Skip to main content

Blog number 1995. ಶಿವಮೊಗ್ಗ ಲೋಕ ಸಭಾ ಚುನಾವಣೆ 2024 ರಾಜಧಾನಿಯ ಪತ್ರಕರ್ತರ ಪ್ರಶ್ನೆಗಳಿಗೆ ನನ್ನ ಗ್ರೌಂಡ್ ರಿಯಾಲಿಟಿ ಉತ್ತರ

#ಲೋಕಸಭಾ_ಚುನಾವಣೆ_ಬಂತು

#ರಾಜದಾನಿಯ_ಕೆಲ_ಪತ್ರಕರ್ತರ_ಪ್ರಶ್ನೆಗಳಿಗೆ_ನನ್ನ_ವೈಯಕ್ತಿಕ_ಉತ್ತರ

#ಶಿವಮೊಗ್ಗ_ಲೋಕಸಭಾ_ಅಭ್ಯರ್ಥಿಗಳು

#ಗ್ರೌಂಡ್_ರಿಯಾಲಿಟಿಗಳ_ಮಾಹಿತಿ_ಕೇಳುತ್ತಾರೆ

#ನನ್ನ_ಪ್ರಶ್ನೆ_ಅವರಿಗೆ_ರಾಜಕೀಯ_ಪಕ್ಷಗಳ_ಸರ್ವೆ_ಬಗ್ಗೆ.
  ನಮ್ಮ ರಾಜ್ಯದ ರಾಜದಾನಿಯ ಕೆಲ ಪತ್ರಕರ್ತರು ಚುನಾವಣೆ ಬಂದಾಗೆಲ್ಲ ನಮ್ಮ ಶಿವಮೊಗ್ಗ ಜಿಲ್ಲೆಯ ಮಾಹಿತಿ ಇತ್ಯಾದಿ ಗ್ರೌಂಡ್ ರಿಯಾಲಿಟಿಗೆ ಪ್ರಶ್ನೆ ಕೇಳುವುದು ಅದಕ್ಕೆ ನನ್ನದೇ ದೃಷ್ಟಿಕೋನದಲ್ಲಿ ಉತ್ತರಿಸುವುದು.
   ಅದರಂತೆ ನಿನ್ನೆಯ ಪ್ರಶ್ನೆಗಳು.....
1. ಹಾಲಿ ಸಂಸದ #ಬಿವ್ಯೆ_ರಾಘವೇಂದ್ರರ ಬಗ್ಗೆ
  ನನ್ನ ಉತ್ತರ ಹೆಸರು ಕೆಡಿಸಿ ಕೊಂಡಿಲ್ಲ, ರೈಲು - ರಾಷ್ಟ್ರೀಯ ಹೆದ್ದಾರಿ- ವಿಮಾನಗಳಿಂದ ಕೆಲಸಗಾರ ಎಂದಾಗಿದೆ, ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ, ಕಳೆದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಭರಪೂರ ಮತಗಳಿಸಿದ ದಾಖಲೆ ಇದೆ.
   ಈ ಭಾರಿ ಬಿಜೆಪಿ ಶಾಸಕರು ಪ್ರತಿನಿದಿಸುವ ಕ್ಷೇತ್ರದಲ್ಲಿ ಬಹುಮತ ಕಾಪಾಡಿಕೊಂಡು ಉಳಿದ ಕಾಂಗ್ರೇಸ್ ಪ್ರತಿನಿದಿಸುವ ಕ್ಷೇತ್ರದಲ್ಲಿ ಕೂಡ ಹೆಚ್ಚು ಮತ ಪಡೆದರೆ ಗೆಲುವು ಸಾಧ್ಯವಿದೆ.
  ಪ್ರತಿ ಸ್ಪರ್ದಿಯನ್ನು ತಪ್ಪಾಗಿ ಅಂದಾಜಿಸಿದರೆ, ಕಾರ್ಯಕರ್ತರು ಅತಿ ವಿಶ್ವಾಸದಿಂದ ಕೆಲಸ ಕಡಿಮೆ ಮಾಡಿದರೆ ಪಲಿಶಾಂಶದ ಮೇಲೆ ಪರಿಣಾಮ ಬೀರಬಹುದು.
2. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರಿ, ಜಿಲ್ಲಾ ಮಂತ್ರಿ ಮದು ಬಂಗಾರಪ್ಪ ಸಹೋದರಿ, ಖ್ಯಾತ ಚಲನ ಚಿತ್ರ ನಟ ರಾಜಕುಮಾರರ ಪುತ್ರ ನಟ ಶಿವರಾಜ್ ಕುಮಾರ್ ಪತ್ನಿ #ಗೀತಾಶಿವರಾಜಕುಮಾರ್ ಬಗ್ಗೆ
  ಇವರು ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ 2014ರಲ್ಲಿ ಯಡೂರಪ್ಪನವರು ಕೆಜೆಪಿ ಪಕ್ಷ ತ್ಯಜಿಸಿ ಬಿಜೆಪಿಯಿಂದ ಮೋದಿ ಅಲೆಯಲ್ಲಿ ಕೆಲವು ಲಕ್ಷ ಅಂತರದಿಂದ ಆಗಿನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ವಿರುದ್ದ ಗೆದ್ದಿದ್ದರು ಅದೇ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಮೂರನೆ ಸ್ಥಾನ ಪಡೆದಿದ್ದರು ಆಗ ಮದು ಬಂಗಾರಪ್ಪ ಯುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು,
   ಮದು ಬಂಗಾರಪ್ಪ 2019 ರಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಸಮ್ಮಿಶ್ರವಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರ ವಿರುದ್ದ ಪರಾಭವಗೊಂಡಿದ್ದರು ಆಗ ಬಿಜೆಪಿ ಶಿವಮೊಗ್ಗ ಲೋಕ ಸಭಾ ಚುನಾವಣೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರ ಸೇರಿ 5 ಕ್ಷೇತ್ರಗಳಲ್ಲಿತ್ತು.
  ಇವೆಲ್ಲ ಸಮೀಕ್ಷೆ ಜೊತೆಗೆ ಪ್ರತಿ ಲೋಕ ಸಭಾ ಚುನಾವಣೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಕಾಂಗ್ರೇಸ್ ಶಾಸಕರಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲೀಡ್ ಪಡೆಯುವ ಪವಾಡ ನಡೆಯುತ್ತಲೇ ಇದೆ,ಇದನ್ನೆಲ್ಲ ಡ್ಯಾಮೇಜ್ ಕಂಟ್ರೋಲ್ ಮಾಡಿದರೆ ಎಲ್ಲಾ ಕಾಂಗ್ರೆಸ್ಸಿನ ಶಾಸಕರು ಶತಾಯಗತಾಯ ಪ್ರಯತ್ನಿಸಿದರೆ,  ಜೊತೆಗೆ ಕಾಂಗ್ರೇಸ್ ಪಕ್ಷದ ಕೆಳ ಹಂತದ  ಕಾರ್ಯಕರ್ತರ ನೇರ ಸಂಪರ್ಕ ಗೀತಾ ಶಿವರಾಜಕುಮಾರ್ ಪಡೆದು ಅವರನ್ನು ಹುರಿದುಂಬಿಸಿದರೆ ಗೆಲುವು ಸಾಧ್ಯವಿದೆ.
   ನಮ್ಮದೇ ಸರ್ಕಾರ ಇದೆ, ಜನ ಕಾಂಗ್ರೇಸ್ ನ್ನೇ ವಿಧಾನಸಭಾ ಚುನಾವಣೆಯಂತೆ ಗೆದ್ದೇ ಗೆಲ್ಲಿಸುತ್ತಾರೆ, ನಾವೇ ಗೆಲ್ಲುತ್ತೇವೆ ಎಂಬ ಒವರ್ ಕಾನ್ಪಿಡೆನ್ಸ್ ನಲ್ಲಿ ಮೈಮರೆತರೆ ಪಲಿತಾಂಶದಲ್ಲಿ ಏರು ಪೇರು ಗ್ಯಾರಂಟಿ.
#ಮೋದಿ_ಅಲೆ
  ಮೋದಿ ಅಲೆ ಹಿಂದೂ ಮತದಾರರಲ್ಲಿ ಕಡಿಮೆ ಆಗಿಲ್ಲ ಅದು ಆಯೋದ್ಯಾ ರಾಮ ಮಂದಿರ ಉದ್ಘಾಟನೆ ನಂತರ ಇನ್ನೂ ಹೆಚ್ಚಾದಂತೆ ಕಂಡು ಬರುತ್ತಿದೆ.
#ಕಾಂಗ್ರೇಸ್_ಅಲೆ
   ಸಿದ್ದ ರಾಮಯ್ಯ ಅವರ ಭಾಗ್ಯಗಳು ಕಾಂಗ್ರೇಸ್ ಸಂಪ್ರದಾಯಿಕ ಮತದಾರರನ್ನು ಹಿಡಿದು ಇಟ್ಟಿದೆ, ಅಲ್ಪಸಂಖ್ಯಾತರ ಮತ ಕಾಂಗ್ರೇಸ್ ಅಭ್ಯರ್ಥಿಗೆ ಕಳೆದ ಚುನಾವಣೆಯಂತೆ ಹರಿದು ಬರಲಿದೆ.
#ಪ್ರಬಲ_ಜಾತಿವಾರು_ಮತ
    ಲಿಂಗಾಯಿತ ಮತಗಳು ಮತ್ತು ಬ್ರಾಹಣ ಮತಗಳು ಬಿಜೆಪಿಗೆ - ಈಡಿಗರ ಮತ್ತು ಅಲ್ಪಸಂಖ್ಯಾತರ ಮತಗಳು ಕಾಂಗ್ರೇಸಿಗೆ ಗ್ಯಾರಂಟಿ.
#ಪರಿಶಿಷ್ಟ_ಜಾತಿ_ಪಂಗಡದ_ಮತ
 ಶಿವಮೊಗ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಮತಗಳು ಬೇರೆಲ್ಲ ಜಾತಿಗಿಂತ ಹೆಚ್ಚು ಇದೆ ಆದರೆ ಅವುಗಳು ಪ್ರಸಕ್ತ ಬಿಜೆಪಿ ಓಟ್ ಬ್ಯಾಂಕ್ ಗಳಾಗಿದೆ ಇದನ್ನು ಪುನಃ ಕಾಂಗ್ರೇಸ್ ಒಲಿಸಿಕೊಳ್ಳಲು ತಮ್ಮದೇ ಸರ್ಕಾರದಲ್ಲಿ ಜಿಲ್ಲೆಯ ಈ ಜಾತಿಗಳ ಮುಖಂಡರಿಗೆ ಸೂಕ್ತ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಲು ವಿಫಲವಾಗಿರುವುದರಿಂದ ಕಾಂಗ್ರೇಸಿಗೆ ಮತಗಳಾಗಿ ಪರಿವರ್ತನೆ ಕಷ್ಟಸಾಧ್ಯ.
  #ಹಿಂದುಳಿದ_ವರ್ಗದ_ಮತಗಳು
  ಈಡಿಗರೇತರ ಜಾತಿಗಳ ಮತಗಳು ನಿರ್ಣಾಯಕ ಇವು ಕಳೆದ ವಿಧಾನಸಭಾ ಕ್ಷೇತ್ರಗಳಾದ ಭದ್ರಾವತಿ-ಸೊರಬ-ಸಾಗರದಲ್ಲಿ ಕಾಂಗ್ರೇಸಿಗೆ - ಶಿಕಾರಿಪುರದಲ್ಲಿ ಬಂಡಾಯ ಅಭ್ಯರ್ಥಿಗೆ ಹರಿದು ಹೋಗಿತ್ತು ಮತ್ತು ಉಳಿದ ಕ್ಷೇತ್ರದಲ್ಲಿ ಬಿಜೆಪಿಗೆ ದೊರಕಿತ್ತು.

#ಪತ್ರಕರ್ತರಿಗೆ_ನನ್ನ_ಪ್ರಶ್ನೆ_ರಾಜಕೀಯ_ಪಕ್ಷಗಳ_ಸಮೀಕ್ಷೆ_ಹೇಗೆ?
  ಇದಕ್ಕೆ ಅವರ ಉತ್ತರ ಜಾತಿ-ಹಣ- ಪ್ರಭಾವ ಮಾತ್ರ ಅಂತೆ.
*     *       *       *        *          *        *         *       *
ನಾಳೆ ನಾಡಿದ್ದು ಚುನಾವಣೆ ಘೋಷಣೆ ಆಗಲಿದೆ ಯಾರು ಶಿವಮೊಗ್ಗ ಜಿಲ್ಲೆಯ ಪ್ರತಿನಿದಿಸುತ್ತಾರೋ ಪಲಿತಾಂಶದ ತನಕ ಕಾಯಬೇಕು ನನ್ನ ಉತ್ತರ ಸರಿಯೋ ತಪ್ಪೋ ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಯಾವ ಪಕ್ಷದವರೂ ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...