Skip to main content

Blog number 1990. ವಾಕಿಂಗ್ ಟ್ರ್ಯಾಕ್ ನಿಂದ ವಿಮುಖರಾಗುವುದು ಏಕೆ?

#ಹೆಚ್ಚಿನವರು_ವಾಕಿಂಗ್_ಟ್ರಾಕ್_ನಿಂದ_ವಿಮುಖರಾಗುತ್ತಾರೆ

#ಯಾಕೆ?

#ನನ್ನ_ಅನುಭವದ_ವಾಕಿಂಗ್_ಟಿಪ್ಸ್_ಇಲ್ಲಿದೆ.

#ನನ್ನ_ಸಲಹೆ_ಪಡೆದವರಲ್ಲಿ_ನೂರಕ್ಕೆ_ಒಬ್ಬರೂ_ಅದನ್ನು_ಪಾಲಿಸುವುದಿಲ್ಲ.

#ಪ್ರಾರಂಭದಲ್ಲೆ_ವಿಪರೀತ_ಮಾಡಲು_ಪ್ರಯತ್ನಿಸಿ_ವಿಪಲರಾಗುತ್ತಾರೆ

#ಹತಾಶೆಯನ್ನೆ_ಸಮರ್ಥಿಸುವ_ಮಾತುಗಳು_ವಾಕಿಂಗ್_ಜಾಗ_ಅಕ್ರಮಿಸಿರುತ್ತದೆ.

https://youtu.be/SSd-Dvp-6Yk?feature=shared
ನನ್ನ ತೂಕ 140 ಕಿಲೋ ದಾಟುತ್ತಿರುವಾಗ ನನಗೆ ಯಾವುದರಲ್ಲೂ ಆಸಕ್ತಿ ಕಿಂಚಿತ್ತೂ ಇರಲಿಲ್ಲ ಸ್ಥೂಲಕಾಯ ನಿಯಂತ್ರಣ ತಪ್ಪಿದಾಗ ಇರಲೂ ಸಾಧ್ಯವಿರಲಿಲ್ಲ.
  ನನ್ನ ಸ್ವಭಾವ ಅಜಗರ ಪ್ರವೃತ್ತಿ ಏನೆಂದರೆ ಹೆಬ್ಬಾವಿನಂತೆ ಆದ್ದರಿಂದ ತೂಕ ಇಳಿಸಲು ಸುಲಭ ಮಾರ್ಗ ಹುಡುಕುವುದು ಒಂದೆರೆಡು ದಿನ ಮಾಡುವುದು ನಂತರ ಅದನ್ನು ಕೈಬಿಟ್ಟು ನನ್ನದೇ ಆದ ಸಮರ್ಥನೆ ಕೊಟ್ಟು ಕೊಳ್ಳುತ್ತಿದ್ದೆ.
  ನಾನು ನನ್ನ ನಿತ್ಯ ಕೆಲಸದಲ್ಲೇ ಕಡಿಮೆ ಓಡಾಡುತ್ತೀನಾ ? ಇದಕ್ಕಿಂತ ಹೆಚ್ಚಿನ ವಾಕಿಂಗ್ ಬೇಕಾ....
   ಜರ್ಮನ್ ರಷ್ಯಾದಲ್ಲಿ 150 - 200 ಕಿಲೋ ತೂಕದವರು ಇಲ್ಲವಾ......
  ಬೇರೆ ದೇಶಗಳಲ್ಲಿ ಅಂತವರಿಗಾಗಿಯೇ ಎಕ್ಸ್ ಕ್ಲೂಸೀವ್ ಎಕ್ಸಟ್ರಾ ಲಾರ್ಜ್ ರೆಡಿಮೇಡ್ ಶಾಪ್ ಗಳು ಇರುತ್ತದೆ...
   ನಾನು ಇರುವುದೇ ಹೀಗೆ ನನಗೆ ಯಾರ ಉಪದೇಶವೂ ಬೇಡ.....
   ಇಂತಹ ತೀರ್ಮಾನಕ್ಕೆ ತೂಕ ಇಳಿಸಿಕೊಳ್ಳಲಾಗದ ಹತಾಶೆಯೇ ಕಾರಣವಾದರೂ ಬೇರೆ ವಿತರ್ಕಗಳ ಹೊದಿಕೆ ಹಾಸುತ್ತೇವೆ ಇದು ನನ್ನದು ಮಾತ್ರ ಅನುಭವ ಅಲ್ಲ ಮಧ್ಯ ವಯಸ್ಸು ದಾಟುವ ಎಲ್ಲಾ ಸ್ತ್ರೀ ಪುರುಷರು ಹೊರತಲ್ಲ.
   ನಿತ್ಯ ಅನೇಕರು ತಮ್ಮ ತಮ್ಮ ಸ್ಥೂಲಕಾಯ ನಿವಾರಣೆಗಾಗಿ ನನ್ನನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾರೆ ಅವರಿಗೆ ನಾನು ನನ್ನ ಅನುಭವ ಎಲ್ಲಾ ಹೇಳಿ ಈ ಬಗ್ಗೆ ಬರೆದ ಬ್ಲಾಗ್ ಲೇಖನಗಳನ್ನು ಪಾರ್ವರ್ಡ್ ಮಾಡುತ್ತೇನೆ.
   ಇಂತವರಲ್ಲಿ ನೂರರಲ್ಲಿ ಒಬ್ಬರೂ ಪಾಲಿಸುತ್ತಾರೆಂದು ನಂಬಲು ಸಾಧ್ಯವಿಲ್ಲ, ಸ್ಥೂಲ ಕಾಯದಿಂದ ಪರಿತಪಿಸುವವರು ಅದನ್ನು ನಿವಾರಿಸಿಕೊಳ್ಳಲು ಪಡೆಯುವುದು ಸಲಹೆ ಮಾತ್ರ ಆದರೆ ಆಚರಣೆ ಶೂನ್ಯ.
  ನಾನು ನನ್ನ 54ನೇ ವಯಸ್ಸಿನಲ್ಲಿ ನನ್ನ ಮಿತಿಮೀರಿದ ತೂಕ, ನಿಯಂತ್ರಣ ತಪ್ಪಿದ ಡಯಾಬಿಟೀಸ್, ಹೈ ಬಿಪಿ, ಹರ್ನಿಯಾ, ಪ್ರಾಸ್ಟೇಟ್ ಎನ್ ಲಾರ್ಜ್ ಹೀಗೆ ಇದನ್ನೆಲ್ಲ ಸುಸ್ಥಿತಿಗೆ ತರಲು ಸಾದ್ಯವೇ ಇಲ್ಲ ಎಂದು ತೀಮಾನಿಸಿ ಮೇಲಿನ ವಿತರ್ಕಗಳ ಸಮರ್ಥನೆಗೆ ಇಳಿದಿದ್ದೆ.
  ನಂತರವೇ ನಾನು ದೃಡ ನಿರ್ಧಾರ ಮಾಡಿದೆ, ಅವಸರದ ವಾಕಿಂಗ್ -ವಿಪರೀತ ವ್ಯಾಯಾಮ - ಅವೈಜ್ಞಾನಿಕ ಡಯಟ್ ಯಾವಕಾರಣಕ್ಕೂ ಮಾಡಬಾರದೆಂದು, ನನ್ನ ಒಳಗೆ ನಾನು ಒಂದು ಚೌಕಟ್ಟು ಹಾಕಿ ಕೊಂಡೆ ನನ್ನ ದೇಹದಲ್ಲಿ ಖಾಯಂ ಜಾಗ ಪಡೆದು ವಾಪಾಸು ಹೋಗಲು ನಿರಾಕರಿಸುತ್ತಿರುವ ಆನಪೇಕ್ಷಿತ ಕೊಬ್ಬಿನ ಅತಿಥಿಯನ್ನು ಹೊಡೆದೊಡಿಸಲು ಪಂಚವಾರ್ಷಿಕ ಯೋಜನೆ ಹಾಕಿ ಕೊಂಡೆ.
   ತೂಕ ಇಳಿಸುವ ಪ್ರಯತ್ನ ಪ್ರಾರಂಬಿಸಿ ಒಂದು ವರ್ಷದ ನಂತರವೇ ತೂಕ ಪರಿಶೀಲಿಸ ಬೇಕು ಕಾರಣ ಅನೇಕ ಸಂದರ್ಭದಲ್ಲಿ ಅನೇಕರು ಪದೇ ಪದೇ ತೂಕ ನೋಡಿ ಕೊಳ್ಳುವ ಅವಸರದಲ್ಲಿ ತೂಕ ಇಳಿದಿಲ್ಲ ಎಂದು ತಕ್ಷಣ ಆ ಪ್ರಯತ್ನದಿಂದ ವಿಮುಖರಾಗುತ್ತಾರೆ ಇದು ನನ್ನ ಸ್ವಂತ ಅನುಭವ ಕೂಡ.
    ಮೊದಲ 15 ದಿನ ದಿನಕ್ಕೆ 5 ನಿಮಿಷ ವಾಕಿಂಗ್ ನಂತರ 10 ನಿಮಿಷ ಹೀಗೆ 15 ದಿನಕ್ಕೆ 5 ನಿಮಿಷ ವಿಸ್ತರಿಸುತ್ತಾ ಒಂದು ಗಂಟೆ ಅವಧಿಯ ವಾಕಿಂಗ್ ದೃಡತೆ ತಲುಪುವುದು ಅಲ್ಲಿಗೆ ಕನಿಷ್ಟ ಮೂರು ತಿಂಗಳು ಆಗಿರುತ್ತದೆ ಅಂದರೆ ಯಾವುದೇ ಅಭ್ಯಾಸ ನಿರಂತರ ಮೂರು ತಿಂಗಳು ಮಾಡಿದರೆ ಅದು ನಮ್ಮ ಜೀವನದ ನಿತ್ಯ ಕ್ರಮವಾಗಿ ಬಿಡುತ್ತದೆ ಆ ನಂತರ ಆ ಅಭ್ಯಾಸ ತ್ಯಜಿಸಲು ಸಾಧ್ಯವಾಗುವುದಿಲ್ಲ.
   ನನ್ನ ಜೀವನದಲ್ಲಿ ನೂರಾರು ಬಾರಿ ಈ ರೀತಿ ವಾಕಿಂಗ್ ಅಭ್ಯಾಸ ಪ್ರಾರಂಬಿಸಿ ಮಧ್ಯದಲ್ಲೇ ತ್ಯಜಿಸಿದ್ದೇನೆ ಕಾರಣ ವಾಕಿಂಗ್ ಪ್ರಾರಂಬಿಸಿದ ಒಂದೆರೆಡು ದಿನದಲ್ಲೇ ವಾಕಿಂಗ್ ಅವದಿ ಒಂದು ಗಂಟೆಗೆ ವಿಸ್ತರಿಸುತ್ತಿದ್ದೆ ಇದನ್ನು ವಾಕಿಂಗ್ ಮಾಡದವರ ಎದುರು ಹೆಮ್ಮೆಯಿಂದ ಕೊಚ್ಚಿಕೊಂಡು ಅವರ ಹೊಟ್ಟೆ ಉರಿಸುತ್ತಿದ್ದೆ ಮರುದಿನವೇ ನನ್ನ ದೇಹ ವಾಕಿಂಗ್ ಮಾಡಲು ನಿರಾಕರಿಸುತ್ತಿತ್ತು... ಆಗ ಮತ್ತೆ ನನ್ನ ಕುತರ್ಕದ ಮೆರವಣಿಗೆ ಶುರುವಾಗುತ್ತಿತ್ತು.
  ವಾಕಿಂಗ್ ಟ್ರಾಕ್ ಸರಿ ಇಲ್ಲ, ಟ್ರಾಕ್ ಶೂ ಸರಿಯಾದ್ದು ಖರೀದಿಸಬೇಕು, ಟ್ರಾಕಿಂಗ್ ಸೂಟ್ ಬೇಕು, ಟ್ರೆಡ್ ಮಿಲ್ ತಂದ ಮೇಲೆ ವಾಕಿಂಗ್ ಮಾಡುತ್ತೇನೆ ಅಂತೆಲ್ಲ ಮುಂದೂಡುವ ಸಬೂತುಗಳು.
   ಆದ್ದರಿಂದ 2019ರಿಂದ ಬೆಳಿಗ್ಗೆ ಕೇವಲ 5 ನಿಮಿಷದ ವಾಕಿಂಗ್ ಶುರು ಮಾಡಿದಾಗ 140 ಕಿಲೋ ದಾಟಿದ್ದ ನನ್ನ ದೇಹ ಸಹಕರಿಸಲು ನಿರಾಕರಿಸಿತ್ತು... ಐದು ನಿಮಿಷ ಕೂಡ ನಡೆಯಲು ಅಸಾಧ್ಯ ಎನ್ನಿಸುವಂತ ಪರಿಸ್ಥಿತಿ ಒಂದು ತಿಂಗಳಲ್ಲಿ 10 ನಿಮಿಷಕ್ಕೆ ವಿಸ್ತರಿಸಿ ತಿಂಗಳು ಎರೆಡು ದಾಟುವಾಗ 30 ನಿಮಿಷ ಸರಾಗವಾಗಿ ನಡೆಯಲು ಸಾಧ್ಯವೆಂದು ದೈಯ೯ ನೀಡಿತು ಇದು 3 ರಿಂದ 4 ತಿಂಗಳು ದಾಟುವಾಗ ಒಂದು ಗಂಟೆ ಅವದಿಯ 7000 ಹೆಜ್ಜೆಗೆ ತಲುಪಿತು.
  ವಾಕಿಂಗ್ ನಿತ್ಯ ಅಭ್ಯಾಸವಾಗಿ ಕ್ರಮೇಣ ತೂಕ ನಿವಾರಣೆ ಪ್ರಾರಂಭವಾಯಿತು ಜೊತೆಗೆ ರಾತ್ರಿ ಊಟ ತ್ಯಜಿಸಿದ್ದರಿಂದ ಸ್ಥೂಲ ಕಾಯ ನಿವಾರಣೆ ಪ್ರಗತಿ ಪಡೆಯಿತು ಸುಮಾರು 40 ಕಿಲೊ ತೂಕ ಇಳಿಯಿತು ಇದರಿಂದ ಅನಿಯಂತ್ರಿತ ಡಯಾಬಿಟೀಸ್, ಬಿಪಿ ನಿಯಂತ್ರಣಕ್ಕೆ ಬಂದಿತು, ಹರ್ನಿಯಾ ಆಪರೇಷನ್ ಇಲ್ಲದೆ ನಾಪತ್ತೆ ಆಯಿತು.
   ನಿತ್ಯ ನಡಿಗೆ ಜೊತೆ ಕೆಲ ಕೈ ಮತ್ತು ತೋಳಿನ ವ್ಯಾಯಾಮ ಕೂಡ ಅಳವಡಿಸಿ ಕೊಂಡರೆ ಅದು ನಮ್ಮ ಪಿಟ್ ನೆಸ್ ಗೆ ಸಹಕಾರಿ, ಇಷ್ಟಾದರೂ ಹೊಟ್ಟೆ ಇಳಿದಿಲ್ಲ ಎನ್ನುವುದು ಸತ್ಯ ಯಾಕೆಂದರೆ ಸ್ಥೂಲಕಾಯ ನಿವಾರಣೆಯ ಅಂತಿಮ ಹಂತವೇ ಹೊಟ್ಟೆಯ ಕೊಬ್ಬು ನಿವಾರಣೆ, ಅದು ಮೊದಲ ಹಂತದಲ್ಲಿ ಹೊಟ್ಟೆ ಕೊಬ್ಬು ಕರಗಲು ಬಿಡುವುದಿಲ್ಲ ಮುಂದಿನ ಕೆಲ ವರ್ಷಗಳಲ್ಲಿ ಹೊಟ್ಟೆ ಕರಗೀತು, ಕರಗದಿದ್ದರೂ ಬೇಸರ ಇಲ್ಲ ತೂಕ ಇಳಿದಿದ್ದು ಆರೋಗ್ಯ ಸುಧಾರಿಸಿದ್ದು, ಪಿಟ್ನೆಸ್ ಮರಳಿ ಪಡೆದದ್ದೇ ನನ್ನ ಸಾಧನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...