Skip to main content

Blog number 1994. ನಾನು ಯಾರು?... ಒಂದು ಜಿಜ್ಞಾಸೆ

#ನಾನು_ಯಾರು?

#ರಾಜಕಾರಣಿ_ಹೋರಾಟಗಾರ_ಕೃಷಿಕ_ವ್ಯಾಪಾರಿ_ಪತ್ರಕತ೯_ಸಾಹಿತಿ_ಇತಿಹಾಸಕಾರ

#ಅಂತೆಲ್ಲ_ಕರೆಸಿಕೊಳ್ಳಲು_ನನಗೆ_ಇಷ್ಟವೂ_ಇಲ್ಲ

#ಅದು_ಕಪಟದ_ಮುಖವಾಡ_ಅಂತ_ಅನ್ನಿಸಿದೆ

#ಸನ್ಮಾನ_ಪ್ರಶಸ್ತಿಗಳೂ_ನನಗೆ_ಇಷ್ಟವಿಲ್ಲ

#ಸಭೆ_ಸಮಾರಂಭದಲ್ಲೂ_ಭಾಗವಹಿಸುವುದಿಲ್ಲ

#ನನ್ನ_ಹೆಸರೂ_ಪ್ರಚಾರಕ್ಕೂ_ಬೇಡವೇ_ಬೇಡ

 ಇತ್ತೀಚಿಗೆ ಗೆಳೆಯರು ಅವರ ಗೆಳೆಯರೊಡನೆ ಬಂದಾಗ ನನ್ನನ್ನು ಅವರ ಗೆಳೆಯರಿಗೆ ಪರಿಚಯಿಸುವಾಗ ನನ್ನ ಮೇಲಿನ ಅವತಾರಗಳನ್ನೆಲ್ಲ ಉಪಮೆಗಳ ಜೊತೆ ಅವರಿಗೆ ವಿವರಿಸುವಾಗ ನಾನು ನನ್ನ ತಲೆ ನಕರಾತ್ಮಕವಾಗಿ ತಿರುಗಿಸಿದೆ...
              #ಹಾಗಾದರೆ_ನಾನ್ಯಾರು?...
 ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದು ಹೌದು, ರಾಜಕೀಯ ಪಕ್ಷಗಳ ಸಂಘಟನೆಯಲ್ಲಿ ಇದ್ದಿದ್ದು ಹೌದು, ಜನಪ್ರತಿನಿಧಿ ಆಗಿದ್ದು ಹೌದು, ಪತ್ರಿಕೆಗಳಿಗೆ ವರದಿ ಲೇಖನ ಬರೆದಿದ್ದು ಹೌದು, ಕೃಷಿಯಲ್ಲಿ ತೊಡಗಿದ್ದು ಹೌದು, ವ್ಯವಹಾರದಲ್ಲಿ ಹಲವು ರೂಪಾಂತರದಲ್ಲಿ ತೊಡಗಿದ್ದು ಹೌದು, ಕಥೆ ಕಾದಂಬರಿ ಬರೆದಿದ್ದು ಹೌದು, ಇತಿಹಾಸದ ಓದುಗ ಹೌದು, ನಮ್ಮ ಊರಾದ ಆನಂದಪುರಂ ಇತಿಹಾಸ ಪುಸ್ತಕ ಪ್ರಕಟಿಸಲಿರುವುದೂ ಹೌದು...  ಹಾಗಂತ ನಾನು ಅದ್ಯಾವುದೂ ಅಲ್ಲ.
  ಎಂತೆಂಥಹ ಸಾಹಿತಿಗಳನ್ನು ಹತ್ತಿರದಿಂದ ನೋಡಿದ್ದೇನೆ ಅವರು ಇಹಲೋಕ ತ್ಯಜಿಸಿದ ಮರುದಿನ ಅವರ ಸಾಹಿತ್ಯ ಸಂಗ್ರಹದ  ದೊಡ್ಡ ಶೋಕೇಸ್ ಖಾಲಿ ಮಾಡಿ ಗುಜರಿಗೆ ತೂಕಕ್ಕೆ ಮಾರಿದ್ದನ್ನು ನೋಡಿದ್ದೇನೆ.
  ದೊಡ್ಡ ದೊಡ್ಡ ಹೋರಾಟಗಾರರು ಅವರ ಇಳಿ ವಯಸ್ಸಿನಲ್ಲಿ ವೃದ್ಧಾಪ್ಯದಲ್ಲಿ ಅವರ ಹೆಂಡತಿ ಮಕ್ಕಳೇ ಇವರ ಹೋರಾಟದಿಂದ ನಾವು ಈಗ ಇಷ್ಟು ಬವಣೆ ಪಡುತ್ತಿದ್ದೇವೆ ಎಂದು ಆರೋಪಿಸುವುದು ನೋಡಿದ್ದೇನೆ.
   ಶ್ರಮದಿಂದ ಜೀವನ ಪರ್ಯಂತ ಸಾಧನೆ ಮಾಡಿ ತೋಟ ಮನೆ, ಆಸ್ತಿ ಮಾಡಿದವರು ಅನಾರೋಗ್ಯಕ್ಕೆ ಒಳಗಾದಾಗಾ ಅವರನ್ನು ಬದುಕಿಸಲು ಅವರ ದುಡಿಮೆಯ ಹಣವನ್ನೆ ವ್ಯಯಿಸದೆ ಅವರು ಸತ್ತ ನಂತರ ಅದ್ದೂರಿಯಿಂದ ತಿಥಿ ಕರ್ಮ ಮಾಡುವವರನ್ನ ನೋಡಿದ್ದೇನೆ.
   ದೊಡ್ಡ ದೊಡ್ಡ ಇತಿಹಾಸಕಾರ ಸಂಶೋದಕ ಎಂದು ಪ್ರಶಸ್ತಿ ಸನ್ಮಾನ ಖರೀದಿಸುವ ಆದರೆ ತನ್ನ ಮನೆ ಅಂಗಳದಲ್ಲಿ ಅಡ್ಡ ಬಿದ್ದ ಶಿಲಾಶಾಸನ ಎತ್ತಿಡದ, ತನ್ನ ಸ್ವಂತ ಊರಿನ ಇತಿಹಾಸ ತಿಳಿಯದವರು ಇತಿಹಾಸಕಾರರು, ಇಂಗ್ಲೀಷ್ ಭಾಷೆಯಲ್ಲಿ ಬರೆದ ಪುಸ್ತಕದಲ್ಲಿನ ವಿಷಯಗಳನ್ನು - ಇಸವಿಗಳನ್ನು ಸಭೆ ಸಮಾರಂಭದಲ್ಲಿ ಪುಂಖಾನು ಪುಂಕವಾಗಿ ಊದಿ ಶಾಲೂ ಪೇಟದ ಬಳುವಳಿ ಪಡೆಯುವುದೂ ನೋಡಿದ್ದೇನೆ.
    ಬೃಹತ್ ಸಾಗರದ ಒಂದು ಬಿಂದುವಿನ ಅಣಿವನಷ್ಟು ನಾನಲ್ಲ, ವಿಶ್ವ ಕೋಶಗಳನ್ನು ಓದಲೂ ಇಲ್ಲ ಅದೆಲ್ಲ ಓದಿ ಮುಗಿಸಲು ಮನುಷ್ಯನ ಆಯಸ್ಸೂ ಸಾಕಾಗುವುದಿಲ್ಲ ಎಂಬ ವಾಸ್ತವ ಗೊತ್ತಿರುವವನು.
  ನುಡಿ ಒಂದು ನಡೆ ಬೇರೆ ಎಂಬ ಹಿಪೋಕ್ರಟಿಕ್ ನಾನಲ್ಲ, ಬಹಿರಂಗವಾಗಿ ಮಾತೃದೇವೋ ಭವ, ಮಾತೃ ಭಾಷೆ ಎಂದು ಹೆತ್ತವರನ್ನು ಅನಾಥಾಶ್ರಮಕ್ಕೆ ಸೇರಿಸಿ ಮಕ್ಕಳನ್ನ ಕನ್ನಡೇತರ ಶಿಕ್ಷಣ ಕೊಡಿಸುವ ಕಪಟ ನಾಟಕ ನಾನು ಮಾಡುವುದಿಲ್ಲ.
   ಆದರೆ ನಾನು ಇವರಾರು ಆಗಲು ಇಷ್ಟವಿಲ್ಲದವನು....ನಾನು ಇದ್ದಲ್ಲೇ ನನ್ನ ಸ್ವರ್ಗ ಸೃಷ್ಟಿಸಿಕೊಂಡು ನೆಮ್ಮದಿಯ ಜೀವನ ನಡೆಸುವ ಪ್ರಯತ್ನದಲ್ಲಿ ಇರುವವನು, ಸಭೆ - ಸಮಾರಂಭ, ಶಾಲು-ಪ್ರಶಸ್ತಿ-ಸನ್ಮಾನಗಳ ಅಪೇಕ್ಷೆಯೇ ಇಲ್ಲದವನು.
   ನನ್ನ ಜೀವಿತಾವಧಿಯ ಸೀಮಿತ ಪರಿದಿ, ಸುಖ ಕಷ್ಟಗಳ ಇತಿಮಿತಿ ಅರಿತಿದ್ದೇನೆ, ಶ್ರೀಮಂತಿಕೆ - ಯೌವನ - ಯಶಸ್ಸು - ಗೌರವ - ಪ್ರಶಸ್ತಿ - ಅಂತಸ್ತುಗಳು ಶಾಶ್ವತವಲ್ಲ ಎಂಬುದರ ವಾಸ್ತವವೂ ತಿಳಿದಿದೆ.
  ಇವತ್ತು ನಿನ್ನದು .... ನಾಳೆ ಇನ್ನಾರದೋ ... ಎಂಬ ಭಗವದ್ ಗೀತೆಯ ನುಡಿಯಂತೆ ನಾನು ನಾನಲ್ಲ ಎಂದು ನನಗೆ ನಾನೇ ಸಮಾಧಾನ ಪಡೆದಿದ್ದೇನೆ.
  ಏನನ್ನೂ ಆಸೆ ಪಡೆಯದೇ, ಇದ್ದಿದ್ದನ್ನೇ ಸ್ವೀಕರಿಸಿ, ಇರುವಷ್ಟು ದಿನ ನೆಮ್ಮದಿಯ ಜೀವನ ಮಾತ್ರ ನನ್ನದು.
  ಆದ್ದರಿಂದ ನನ್ನ ಎದುರಿಗೆ ಹೊಗಳಿದರೂ, ಹಿಂದಿನಿಂದ ತೆಗಳಿದರೂ ಅದು ನನಗೆ ತಾಗುವುದು ಸಾಧ್ಯವಿಲ್ಲ ಇಷ್ಟೆಲ್ಲ ಬರೆಯಲು ಕಾರಣ....
   #ನಾನೊಬ್ಬ_ಜನ_ಸಾಮಾನ್ಯ_ಮಾತ್ರ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ