Skip to main content

Blog number 2002. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಡುಕೊಪ್ಪದಲ್ಲಿ ಬ್ರಿಟೀಶ್ ವೈಸ್ ರಾಯ್ ಲಾರ್ಡ್ ರಿಪ್ಪನ್ ಶಿಕಾರಿಗಾಗಿ ತಂಗಿದ್ದರಿಂದ ಅವರ ಸ್ಮರಣೆಗಾಗಿ ಮೂಡುಕೊಪ್ಪ ರಿಪ್ಪನ್ ಪೇಟೆ ಆಯಿತು

#ರಿಪ್ಪನ್_ಪೇಟೆ_ನಾಮಕರಣಕ್ಕೆ_ಕಾರಣ

#ದೊಡ್ಡಿನಕೊಪ್ಪ_ಮೂಲ_ಹೆಸರಿನ_ಹಳ್ಳಿ_ರಿಪ್ಪನ್_ಪೇಟೆ_ಆದ_ಕಥೆ

#ಲಾರ್ಡ್_ರಿಪ್ಪನ್_ಸ್ಮರಣೆಯ_ರಿಪ್ಪನ್_ಪೇಟೆ_ಸಮೀಪದ

#ಅರಸಾಳು_ರೈಲು_ನಿಲ್ದಾಣದ_ಹೆಸರು

#ಆರ್_ಕೆ_ನಾರಾಯಣರ_ಸ್ಮರಣೆಯ_ಮಾಲ್ಗುಡಿ_ರೈಲು_ನಿಲ್ದಾಣ.

#ಇಲ್ಲಿ_ಶಂಕರ್_ನಾಗ್_ದೂರದರ್ಶನಕ್ಕಾಗಿ_ಮಾಲ್ಗುಡಿ_ಡೇಸ್_ಚಿತ್ರಿಕರಣ_ಮಾಡಿದ್ದರು.

    ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಗೆ ಈ ಹೆಸರು ಬರಲು ಕಾರಣ ಏನು?.... ಈ ಬಗ್ಗೆ ಸ್ಥಳೀಯರು ಹೇಳುತ್ತಿದ್ದಿದ್ದು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಮತ್ತು ರೈಲು ನಿಲ್ದಾಣ ಈ ಊರಿಗೆ ಬಂದರೆ ಪ್ಲೇಗ್ ಬರುತ್ತದೆ ಎಂಬ ಭಯದಿಂದ ತಮ್ಮ ಊರಿಗೆ ರೈಲು ಮಾರ್ಗ ಮತ್ತು ರೈಲು ನಿಲ್ದಾಣ ನಿರಾಕರಿಸಿ ಆಗ ಸ್ಥಳಕ್ಕೆ ಬಂದ ಲಾಡ್೯ ರಿಪ್ಪನ್ ಗೆ  ಮನವಿ ಮಾಡಿ ಅವರ ಹೆಸರನ್ನು ಅವರ ಬೇಟಿಯ ಸ್ಮರಣೆಗಾಗಿ ಇಟ್ಟಿದ್ದರು ಎನ್ನುವುದು.
  ಇದನ್ನು ನಾನು ಅನೇಕ ಹಿರಿಯರಿಂದ ಕೇಳಿದ್ದೆ... ಈಗಿನ ತಲೆಮಾರಿನವರೂ ಅದನ್ನೆ ಪುನರುಚ್ಚಿಸುತ್ತಾರೆ....ಮೂಲ ಈ ಪ್ರದೇಶದ ಹೆಸರು ದೊಡ್ಡಿನಕೊಪ್ಪ.
   ನಾನು ಕೂಡ ನನ್ನ ಕೆಲವು ಲೇಖನಗಳಲ್ಲಿ ಹೀಗೆ ಬರೆದಿದ್ದೆ.... ಆದರೆ ಪತ್ರಕರ್ತ ಮಿತ್ರರಾದ #ಡಿ_ಪಿ_ಸತೀಶ್ ಒಂದು ಅಂಶ ಗುರುತಿಸಿದರು, ಲಾರ್ಡ್ ರಿಪ್ಪನ್ ಅಧಿಕಾರವದಿ ಬದುಕಿದ ಕಾಲಾವಧಿ ಮತ್ತು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗದ ಕಾಮಗಾರಿಗೆ ಸುಮಾರು 50 ವರ್ಷಗಳ ವ್ಯತ್ಯಾಸ ಇದೆ, ಲಾರ್ಡ್ ರಿಪ್ಪನ್ ಅಧಿಕಾರಾವಧಿ 1880 - 1884 ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ ಎಂದಿದ್ದರು ಈ ರೀತಿ ಮಾಹಿತಿ ನೀಡಿದ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
     ನಂತರ ಈ ಬಗ್ಗೆ ಹೆಚ್ಚಿನ ಪರಿಶೀಲನೆ ಮಾಡಿದಾಗ ಅವರು ತಿಳಿಸಿದ್ದು ಸತ್ಯ ಲಾರ್ಡ್ ರಿಪ್ಪನ್ ತಮ್ಮ ಅಧಿಕಾರದಲ್ಲಿದ್ದಾಗ ಈ ಭಾಗದಲ್ಲಿ ಶಿಕಾರಿಗಾಗಿ ಕೆಲವು ಪ್ರದೇಶಗಳಲ್ಲಿ ವಾಸ್ತವ್ಯ ಮಾಡಿದ್ದು ಕಂಡು ಬರುತ್ತದೆ,ಅವರು ಜೋಗ್ ಫಾಲ್ಸ್ ವೀಕ್ಷಣೆ ಮಾಡಿದ ದಾಖಲೆಗಳು ಇಲ್ಲ, ಬಹುಷ್ಯ ಅವರ ಬೇಟೆಗೆ ಬಂದ ಸಂದರ್ಭದಲ್ಲೇ ದೊಡ್ಡಿನಕೊಪ್ಪ ರಿಪ್ಪನ್ ಪೇಟೆ ಎಂಬ ಹೆಸರು ಆಗಿರಬೇಕು ನಂತರ ಅದು ರೈಲು ಮಾರ್ಗದ ಸ್ಥಳಾಂತರ ಮನವಿಯ ಕಾಲಕ್ಕೆ ಆ ಹೆಸರು ಹೆಚ್ಚು ಬಳಕೆ ಆಗಿರಬಹುದು ಆದ್ದರಿಂದ ಈ ಹಿಂದೆ ನಾವು ತಿಳಿದಿದ್ದ ರೈಲು ಮಾರ್ಗ ಸ್ಥಳಾಂತರಕ್ಕಾಗಿ ಲಾಡ್೯ ರಿಪ್ಪನ್ ಗೆ  ಮನವಿ ನೀಡಿದ್ದು ಅಥವ ಲಾರ್ಡ್ ರಿಪ್ಪನ್ ಮನವಿ ಸ್ವೀಕರಿಸಿದ್ದರು ಎಂಬುದು ತಪ್ಪು ಮಾಹಿತಿ ಎಂಬುದು ತಿದ್ದಿ ಕೊಳ್ಳಲು ವಿನಂತಿ.
   ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ -ಹೊಸನಗರ ಮಾರ್ಗದ ಮಧ್ಯದ ದಟ್ಟ ಅರಣ್ಯದಲ್ಲಿದೆ, ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಈಗಿನ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪನೆಯಲ್ಲಿ ಇರಲಿಲ್ಲ ಆದರೂ #ಅರಸಾಳು ರೈಲು ನಿಲ್ದಾಣ ಆಗಲು ಬೇರೆ ಕಾರಣಗಳಿದೆ.
   ಆದರೆ ರಿಪ್ಪನ್ ಪೇಟೆಗೆ ರೈಲು ನಿಲ್ದಾಣದ ಪ್ರಸ್ತಾವನೆ ಸೇರಿತ್ತು, ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಅದು ಆಗಿತ್ತು.
   ರೈಲು ಮಾರ್ಗದ ಸರ್ವೆ ಪರಿಶೀಲನೆಗೆ ಬ್ರಿಟಿಷ್ ಅಧಿಕಾರಿಗಳು ಇಲ್ಲಿಗೆ ಬಂದಾಗ ಈ ಭಾಗದ ಪ್ರಮುಖರೆಲ್ಲ  ಸೇರಿ ಅವರನ್ನು ಸನ್ಮಾನಿಸಿ ಅವರಿಗೆ ಸುಮಾರು 50 ವಷ೯ದ ಹಿಂದೆ ವೈಸ್ ರಾಯ್ ಆಗಿದ್ದ ಲಾರ್ಡ್ ರಿಪ್ಪನ್ (ಅಧಿಕಾರಾವಧಿ1880-1884) ಈ ಊರಿನಲ್ಲಿ ಶಿಕಾರಿಗಾಗಿ ತಂಗಿದ್ದ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ದೊಡ್ವಿನಕೊಪ್ಪ ಎಂಬ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿರುವುದಾಗಿ ವಿವರಿಸಿ ಈ ರೈಲು ಮಾರ್ಗದ ರೈಲ್ವೆ ಕಾಮಗಾರಿ ಉಸ್ತವಾರಿಯ  ಬ್ರಿಟೀಷ್ಅಧಿಕಾರಿಗಳನ್ನು ಸಂಪ್ರೀತರಾಗಿಸುತ್ತಾರೆ, ಈ ರೀತಿ ಅಧಿಕಾರಿಗಳನ್ನು ಒಲೈಸಿ ಊರ ಪ್ರಮುಖರು ಒಂದು ಮನವಿ ನೀಡುತ್ತಾರೆ ಅದೇನೆಂದರೆ ತಮ್ಮ ಊರಿಗೆ ಯಾವುದೇ ಕಾರಣಕ್ಕೂ ರೈಲು ಮಾಗ೯ ಹಾಕಬಾರದಾಗಿ ಮನವಿ ಮಾಡುತ್ತಾರೆ.
   ಅದಕ್ಕೆ ಸಕಾರಣವಾಗಿ ಈ ರೈಲು ಮಾಗ೯ ಮತ್ತು ರೈಲು ನಿಲ್ದಾಣ ರಿಪ್ಪನ್ ಪೇಟೆಯಲ್ಲಿ ಸ್ಥಾಪನೆ ಆದರೆ ಆಗ ರೈಲಿನಲ್ಲಿ
 ಬರುವ ಪ್ರಯಾಣಿಕರಿಂದ ಮಾರಕ ಪ್ಲೇಗ್‌ ರೋಗ ಬಂದು ಹರಡುವುದರಿಂದ ತಮ್ಮ ಊರಲ್ಲಿ ಸಾವು ನೋವು ಊರಲ್ಲಿ
 ಉಂಟಾಗುತ್ತದೆ ಎಂಬ ತಮ್ಮ ಊರಿನ ಹಿತದೃಷ್ಟಿಯಿಂದ ಮನವಿ ನೀಡಿ ವಿನಂತಿಸುತ್ತಾರೆ.
 ಈ ರೀತಿಯ ಮೂಡ ನಂಬಿಕೆ ಬ್ರಿಟೀಷ್ ಅಧಿಕಾರಿಗಳಿಗೆ
 ಇರದಿದ್ದರು ಈ ಊರಿನ ಜನರು ಲಾರ್ಡ್ ರಿಪ್ಪನ್ ಹೆಸರು ಅವರ ಊರಿಗೆ ಇಟ್ಟಿದ್ದರಿಂದ, ಈ ಊರಿನ ಜನರ 
ಪ್ರೀತಿಗಾಗಿ ರಿಪ್ಪನ್ ಪೇಟೆ ರೈಲು ಮಾರ್ಗ ನಿಲ್ದಾಣ ರದ್ದು ಮಾಡುತ್ತಾರೆ ಎ0ಬುದು ರಿಪ್ಪನ್ ಪೇಟೆ ಊರ ಇತಿಹಾಸದ ಕಥೆ ಆಗಿದೆ.
   ರೈಲು ಮಾಗ೯ ಅರಸಾಳಿನಿಂದಲೇ ಯೂಟರ್ನ್ ಗೊಳಿಸಿ ಕೆಂಚನಾಲ ಮಾಗ೯ವಾಗಿ ಆನಂದಪುರಂಗೆ ಸಂಪಕಿ೯ಸುವ ಬದಲಿ ಮಾಗ೯ ನಿಮಿ೯ಸುತ್ತಾರೆ ಹಾಗಾಗಿ ಅರಸಾಳು ರೈಲು ನಿಲ್ದಾಣ ಮಾಡುತ್ತಾರೆ.
  ಅರಸಾಳು ಈಗಲೂ ಮೀಸಲು ಅರಣ್ಯದ ಮದ್ಯ ಇದೆ, ಇಲ್ಲಿನ ಮಾವಿನ ಮಿಡಿ ಜಗತ್ ಪ್ರಸಿದ್ಧವಾಗಿದೆ, 1970ರ ದಶಕದಲ್ಲಿ ಖೆಡ್ಡಾ ನಿರ್ಮಾಣ ಮಾಡಿ ಪುಂಡು ಆನೆ ಒಂದನ್ನು ಅರಸಾಳಿನಲ್ಲಿ  ಹಿಡಿಯಲಾಗಿತ್ತು,ಬ್ರಿಟಿಷರು ನಿಮಿ೯ಸಿರುವು ಬೃಹತ್ ಸಾಗುವಾನಿ ಪ್ಲಾಂಟೇಶನ್ ಇಲ್ಲಿ ಇದೆ, ಅರಣ್ಯ ಅಧಿಕಾರಿಗಳ ಬಿಡದಿಗಳು, ಕಚೇರಿಗಳಿದೆ, ಚಚ್೯ ಇದೆ. ಈಗ ಅರಸಾಳು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ ಮತ್ತು ಈ ಮಾಗ೯ದ ಪ್ರಮುಖ ಊರಾಗಿದೆ.
   ಈ ಊರನ್ನ ಕನ್ನಡದ ಖ್ಯಾತ ನಟ, ನಿದೇ೯ಶಕ ಶಂಕರ್ ನಾಗ್ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಕನ್ನಡಿಗ R.K.ನಾರಾಯಣ್ ರ ಮಾಲ್ಗುಡಿ ಡೇಸ್ ಎಂಬ ಕಥೆಯನ್ನ ದೂರದಶ೯ನಕ್ಕೆ ದಾರಾವಾಹಿ ಮಾಡಿದಾಗ ಅರಸಾಳು ರೈಲು ನಿಲ್ದಾಣ ಚಿತ್ರಿಕರಣಕ್ಕೆ ಬಳಸಿಕೊಂಡಿದ್ದರು.
 ಕನ್ನಡದ ನಟ ಸಾವ೯ ಬೌಮ ಡಾ.ರಾಜ್ ಕುಮಾರರ #ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರಿಕರಣ ಮಾಡಿದ್ದರು.
    ನಂತರ ಮೀಟರ್ ಗೇಜ್ ರದ್ದು ಮಾಡುವ ಪೂವ೯ದಲ್ಲಿ ಅರಸಾಳು ರೈಲು ನಿಲ್ದಾಣವನ್ನ ರದ್ದು ಮಾಡಿದ್ದರು, ಬ್ರಾಡ್ ಗೇಜ್ ಪರಿವತ೯ನೆಗೆ ರೈಲ್ವೇ ಇಲಾಖೆ ಈ ಮಾಗ೯ ನಷ್ಟ ಅಂತ ರೈಲು ಮಾಗ೯ವನ್ನ ರದ್ದು ಮಾಡಿತ್ತು, ನಂತರ ಜನರ ಹೋರಾಟ ಒತ್ತಾಯಗಳಿಗೂ ರೈಲ್ವೇ ಇಲಾಖೆ ಮಣಿಯಲಿಲ್ಲ ಆಗ ಮುಖ್ಯಮಂತ್ರಿಗಳಾಗಿದ್ದ ನಮ್ಮ ಜಿಲ್ಲೆಯವರೆ ಆದ ಯಡೂರಪ್ಪ ಕೆ-ರೈಡ್ ಯೋಜನೆಯಲ್ಲಿ ರಾಜ್ಯ ಸಕಾ೯ರದ ಸಹಭಾಗಿತ್ವದಲ್ಲಿ  ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮಾಗ೯ ನಿಮಿ೯ಸಲು ಕಾರಣಕತ೯ರಾದರು.
   ಈಗ ಅವರ ಮಗ ರಾಘವೇಂದ್ರ ಸಂಸದರಾಗಿ ಎಲ್ಲಾ ರೈಲು ನಿಲ್ದಾಣಗಳ ಮೇಲ್ದಜೆ೯ಗೇರಿಸುತ್ತಿದ್ದು ಅರಸಾಳು ರೈಲು ನಿಲ್ದಾಣ ಕೂಡ ನವೀಕರಣಗೊಳಿಸಿ ಮಾಲ್ಗುಡಿ ಡೇಸ್ ಸ್ಮರಣಾಥ೯ ಅರಸಾಳು ನಿಲ್ದಾಣ "#ಮಾಲ್ಗುಡಿ_ಅರಸಾಳು" ಎ೦ದು ಪುನರ್ ನಾಮಕರಣ ಮಾಡಿದ್ದಾರೆ.
     ಇಲ್ಲಿ ಮಾಲ್ಗುಡಿ ಧಾರಾವಾಹಿಯ ಆರ್.ಕೆ.ನಾರಾಯಣರ ಕಥೆಯ ಪಾತ್ರಗಳು ಶಂಕರ್ ನಾಗ್ ಅವರ ದಾರಾವಾಹಿಯ ಸ್ಮರಣೆಗಾಗಿ ಮ್ಯೂಜಿಯಂ ಕೂಡ ನಿರ್ಮಿಸಿದ್ದಾರೆ ಇದನ್ನು ನೋಡಲು ದೂರ ದೂರದಿಂದ ಪ್ರವಾಸಿಗಳು ಬರುತ್ತಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ