Skip to main content

4170.ಶ್ರಾವಣ_ಮಾಸ_ನೀಡಿದ_ಹೊಸ_ಬೆಳಕು


ಶ್ರಾವಣ_ಮಾಸ_ನೀಡಿದ_ಹೊಸ_ಬೆಳಕು.

  ದಿನಚರಿಯಲ್ಲೊಂದು ಸಾರ್ಥಕ ಬದಲಾವಣೆ ​2026ರ ಪವಿತ್ರ ಶ್ರಾವಣ ಮಾಸದ ವ್ರತಾಚರಣೆ ಸಂಪನ್ನಗೊಂಡಿದೆ.

 ಶ್ರಾವಣವೆಂದರೆ ಕೇವಲ ಪೂಜೆ-ಪುನಸ್ಕಾರಗಳಷ್ಟೇ ಅಲ್ಲ, ಅದು ದೇಹ ಮತ್ತು ಮನಸ್ಸನ್ನು ಹಸನುಗೊಳಿಸುವ ಸುಂದರ ಕಾಲ ಎಂಬುದು ಈ ಬಾರಿ ನನಗೆ ಮತ್ತೊಮ್ಮೆ ಸಾಬೀತಾಯಿತು.

 ​ಈ ಬಾರಿಯ ಶ್ರಾವಣ ನನ್ನಲ್ಲಿ ತಂದ ಎರಡು ಮುಖ್ಯ ಬದಲಾವಣೆಗಳಲ್ಲಿ,​ಬ್ರಾಹ್ಮೀ ಮುಹೂರ್ತದ ಜಾಗೃತಿ ಇದರಿಂದ ಮುಂಜಾನೆಯ ಪ್ರಶಾಂತ ವೇಳೆಯಲ್ಲಿ ಏಳುವ ಅಭ್ಯಾಸ ರೂಢಿಯಾಯಿತು.
   
  ಬೆಳಿಗ್ಗೆ 4 ಕ್ಕೆ ಎದ್ದು ಸ್ನಾನಾದಿ ಮುಗಿಸಿ, ಪೂಜೆ ನೆರವೇರಿಸಿ ಬೆಳಿಗ್ಗೆ 6 ರ ಒಳಗೆ ಸಿದ್ದ ಸಮಾದಿ ಯೋಗದ ಯೋಗಾ -ಪ್ರಾಣಯಾಮ- ಕಪಾಲಬಾತಿ_ದ್ಯಾನಗಳ ಮುಗಿಸಿ ನಂತರ ನಮ್ಮ ಶಂಭೂರಾಮನ ಜೊತೆ ಒಂದು ಗಂಟೆ ವಾಕಿಂಗ್ ಮುಗಿಸುತ್ತೇನೆ.
   
 ನನ್ನ ನಿತ್ಯದ ಒಂದು ಗಂಟೆ​ನಡಿಗೆಯಲ್ಲೊಂದು ಈಗ ಹೊಸ ಶಿಸ್ತು ಬಂದಿದೆ ಈಗ ನಿತ್ಯದ ವಾಕಿಂಗ್ ಕೇವಲ ನಡಿಗೆಯಾಗಿ ಉಳಿಯದೆ ಆರೋಗ್ಯ ಸುಧಾರಣೆಯ ಹಾದಿಯಾಯಿತು. 

   ಕೊಂಚ ಬಾಗಿದ್ದ ಬೆನ್ನಿನ ಭಂಗಿಯನ್ನು (posture) ಸರಿಪಡಿಸಲು ಕೋರಲ್ ವಾಕಿಂಗ್ ಮತ್ತು ಚುರುಕಾದ ಫಾಸ್ಟ್ ಮಾರ್ಚ್ (Fast March) ಅಭ್ಯಾಸವನ್ನು ಅಳವಡಿಸಿಕೊಂಡೆ. 

 ಇದರಿಂದ ಬೆನ್ನು ನೇರವಾಗಿ ದೇಹದಲ್ಲಿ ಹೊಸ ಲವಲವಿಕೆ ಬಂದಂತಾಗಿದೆ.

 ಬೆಳಗಿನ ಆ ನಿಶ್ಯಬ್ದ ವಾತಾವರಣ, ತಾಜಾ ಗಾಳಿ ದಿನವಿಡೀ ಮನಸ್ಸಿಗೆ ಹೊಸ ಉತ್ಸಾಹ ಮತ್ತು ಚೈತನ್ಯವನ್ನು ತುಂಬುತ್ತಿದೆ.

 ಶ್ರಾವಣಮಾಸ ಮುಗಿದಿರಬಹುದು ಆದರೆ ಅದು ಕಲಿಸಿದ ಶಿಸ್ತು, ಬೆಳಗಿನ ನಡಿಗೆ ಮತ್ತು ಜೀವನಶೈಲಿಯ ಈ ಸಕಾರಾತ್ಮಕ ಬದಲಾವಣೆಗಳು ನಿರಂತರವಾಗಿ ಮುಂದುವರಿಯಲಿವೆ.

 ಇದರಿಂದ ನಿಮ್ಮ ತೂಕ ಇಳಿಯಿತಾ? ಅಂತ ನೀವು ಕೇಳಬಹುದು... ನನ್ನ ತೂಕ 98-99 ಕಿಲೋದಲ್ಲೇ ತಟಸ್ಥ ಆಗಿದೆ ತೂಕ ಇಳಿದಿಲ್ಲ ಆದರೆ ನೋಡಲು ಮೊದಲಿಗಿಂತ ಸ್ಲಿಮ್ ಕಾಣುತ್ತೇನೆ ಇದೇಕೆ ಹೀಗೆ ಎಂದರೆ ...
ನಮ್ಮ ಯಾವುದೇ ಹೊಸ ಪ್ರಯೋಗವನ್ನ ನಮ್ಮ ಮೆದಳು ಮತ್ತು ದೇಹ ಕಾಯ್ದು ನೋಡುವ ತಂತ್ರ ಬಳಸುತ್ತದೆ ಅದಕ್ಕಾಗಿ ದೇಹಕ್ಕೆ ಅಗತ್ಯವಾದ ಶಕ್ತಿಗಾಗಿ ಕೊಬ್ಬು ಶೇಖರಿಸಿಡುತ್ತದೆ ಕೆಲವು ತಿಂಗಳು ನಿರಂತರ ನಾವು ಈ ಅಭ್ಯಾಸ ಮುಂದುವರಿಸಿದಾಗ ಅದು ಶಕ್ತಿಯ ಅವಶ್ಯಕತೆ ಇಲ್ಲ ಎಂದಾಗ ಕೊಬ್ಬು ಖಾಲಿ ಮಾಡುತ್ತದೆ ಆಗ ತೂಕ ಇಳಿಯುತ್ತದೆ.

​ದೇಹವೇ ದೇಗುಲ, ಆರೋಗ್ಯವೇ ಭಾಗ್ಯ! ...
ನೀವು ಈ ರೀತಿ ಆರೋಗ್ಯ ಸುಧಾರಣೆಗೆ ನಿಮ್ಮ ಜೀವನ ಶೈಲಿಯಲ್ಲಿ ಹೊಸದಾಗಿ ಏನು ಅಳವಡಿಸಿಕೊಂಡಿದ್ದೀರಿ ಬರೆಯಿರಿ.

​#ShravanaMaasa #MorningRoutine #HealthyHabits #FitnessJourney #PositiveChanges #KannadaPost
#healthtips #fittness #walking #mypet #brahmimuhurtha #coralwalking

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...