Skip to main content

Blog number 2011.ನಿನ್ನೆ ದಿನಾಂಕ 20 ಮಾರ್ಚ್ 2024 ರಲ್ಲಿ ನಮ್ಮ ಊರು ಆನಂದಪುರಂನ ತಾಪ ಮಾನ ಮಧ್ಯಾಹ್ನ 12ಕ್ಕೆ 43 ಡಿಗ್ರಿ ದಾಟಿ 44 ರ ಆಸು ಪಾಸು ತಲುಪಿತ್ತು.

#ನಿನ್ನೆ_ಮದ್ಯಾಹ್ನದ_ತಾಪಮಾನ_ಭಯ_ಉಂಟುಮಾಡಿತ್ತು

#ನನ್ನ_ಉಷ್ಣ_ಮಾಪಕದ_ಮೇಲೆ_ಅನುಮಾನ_ಪಡುವಷ್ಟು

#ಮಾರ್ಚ್_ಮಧ್ಯದಲ್ಲಿ_ಹೀಗಾದರೆ_ಮುಂದಿನ_90_ದಿನ_ಹೇಗಿರಬೇಡ.

#ಮುಂದಿನ_10_ವರ್ಷದಲ್ಲಿ_ನಮ್ಮ_ಊರು_ಬಯಲುಸೀಮೆ_ಆಗಲಿದೆಯಾ_ಎಂಬ_ಅನುಮಾನವಿದೆ.

#ಆನಂದಪುರಂನಿಂದ_ಪೂರ್ವಕ್ಕೆ_10_ಕಿಲೋ_ಮೀಟರ್_ವ್ಯಾಪ್ತಿ_ದಾಟಿದರೆ_ಅಲ್ಲಿ_ಮಳೆ_ಪ್ರಮಾಣ_ಕುಸಿದಿದೆ

   ನಿನ್ನೆ ಮಧ್ಯಾಹ್ನ ನಾನು ಆಫೀಸಿನಲ್ಲಿ ಇರುವಾಗ ಮಗ ನಿನ್ನೆಯ ತಾಪಮಾನದ ಚಿತ್ರ (ಉಷ್ಣ ಮಾಪಕದಲ್ಲಿ ದಾಖಲಾಗಿರುವುದನ್ನು) ವಾಟ್ಸಾಪ್ನಲ್ಲಿ ಕಳಿಸಿದ... ನಿನ್ನೆ ನಮ್ಮಲ್ಲಿಗೆ ಬರುವರೆಲ್ಲ ಮತ್ತು ಕೆಲಸಗಾರರು ಹೊರಗಡೆ ವಿಪರೀತ ಬಿಸಿಲಿದೆ ತಾಳಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದರು....
  ಹವಾಮಾನ ಹೇಳುವ ಆಕ್ಯೂ ವೆದರ್ ಗರಿಷ್ಟ 39 ಎಂದು ತೋರಿಸುತ್ತಿತ್ತು
   ಉಷ್ಣ ಮಾಪಕದ ಫೋಟೋ ನೋಡಿ ನನಗೆ ನಂಬಲಾಗಲಿಲ್ಲ ...ಭವಿಷ್ಯ ಉಷ್ಣ ಮಾಪಕ ಹಾಳಾಗಿರಬಹುದು ಎಂದು ಮಗನಿಗೆ ಇನ್ನೊಮ್ಮೆ ಪರೀಕ್ಷೆ ಮಾಡಲು ಹೇಳಿದೆ ಆಗಲು ಉಷ್ಣ ಮಾಪಕ ಅಷ್ಟೇ ತೋರಿಸಿದ್ದು ಆಶ್ಚರ್ಯ ಉಂಟು ಮಾಡಿತು.
  ಉಷ್ಣ ಮಾಪಕ ನಿನ್ನೆ ಮಧ್ಯಾಹ್ನ 12ಕ್ಕೆ 43 ದಾಟಿ 44ರ ಆಸು ಪಾಸಿನಲ್ಲಿ ಇತ್ತು, ಇದು ಮಾರ್ಚ್ ತಿಂಗಳ 20 ಇನ್ನು ಮಳೆಗಾಲ ಶುರುವಾಗಲು ಜೂನ್ 20 ಬರಬೇಕು ಅಂದರೆ ಸುಮಾರು 90 ದಿನಗಳ ಕಾಲ ಮಲೆನಾಡಿನ ಪಶ್ಚಿಮ ಘಟ್ಟದ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ನಮ್ಮ ಊರಿನ ಭೂಪ್ರದೇಶ ಇನ್ನೆಷ್ಟು ಕಾಯುತ್ತದೆ ಎಂದು ಭಯವಾಯಿತು.
   ಈಗಾಗಲೇ ನಮ್ಮ ಊರಿನ ಸುತ್ತ ಮುತ್ತಲಿನ ಅನೇಕ ಬೋರ್ ವೆಲ್ ಗಳು ಕೈ ಚೆಲ್ಲಿದೆ ಈ ನೀರಿನ ಆಶ್ರಯದಲ್ಲಿ ಒಣ ಭೂಮಿಯಲ್ಲಿ ಕೃಷಿ ತೋಟಗಾರಿಕೆ ಮಾಡಿಕೊಂಡವರು ಆತಂಕದಲ್ಲಿದ್ದಾರೆ.
  1987ರಲ್ಲಿ ನಮ್ಮ ಮನೆಗೆ ಮೊದಲ ಟೇಬಲ್ ಪ್ಯಾನ್ ತಂದಿದ್ದು ಅದು ನಮ್ಮ ತಂದೆಯವರಿಗೆ ನಂತರ 1990ಕ್ಕೆ ಮನೆಯ ವರಾಂಡಕ್ಕೆ ಸೀಲಿಂಗ್ ಫ್ಯಾನ್ ಬರುವ ಅತಿಥಿಗಳಿಗಾಗಿ ನಂತರ ಡೈಲಿಂಗ್ ಹಾಲ್ ಗೆ ಫ್ಯಾನ್ ಬಂತು ಕ್ರಮೇಣ ಎಲ್ಲಾ ರೂಮಿಗೂ ಫ್ಯಾನ್ ಅನಿವಾಯ೯ ಆಯಿತು ಅದರ ಮುಂದುವರಿದ ಭಾಗವಾಗಿ ಏರ್ ಕೂಲರ್ ಬಂದಿದೆ ಈಗ ಏರ್ ಕಂಡಿಷನರ್ ಬೇಕಾಗುವಂತಾಗಿದೆ...
  ಆನಂದಪುರಂನ ಪೂರ್ವಭಾಗದಲ್ಲಿ 10 ಕಿ.ಮಿ. ವ್ಯಾಪ್ತಿ ದಾಟಿದರೆ ಅತ್ಯಂತ ಕಡಿಮೆ ಮಳೆ ಬೀಳುವ ಬಯಲು ಸೀಮೆ ಆಗಿದೆ, ಇದು ಮುಂದಿನ 10 ವರ್ಷದಲ್ಲಿ ನಮ್ಮ ಊರಿಗೆ ತಲುಪುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ.
  ಹೀಗಾದರೆ ಹೇಗೆ....

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...