ಣನ್ನು ತೆರೆದು ಮನ್ಮಥನನ್ನ ದಹಿಸಿಬಿಡುತ್ತಾನೆ ಇದು ಮನ್ಮಥನ ಪತ್ನಿ ರತಿದೇವಿ ಮತ್ತು ಪಾರ್ವತಿದೇವಿಗೆ ಅಸಮದಾನ ಉಂಟಾಗುತ್ತದೆ.
   ರತಿದೇವಿ 40 ದಿನ ಧ್ಯಾನ ತಪಸ್ಸುಗಳನ್ನು ಆಚರಿಸುತ್ತಾಳೆ ಇದರಿಂದ ಶಿವನ ಶಾಂತನಾಗಿ ಸಮಾದನ ಪಟ್ಟು ಪಂಚಮಿ ಹಬ್ಬದ 40ನೆ ದಿನ ಮನ್ಮಥನಿಗೆ ಪುನರ್ ಜನ್ಮ ನೀಡುತ್ತಾನೆ.
  ಹೊಸದಾಗಿ ಮದುವೆ ಆದವರು ಹೋಳಿ ಆಚರಿಸುವುದಿಲ್ಲ ಮತ್ತು ಅತ್ತೆ ಸೊಸೆ ಹೋಲಿ ದಹನ ಒಟ್ಟಿಗೆ ನೋಡ ಬಾರದೆಂಬ ಆಚರಣೆ ಇದೆ.
   ನವ ವಿವಾಹಿತರು ಪತ್ನಿಯ ಮನೆಯಲ್ಲಿ ಹೋಳಿ ಆಚರಿಸುತ್ತಾರೆ ಹೀಗೆ ಅನೇಕ ಆಚರಣೆ ನಂಬಿಕೆಯ ಹೋಳಿ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಗಳಿದೆ.
  ಈಗಿನ ರಾಸಾಯನಿಕಯುಕ್ತ ಬಣ್ಣದ ಪುಡಿಗಳ ಬಳಕೆಯಿಂದ ಅನೇಕರು ಕಣ್ಣಿನ ಮತ್ತು ಚರ್ಮದ ವ್ಯಾದಿಯಿಂದ ಬಳಲುತ್ತಾರೆ.
   ಭಾರತದಾದ್ಯಂತ ಈ ವರ್ಷದ ಹೋಳಿ ಹಬ್ಬ 25 ಮಾರ್ಚ್ 2024ರ ಸೋಮವಾರ ಆಚರಿಸುತ್ತಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...