Skip to main content

Blog number 2015. ಕೊರೊನಾ ನೆನಪುಗಳ ಡೈರಿ ಭಾಗ - 3

#ಕೊರೋನಾ_ನೆನಪುಗಳ_ಡೈರಿ_ಭಾಗ_3
  #ಕೊರಾನ_ವಾರಿಯರ್ಸಗೆ_ನೈತಿಕ_ಬೆಂಬಲದ_ಚಪ್ಪಾಳೆ_ಗಂಟೆ_ಜಾಗಟೆ_ದೀಪ_ಬೆಳಗಿದ್ದೆವು

#ಇವತ್ತು_ಸಂಜೆಗೆ_ನಾಲ್ಕು_ವರ್ಷವಾಯಿತು_ಆದಿನ_ಪಕ್ಷಾತೀತವಾಗಿ

#ದೇಶದ_ಪ್ರಧಾನಿ_ಮನವಿ_ಪುರಸ್ಕರಿಸಿದ್ದ_ಹಿರಿಯ_ಕಾಂಗ್ರೇಸ್_ರಾಜಕಾರಣಿ_ಕಾಗೋಡುತಿಮ್ಮಪ್ಪ_ಆದರ್ಶ_ಪ್ರಾಯರು.

#ಸದುದ್ದೇಶದ_ವಿಶ್ವದಾದ್ಯಂತ_ಆಚರಿಸಲಾದ_ಈ_ಬೆಂಬಲವನ್ನು_ಗೇಲಿ_ಮಾಡುವ_ಸಿನಿಕತನ_ವಿಕೃತವಲ್ಲವೆ?

  ರಾಜಕೀಯ ಉದ್ದೇಶಕ್ಕಾಗಿ ಯಾರನ್ನೋ ಗುರಿಯಾಗಿಸಿ ನಮ್ಮ ದೇಶವಾಸಿಗಳನ್ನು ಗೇಲಿ ಮಾಡುವುದು ಸರಿಯಲ್ಲ
ಇಡೀ ವಿಶ್ವದಲ್ಲಿ ಕೋರೊನಾ ಎಂಬ ವೈರಸ್ ವಿರುದ್ಧ ಹೋರಾಟ ಪ್ರಾರಂಭವಾಗುವ ಹಂತದಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ದೊಡ್ಡದಿತ್ತು.
  ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ಪಣ ಇಟ್ಟು ಜನರ ಜೀವ ಉಳಿಸಲು ಶ್ರಮ ಪಟ್ಟಿದ್ದಾರೆ ಈ ಅಮೂಲ್ಯ ಕೆಲಸದಲ್ಲಿ  ಅನೇಕರು  ತಮ್ಮ ಜೀವ ತ್ಯಾಗ ಮಾಡಿದ್ದಾರೆ ಅವತ್ತಿನ ಸಂದರ್ಭ ಮತ್ತು ಅವರ ಕುಟುಂಬಗಳ ಆತಂಕದ ಪರಿಸ್ಥಿತಿ ನೆನಪಿಸಿಕೊಳ್ಳಬೇಕು.
  ಅವರು ಮತ್ತು ಅವರ ಕುಟುಂಬ ತಮ್ಮ ಜೀವವನ್ನು ಪಣವಿಟ್ಟು ಸೇವೆ ಮಾಡಬೇಕಾಯಿತು ಈ ಸಂದರ್ಭದಲ್ಲಿ ಅವರಿಗೆ ವಿಶ್ವಾದ್ಯಂತ ನೈತಿಕ ಬೆಂಬಲ ಕೊಡಲು ಎಲ್ಲಾ ದೇಶಗಳ ಸರಕಾರಗಳು ಅವರ ದೇಶದ ಜನರನ್ನ ವಿನಂತಿಸಿತು.      
   ಅದು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಜನತೆ ತಮ್ಮ ನೈತಿಕ ಬೆಂಬಲ ನೀಡುವುದು, ಭಾರತದಂತ ದೇಶದಲ್ಲೂ ಅಂತಹ ಪ್ರಯತ್ನವನ್ನು ಮಾಡಲಾಯಿತು.    
    ಪ್ರದಾನಿಯವರು ಕರೆ ನೀಡಿ  ಭಾರತೀಯ ಪರಂಪರೆಯಂತೆ ಭಾರತೀಯರು ತಮ್ಮ ಮನೆ ಮನೆಯಲ್ಲಿ ಗಂಟೆ, ಜಾಗಟೆ ಬಾರಿಸಿ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲಿಸಲು  ಮತ್ತು ಮನೆ ಎದುರು ದೀಪವನ್ನು ಬೆಳಗಿಸಿ ಅವರನ್ನು ನಾವೆಲ್ಲರೂ ಹುರಿದುಂಬಿಸುತ್ತಿದ್ದೇವೆ ನಿಮ್ಮ ಜೊತೆ ನಾವು ಇದ್ದೇವೆ ಎನ್ನುವ ಸಂದೇಶ ಸಾರಲು ವಿನಂತಿಸಿದರು.
 ಕೊರೊನ ವೈರಸ್ ಪ್ರಪಂಚದಿಂದ ನಿರ್ಮೂಲನೆಗಾಗಿ ಭಗವಂತನಿಗೆ ಮಾಡುವ ಸಾಮುಹಿಕ  ಪ್ರಾರ್ಥನೆಯೂ ಇದಾಗಿತ್ತು. 
   ಇದೇ ರೀತಿ ವಿಶ್ವದಾದ್ಯಂತ ದೇಶಗಳು ಮೊಂಬತ್ತಿಯನ್ನು ಬೆಳಗಿಸಿ ಪ್ರಾರ್ಥಿಸಿದ್ದು,ಅನೇಕ ಯುವಶಕ್ತಿ ಸಾಮೂಹಿಕವಾಗಿ ತನ್ನ ಮೊಬೈಲ್ ಗಳನ್ನು ಟಾರ್ಚಾಗಿ ಬೆಳಗಿಸಿ ಬೆಂಬಲಿಸಿತ್ತು.
   ನಮ್ಮ ದೇಶವಾಸಿ ಮುಗ್ಧ ಪ್ರಜೆಗಳು ದೇಶದ ಕೆಲ ಭಾಗಗಳಲ್ಲಿ ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳದೆ ಅಥವ ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ತಪ್ಪು ಗ್ರಹಿಕೆ ಆಗಿ ಒಂದು ರೀತಿ ಎಮೋಷನಲ್ ಆಗಿ ಬಾವಿಸಿಕೊಂಡು,ಗುಂಪಾಗಿ ಗಂಟೆ -ಜಾಗಟೆ ಅದು ಸಿಗದಿದ್ದರೆ ಊಟದ ತಟ್ಟೆಗಳನ್ನು ಬಡೆಯುತ್ತಾ  "ಗೋ ಗೋ ಕೋರಾನ " ಎಂಬ ಘೋಷಣೆಗಳನ್ನು ಕೂಗುತ್ತಾ ಆ ದಿನ ಸಂಜೆ ಮೆರವಣಿಗೆಗಳನ್ನೂ ಮಾಡಿದ್ದರು ಇದನ್ನೆ ಈಗ ಗೇಲಿಯ ವಿಷಯ ಮಾಡಿದ್ದಾರೆ.
  ಪ್ರಧಾನ ಮಂತ್ರಿಗಳ ಈ ಕರೆಗೆ ಅನೇಕ ರಾಜಕಾರಣಿಗಳು ಪಕ್ಷಾತೀತವಾಗಿ ಬೆಂಬಲಿಸಿದರು ಅವರೆಲ್ಲರ ಉದ್ದೇಶ ಮನು ಕುಲಕ್ಕೆ ಗಂಡಾಂತರವಾದ ಈ ವೈರಸ್ ವಿರುದ್ದ ಎಲ್ಲರೂ ಹೋರಾಡಲೇ ಬೇಕೆಂಬ ಕಾಳಜಿ.
    ಪ್ರದಾನಿ ಮೋದಿ ಕರೆಯನ್ನ ದೇಶದಾದ್ಯOತ ಜನತೆ ಬೆಂಬಲಿಸಿದ್ದಾರೆ, ಕನಾ೯ಟಕದಲ್ಲಿ ಕಾ೦ಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, JDS ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಸ್ವಾಗತಿಸಿದ್ದರು.
 ಆದರೆ ಪಕ್ಷ ಆಧಾರಿತ ರಾಜಕಾರಣದ ಕಾರ್ಯಕರ್ತರು ಮತ್ತು ಪಕ್ಷದವರು ತಮ್ಮ ವಿರೋದಿ ಪಕ್ಷದಿಂದ ಆಯ್ಕೆಯಾದ ಪ್ರಧಾನಿಯ ಈ ಮನವಿ ಪುರಸ್ಕರಿಸ ಬಾರದು ಎಂಬ ಆತಂಕಕಾರಿ ಬಾವನೆ ಹೊಂದಿದ್ದರು.
  ದೇಶದ ಆರೋಗ್ಯ ಕಾರ್ಯಕರ್ತರನ್ನ ಪುರಸ್ಕರಿಸಿದ್ದು ತಪ್ಪು ಎಂಬಂತೆ ಗೇಲಿ ಮಾಡಲು ಪ್ರಾರಂಭಿಸಿದ್ದರು ಇಲ್ಲಿ ಮಾರಣಾಂತಿಕ ಕೊರಾನ ವೈರಸ್ ನಿಯಂತ್ರಣಕ್ಕಿಂತ ಪಕ್ಷ ರಾಜಕಾರಣದ ಪ್ರತಿಷ್ಟೆ ಅವರಿಗೆ ದೊಡ್ಡದಾಯಿತು.
   ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಮಾಜಿ ಮಂತ್ರಿ - ವಿಧಾನಸಭೆ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪನವರು ಕೂಡ ಪ್ರಧಾನ ಮಂತ್ರಿಗಳ ಈ ಮನವಿಯನ್ನು ಪುರಸ್ಕರಿಸಿ ಅವರ ಮನೆ ಎದುರು ಚಪ್ಪಾಳೆ ತಟ್ಟಿ ದೇಶದ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸಿದರು ಇದು ಅಭಿನಂದನೀಯ ಕಾಯ೯ವೇ ಆಗಿತ್ತು.
  ಈ ಘಟನೆ ನಡೆದು ಇವತ್ತಿನ ಸಂಜೆಗೆ ಸರಿಯಾಗಿ 4 ವರ್ಷಗಳಾಯಿತು ಈಗ ಅನೇಕ ಪೋಸ್ಟ್ ಗಳು ಆನಿವರ್ಸರಿ ಎಂಬ ಹೆಸರಲ್ಲಿ ಆ ದಿನ ಮುಗ್ದ ಭಾರತೀಯರು ಗಂಟೆ - ಜಾಗಟೆ- ತಟ್ಟೆ ಶಬ್ದ ಮಾಡಿದ್ದನ್ನು ಗೇಲಿಗಾಗಿ ಬಳಸುತ್ತಿರುವುದು ಸರಿಯಲ್ಲ ಅಷ್ಟಕ್ಕೂ ಅವರೇನು ಕೊರಾನ ವೈರಸ್ ಸ್ಟಾಗತಿಸಿದ್ದೇನಲ್ಲ.
  ಇಲ್ಲಿ ಕೊರಾನಾ ವೈರಸ್ ಗೆ ಪಕ್ಷ ಇಲ್ಲ ಅದರ ನಿವಾರಣೆಗಾಗಿ ಯಾವುದೇ ಪಕ್ಷದವರು ಪ್ರಧಾನಿಯಾಗಿದ್ದರು ಮಾಡುವ ಕೆಲಸ ಪ್ರಧಾನಿಯಾದ ಮೋದಿ ಅವರು ಆ ದಿನ  ಮಾಡಿದ್ದಾರೆ ಮತ್ತು ಸಾಂಕ್ರಮಿಕ ರೋಗ ತಡೆಗೆ ವಿಶ್ವಸಂಸ್ಥೆಯ ನೀತಿ ನಿಯಮ ಎಲ್ಲಾ ದೇಶಗಳು ಪಾಲಿಸಲೇಬೇಕು  ಎಂಬುದನ್ನು ಮರೆಯಬಾರದು.
   ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವಾಸಿ ಮುಗ್ಧ ಜನರ ಆ ದಿನದ ಘಟನೆಯನ್ನು ಗೇಲಿಯಾಗಿ ಬಳಸುತ್ತಿರುವುದು ಸರಿ ಕಾಣುವುದಿಲ್ಲ.
    ಇಲ್ಲಿ ಬಿಬಿಸಿಯ ಲಿಂಕ್ ಒಂದನ್ನು ನೀವು ಕ್ಲಿಕ್ ಮಾಡಿ ನೋಡಿದರೆ ತಿಳಿಯುತ್ತದೆ... https://www.bbc.com/news/av/uk-52054745
   ಇಡೀ ವಿಶ್ವ ಅವತ್ತಿನ ಆ ಗಳಿಗೆಯ ಸಂಕಷ್ಟದಲ್ಲಿ ಆರೋಗ್ಯ ಕಾರ್ಯಕರ್ತರನ್ನ ನೈತಿಕ ಬೆಂಬಲ ನೀಡಲು ಈ ರೀತಿ ಚಪ್ಪಾಳೆ, ಮೇಣದಬತ್ತಿ ಬೆಳಗುವುದು, ಮೊಬೈಲ್ ಟಾರ್ಚ್ ಬೆಳಗಿಸುವುದು ಮಾಡುವುದು ದಾಖಲಾಗಿದೆ.
 ನಾವು ಭಾರತೀಯರು ನಮ್ಮ ಪರಂಪರೆಯಾದ ಗಂಟೆ -ಜಾಗಟೆ,ದೀಪ ಬೆಳಗುವುದು ಮಾಡಿದ್ದೇವೆ ಇದರಲ್ಲಿ ತಪ್ಪೇನಿದೆ?...
  ಈಗಲೂ ಭಾರತದಲ್ಲಿ ಅನೇಕ ಮೂಡನಂಬಿಕೆಗಳು ಇದೆ, ಜಾತಿ ಪದ್ಧತಿಗಳಿದೆ ಅವುಗಳ ಮಧ್ಯೆ ನಾವು ಬದುಕುತ್ತಿಲ್ಲವೆ?...

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ