Skip to main content

Blog number 2033. ನಮ್ಮ ಊರಿನ ಕ್ರೈಸ್ತ ಬಾಂದವರ ನೂತನ ಪ್ರಾರ್ಥನ ಮಂದಿರ ಸಂತ ಜೂದರ ದೇವಾಲಯ ದಿನಾಂಕ 11 - ಏಪ್ರಿಲ್- 2024ರ ಗುರುವಾರ ಬೆಳಿಗ್ಗೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ.

#ನಮ್ಮೂರ_ನೂತನ_ಚರ್ಚ್_ಲೋಕರ್ಪಣೆಯ_ಆಹ್ವಾನ_ಪತ್ರಿಕೆ 

#ಕರಾವಳಿ_ತೀರದಿಂದ_1930ರಲ್ಲಿ_ಬಂದು_ನೆಲಿಸಿದ_11_ಕ್ರೈಸ್ತ_ಕುಟುಂಬಗಳ_55_ಸದಸ್ಯರು

#ಆಗ_ಭಾನುವಾರದ_ಪ್ರಾರ್ಥನೆ_ಈಗಿನ_ಪ್ರವಾಸಿ_ಮಂದಿರದಲ್ಲಿ

#ನಂತರ_1962ರಲ್ಲಿ_ಚಿಕ್ಕ_ಚರ್ಚ್_ನಿರ್ಮಾಣವಾಯಿತು

#ದೊಡ್ಡ_ಚರ್ಚ್_ಸಂತ_ಜೂದರ_ತದೆಯಸರ_ಚರ್ಚ್_1974ರಲ್ಲಿ_ನಿಮಾ೯ಣವಾಗಿ_1999ರಲ್ಲಿ_ನವೀಕರಣ_ಆಗಿತ್ತು.

#ಇದೇ_ಜಾಗದಲ್ಲಿ_ನೂತನ_ಬೃಹತ್_ಕ್ರೈಸ್ತ_ದೇವಾಲಯ_ನಿರ್ಮಾಣವಾಗಿ_ಲೋಕರ್ಪಣೆ_ಆಗಲಿದೆ.


   ನಮ್ಮ ಆನಂದಪುರಂನ ಯಡೇಹಳ್ಳಿಯ ಹೊಸನಗರ ರಸ್ತೆಯ ರೈಲ್ವೆ ಗೇಟ್ ಸಮೀಪದ ಕ್ರೈಸ್ತ ಬಾಂದವರ ಸಂತ ಜೂದರ ನೂತನ ದೇವಾಲಯ ದಿನಾಂಕ 11 ಏಪ್ರಿಲ್ 2024 ರಂದು ಉದ್ಘಾಟನೆಗೊಳ್ಳಲಿದೆ.
  1974 ರಲ್ಲಿ ನಿರ್ಮಿಸಿ 1999ರಲ್ಲಿ ನವೀಕರಣಗೊಂಡಿದ್ದ ಹಳೆಯ ಚರ್ಚ್ ಶಿಥಿಲಗೊಂಡಿದ್ದರಿಂದ ಅದನ್ನು ತೆಗೆದು ದೊಡ್ಡದಾದ ಹೊಸ ಚರ್ಚ್ ನಿರ್ಮಿಸುವ ಸಂಕಲ್ಪ ಮಾಡಿ ಅದನ್ನು ಯಶಸ್ವಿಯಾಗಿ ಅವರ ಸಂಸ್ಥೆಯ,ಸ್ಥಳಿಯ ಕ್ರೈಸ್ತ ಬಾಂದವರ ಮತ್ತು ದಾನಿಗಳ  ನೆರವಿನಿಂದ ಅನೂಷ್ಟಾನ ಮಾಡಿದವರು ಈಗಿನ  ಪಾದರ್ ಮಿನಿನ್ ಆಲ್ಮೇಡಾ ಅವರನ್ನು ಸ್ಮರಿಸಲೇ ಬೇಕು.
  ಶಿವಮೊಗ್ಗದ ದರ್ಮಾದ್ಯಕ್ಷರಾದ ಪರಮಪೂಜ್ಯ ಪ್ರಾನ್ಸಿಸ್ ಸೆರಾವೋ ಮತ್ತು ಕಾರವಾರದ ದರ್ಮಾದ್ಯಕ್ಷರಾದ ಪರಮ ಪೂಜ್ಯ ಡುಮಿಂಗ್ ಡಯಾಸ್ ನೂತನ ದೇವಾಲಯದ ಉದ್ಘಾಟನೆ - ಆಶೀರ್ವಚನ - ಮತ್ತು ಅಭಿಷೇಕೋತ್ಸವ ನೆರವೇರಿಸಲಿದ್ದಾರೆಂಬ ನಮ್ಮ ಊರಿನ ಚರ್ಚ್ ಪಾದರ್ ಮಿನಿನ್ ಆಲ್ಮೇಡಾ, ಪಾಲನಾ ಪರಿಷತ್ ಕಾರ್ಯದರ್ಶಿ ಶ್ರೀಮತಿ ರೋಸಲೀನ್ ಪನಾ೯ಂಡಿಸ್ ಮತ್ತು ಹಣಕಾಸು ಕಾರ್ಯದರ್ಶಿ ಅಂಥೋನಿ ಲೂಯಿಸರ ವಿನಂತಿಯ ಆಹ್ವಾನ ಪತ್ರಿಕೆ ಬಂದಿದೆ 
    1930 ರ ದಶಕದಲ್ಲಿ ಕರಾವಳಿ ತೀರದ ಬೈಂದೂರು ಭಾಗದಿಂದ ಕೆಲ ಕೊಂಕಣಿ ಬಾಷಾ ಕ್ರೈಸ್ತ ಧರ್ಮಿಯರು ಆನಂದಪುರಂಗೆ ಬಂದು ನೆಲೆಸುತ್ತಾರೆ, ಆನಂದಪುರಂ ನಲ್ಲಿ ನೈಸರ್ಗಿಕವಾಗಿ ದೊರೆಯುವ ಕೆಂಪು ಕಲ್ಲು ಜಂಬಿಟ್ಟಿಗೆ ತೆಗೆಯಲು ಬಂದವರಿವರು.
    ಆಗ ಕೈಯಲ್ಲೇ ಕಲ್ಲು ತೆಗೆಯುವ ಕುಶಲ ಕರ್ಮಿಗಳಾದ ಇವರು ಬೈಂದೂರು ಭಟ್ಕಳಗಳಲ್ಲಿ ಇದೇ ವೃತ್ತಿ ಮಾಡಿದವರು, ಇಲ್ಲಿಗೆ ಬಂದ ಕೆಲ ಕುಟುಂಬ ಇಲ್ಲೇ ನೆಲೆಸಿದರು, ಇವರ ಸಂಪರ್ಕದಿಂದ ಬಂದ ಬೇರೆ ಕುಟುಂಬಗಳು ಕೃಷಿ ಕೆಲಸದಲ್ಲಿ ತೊಡಗಿದರು, ಜಂಬಿಟ್ಟಿಗೆ ಕಲ್ಲು ಕಟ್ಟುವ ಗಾರೆ ಕೆಲಸದವರೂ ಬಂದರೂ, ಸರ್ಕಾರಿ ಉದ್ಯೋಗ ಪಡೆದವರೂ ಆನಂದಪುರಂನ ಯಡೇಹಳ್ಳಿಯಲ್ಲಿಯೇ ಗುಂಪಾಗಿ ನೆಲೆಸಿದರು.
   ಈ ಹನ್ನೊಂದು ಕ್ರೈಸ್ತ ಕುಟುಂಬಗಳ 55 ಜನರ ಪ್ರಾಥ೯ನೆ ಪೂಜೆಗಳು ಪ್ರತಿ ಭಾನುವಾರ ಯಡೇಹಳ್ಳಿಯ ಬ್ರಿಟೀಷ್ ಬಂಗ್ಲೆಯಲ್ಲಿ (ಈಗಿನ ಪ್ರವಾಸಿ ಮಂದಿರದಲ್ಲಿ) ನೆರವೇರುತ್ತಿತ್ತು, ಅಂದಿನ ಕ್ರೈಸ್ತ ಗುರುಗಳಾದ ವಂದನೀಯ ಸ್ವಾಮಿ ಜೆ.ಬಿ.ಡಿಸೋಜರಿಂದ ಈ ಭಾನುವಾರದ ಪ್ರಾರ್ಥನೆಗಳು ಪ್ರಾರಂಭವಾಯಿತು.
   1962 ರಲ್ಲಿ ಮೈಸೂರಿನ ಕ್ರೈಸ್ತ  ದರ್ಮ ಪ್ರಾಂತ್ಯದ ದರ್ಮಾದ್ಯಕ್ಷರಾದ ವಂ. ಸ್ವಾಮಿ ಪೂಜ್ಯರಾದ ಪಾಲ್ ರು ಸಂತ ಪಿಲೋಮಿನರಿಗೆ ಅರ್ಪಿತವಾದ ಸಣ್ಣ ದೇವಾಲಯ ನಿರ್ಮಿಸಲು ಒಪ್ಪಿಗೆ ನೀಡಿದಾಗ ಯಡೇಹಳ್ಳಿಯ ಹೊಸನಗರ ರಸ್ತೆಯ ಪ್ರವಾಸಿ ಮಂದಿರದ ಎದುರಿನ ರೈಲು ಮಾರ್ಗದ ಈ ಭಾಗದಲ್ಲಿ (ಈಗಿನ ಚರ್ಚ್ ಗಳಿರುವ ಜಾಗ) ಪಶ್ಚಿಮ ದಿಕ್ಕಿಗೆ ಮುಖವಾಗಿ ಸಣ್ಣ ಚರ್ಚ್ ನಿರ್ಮಿಸಿ ಪೂಜೆ ಪ್ರಾಥ೯ನೆ ಪ್ರಾರಂಬಿಸಲಾಯಿತು.
   1974 ರಲ್ಲಿ ವಂ ಸ್ವಾಮಿ ಆಲ್ವೋನ್ಸ್ ಮತಿಯಾಸ್ ದರ್ಮಾದ್ಯಕ್ಷರು ಚಿಕ್ಕಮಗಳೂರು ಧರ್ಮ ಪ್ರಾಂತ್ಯ ಇವರ ಅನುಮತಿ,ಸಹಾಯ ಮತ್ತು ಸಹಕಾರದಿಂದ ಹೊಸದಾದ ದೊಡ್ಡದಾದ ಸಂತ ಜೂದ್ ತದೆಯಸರ ದೇವಾಲಯ ನಿರ್ಮಾಣವಾಯಿತು.
  1989 ರಿಂದ 1990ರವರೆಗೆ ಈ ದೇವಾಲಯದ ಪ್ರಪ್ರಥಮ ದರ್ಮ ಕೇಂದ್ರದ ಗುರುವಾಗಿ ವಂ. ಸ್ವಾಮಿ ಎಸ್.ಆರ್. ಪೀಟರ್ ಅರುಳ್ ಕಾಯ೯ನಿರ್ವಹಿಸಿದರು.
   1998 ರಲ್ಲಿ ಸಂತ ಜೋಸೆಪರ ಕನ್ಯಾಸ್ತ್ರಿ ಮಠ ಪ್ರಾರಂಭ ಆಯಿತು, 1999 ರಲ್ಲಿ ಈ ಚಚ್೯ ಪುನಃ ನವೀಕರಣಗೊಳಿಸಲಾಯಿತು.
      ಕನ್ಯಾಸ್ತ್ರಿ ಮಠದಿಂದ ಸಮಾಜ ಸೇವಾ ಕೇಂದ್ರ, ಆರೋಗ್ಯ ಕೇಂದ್ರ,ನರ್ಸರಿ ಶಾಲೆ ನಡೆಯುತ್ತಿದೆ.
  2003 ರಲ್ಲಿ ದೇವಾಲಯದ ಮುಂಬಾಗದಲ್ಲಿ ಅದ್ಭುತ ಮಾತಾ ಮಂದಿರವೂ ನಿರ್ಮಾಣ ಆಗಿದೆ.
    ಈಗ ಸುಮಾರು 45 ಕುಟುಂಬಗಳ 200 ಜನ ಸಂಖ್ಯೆಯ ಈ ಚಚ್೯ 81 ವರ್ಷದ ಇತಿಹಾಸ ಹೊಂದಿದೆ.
    2024ರ ಏಪ್ರಿಲ್ 11 ರ ಕ್ರೈಸ್ತ ಧರ್ಮಿಯರ ನೂತನ ಸಂತ ಜೂದರ ದೇವಾಲಯ ಲೋಕಾರ್ಪಣೆ ಆಗಲಿರುವ ಈ ಸಂದರ್ಭದಲ್ಲಿ ಹಿಂದೂ ಧರ್ಮಿಯರ ಹೊಸ ವರ್ಷಾಚಾರಣೆಯ ಯುಗಾದಿ ಮತ್ತು ಮುಸ್ಲಿಂ ಸಮುದಾಯದ ರಮ್ದಾನ್ ಹಬ್ಬದ ಆಚರಣೆ ಜೊತೆ ಜೊತೆಯಾಗಿ ಬಂದಿದ್ದರಿಂದ ನಮ್ಮ ಊರಿನ ಹಿಂದೂ - ಮುಸ್ಲಿಂ - ಕ್ರೈಸ್ತರೆಲ್ಲರಿಗೂ ಹಬ್ಬದ ಸಂಭ್ರಮ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ