Skip to main content

Posts

Showing posts with the label we lighted lamps from 9am to 9 minutes and showed our solidarity to nation for fighting against corona virus

#ದೇಶದೊಂದಿಗೆ ನಾವು, ಕೊರಾನಾ ವೈರಸ್ ನಿಮೂ೯ಲನೆಗೆ ದೇಶದ ಎಲ್ಲಾ ಪ್ರಯತ್ನಕ್ಕೆ ಅದರ ಯಶಸ್ವಿಗೆ ಭಾರತೀಯರೆಲ್ಲರೂ ಒಗ್ಗಟ್ಟು ದೀಪ ಹಚ್ಚುವ ಮೂಲಕ ಪ್ರದಶಿ೯ಸಿದ ಐತಿಹಾಸಿಕ ಕ್ಷಣ#

#ದೇಶದ ಜನರ ಆರೋಗ್ಯಕ್ಕಾಗಿ ಕೊರಾನಾ ವೈರಸ್ ನಿಮೂ೯ಲನಕ್ಕಾಗಿ ದೇಶದ ಜೊತೆ ನಾನು ಮತ್ತು ನನ್ನ ಕುಟುಂಬದ ಬೆಂಬಲವಿದೆ#   ದಿನಾಂಕ 9 ಏಪ್ರಿಲ್ 2020 ಭಾನುವಾರ ರಾತ್ರಿ 9ರಿಂದ 9 ನಿಮಿಷದ ದೀಪ ಬೆಳಗುವ ಇಡೀ ದೇಶದ ಪ್ರದಾನ ಮOತ್ರಿ ಕರೆ ಒಂದು ಐತಿಹಾಸಿಕ ಕ್ಷಣ, ಇನ್ನೆರೆಡು ತಿಂಗಳಲ್ಲಿ ಕೊರಾನಾ ವೈರಸ್ ಏನೆಲ್ಲ ಅನಾಹುತ ಮಾಡಬಹುದು ಯಾರಿಗೆ ಗೊತ್ತು?     ಆದರೆ ಒಂದು ಸಕಾ೯ರ ದೇಶದ ಜನರ ಜೀವ ರಕ್ಷಿಸಲು ಏನೆಲ್ಲ ಮುಂಜಾಗೃತೆ ವಹಿಸಲಿದೆಯೋ ಅದನ್ನೆಲ್ಲ ಪ್ರಜೆಗಳು ಒಳ್ಳೆಯ ಮನಸ್ಸಿನಿಂದ ಒಂದೇ ದೃಡ ನಿದಾ೯ರದಿಂದ ಬೆಂಬಲಿಸಿದರೆ ಅದಕ್ಕೂ ಒಂದು ಸಾಮೂಹಿಕ ಪ್ರಾಥ೯ನೆಯ ಶಕ್ತಿ ಬರತ್ತದೆ ಅಲ್ಲಿ ಒಂದು ಧನಾತ್ಮಕವಾದ ವಾತಾವರಣ ಸೃಷ್ಟಿ ಸಾಧ್ಯವಿದೆ.    ಇಲ್ಲಿ ಪ್ರದಾನ ಮಂತ್ರಿಗಳ ಸದುದ್ದೇಶದ ವಿನಂತಿ ನಿರಾಕರಿಸಿ ಮಾಡುವುದಾದರೂ ಏನು? ಇದು ಸರಿ ಅಲ್ಲ ಹೀಗೆ ಮಾಡಿ ಅನ್ನಲು ಬೇರೆ ಯಾವ ಪರಿಹಾರ ಗೊತ್ತಿದೆ ವಿಶ್ವದ ದೊಡ್ಡಣ್ಣನಂತ ದೇಶಗಳೇ ಕೈ ಚೆಲ್ಲಿದೆ, ಕೇವಲ ರಾಜಕೀಯ, ಜಾತಿ ಮತ್ತು ದಮ೯ ಆದಾರ ಬಿಟ್ಟು ಎಲ್ಲರೂ ಒಂದಾಗಿ ಸಕಾ೯ರ ಬೆಂಬಲಿಸಬೇಕಾದ ಸಂದಭ೯ದಲ್ಲಿ  ಕೆಲವರು ಅಪಹಾಸ್ಯ ಮಾಡುವುದು ಪ್ರದಾನ ಮಂತ್ರಿಯನ್ನೆ ವಿರೋದಿಸುವಂತ ನಡೆ ನೋಡಿದರೆ ದೇಶದ ಸಂಕಷ್ಟ ಸಂದಭ೯ದಲ್ಲೂ ಇವರ ಸಣ್ಣತನ ಬೇಸರ ತರಿಸುತ್ತದೆ.    ಕೊರಾನಾ ವೈರಸ್ ದೂರದಲ್ಲಿಲ್ಲ ನಮ್ಮ ನಿಮ್ಮ ಮನೆಯ ಗೇಟಿನಲ...