Skip to main content

Blog number 1984.ಕೆ.ಶಿವರಾಂ ನೆನಪುಗಳು ಭಾಗ-3. ಶಿವಮೊಗ್ಗ ಜಿಲ್ಲಾ ಪಂಚಾಯತಿನಲ್ಲಿದ್ದ ಸರ್ಕಾರದ ಕೋಟ್ಯಾಂತರ ರೂಪಾಯಿ ಗುಳುಂ ಮಾಡುತ್ತಿದ್ದ ಬೋರ್ ವೆಲ್ ಮಾಫಿಯಾಗೆ ಗುದ್ದು ನೀಡಿದ ಶಿವರಾಂ,

#ಕೆ_ಶಿವರಾಂ_ನೆನಪುಗಳು_ಬಾಗ_3.

#ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಬೋರ್_ವೆಲ್_ಮಾಪಿಯಾಗೆ_ಬುದ್ಧಿಕಲಿಸಿದವರು

#ಶಿವರಾಂ_ಕಛೇರಿಗೆ_ನುಗ್ಗಿ_ದಾಂದಲೆ_ಮಾಡಿದ_ಬೋರ್_ವೆಲ್_ಗುತ್ತಿಗೆದಾರ

#ಆಗಿನ_ಮುಖ್ಯಮಂತ್ರಿ_ಜೆ_ಹೆಚ್_ಪಟೇಲರ_ಸಹೋದರರಿಂದ_ಶಿಪಾರಸ್ಸು

#ಪ್ರಬಾವಿ_ಗುತ್ತಿಗೆದಾರನನ್ನ_ಬಂದಿಸಿ_ಕೇಸ್_ದಾಖಲಿಸಿದ_ದಿಟ್ಟ_ಅಧಿಕಾರಿ_ಶಿವರಾಂ

#ಅದೇ_ಗುತ್ತಿಗೆದಾರರು_ಮುಂದೆ_ಶಾಸಕರು_ಮಂತ್ರಿಗಳಾದರು.


  ಇದೇ ಸಂದರ್ಭದಲ್ಲಿ ನಾನು ಜಿಲ್ಲಾ ಪಂಚಾಯತ್ ನಲ್ಲಿ ಬೋರ್ವೆಲ್ ಬಾವಿ ನಿರ್ಮಾಣದ ದೊಡ್ಡ ಹಗರಣ ಬಯಲು ಮಾಡಿದ್ದೆ.
 ಅದೇನೆಂದರೆ ಪ್ರತಿ ವರ್ಷ ಆರ್ಥಿಕ ವರ್ಷದ ಕೊನೆಯಲ್ಲಿ ಕೋಟ್ಯಾಂತರ ರೂಪಾಯಿ ಬೋರ್ವೆಲ್ ಹೊಡೆದಿದ್ದಾಗಿ ಬಿಲ್ ಆಗುತ್ತಿತ್ತು ಆದರೆ ವಾಸ್ತವವಾಗಿ ಅಲ್ಲಿ ಬೋರ್ ಹೊಡೆಯುತ್ತಿರಲಿಲ್ಲ, ಬೋರ್ ಪೇಲ್ ಆಯಿತು ಎಂಬ ಅಧಿಕಾರಿಗಳ ದೃಡೀಕರಣ ಇರುತ್ತಿತ್ತು.
 ಅದಕ್ಕಾಗಿ ಎಲ್ಲಾ ಇಲಾಖೆಯವರು ಪಾಲುದಾರು ವಾಸ್ತವವಾಗಿ ಅಲ್ಲಿ ಬೋರ್ವೆಲ್ ಇರುತ್ತಿರಲಿಲ್ಲ ಈ ಹಗರಣ ಬಯಲು ಮಾಡಿದಾಗ ಅದು ಆ ವರ್ಷದ ಮಾರ್ಚ್ ತಿಂಗಳಾಗಿತ್ತು.
    ಶಿವರಾಂ ಅವರು ತಕ್ಷಣ ಸದರಿ ಸಂಸ್ಥೆಗೆ ಹಣ ಬಿಡುಗಡೆ ಮಾಡಿದಂತೆ ತಡೆ ಹಿಡಿದರು ಇದರಿಂದ ಸಿಟ್ಟಾದ ಆಸಂಸ್ಥೆ ವ್ಯಕ್ತಿಗಳು ಆಗಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲರ ಸಹೋದರರನ್ನು ಕರೆತಂದು ಶಿವರಾಂ ಅವರ ಛೇಂಬರ್ ನಲ್ಲಿ ಬೆದರಿಕೆ ಹಾಕಿದ್ದರು.
  ಇದರಿಂದ ರೊಚ್ಚಿಗೆದ್ದ ಶಿವರಾಂ ಆ ಬೋರ್ ವೆಲ್ ಸಂಸ್ಥೆ ಮಾಲಿಕರನ್ನು ಪೋಲಿಸರ ಕರೆಸಿ ಆರೆಸ್ಟ್ ಮಾಡಿಸಿದ್ದರು ಅದರ ಮರುದಿನ ನನ್ನನ್ನು ಕರೆಸಿ ಸಂಪೂರ್ಣ ಮಾಹಿತಿ ಪಡೆದರು, ಜಿಲ್ಲಾ ಪಂಚಾಯತ್ ನ ವಿವಿಧ ಇಲಾಖೆಗಳಾದ ಅಭಿವೃದ್ದಿ, ಯೋಜನೆ, ಹಣಕಾಸು, ಇಂಜಿನಿಯರಿಂಗ್, ಅಂಕಿ ಅಂಶಗಳ ಮುಖ್ಯಸ್ಥರನ್ನ ಕರೆಸಿ ನನ್ನ ಸಮಕ್ಷಮ ಮಾತುಕತೆ ನಡೆಸಿದರು.
   ಆಗ ಅವರಿಗೆ ದೊರೆತ ಮಾಹಿತಿ ಈ ಬೋರ್ ವೆಲ್ ಗುತ್ತಿಗೆದಾರರು ಪ್ರಭಾವಿಗಳು, ಆಗ ಅವಿಭಿಜಿತ ಶಿವಮೊಗ್ಗ ಜಿಲ್ಲೆಗೆ ಹೊನ್ನಾಳಿ ಚನ್ನಗಿರಿ ಸೇರಿತ್ತು ಈ ಗುತ್ತಿಗೆದಾರರು ಜಿಲ್ಲೆಗೆ ಮಂಜೂರಾದ ಬೋರ್ ವೆಲ್ ಸಂಖ್ಯೆಗಿಂತ ಎರಡು ಮೂರು ಪಟ್ಟು ಹೆಚ್ಚು ಅನುದಾನ ತರುತ್ತಿದ್ದರು ಮತ್ತು ಇದರಲ್ಲಿ ಶೇಖಡಾ 10% ಮಾತ್ರ ನಿಜವಾಗಿ ಕೊರೆಯುತ್ತಿದ್ದರು  ಉಳಿದದ್ದೆಲ್ಲ ಬೋರ್ ಕೊರೆಯದೆ ಬಿಲ್ ಮಾಡಿಕೊಳ್ಳುತ್ತಿದ್ದರು.
   ಇದಕ್ಕೆ ಸಂಬಂದ ಪಟ್ಟ ಇಂಜಿನಿಯರಿಂಗ್ ಇಲಾಖೆ ಆದೇಶ, ಪಾಯಿಂಟ್ ಮಾಡಿದ ಜಿಯೋಲಿಜಿಸ್ಟ್ ರಿಪೋರ್ಟ್, ಬೋರ್ ಪೇಲ್ ಆದ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ದೃಡೀಕರಣ ದಾಖಲೆ ಇರುತ್ತಿತ್ತು ಆದ್ದರಿಂದ ಅವರ ಸಂಸ್ಥೆಗೆ ಯಾವುದೇ ಖರ್ಚಿಲ್ಲದೆ ಕೋಟ್ಯಾಂತರ ರೂಪಾಯಿ ಪ್ರತಿ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಬಿಲ್ ಪಾವತಿ ಆಗುತ್ತಿತ್ತು.
  ಈ ಸಂಸ್ಥೆಗೆ ಸಹಕರಿಸುವ ಎಲ್ಲರಿಗೂ ಪರ್ಸೆಂಟೇಜ್ ಸಂದಾಯ ಆಗದೇ ಇದು ಸಾಧ್ಯವಿಲ್ಲ ಎಲ್ಲಾ ಅಧಿಕಾರಿಗಳು ಹೊರಹೋದ ಮೇಲೆ ಪ್ಲಾನಿಂಗ್ ಉಪಕಾರ್ಯದರ್ಶಿ ಸೂರ್ಯನಾರಾಯಣ ಎಂಬ ಏಕೈಕ ಪ್ರಾಮಾಣಿಕ ಅಧಿಕಾರಿ ಶಿವರಾಂಗೆ "ಅರುಣ್ ಪ್ರಸಾದ್ ನೂರಕ್ಕೆ ನೂರು ಸರಿ ಹೇಳಿದ್ದಾರೆ" ಎಂದು ಹೇಳಿ ಹೋದರು.
   ಅವತ್ತು ಶಿವರಾಂ ರಿಂದ ಕೇಸು ಹಾಕಿಸಿ ಕೊಂಡವರು ಮುಂದೆ ಬಿಜೆಪಿಯಿಂದ ಹೊನ್ನಾಳಿಯಿಂದ ಶಾಸಕರಾಗಿ ಮಂತ್ರಿಯೂ ಆದರು..

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...