#ತೀರ್ಥಹಳ್ಳಿ_ದಮ೯ಕುಮಾರ್ #ಕ್ರಿಯಾಶೀಲ_ವ್ಯಕ್ತಿ #ಸಮಾಜ_ಮುಖಿ_ಕಾರ್ಯದಲ್ಲಿ_ಸದಾ_ಮುಂದೆ 2019 ರಲ್ಲಿ ರಾತ್ರಿ ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿ ಜಾತ್ರೆ ಮುಗಿಸಿ ನಾನು ಮನೆಗೆ ಬಂದು ಕುಳಿತಿದ್ದಾಗ ಧರ್ಮ ಕುಮಾರ್ ಬಂದಾಗ ತೆಗೆದ ಫೋಟೋ ಇದು. ಈ ಬೇಟಿ ಸುಮಾರು 19 ವಷ೯ಗಳ ನಂತರದ ನನ್ನ ಮತ್ತು ಇವರ ಬೇಟಿ. #thirthahalli #sagar #krishi #AgricultureDepartment #darmakumar #sahityaparishath ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದವರು. ರೈತ ಸ್ನೇಹಿ ಆಗಿದ್ದ ಇವರಂತಹ ಕೃಷಿ ಸೇವಕರನ್ನ ನಾನು ಈ ವರೆಗೆ ನೋಡಿಲ್ಲ. ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ. ಆನಂದಪುರಂನಲ್ಲಿ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ್ ಕಣ್ಣಿನ ಶಸ್ತ್ರಚಿಕಿತ್ಸಾ ಶಿಭಿರಗಳು ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ಕುಮಾರರ ಶ್ರಮ ಇರುತ್ತಿತ್ತು. ಇವರ ಕಿರಿಯ ಸಹೋದರ ಶಿವಮೊಗ್ಗದ ಖ್ಯಾತ ವಕೀಲರಾದ ಜಿ.ನಾಗೇಶನ್ ನನಗೆ ಹಳೆ ಗೆಳೆಯರು. ನಂತರ ಇವರ ಗೆಳೆತನ ಆಯಿತು, ದರ್ಮ ಕುಮಾರ್ ...