Skip to main content

Blog number 2016. ನಮ್ಮ ಪ್ರೀತಿಯ ಶಂಭೂರಾಮನಿಗೆ ಮೂರು ವರ್ಷ ನನ್ನ ಅವನ ಸಾಂಗತ್ಯದಲ್ಲಿ ನನ್ನ ಸ್ಥೂಲಕಾಯದ ನಿವಾರಣೆ,

#ನಮ್ಮ_ಶಂಭೂರಾಮನ_ಹುಟ್ಟು_ಹಬ್ಬ

#ಮಾರ್ಚ್_23ಕ್ಕೆ_ಮೂರು_ವರ್ಷ_ತುಂಬಿತು

#ನನ್ನ_ನಿತ್ಯ_ವಾಕಿಂಗ್_ಸಂಗಾತಿ

#ನನ್ನ_ಸ್ಥೂಲಕಾಯ_ನಿವಾರಣೆಗೆ_ಸಹಕಾರಿ

#ನನ್ನ_ಪ್ರೀತಿಯ_ಶಂಭೂರಾಮ

https://youtu.be/dCX_rRvvjAI?feature=shared


  2021 ರಲ್ಲಿ ಬೆಂಗಳೂರಿಂದ ಶಂಭೂರಾಮ ಬರುವಾಗ ಒಂದು ತಿಂಗಳ ಮಗು ಅವನ ಜನ್ಮ ದಿನಾಂಕ 23 ಮಾರ್ಚ್ 2021 ಈ ವರ್ಷದ 23 ಮಾರ್ಚ್ 2024 ಕ್ಕೆ ಅವನಿಗೆ ಪೂರ್ತಿ ಮೂರು ವರ್ಷ ತುಂಬುತ್ತದೆ.
   ಆದ್ದರಿಂದ ಶಂಭೂರಾಮನ ಹುಟ್ಟು ಹಬ್ಬ ಆದರೆ ನಾವ್ಯಾರೂ ನಮ್ಮ ಮನೆಯಲ್ಲಿ ನಮ್ಮ ನಮ್ಮ ಹುಟ್ಟುಹಬ್ಬ ಆಚರಣೆಯೇ ಮಾಡದಿರುವುದರಿಂದ ಶಂಭೂರಾಮನ ಹುಟ್ಟು ಹಬ್ಬದ ಆಚರಣೆ ಕೂಡ ಇಲ್ಲ ಆದರೆ ಅವನು ಪ್ರೌಡಾವಸ್ಥೆಯ ತಲುಪುವ ಕಾಲಮಾನಗಳ ಮಾನಿಟರಿಂಗ್ ಮಾಡುವುದರಿಂದ ಅವನ ಹುಟ್ಟು ಹಬ್ಬದ ದಿನಾಂಕ ಮರೆಯುವುದಿಲ್ಲ.
   ನನ್ನ ಜೀವನದಲ್ಲಿ ನನ್ನ ಮಿತಿಮೀರಿದ ನಿಯಂತ್ರಣ ತಪ್ಪಿದ ತೂಕ ಇಳಿಸುವಲ್ಲಿ ಶಂಭೂರಾಮನ ಸಹಾಯ ನಾನು ಮರೆಯಲು ಸಾಧ್ಯವೇ ಇಲ್ಲ, ನಿತ್ಯ ಬೆಳಗಿನ ವಾಕಿಂಗ್ ನಿರಂತರವಾಗಿ ನಡೆಯುವಂತೆ ಯಾವ ಕಾರಣಕ್ಕೂ ತಪ್ಪಿಸದಂತೆ ಶಂಭೂರಾಮ ನನ್ನನ್ನ ಹಾಸಿಗೆಯಿಂದ ಎಬ್ಬಿಸುತ್ತಾನೆ..
  ತಮಾಷೆಗಾಗಿ ಅವನ ಮುಖ ತೊಳೆಯುವ ಕ್ರಮ ಈಗ ನಿತ್ಯದ ಅಭ್ಯಾಸ ಆಗಿದೆ, ವಾಕಿಂಗ್ ಪ್ರಾರಂಭದ ಮೊದಲು ಎಲ್ಲಾ ಗೇಟುಗಳನ್ನ ಲಾಕ್ ಮಾಡುವಾಗ ಶಂಭೂರಾಮ ತನ್ನ ನಿರ್ದಿಷ್ಟವಾದ ಎತ್ತರದ ಫೀಠದಲ್ಲಿ ಕುಳಿತು ಕೊಳ್ಳುತ್ತಾನೆ ನಿತ್ಯ ಅವನಿಗಾಗಿ ಮನೆಯಿಂದ ತರುವ ಸೌತೆಕಾಯಿ ತುಂಡುಗಳು ಒಂದೊಂದೇ ಅವನು ನೀಡುವ ಥ್ಯಾಂಕ್ಸ್ ಗೆ ಲಂಚವಾಗಿ ಪಡೆಯುತ್ತಾನೆ.
  ಇವತ್ತು ಸೌತೆಕಾಯಿ ಖಾಲಿಯಾಗಿದ್ದರಿಂದ ಶ೦ಭೂರಾಮನಿಗೆ ಸೇಬು ಹಣ್ಣಿನ ಸಮಾರಾದನೆ ಆಯಿತು.
 ಅವನಿಗೆ ನಂತರದ ಒಂದು ಗಂಟೆಯ ವಾಕಿಂಗ್ ಕಾಲಾವದಿಯಲ್ಲಿ ಮತ್ತು ನಂತರದ ನನ್ನ ಗಾರ್ಡನ್ ಗಿಡಗಳಿಗೆ ನೀರುಣಿಸುವ ಸಮಯ ನನಗೆ ಅವನು ಜೊತೆಯಾಗಿ ನನ್ನ ಆಯಾಸಗಳ ಮರೆಸುತ್ತಾನೆ ನಂತರ ಅವನ ಕಾಲು ತೊಳೆಸಿ ಮನೆಗೆ ಕರೆದುಕೊಂಡು ಹೋದ ಮೇಲೆ ಶಂಭೂರಾಮ ತಣ್ಣನೆಯ ಒಂದು ಲೋಟ ಹಾಲು ಕುಡಿಯುತ್ತಾನೆ, ನಾನು ಕಾಫಿ ಜೊತೆಗೆ ಹಣ್ಣು ತಿನ್ನುವಾಗ ಅದರಲ್ಲೂ ಶಂಭೂ ಪಾಲು ಕೇಳುತ್ತಾನೆ.
   ನಾನು ಸಿದ್ದ ಸಮಾದಿ ಯೋಗದ ವ್ಯಾಯಾಮ, ಪ್ರಾಣಯಾಮ, ಕಪಾಲಬಾತಿ ಮತ್ತು ದ್ಯಾನ ಮುಗಿಸಿ ಏಳುವಾಗ ಶಂಭೂರಾಮ ಗಾಡ ನಿದ್ದೆಯಲ್ಲಿರುತ್ತಾನೆ.
  ಹೀಗೆ ನನ್ನ ತೂಕ 140 ಕೇಜಿಯಿಂದ 107ಕ್ಕೆ ಇಳಿಸುವ ಕಷ್ಟದ ಕೆಲಸ ಸುಖಮಯಗೊಳಿಸಿದ ನನ್ನ ಹಳಿ ತಪ್ಪಿದ ಆರೋಗ್ಯ ಸರಿ ದಾರಿಗೆ ತರಲು ಕಾರಣನಾದ ಶಂಭೂರಾಮನ ನಾನು ನನ್ನ ಜೀವಮಾನದಲ್ಲಿ ಮರೆಯಲಾರೆ.
  ನಾನು ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಿರುತ್ತಾನೆ ನಂತರ ಕೆಲ ಸಮಯ ಅವನ ಚೆಲ್ಲಾಟದಲ್ಲಿ ನಾನು ಸೇರಲೇ ಬೇಕು.
   ಮೂಕ ಪ್ರಾಣಿಯ ಸ್ವಾಮಿನಿಷ್ಠೆ -ಪ್ರೀತಿಗೆ ಬೆಲೆಕಟ್ಟಲಾಗದು ಹೀಗೆ ಸಾಗಿದೆ ನನ್ನ ಮತ್ತು ಶಂಭೂರಾಮನ ಗೆಳೆತನದ ಸಾಂಗತ್ಯ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...