Skip to main content

Blog number 1989. ಮಲಂದೂರು ಮೇಷ್ಟರೆಂಬ ಸಜ್ಜನರು ಆನಂದಪುರಂನಲ್ಲಿ ದಿನಸಿ - ಬಟ್ಟೆ-ಹೋಟೆಲ್ ಉದ್ಯಮ ಸ್ಥಾಪಿಸಿ ನಂತರ ದೊಡ್ಡ ಜಮೀನ್ದಾರರಾದ ಕಥೆ.

#ಆನಂದಪುರಂ_ಇತಿಹಾಸ_ಪುಸ್ತಕದಲ್ಲಿ

#ಜಮೀನ್ದಾರ್_ಮಲಂದೂರು_ ಮೇಷ್ಟರ_ಲೇಖನ_ಇಲ್ಲದಿದ್ದರೆ_ಪೂರ್ಣ_ಆಗುವುದಿಲ್ಲ

#ಆನಂದಪುರಂನ_ಮೊದಲ_ಹೋಲ್_ಸೇಲ್_ದಿನಸಿ_ಮಂಡಿ_ಮಾಡಿದವರು

#ಸ್ವಾತಂತ್ರ್ಯ_ಪೂವ೯ದಲ್ಲಿ_ಆನಂದಪುರಂ_ಶಿಕ್ಷಕರು

#ನಂತರ_ಶ್ರೀಮಂತ_ಭೂಮಾಲಿಕರಾದರು

#ಇವರ_ಪುತ್ರ_ಸತ್ಯನಾರಾಯಣ್_ಮುಂಬೈಯಲ್ಲಿ_ಐಎಎಸ್_ಕೋಚಿಂಗ್_ಸೇರಿದ್ದರು

#ರೈಲು_ಅಪಘಾತದಿಂದ_ಅವರ_ಗುರಿ_ಸಾದಿಸಲು_ಆಗಲಿಲ್ಲ
  ಆನಂದಪುರಂನ ಕೆ.ವಿ.ಸುರೇಶರು ನಾನು ಬರೆಯುತ್ತಿರುವ #ಆನಂದಪುರಂ_ಇತಿಹಾಸ ಪುಸ್ತಕಕ್ಕೆ ಹೆಚ್ಚಿನ ಮಾಹಿತಿ ಸಹಕಾರ ನೀಡುವವರಲ್ಲಿ ಅವರು ಪ್ರಮುಖರು ಅವರು ಈ ಪುಸ್ತಕದಲ್ಲಿ ಮಲಂದೂರು ಮೇಷ್ಟರ ಲೇಖನ ಇರಲೇಬೇಕು ಅನ್ನುತ್ತಿದ್ದರು ಆದರೆ ಅವರ ಪೋಟೋ ಸಂಗ್ರಹ ಸಾಧ್ಯವಾಗಿರಲಿಲ್ಲ.
   ಮೊನ್ನೆ ಮಧ್ಯಾಹ್ನ ಮಲಂದೂರು ಮೇಷ್ಟರ ಮೊಮ್ಮಕ್ಕಳು ಅಂದರೆ ಸತ್ಯನಾರಾಯಣರ ಮಕ್ಕಳಾದ ಶ್ರೀಮತಿ ವಿದ್ಯಾಸೂರ್ಯಕುಮಾರ್, ಶ್ರೀಮತಿ ಜ್ಯೋತಿ ಸಂಜೀವ್, ರಮೇಶ್, ಗೀತಾಂಜಲಿ ದತ್ತಾತ್ರೇಯ ಮತ್ತು ಹರೀಶ್ ಸಾಗರದ ಅವರ ಸಂಬಂದಿಗಳ ಮನೆಯ ನಾಗ ಪ್ರತಿಷ್ಟಾಪನೆಯ ವಾರ್ಷಿಕೋತ್ಸವಕ್ಕೆ ಹೋಗುವಾಗ ನನ್ನ ಕಛೇರಿಗೆ ಬಂದಿದ್ದರು.
   ಒಂದು ವಿಶೇಷ ಅಂದರೆ ಇವರ ತಂದೆ ಸತ್ಯನಾರಾಯಣಣ್ಣ ಮತ್ತು ನನ್ನ ತಂದೆ ಗಳಸ್ಯ ಕಂಠಸ್ಯ ಸ್ನೇಹಿತರು, ವಿದ್ಯಾ ನನ್ನ ಅಕ್ಕ ಉಮಾದೇವಿ ಕ್ಲಾಸ್ ಮೇಟ್, ರಮೇಶ ನನ್ನ ಕ್ಲಾಸ್ ಮೇಟ್, ಗೀತಾಂಜಲಿ ನನ್ನ ಪತ್ನಿಯ ಕ್ಲಾಸ್ ಮೇಟ್ ಆದರೂ ಕೆಲವು ವರ್ಷಗಳಿಂದ ಪರಸ್ಪರ ಭೇಟಿ ಇರಲಿಲ್ಲ.
   ಇವರ ತಂದೆ ಆ ಕಾಲದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸೈನ್ಸ್ ಪದವಿ ವ್ಯಾಸಂಗ ಮಾಡಿದವರು ನಂತರ ಐಎಎಸ್ ಮಾಡಬೇಕೆಂದು ಮುಂಬೈನಲ್ಲಿ ತರಬೇತಿಗೆ ಸೇರಿದ್ದರು ಆಗ ಮು೦ಬೈ  ಕನ್ನಡ ಸಂಘದ ಅಧ್ಯಕ್ಷರಾದವರು ಆದರೆ ದುರಾದೃಷ್ಟ ಅವರು ರೈಲು ಅಪಘಾತದಿಂದ ಬದುಕಿ ಬಂದದ್ದೇ ಹೆಚ್ಚು ದೇಹದ ಬಲಬಾಗ ಹೆಚ್ಚು ಜಖಂ ಆಗಿತ್ತು ಮುಖಕ್ಕೆ ಆ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಆಗಿತ್ತು ಇಲ್ಲದಿದ್ದರೆ ಅವರು ಐಎಎಸ್ ಅಧಿಕಾರಿ ಆಗಿ ದೊಡ್ಡ ಮಟ್ಟದಲ್ಲಿರುತ್ತಿದ್ದರು.
   50 ವರ್ಷದ ಹಿಂದೆ ನಮ್ಮ ಬಾಲ್ಯದಲ್ಲಿ ನಮ್ಮ ತಂದೆ ಮತ್ತು ಅವರ ಗೆಳೆಯರು ಸತ್ಯನಾರಾಯಣಣ್ಣರ ಅಸಾದಾರಣ ನೆನಪಿನ ಬುದ್ದಿಶಕ್ತಿ ಬಗ್ಗೆ ಮಾತಾಡುವುದು ಕೇಳಿದ್ದೆ.
   ಇವರ ತಂದೆ ಆನಂದಪ್ಪನವರನ್ನು ಆ ಕಾಲದಲ್ಲಿ ಆನಂದಪುರಂ ನಿವಾಸಿಗಳು ಕರೆಯುತ್ತಿದ್ದದ್ದು ಮಲಂದೂರು ಮೇಷ್ಟರೆಂದೇ ಕಾರಣ ಅವರು ಕರಾವಳಿಯ ಉಡುಪಿ ಜಿಲ್ಲೆಯಿಂದ ತೀರ್ಥಹಳ್ಳಿಗೆ ವಲಸೆ ಬಂದವರು ನಂತರ ನೆಲೆಸಿದ್ದು ಆನಂದಪುರಂನ ಮಲಂದೂರಿನಲ್ಲಿ ಆ ಕಾಲದಲ್ಲಿ ಆನಂದಪುರಂನ ನೂರಾರು ಪ್ರತಿಷ್ಟಿತ ಭೂಮಾಲಿಕರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿದ ಮಾಸ್ತರಾಗಿದ್ದರಿಂದ #ಮಲಂದೂರು_ಮೇಷ್ಟರೆಂದೆ ಎಂದೇ ಹೆಸರಾದರು.
  ಏಳು ಅಡಿ ಎತ್ತರ ಇದ್ದರಂತೆ ಲೆಖ್ಖಾಚಾರದಲ್ಲಿ ವ್ಯಾಪಾರದಲ್ಲಿ ಅವರಿಗಿದ್ದ ಬುದ್ಧಿಶಕ್ತಿಯಿಂದ ಆನಂದಪುರಂನಲ್ಲಿ ಅವರು ಕಟ್ಟಿದ ಸಾಮ್ರಾಜ್ಯ ಸಣ್ಣದಲ್ಲ ಅವರ ಮಂಡಿಗೆ ಎಲ್ಲಾ ರೀತಿಯ ದಿನಸಿ ಹುಬ್ಬಳ್ಳಿಯಿಂದ ಬರುತ್ತಿತ್ತು ಆನಂದಪುರಂನ ಸುತ್ತ ಮುತ್ತಲಿನ ರೈತರ ಮನೆಗೆ ದಿನಸಿ ತಲುಪಿಸುವ ವ್ಯವಸ್ಥೆ ಮಲಂದೂರು ಮಾಸ್ತರದ್ದು ಈ ಕಾಲದ ಡೋರ್ ಡೆಲೆವರಿ ಸಿಸ್ವಂ ಆ ಕಾಲದಲ್ಲಿ ಅವರು ಜಾರಿಗೆ ತಂದಿದ್ದರು ಅಷ್ಟೆ ಅಲ್ಲ ಡೋರ್ ಡೆಲವರಿ ಪಡೆದ ಗ್ರಾಹಕರು ವರ್ಷಕ್ಕೊಮ್ಮೆ ಪಾವತಿ ಮಾಡುವಂತ ಒವರ್ ಡ್ರಾಪ್ಟ್ ಸಿಸ್ಟಂ ಕೂಡ ಅವರದ್ದು.
   ಯಶಸ್ವಿಯಾಗಿ ನಡೆದ ಅವರ ಈ ದಿನಸಿ ಮಂಡಿ ವ್ಯವಹಾರದಿಂದ ಅವರು ನೂರಾರು ಎಕರೆ ಭೂಮಿ ಹೊಂದಿದ ಜಮೀನ್ದಾರರು ಆಗಿದ್ದರು.
    ಮಲಂದೂರು ಮೇಷ್ಟರಿಗೆ ಇಬ್ಬರು ಪತ್ನಿಯರು ಮೊದಲ ಪತ್ನಿಗೆ ಇಬ್ಬರು ಗಂಡು ಮಕ್ಕಳು ದೊಡ್ಡ ಮಗ ನಾಗಪ್ಪರ ಕುಟುಂಬ ಸಮೀಪದ ಹೊಸೂರಿನಲ್ಲಿ ನೆಲೆಸಿದೆ ನವೀನ ಸುರೇಂದ್ರ ಸಹೋದರ ಕುಟುಂಬ ಅಲ್ಲಿದೆ.
  ಎರಡನೆ ಮಗ ಶೀನಪ್ಪರ ಮಗ ಶೇಖರ ಪೂಜಾರರು ಮುರುಘಾಮಠದಲ್ಲಿ ಹೋಟೆಲ್ ದಿನಸಿ ಅಂಗಡಿ ನಡೆಸುತ್ತಿದ್ದಾರೆ ಇವರ ಮಗ ದಯಾನಂದ ಪೂಜಾರಿ ಭಾರತೀಯ ಸೈನ್ಯದಲ್ಲಿದ್ದಾರೆ ಅಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿ ಅನೇಕ ಪ್ರಶಸ್ತಿಗೆ ಭಾಜನರಾಗಿ ಅಲ್ಲಿ ತರಬೇತುದಾರರಾಗಿದ್ದಾರೆ.
  ಮಲಂದೂರು ಮೇಷ್ಟರ ಎರಡನೆ ಪತ್ನಿ ಶ್ರೀಮತಿ ಚಿಕ್ಕಮ್ಮರ ಮಗ ಸತ್ಯನಾರಾಯಣರ ಮಕ್ಕಳು ಈಗ ಚೋರಡಿಯಲ್ಲಿ ಹಾಗು ಬೆಂಗಳೂರಲ್ಲಿ ಕೃಷಿ ವ್ಯವಹಾರ ಮಾಡುತ್ತಿದ್ದಾರೆ.
   ಕಿರಿಯ ಮೊಮ್ಮಗಳಾದ ಶ್ರೀಮತಿ ಗೀತಾಂಜಲಿ ದತ್ತಾತ್ರೇಯ ಶಿವಮೊಗ್ಗ ಜಿಲ್ಲಾ ಮಹಿಳಾ ಈಡಿಗ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾರೆ.
    ಸತ್ಯನಾರಾಯಣಣ್ಣರ ಪುತ್ರ ರಮೇಶ್ ಚೋರಡಿಯಲ್ಲಿ ವ್ಯವಹಾರ ಮಾಡುತ್ತಾರೆ ಇವರು ನನ್ನ ಕ್ಲಾಸ್ ಮೇಟ್ ಇವರ ತಮ್ಮ ಅಜ್ಜನ ಬಗ್ಗೆ ಹೇಳಿದ ಮಾಹಿತಿ ಈ ವಿಡಿಯೊದಲ್ಲಿದೆ.
   https://youtu.be/tm1hK6IiSEs?feature=shared

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ