Skip to main content

Blog number 2021. ಲಾಕ್ ಡೌನ್ ನ ಮೊದಲ ದಿನದ ಬೆಳಗಿನಲ್ಲಿ ನನ್ನ ವಾಕಿಂಗ್ ಪ್ರಾರಂಬಿಸಿದ್ದೆ ಇವತ್ತಿಗೆ ನಾಲ್ಕು ವರ್ಷ, ವಾಕಿಂಗ್ ಮಾಡಲು ಮಿತಿ ಏನು?

#ಕೊರಾನಾ_ನೆನಪುಗಳ_ಡೈರಿ_6

#ದೇಶದ_ಮೊದಲ_ಲಾಕ್_ಡೌನ್

#ಮೊದಲ_ದಿನದ_ಬೆಳಿಗ್ಗೆ_25_ಮಾರ್ಚ್_2020

#ಇದೇ_ದಿನ_ಬೆಳಿಗ್ಗೆ_ನನ್ನ_ವಾಕಿಂಗ್_ಪ್ರಾರಂಭಿಸಿದ್ದೆ

#ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ?


  ನಾಲ್ಕು ವಷ೯ದ ಹಿಂದೆ ಇದೇ ದಿನ ಲಾಕ್ ಡೌನ್ ಮೊದಲ ದಿನದ ಬೆಳಿಗ್ಗೆ ವಾಕಿಂಗ್ ಶುರು ಮಾಡಿದೆ, 140 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.
  ಹೇಗಿದ್ದರೂ 21 ದಿನಗಳು ಲಾಕ್ ಡೌನ್ ಆದ್ದರಿಂದ ಎಲ್ಲಾ ವ್ಯವಹಾರಗಳಿಗೆ ಹಾಗೂ ಇಡೀ ದೇಶಕ್ಕೆ ರಜಾ ಘೋಷಿಸಿ ಆಗಿತ್ತು.
  21 ದಿನದ ನಂತರವೂ ಕೆಲವು ತಿಂಗಳು ಲಾಕ್ ಡೌನ್ ಮುಂದುವರಿಯುತ್ತದೆ ಎಂಬ ತಜ್ಞರ ಲೇಖನಗಳು ಬರುತ್ತಿತ್ತು ಈ ಸಂದರ್ಭವೇ ಸರಿ ಅಂತ ನನ್ನ ಮಾತು ಕೇಳದ ಕೊಬ್ಬಿದ ನನ್ನ ದೇಹ ದಂಡಿಸಿ ಪಳಗಿಸುವ ಕೆಲಸ ಸೂರ್ಯೋದಯದ ಮೊದಲೆ ಪ್ರಾರಂಬಿಸಿದೆ.
   ರಸ್ತೆ ಎಲ್ಲಾ ಸ್ಥಬ್ದವಾಗಿತ್ತು ... ಹಕ್ಕಿಗಳ ಕಲರವ ಬಿಟ್ಟರೆ ಊರು ನಿರ್ಜನವಾದಂತೆ ಬಾಸವಾಗುತ್ತಿತ್ತು.
  ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಈ ಮೊದಲೂ ವಾಕಿಂಗ್ ಶುರು ಮಾಡುವುದು ಪ್ರಾರಂಭದ ಆರಂಭ ಶೂರತ್ವದಲ್ಲಿ ಮೊದಲ ದಿನದಿಂದಲೇ ಹೆಚ್ಚು ನಡೆಯುವುದರಿಂದ ದೇಹ ಆಯಾಸದಿಂದ ಮತ್ತು ಅಭ್ಯಾಸ ಇಲ್ಲವಾದ್ದರಿಂದ ಮರುದಿನದಿಂದಲೇ ಅಥವ ಒಂದು ವಾರಕ್ಕೆ ವಾಕಿಂಗ್ ರದ್ದಾಗುತ್ತಿತ್ತು ಇದಕ್ಕೆ ಏನೇನೋ ಸಬೂಬು ನನಗೆ ನಾನೆ ಕೊಟ್ಟುಕೊಳ್ಳುತ್ತಿದ್ದೆ.
 ಆಗ ನಾನು ಮಾಡಿದ ತೀಮಾ೯ನ ಮೊದಲ ವಾರ ಪ್ರತಿ ನಿತ್ಯ 5 ನಿಮಿಷದಂತೆ ಮಾತ್ರ ನಡೆಯಲು ಶುರು ಮಾಡುವುದು, ಎರಡನೇ ವಾರ 10 ನಿಮಿಷ, ಮೂರನೇ ವಾರ 15 ನಿಮಿಷದಂತೆ ಹೀಗೆ 12ನೇ ವಾರಕ್ಕೆ ನಿತ್ಯ ಲೀಲಾಜಾಲವಾಗಿ ಒಂದು ಗಂಟೆ ವಾಕಿಂಗ್ ಮಾಡಲು ದೇಹ ಹೊಂದಿ ಕೊಂಡಿದ್ದು ನನಗೆ ನಂಬಲಾಗಲಿಲ್ಲ.
  ನಾನು ವಾಕಿಂಗ್ ಗೆ ನಿಗದಿ ಮಾಡಿಕೊಂಡ ಜಾಗ ಮಾತ್ರ ನನ್ನ ಮನೆಯ ಮುಂದಿನ ಪಾಕಿ೯೦ಗ್ ಜಾಗ ಇದು 15 ಅಡಿ ಉದ್ದ ಮತ್ತು ಅಗಲ 10 ಅಡಿ ಮಾತ್ರದ್ದು, ನೇರ ನಡೆದರೆ 10 ಹೆಜ್ಜೆ ಮಾತ್ರ 8 ಆಕಾರದಲ್ಲಿ ನಡೆದರೆ 15 ಹೆಜ್ಜೆ ಆಗುವ ಚಿಕ್ಕ ಜಾಗ ಇದರಲ್ಲಿ ಒ0ದು ಗಂಟೆ ಕಾಲಾವದಿ ವಾಕಿಂಗ್ ನಾನು ಮಾಡುತ್ತಿದ್ದೆ.
  ರಸ್ತೆ ಮೇಲೆ ವಾಕಿಂಗ್ ಹೋದರೆ ಅಲ್ಲಿ ಸಿಗುವವರ ಜೊತೆ ಮಾತಿಗೆ ನಿಲ್ಲಬೇಕಾದ ಅನಿವಾಯ೯ತೆಯಿಂದ ವಾಕಿಂಗ್ ನಿರಂತರ ಆಗುವುದಿಲ್ಲ ಮತ್ತು ಇತ್ತೀಚಿನ ದಿನದಲ್ಲಿ ವಿಪರೀತ ವಾಹನಗಳ ಸಂಚಾರ ಮತ್ತು ವೇಗದ ಚಾಲನೆಯಿಂದ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಹೆಚ್ಚು ಅಪಾಯ ಆದ್ದರಿಂದ ನಾನು ಮನೆಯ ಗೇಟಿನ ಒಳಗೆ ವಾಕಿಂಗ್ ಈಗಲೂ ಮಾಡುವುದು ಈಗ ಮನೆ ಹಿಂಬಾಗದ ನನ್ನ ವಾಕಿಂಗ್ ಟ್ರಾಕ್ 25 ಹೆಜ್ಜೆಯ ಉದ್ದದ್ದು.
  ಶಿವಮೊಗ್ಗದಲ್ಲಿ ಮಾಜಿ ಶಾಸಕರಾಗಿದ್ದ ಶಿರನಾಳಿ ಚಂದ್ರಶೇಖರ್ ಈ ರೀತಿ ವಾಕಿಂಗ್ ಮಾಡುವುದು ನೋಡಿದ್ದೆ, ಪ್ರಸಿದ್ಧ ಜೈಲ್ ಬ್ರೇಕರ್ ಪ್ಯಾಪಿಲಾನ್ ತನ್ನ 7 ಅಡಿ ಉದ್ದದ ಜೈಲಿನ ಕೋಣೆಯಲ್ಲೇ ವಾಕಿಂಗ್ ಅಭ್ಯಾಸ ಶುರು ಮಾಡಿ ತನ್ನ ಪಿಟ್ ನೆಸ್ ಕಾಪಾಡಿಕೊಂಡ ಪುಸ್ತಕ ಕೂಡ ಪ್ರೇರಣೆ ನೀಡಿತ್ತು.
  ಇದೆಲ್ಲ ಯಾಕೆ ವಿವರಿಸಿದೆ ಎಂದರೆ ವಾಕಿಂಗ್ ಟ್ರಾಕ್, ಪಾರ್ಕ್ ಅಥವ ಜನ ಸಂಚಾರವಿಲ್ಲದ ರಸ್ತೆ ಇತ್ಯಾದಿ ವಾಕಿಂಗ್ ಮಾಡಲು ಹುಡುಕಲು ಹೊರಟಿದ್ದರೆ ನಾನು ನಿರಂತರ ವಾಕಿಂಗ್ ಮಾಡುತ್ತಿರಲಿಲ್ಲ ಮತ್ತು ತೂಕ ಇಳಿಸಿಕೊಳ್ಳುತ್ತಿರಲಿಲ್ಲ.
  ಅನೇಕರು ನನ್ನ ಅನುಭವ ಕೇಳಿ ಸಂಪಕ೯ ಮಾಡುವವರಿಗೆ ನಾನು ಹೇಳುವುದಿಷ್ಟೆ ಯಾವುದೇ ತಯಾರಿಗೆ ಹೋಗದೇ ಸರಳವಾಗಿ ದೃಡ ನಿದಾ೯ರ ಮಾಡಿ ಶುರು ಮಾಡಿಬಿಡಿ, ಟ್ರಾಕಿಂಗ್ ಸೂಟ್, ಬೂಟ್, ವಾಕಿಂಗ್ ಟ್ರಾಕ್ ಎಲ್ಲಾ ಬೇಕಾಗಿಲ್ಲ ಇದು ನನ್ನ ಸ್ವಂತ ಅನುಭವ.
   ಇವತ್ತಿಗೆ ಲಾಕ್ ಡೌನ್ ಘೋಷಣೆಯ  4ನೇ ವರ್ಷ ಆಯಿತೆಂಬ ಸುದ್ದಿ ಜೊತೆ ನನ್ನ ವಾಕಿಂಗ್ ಪ್ರಾರಂಬಿಸಿದ ದಿನ ಎಂಬ ನೆನಪೂ ಆಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...