Skip to main content

Posts

Showing posts from June, 2022

Blog number 903. ನಾನು ಮತ್ತು ನನ್ನ ಬ್ಲಾಗ್ ಎಂಬ ಡೈರಿ, ಇದು ಸಾಮಾಜಿಕ ಜಾಲ ತಾಣದ ಬರಹಗಾರರಿಗೆ ಅವರ ಲೇಖನಗಳು ಸಂರಕ್ಷಿಸಲು ಅತ್ಯುತ್ತಮವಾದ ಬ್ಲಾಗ್ ಗಳು.

#ನಾನೇಕೆ_ಬ್ಲಾಗ್_ಪ್ರಾರಂಬಿಸಿದೆ? #ಡೈರಿ_ರೂಪದಲ್ಲಿ_ನಮ್ಮ_ಬರವಣಿಗೆ_ಒಂದೇ_ಕಡೆ_ದಾಖಲಾಗುತ್ತದೆ. #ಬೇಕಾದಾಗ_ತೆಗೆದು_ಬಳಸಲು_ಸುಲಭ #ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರಾಗಿರುವವರು_ಇದನ್ನು_ಬಳಸಿಕೊಳ್ಳಬೇಕು. #ಐದು_ವರ್ಷದಲ್ಲಿ_ನನ್ನ_ಬ್ಲಾಗಲ್ಲಿ_ದಾಖಲಾಗಿರುವ_ಚಿತ್ರಸಹಿತ_ಲೇಖನಗಳ_ಸಂಖ್ಯೆ_900.   1 ನೇ ತಾರೀಖು ಜನವರಿ 2017 ರಂದು ನನ್ನ ಬ್ಲಾಗ್ Arunprasad Hombuja residency ಪ್ರಾರಂಭವಾಯಿತು, ಈ ಬ್ಲಾಗ್ ಪ್ರಾರಂಭಿಸಿ ಕೊಟ್ಟವರು ಐಟಿ ತಂತ್ರಜ್ಞರಾದ ಗೆಳೆಯ ಕೋಣಂದೂರಿನ ಮೂಲದ #ನವೀನ್.   ಇದಕ್ಕೂ ಮೊದಲಿನಿಂದ 2010ರಿಂದ ನಾನು ಲ್ಯಾಪ್ ಟಾಪ್ ಬಳಸಿ ಪೇಸ್ ಬುಕ್ ಲ್ಲಿ ಬರೆದ ಲೇಖನಗಳು ಒಂದು ಕಡೆ ಸಂರಕ್ಷಿಸಲು ಆಗಲಿಲ್ಲ ಆದ್ದರಿಂದ ಜೀವನದ ಅಮೂಲ್ಯ ಸಮಯ ವ್ಯಯ ಮಾಡಿ ಬರೆದ ಲೇಖನ (ಉಪಯುಕ್ತವೋ? ಅಥವ ಅನುಪಯುಕ್ತವೋ? ಗೊತ್ತಿಲ್ಲ) ಒಂದು ಡೈರಿ ರೂಪದಲ್ಲಿ ಚಿತ್ರ ಸಹಿತ ಸಂರಕ್ಷಿಸಲು ಇದು ಉಪಯುಕ್ತವಾಗಿದೆ.   2017 ರಿಂದ ಇವತ್ತಿನವರೆಗೆ ನಾನು ಬರೆದ ಲೇಖನಗಳು ಈ ಲೇಖನ ಸೇರಿ 903 ಅಂದರೆ ಸರಾಸರಿ ವಾರ್ಷಿಕ 200 ಲೇಖನಗಳು ಅಂದರೆ ವರ್ಷದ 365 ದಿನದಲ್ಲಿ 200 ದಿನ ಲೇಖನ ಬರೆದವೆಂದರು ಕನಿಷ್ಟ ಒ0ದು ಗ0ಟೆ ಅಂದರೂ ಜೀವಿತಾವದಿಯ ಅಂದಾಜು ಸಾವಿರ ಗಂಟೆ ಇದಕ್ಕೆ ಕಳೆದು ಹೋದವು ಆದರೆ ಬರೆದ ಲೇಖನವೂ ದಾಖಲಾಗದೇ ಕಳೆದುಕೊಂಡರೆ ವ್ಯರ್ಥವಲ್ಲವೆ? ಹಾಗಾಗಿ ಬ್ಲಾಗ್ ನನಗೆ ಉಪಯುಕ್ತವಾಗಿದೆ.  ಇದರಲ್ಲೂ ಒಂದು ಪ್ರಯೋಗ ಮಾಡಿದ್ದೇನೆ ಏನೆಂದರೆ ಸ

Blog number 902. ವಿಶ್ವವಿಖ್ಯಾತ ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಧ್ಯ ರಾಷ್ಟ್ರೀಯ ಹೆದ್ದಾರಿ 206 ರ ಆನಂದಪುರಂನ ಯಡೇಹಳ್ಳಿ ವೃತ್ತದ ಮಲ್ಲಿಕಾ ವೆಜ್ ನಲ್ಲಿ ಗಿರ್ಮಿಟ್ ಲಭ್ಯವಿದೆ, ಇದು ದಾರವಾಡ ಹುಬ್ಬಳ್ಳಿ ಸ್ಪೆಷಲ್

#ನಮ್ಮ_ಮಲ್ಲಿಕಾವೆಜ್_ರೆಸ್ಟೋರೆಂಟಲ್ಲಿ_ಗರಿಗರಿ_ಗಿರ್ಮಿಟ್  #ಹುಬ್ಬಳ್ಳಿ_ದಾರವಾಡದ_ಮಂಡಕ್ಕಿ_ಉಪಸರಿ_ಆನಂದಪುರಂನ_ಮಲ್ಲಿಕಾ_ವೆಜ್ಜಲ್ಲಿ_ಲಭ್ಯ. #ಬಾಳೆಎಲೆಯಲ್ಲಿ_ಗಿರ್ಮಿಟ್_ಹುರಿದು_ಉಪ್ಪು_ಸವರಿದ_ಹಸಿಮೆಣಸಿನೊಂದಿಗೆ #ಜೊತೆಯಲ್ಲಿ_ಒಂದು_ಮಿರ್ಚಿ_ಬೊಂಡಾ_ಬದಿಯಲ್ಲಿ_ಚಹಾ .     ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗದಿಂದ ಸಾಗರ ಮಾರ್ಗದಲ್ಲಿ 50 ಕಿ.ಮಿ. ಗೆ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ನಮ್ಮ #ಮಲ್ಲಿಕಾ_ವೆಜ್ ರೆಸ್ಟೋರಾಂಟ್ ಇದೆ.   ಇಲ್ಲಿ ಮಲೆನಾಡ ವಿಶೇಷ ಹಲಸಿನ ಎಲೆ ಕೊಟ್ಟೆ ಕಡಬು ಕಾಳಿನ ಪಲ್ಯ ಮತ್ತು ಚಟ್ನಿ ಜೊತೆಗೆ ನಿತ್ಯ ದೊರೆಯುವಂತೆ ಮಾಡಿದ್ದೇನೆ.   ತಮಿಳುನಾಡಿನ ಪ್ರಸಿದ್ಧ ಪೋಡಿ ಇಡ್ಲಿ ದೇಶಿ ತುಪ್ಪದೊಂದಿಗೆ ಗ್ರಾಹಕರಿಗೆ ಲಭ್ಯ, ಜೊತೆಗೆ ದೋಸೆ, ಇಡ್ಲಿ ವಡಾ, ಬನ್ಸ್, ಅಕ್ಕಿರೊಟ್ಟಿ, ರಾಗಿ ರೊಟ್ಟಿ, ಪಲಾವ್, ಬಿಸಿಬೇಳೆಬಾತ್, ದಕ್ಷಿಣ ಬಾರತೀಯ ಊಟದ ಥಾಲಿ, ಹಣ್ಣಿನ ಜ್ಯೂಸ್, ಪ್ರಸಿದ್ದ ಬ್ರಾಂಡ್ ಕೋಥಾಸ್ ಪಿಲ್ಟರ್ ಕಾಫಿ, ವಿಶ್ವವಿಖ್ಯಾತ ಬ್ರೂಕ್ ಬಾಂಡ್ ನ 3 ರೋಸ್ ಟೀಗಳ ಜೊತೆ ಈಗ ಹೊಸ ರುಚಿಯಾದ ಗಿರ್ಮಿಟ್ ಸೇರಿದೆ.   ಇದು ಹುಬ್ಬಳ್ಳಿ ದಾರಾವಾಡದ ಪ್ರಸಿದ್ದ ಮಂಡಕ್ಕಿ ತಿಂಡಿ ಇದರ ರೆಸಿಪಿಯೇ ಬಿನ್ನ ಇದನ್ನು ಎಣ್ಣೆಯಲ್ಲಿ ಹುರಿದು ಉಪ್ಪು ಸವರಿದ ಹಸಿ ಮೆಣಸು ಮತ್ತು ಬಿಸಿ ಬಿಸಿಯಾದ ಗರಿಗರಿ ಮಿರ್ಚಿ ಬೊಂಡಾದ ಜೊತೆ ತಿನ್ನುತ್ತಾ ಜೊತೆಗೆ ಮ

Blog number 901. ಉಡುಪಿ ಗುಳ್ಳ ಬದನೆಕಾಯಿಯ ಮಿನಿಯೇಚರ್ ಎಂದು ಕರೆಯಬಹುದಾದ ಸುಂಡಿ ಕಾಯಿ, ಉಸ್ತಿ ಕಾಯಿ, ಕುದನೆ ಕಾಯಿ ಎಂಬ Turkish berry ಎಂಬ ಬದನೆ ಪ್ರಬೇದ.

#ಉಡುಪಿ_ಗುಳ್ಳದ_ಮಿನಿಯೇಚರ್_ಚಿಟ್_ಬದನೆ. #ಇದರ_ಗರಿಷ್ಟ_ಗಾತ್ರ_5_ಸೆ೦ಟಿಮೀಟರ್_ಮಾತ್ರ #ತಮಿಳುನಾಡಿನಲ್ಲಿ_ಸುಂಡೆಕಾಯಿ_ಮಂಗಳೂರು_ಕಡೆ_ಕುದನೆಕಾಯಿ_ಎಂದು_ಕರೆಯುತ್ತಾರೆ #ಉಸ್ತೀ_ಕಾಯಿ_ಎಂದೂ_ಕರೆಯುತ್ತಾರೆ #Turkeyberry_ಇಂಗ್ಲೀಷಲ್ಲಿ.   ತಮಿಳುನಾಡಿನ ಕೆಲ ಭಾಗದ ರೈತರು ಇದನ್ನು ಕೃಷಿ ಮಾಡುತ್ತಾರೆ ಇದರ ಸಂಡಿಗೆ ತುಂಬಾ ಪ್ರಸಿದ್ದ ಒಮ್ಮೆ ಬೆಂಗಳೂರಿಂದ ತಂದಿದ್ದೆ ಈ ಸುಂಡೆ ಕಾಯಿ ಸಂಡಿಗೆ .   ಕನ್ನಡದ ಪ್ರಸಿದ್ಧ ಅಡಿಗೆ ಬ್ಲಾಗ್ Bhat & Bhat ಲ್ಲಿ ಸುದರ್ಶನ ಭಟ್ಟ ಬೇದರಾಡಿ ಈ ಕುದನೆ ಕಾಯಿ ಗೊಜ್ಜು ಮಾ ಡಿ ತೋರಿಸಿದ್ದರು.https://youtu.be/EgSftkM6-S0 (ಇದರ ಅಡುಗೆ ರೆಸಿಪಿಗೆ ಇಲ್ಲಿ ಲಿಂಕ್ ನಲ್ಲಿ ಕ್ಲಿಕ್ ಮಾಡಿ ನೋಡಿ)    ಇದು ದೇಹದಲ್ಲಿ ಕೆಂಪು ರಕ್ತ ಕಣದ ಉತ್ಪಾದನೆ ಹೆಚ್ಚಿಸುತ್ತದೆ, ಪಶ್ಚಿಮ ಘಟ್ಟದ ಕುರುಚಲು ಕಾಡಿನಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ, ಈ ಭಾಗದ ರೈತರು ಇದನ್ನು ಕೃಷಿಯಾಗಿ ಬೆಳೆಯುವುದಿಲ್ಲ, ರೈತರ ಕೃಷಿ ಭೂಮಿ ಅಂಚಿನ ಬೇಲಿಯಲ್ಲಿ ತನ್ನಿಂದ ತಾನೆ ಬೆಳೆಯುತ್ತದಾದರೂ ಆಹಾರಕ್ಕಾಗಿ ಬಳಸುವವರು ಸೀಮಿತಿ ಜನ ಮಾತ್ರ.   ಅಮೆಜಾನ್ ನಲ್ಲಿ ಒಣಗಿದ ಈ ಟರ್ಕಿ ಬೆರ್ರಿ ಎಂಬ ಬದನೆಕಾಯಿ ಮಿನಿಯೇಚರ್ ಲಭ್ಯ ಇದೆ ಇದನ್ನು ತೂಕ ಹೆಚ್ಚಿಸಿಕೊಳ್ಳುವವರು ಬಳಸುತ್ತಾರೆ.    ಉಡುಪಿ ಗುಳ್ಳ 6 ರಿಂದ 8 ಇಂಚು ವ್ಯಾಸ ಇದ್ದರೆ ಉಡುಪಿ ಗುಳ್ಳದ ಮಿನಿಯೇಚ

Blog number 900. ಇಕ್ಕೇರಿ ಶ್ರೀಪಾದರು ಇವತ್ತು ದಾವಣಗೆರೆ ಜಿಲ್ಲಾ ಅಡಿಷನಲ್ ಡಿಸ್ಟ್ರಿಕ್ಟ್ & ಸೆಷನ್ ಜಡ್ಜ್, ಇವತ್ತು ನನ್ನ ಅತಿಥಿ, ಇವರ ಈ ಜೀವನ ಪಥ ಹೂವಿನ ಹಾಸಿಗೆ ಆಗದೇ ಕಲ್ಲು ಮುಳ್ಳಿನ ಕಠಿಣ ಪಥವಾಗಿತ್ತು ಇದು ಅನೇಕರಿಗೆ ಪ್ರೇರಣೆ ನೀಡುವ ನೀತಿ ಪಾಠವೂ ಹೌದು.

#ಸತತ_ಪ್ರಯತ್ನದ_ಫಲ_ಸಿಹಿ_ಎನ್ನಲು_ಇವರ_ಜೀವನವೇ_ಮಾದರಿ. #ವಕೀಲರ_ಗುಮಸ್ಥರಾಗಿ_ವಕೀಲರಾಗಿ_ಈಗ_ದಾವಣಗೆರೆ_ಜಿಲ್ಲಾ_ಅಡಿಷನಲ್_ಡಿಸ್ಟ್ರಿಕ್ಟ್_&_ಸೆಷನ್_ಜಡ್ಜ್. #ನನ್ನ_ಆತ್ಮೀಯ_ಗೆಳೆಯ_ನನ್ನ_ಇವತ್ತಿನ_ಅತಿಥಿ.   ಸಾಗರದ ಪ್ರಖ್ಯಾತ ವಕೀಲರಾದ ಈಶ್ವರಪ್ಪ ನಾಯಕರ ಹತ್ತಿರ ಗುಮಸ್ತರಾಗಿದ್ದಾಗ ನನ್ನ ಅವರ ಗೆಳೆತನ ಅವರು ವಕೀಲರಾದಾಗಲೂ ಮುಂದುವರಿಯಿತು ಸಾಗರದಿಂದ (ಕೆಳದಿ ಅರಸ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ನಿರ್ಮಿಸಿದ ಪಟ್ಟಣ ಸದಾಶಿವ ಸಾಗರ) ಇಕ್ಕೇರಿಯ ರಾಜ ಮಾರ್ಗದಲ್ಲಿನ ಪುರಾತನ ದೇವಸ್ಥಾನ ಚೌಡೇಶ್ವರಿ ದೇವಸ್ಥಾನದ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದ ಕುಟುಂಬ ಇವರದ್ದು.   ಅಲ್ಲಿ 1996 ರಲ್ಲಿ ನಡೆದ ಕರಸೇವೆಯಲ್ಲಿ ನಾನು ಭಾಗವಹಿಸಿದ್ದೆ.   ಇವರ ತಾಯಿ ಸರಸ್ವತಮ್ಮ 1993 - 98 ರ ಅವದಿಯಲ್ಲಿ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾ.ಪಂ.ಅಧ್ಯಕ್ಷಿಣಿ, ಎಂ.ಜಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ವಸುದಾ ಶಮಾ೯ (ಇಕ್ಕೇರಿ ನಾರಾಯಣ ಶರ್ಮಾರ ಸೊಸೆ) ತಾಲ್ಲುಕ್ ಪಂಚಾಯತ್ ಸದಸ್ಯೆ.    ಈ ಅವದಿಯಲ್ಲಿ ಒಂದು ದಿನ ನನಗೆ ಪೋನ್ ಬಂತು, ನಾನು ಮ್ಯಾಜಿಸ್ಟ್ರೇಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ ನಿಮ್ಮ ಬೇಟಿಗೆ ಬರುತ್ತಿದ್ದೇನೆ ಅಂತ.   ಸಂತೋಷದ ವಿಚಾರ ತಿಳಿದ ನಾನು ಶಾಲು, ಹಾರ ತರಿಸಿಟ್ಟು ಬಂದ ಜಡ್ಜ್ ರಿಗೆ ನಮ್ಮ ತಂದೆಯಿಂದ ಸನ್ಮಾನಿಸಿ ಸಂತೋಷ ಪಟ್ಟೆ ನಂತರ ಗೊತ್ತಾಗಿದ್ದು ಇವರಿಗೆ ಜಡ್ಜ್ ವೃತ್

Blog number 899. ದೇವರ ಮಗನಾದ ನಾರಾಯಣ ಅಕಸ್ಮಿಕವಾಗಿ ಅಪಾಯಕಾರಿ ಅಪಘಾತ ವಲಯದಲ್ಲಿ ನಮಗೆ ದೊರೆತ ಪ್ರೀತಿಯ ಸಹೋದರ, ನಮಗೂ ಮತ್ತು ನಮ್ಮ ಸಂಸ್ಥೆಯ ಎಲ್ಲರಿಗೂ ಪ್ರೀತಿ ಪಾತ್ರ ನಾರಾಯಣ್ ಪ್ರದಾನ್

#ಎಲ್ಲಾ_ಸಂಬಂದಗಳಿಗಿಂತ_ನನಗೆ_ಈ_ಸಂಬಂದ_ತುಂಬಾ_ಇಷ್ಟ. #ಅಕಸ್ಮಿಕವಾಗಿ_ರಸ್ತೆಯಲ್ಲಿ_ಯಾವುದೇ_ಕ್ಷಣದಲ್ಲಿ_ಅಪಘಾತದಿಂದ_ಜೀವ_ಕಳೆದುಕೊಳ್ಳುವ_ಸಂದರ್ಭದಲ್ಲಿ_ಸಿಕ್ಕಿದವ #ಹಿಂದಿನ_ಜನ್ಮದಲ್ಲಿ_ನಾನು_ಇವನ_ಬಾಕಿದಾರನಿರಬಹುದು. #ಹನ್ನೆರೆಡು_ವರ್ಷದಿಂದ_ನನ್ನ_ಕಿರಿಯ_ಸಹೋದರನಾಗಿ_ಇದ್ದಾನೆ. #ದೃಷ್ಟಿ_ಸಾಮರ್ಥ್ಯ_ಶೇಕಡಾ_2ಕ್ಕಿಂತ_ಕಡಿಮೆ_ಇದ್ದರೂ_ಬುದ್ದಿವಂತ. #ಇವನು_ದೇವರ_ಮಗ_ನಮಗೂ_ನಮ್ಮ_ಸಂಸ್ಥೆಯ_ಎಲ್ಲರಿಗೂ_ಇವನು_ಪ್ರೀತಿಯ_ನಾರಾಯಣ.      ಹನ್ನೆರಡು ವರ್ಷದ ಹಿಂದೆ ಇದೇ ದಿನ ಶಿವಮೊಗ್ಗದಿಂದ ನಮ್ಮ ಊರಿಗೆ ನಾನು ಮತ್ತು ನನ್ನ ಗೆಳೆಯರಾದ ಅಮೀರ್ ವಾಪಸ್ಸಾಗುತ್ತಿದ್ದಾಗ ಶಿವಮೊಗ್ಗದ ಸಿಂಹದಾಮದ ಎದರು ರಾಷ್ಟ್ರೀಯ ಹೆದ್ದಾರಿ ನವೀಕರಣಕ್ಕಾಗಿ ಎಡ ಭಾಗದ ರಸ್ತೆ ಅರ್ದ ಭಾಗ ಒಂದಾಳು ಆಳ ತೆಗೆದಿದ್ದರು, ಎಲ್ಲಾ ವಾಹನಗಳು ಬಲ ಬಾಗದ ಅರ್ಧ ರಸ್ತೆಯಲ್ಲಿ ಕಷ್ಟದಿಂದ ಚಲಿಸುತ್ತಿದ್ದವು, ಮೈ ಮರೆತು ಎಡಕ್ಕೆ ಹೊರಳಿದರೆ ಆಳೆತ್ತರದ ರಸ್ತೆ ಕಂದಕಕ್ಕೆ ಬೀಳಬೇಕು ಜನರು ಆಕಡೆ ಚಲಿಸದಂತೆ ರೆಡಿಯಂ ಟೇಪ್ ಕಟ್ಟಿದ್ದರು.    ಆಗ ಮೈನ್ಸ್ ಲಾರಿಗಳ ಒಡಾಟದ ಅಭ೯ಟ ಆದ್ದರಿಂದ ಶಿವಮೊಗ್ಗ ಸಾಗರ ಮಾರ್ಗ ಡೆಂಜರ್ ಮಾರ್ಗವೆ ಆಗಿತ್ತು.   ನಾವು ಈ ಸ್ಥಳಕ್ಕೆ ಬರುವಾಗ ಕತ್ತಲಾಗುತ್ತಿತ್ತು ಸುಮಾರು 7 ಗಂಟೆ, ಜಿಟಿ ಜಿಟಿ ಮುಂಗಾರು ಮಳೆ, ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕು ಒಟ್ಟಾರೆ ಎಂತಹ ಚಾಲಕರು ಭಯ ಪಡುವ ರಸ್ತೆಯ ಮದ್ಯದಲ್ಲಿ ಕೆಂಪು ಟೀ ಶಟ್೯ ಕಪ್ಪು ಪ್ಯಾಂಟ್

Blog number 898. ತಲವಾಟ ಪುರುಶೋತ್ತಮ್ ಶಿವಮೊಗ್ಗ ಜಿಲ್ಲೆಯೆ ಎಲೆ ಮರೆಯ ಕಾಯಿಯಂತ ಪ್ರತಿಬಾನ್ಸಿತ ರಂಗಕರ್ಮಿ, ನಟ ಮತ್ತು ಸಹೃದಯಿ ಕಲಾವಿದರು, ಇವತ್ತು ನನ್ನ ಅತಿಥಿ.

#ಇವತ್ತಿನ_ನನ್ನ_ಅತಿಥಿ_ನೀನಾಸಂ_ಶಿಕ್ಷಕರಾಗಿದ್ದ_ಖ್ಯಾತ_ರಂಗಭೂಮಿ_ಸಿನಿಮಾ_ಕಲಾವಿದ_ತಲವಾಟ_ಪುರುಶೋತ್ತಮ್  #ಕನ್ನಡದ_ಎಲ್ಲಾ_ಪ್ರಖ್ಯಾತ_ಸಿನಿ_ನಟ_ನಿರ್ದೇಶಕರ_ಆಪ್ತರು. #ಪ್ರಖ್ಯಾತಿ_ರಂಗಕರ್ಮಿ_ಖ್ಯಾತನಟಿ_ಮಾಲತಿ_ಮೇಡಂರ_ಪತಿ.   ಪ್ರಖ್ಯಾತ ರಂಗಕರ್ಮಿ, ನಟಿ  ದೆಹಲಿ NSD ನಾಟಕ ಶಾಲೆ ಪಧವೀದರೆ ಸಾಗರದ ಜೈ ಹಿಂದ್ ಬೇಕರಿ ಕುಟುಂಬದ ಮಾಲತಿ ಮೇಡಂ ಸಾಗರದಿಂದ ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ಅವರು ಕಾಫಿಗಾಗಿ ನಮ್ಮ ಸಂಸ್ಥೆಯ ಮಲ್ಲಿಕಾ ವೆಜ್ ಗೆ ಬರುತ್ತಿದ್ದರು.   ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ನನ್ನ ಎಲ್ಲಾ ಸಿಬ್ಬಂದಿಗೆ ಮೊದಲೇ ತಿಳಿಸಿದ್ದರಿಂದ ಮಾಲತಿ ಮೇಡಂ ನಮ್ಮ ಕಾಟೇಜ್, ಗಾರ್ಡನ್ ಅಥವ ಲಾಡ್ಜ್ ಆಫೀಸ್, ಕಲ್ಯಾಣ ಮಂಟಪ ಅಲ್ಲೆಲ್ಲ ಓಡಾಡುತ್ತಿದ್ದರು ಅವರಿಗೆ ಇಷ್ಟವಾದ ಜಾಗದಲ್ಲಿ ಕುರ್ಚಿ ಹಾಕಿ ಕೊಡುತ್ತಿದ್ದರು ಮತ್ತು ಅವರಿಷ್ಟದ ಸಕ್ಕರೆ ರಹಿತ ಕಾಫಿ ಅಲ್ಲಿಗೆ ತಲುಪಿಸುತ್ತಿದ್ದರು, ಮಾಲತಿ ಮೇಡಂ ನನ್ನ ಸಿಬ್ಬಂದಿ ಕಷ್ಟ ಸುಖ ವಿಚಾರಿಸಿ ಕೈ ತುಂಬಾ ಟಿಪ್ಸ್ ನೀಡುವ ದಾರಾಳಿ ಕೂಡ.   ಕೆಲವೊಮ್ಮೆ ಪತಿ ತಲವಾಟ ಪುರುಶೋತ್ತಮರೂ ಜೊತೆಯಾಗಿ ಬರುತ್ತಿದ್ದರು, ನನ್ನ ಲಾಡ್ಜ್ ಹಿಂಬಾಗದ ಕಾಟೇಜ್ ನೋಡಿ ಪುರುಶೋತ್ತಮರು ಹೇಳಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹಳ್ಳಿಯನ್ನು ನಿರ್ಮಿಸಿದ್ದೀರಿ ಅಂದಿದ್ದರು.   ಮಾಲತಿ ಮೇಡಂರ ನಿರ್ಗಮನ ಸಹೃದಯಿ ತಲವಾಟ ಪುರುಷೋತ್ತಮರಿಗೆ ಅವ

Blog number 897. ಆನಂದಪುರಂ ಇತಿಹಾಸ ಭಾಗ-75. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಇಡೀ ಕನ್ನಡ ಚಿತ್ರರಂಗದ ತಾರೆಗಳ ಯಾತ್ರೆ ಆನಂದಪುರಂ ಬಸ್ ನಿಲ್ದಾಣದಲ್ಲಿ ಕನ್ನಡ ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂಬ ಗೋಕಾಕ್ ವರದಿ ಜಾರಿಗಾಗಿ ಸಭೆ ನಡೆದಿತ್ತು.

#ಆನಂದಪುರಂ_ಇತಿಹಾಸ_75. #ಗೋಕಾಕ್_ಚಳವಳಿಯಲ್ಲಿ_ಆನಂದಪುರ೦ಗೆ_ರಾಜಕುಮಾರ್_ಸಿನಿತಂಡ  #ಆ_ದಿನ_3_ಜುಲೈ_1982. #ವಿ_ಕೃ_ಗೋಕಾಕ್_ಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಅಲ್ಪಕಾಲ_ಬೋದನೆ_ಮಾಡಿದ್ದರು. #ಆನಂದಪುರಂನ_ಈ_ಕಾಯ೯ಕ್ರಮಕ್ಕೆ_ಆಗಿನ_ರಾಜಕುಮಾರ್_ಆಭಿಮಾನಿ_ಸಂಘಕ್ಕೆ_ಆದ_ವೆಚ್ಚ_43_ರೂಪಾಯಿ #ರಾಜಕುಮಾರರನ್ನು_ನೋಡಲು_ಸೇರಿದ_ಜನ_ಸಹಸ್ರಾರು  #ಶಿವಮೊಗ್ಗ_ಜಿಲ್ಲಾ_ರಾಜಕುಮಾರ್_ಅಭಿಮಾನಿ_ಸಂಘದ_ಆಗಿನ_ಗೌರವಾಧ್ಯಕ್ಷರು_ನೆಲ್ಲಿಲಾಡ್ಜ್_ವಿಠಲಮೂರ್ತಿ #ಜಿಲ್ಲಾಧ್ಯಕ್ಷ_ಶ್ರೀನಿದಿ_ಟೆಕ್ಸಟೈಲ್ಸ್_ಶ್ರೀಧರಮೂರ್ತಿ #ಸಾಗರ_ತಾಲ್ಲೂಕ್_ಅಧ್ಯಕ್ಷ_ಸಾಗರದ_SRS_ಮಿಲ್_ಮಹೇಶ್_ಮೂರ್ತಿ.    ಆನ೦ದಪುರಂ ಇತಿಹಾಸ ಪುಸ್ತಕದಲ್ಲಿ ಕನ್ನಡದ ಪ್ರಖ್ಯಾತ ಚಲನಚಿತ್ರ ನಟ ಡಾ.ರಾಜ್ ಕುಮಾರ್ ಎರೆಡು ಬಾರಿ ದಾಖಲಾಗುತ್ತಾರೆ ಒಂದು ಗೋಕಾಕ್ ಚಳವಳಿಯ ಭಾಗವಾಗಿ ಇನ್ನೊಂದು ಅವರ ಆಕಸ್ಮಿಕ ಚಲನಚಿತ್ರದ ಚಿತ್ರಿಕರಣದಲ್ಲಿ.   1980 ರ ದಶಕದಲ್ಲಿ ಡಾ.ರಾಜ್ ಕುಮಾರ್ ಕರ್ನಾಟಕದ ಆರಾಧ್ಯ ದೈವವೇ ಈ ಸಂದರ್ಭದಲ್ಲಿ ಅಂದರೆ 5- ಜುಲೈ -1980 ರಲ್ಲಿ ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಕನಾ೯ಟಕ ಸಕಾ೯ರದ ಮುಖ್ಯಮಂತ್ರಿ ಗುಂಡೂರಾಯರು ಶಾಲಾ ಶಿಕ್ಷಣದಲ್ಲಿ ಬಾಷಾ ನೀತಿ ಮರು ಯೋಜನೆಗೆ ಸಮಿತಿ ರಚಿಸುತ್ತಾರೆ.   ತ್ರಿಬಾಷಾ ಸೂತ್ರದಡಿ ಕರ್ನಾಟಕ ರಾಜ್ಯದಲ್ಲಿನ ಶಾಲೆಯಲ್ಲಿ ಕನ್ನಡ ಮುಖ್ಯ ಬಾಷೆಯಾಗಿ ಪರಿಗಣಿಸುವಂತೆ ತಿದ್ದು ಪಡಿಗಾಗಿ ವ

Blog number 896. ಅಭಿನಂದನೆಗಳು. ನಮ್ಮ ಹಳ್ಳಿಯ ಪಕ್ಕದೂರಿನ ನಮ್ಮ ಗೆಳೆಯರಾದ ಕ್ರಷರ್ ರಾಜಶೇಖರ ಗೌಡರ ಪುತ್ರ ರಾಹುಲ್ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂನಲ್ಲಿ ಆರನೇ ರ್ಯಾಂಕ್ ಪಡೆದಿದ್ದಾರೆ, ನೂತನವಾಗಿ ಶಿವಮೊಗ್ಗದಲ್ಲಿ ATNCC ಸಂಜೆ ಕಾಲೇಜು ಪ್ರಾರಂಬಿಸಿದ ವರ್ಷದಲ್ಲಿಯೇ ರ್ಯಾಂಕ್ ಪಡೆದು ಸರ್ವಕಾಲಿಕ ದಾಖಲೆ ಮಾಡಿದ್ದಾರೆ.

#ಬಿಕಾಂನಲ್ಲಿ_ಆರನೇ_ರ್ಯಾ0ಕ್_ಗಳಿಸಿದ_ನಮ್ಮೂರ_ಪಕ್ಕದ_ಹುಡುಗ_ರಾಹುಲ್. #ಶಿವಮೊಗ್ಗದ_ರಾಷ್ಟ್ರೀಯ_ಶಿಕ್ಷಣಸಂಸ್ಥೆಯ_ಸಂಜೆ_ಕಾಲೇಜಿಗೆ_ಹಿರಿಮೆ. #ಬಟ್ಟೆಮಲ್ಲಪ್ಪದ_ಕ್ರಷರ್_ರಾಜಶೇಖರಗೌಡರ_ಪುತ್ರ #ಹಳ್ಳಿಗಾಡಿನ_ಈ_ಪ್ರತಿಭಾವಂತ_ವಿದ್ಯಾರ್ಥಿ_ಸಾಧನೆ_ಗ್ರಾಮೀಣ_ವಿದ್ಯಾರ್ಥಿಗಳಿಗೆ_ಪ್ರೇರಣೆಯಾಗಲಿ. #ಸಂಘ_ಸಂಸ್ಥೆಗಳು_ರಾಹುಲ್_ಸಾಧನೆ_ಗುರುತಿಸಿ_ಅಭಿನಂದಿಸಬೇಕು.     ಬಟ್ಟೆಮಲ್ಲಪ್ಪದ ಕ್ರಷರ್ ರಾಜಶೇಖರ ಗೌಡರೆಂದೆ ಜನ ಕರೆಯುವ ಜಿಲ್ಲೆಯಾದ್ಯಂತ ಚಿರಪರಿಚಿತರಾದ ಈಗ ಜನರ ಆರೋಗ್ಯಕ್ಕಾಗಿ ಹೈಡ್ರೋ ವಾಟರ್ ಕಪ್ (ಆಲ್ಕಲೇನ್ ವಾಟರ್) ಅಧಿಕೃತ ಮಾರಾಟಗಾರರು.   ಇವರ ಆರೋಗ್ಯ ಸಂಪೂರ್ಣ ಹದಗೆಟ್ಟು ನೋಡಿದವರೂ ರಾಜಶೇಖರ ಗೌಡರು ಬದುಕಲಾರರು ಎಂದು ತೀರ್ಮಾನಿಸಿದಾಗಲೆ ಗೌಡರು ಚೇತರಿಸಿಕೊಂಡಿದ್ದು ನಿತ್ಯ ಈ ಆಲ್ಕಲೇನ್ ನೀರು ಸೇವಿಸಿದ್ದರಿಂದ !!.   ಇವರು ಸಾಗರ ತಾಲ್ಲೂಕಿನ ನನ್ನ ಯಡೇಹಳ್ಳಿ ಗ್ರಾಮ ಪಂಚಾಯತನ ಘಂಟಿನ ಕೊಪ್ಪದ ಊರಿನವರು, ನನ್ನ ಅಣ್ಣ ಕೆ ನಾಗರಾಜರ ಕ್ಲಾಸ್ ಮೇಟ್, ಇವರನ್ನು ಶಾಲಾ ದಿನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದವರು, ಶಿಕ್ಷಕರು ಇವರಿಗೆ ಆರ್ಕಮಿಡಿಸ್ ಎಂದೇ ಕರೆಯುವಂತ ಬುದ್ದಿವಂತರು.   ಘಂಟಿನ ಕೊಪ್ಪದ ಆ ಕಡೆ ದಿಂಬ ಎಂದು ಜನ ಕರೆಯುವ ಪ್ರದೇಶದ ಬಹುತೇಕ ಮನೆಗಳು ರಾಜಶೇಖರಗೌಡರ ಖುಷ್ಕಿ ಜಮೀನನಲ್ಲಿದೆ ಇವತ್ತಿಗೂ ಊರ ಜನರಿಗೆ ತೊಂದರೆ ಕೊಡದವರು.   ಇವರ ದ್ವಿತಿಯ ಪುತ್ರ ರಾಹುಲ್ ಶಿವಮೊಗ್

Blog number 895. ಶಿವಮೊಗ್ಗದ ಹೆರಿಟೇಜ್ ಹೋಟೆಲ್ ಮಿನಾಕ್ಷಿ ಭವನ ನಮ್ಮ ಪೆವರೀಟ್ ರೆಸ್ಟೋರಾಂಟ್

#ನಾನು_ಶಿವಮೊಗ್ಗಕ್ಕೆ_ಹೋದಾಗೆಲ್ಲ_ಹೋಗುವ_ಮಿನಾಕ್ಷಿಭವನ #ಇವತ್ತು_ಕನ್ನಡದ_ಪ್ರಸಿದ್ಧ_Msalachaimediaದಲ್ಲಿ #ಇಲ್ಲಿನ_ಪ್ರತಿಯೊಂದು_ಮೆನು_ಉತ್ಕೃಷ್ಟ_ಮತ್ತು_ರುಚಿಕರ   ಕಳೆದ 40 ವರ್ಷದಿಂದ ನನ್ನ ಪೆವರಿಟ್ ಹೋಟೆಲ್ ಮಿನಾಕ್ಷಿ ಭವನ,ಈಗಿನ ತಲೆಮಾರಿನ ಇಬ್ಬರೂ ಮಾಲಿಕರಾದ ಸಹೋದರರು ಆನಂದಪುರಂನ ನನ್ನ ಕಛೇರಿಗೆ ಆನಾ ವಿಜೇಂದ್ರ ಅವರ ಜೊತೆ ಬಂದಿದ್ದರು, ಬಹುಶಃ ಅವರಿಗೆ ನೆನಪಿರಲಿಕ್ಕಿಲ್ಲ.   ಇವತ್ತು ಕನ್ನಡದ ಪ್ರಸಿದ್ಧ Vlog Masala chai media ದಲ್ಲಿ ಮಿನಾಕ್ಷಿ ಭವನ Explore ಇಲ್ಲಿ ನೋಡಿ https://fb.watch/dNIlG_qE6-/

Blog number 894.ಬಾರತದ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಂತ್ರಿಕ ಎನ್ನಿಸಿದ್ದ ಇ.ಎ.ಎಸ್. ಪ್ರಸನ್ನರ ಜನ್ಮಸ್ಥಳ ಶಿವಮೊಗ್ಗದ ದುರ್ಗಿಗುಡಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಜಿ ಆರ್.ವಿಶ್ವನಾಥರ ಜನ್ಮಸ್ಥಳ, ಇವರಿಬ್ಬರ ಮಾಹಿತಿಯ ಚಿತ್ರ ಪಟ ಶಿವಮೊಗ್ಗದ ಕ್ರಿಕೆಟ್ ಸ್ಟೇಡಿಯಂನಲ್ಲಿ ಇರುವಂತಾಗಲಿ, ಇವರಿಬ್ಬರ ಗೌರವಾರ್ಥ ಪ್ರಮುಖ ರಸ್ತೆಗೆ ನಾಮಕರಣ ಆಗಲಿ ಎಂದು ಜಿಲ್ಲೆಯ ಕ್ರಿಕೆಟ್ ಪ್ರಿಯರು ಒತ್ತಾಯಿಸಲಿ.

#ಭಾರತದ_ಪ್ರಸಿದ್ಧ_ಸ್ಪಿನ್_ಬೌಲಿಂಗ್_ಮಾಂತ್ರಿಕ_ಇ_ಎ_ಎಸ್_ಪ್ರಸನ್ನ_ಹುಟ್ಟಿದ್ದು_ಶಿವಮೊಗ್ಗದಲ್ಲಿ. #ಕೇಂದ್ರಸರ್ಕಾರದ_ಪದ್ಮಶ್ರೀ_ಪ್ರಶಸ್ತಿ_ವಿಜೇತರು #ಪ್ರಸನ್ನ_ಹುಟ್ಟಿದ್ದು_ಶಿವಮೊಗ್ಗದ_ದುರ್ಗಿಗುಡಿಯಲ್ಲಿ #ಅವರು_ಜನಿಸಿದ_ಸ್ಥಳದಲ್ಲಿ_ಈಗ_ಹೋಟೆಲ್_ನಿಮಾ೯ಣ_ಆಗಿದೆ_ಅಂತೆ. #ಪತ್ರಕರ್ತರಾದ_ಸಾಗರದ_ಡಿ_ಪಿ_ಸತೀಶ್_ನಿನ್ನೆ_ಅವರ_ಬೇಟಿ_ಮಾಡಿದ_ಬಗ್ಗೆ_ಪೋಸ್ಟಲ್ಲಿ_ಬರೆದಿದ್ದಾರೆ. #ಜಿ_ಆರ್_ವಿಶ್ವನಾಥ್_ಭದ್ರಾವತಿಯವರು.   #ಶಿವಮೊಗ್ಗ_ಕ್ರಿಕೆಟ್_ಸ್ಟೇಡಿಯ೦ನಲ್ಲಿ_ಜಿಲ್ಲೆಯ_ಕ್ರಿಕೆಟ್_ದಿಗ್ಗಜರಾದ_ಪ್ರಸನ್ನ_ಜಿಆರ್_ವಿಶ್ವನಾಥರ #ಚಿತ್ರ_ಮಾಹಿತಿ_ಆಳವಡಿಸಲಿ   ನಿನ್ನೆ ಗೆಳೆಯರ ಒತ್ತಾಯದಿಂದ ಬೆಂಗಳೂರು ಸ್ಟೇಡಿಯಂಗೆ ಹೋಗಿದ್ದ ಅಂಬಾನಿ ಗುಂಪಿನ ಪತ್ರಿಕೋದ್ಯಮದ ದಕ್ಷಿಣ ಬಾರತ ಮತ್ತು ಶ್ರೀಲಂಕಾ ಮಾರಿಷಸ್ ನ ಜವಾಬ್ದಾರಿಯ ಹೊಂದಿರುವ ಸಾಗರ ತಾಲ್ಲೂಕಿನ ಡಿ.ಪಿ. ಸತೀಶ್ ಅಲ್ಲಿ ಮಳೆ ಕಾರಣ ಪಂದ್ಯ ಸರಿಯಾಗಿ ನಡೆಯದಾಗ ಡೈನಿಂಗ್ ಹಾಲ್ ಗೆ ಹೋದಾಗ ಅಲ್ಲಿ ಭಾರತದ ಕ್ರಿಕೆಟ್ ಬೌಲಿಂಗ್ ಮಾತ್ರಿಕ EAS ಪ್ರಸನ್ನರ ಬೇಟಿ ಮಾಡಿದಾಗ ಇವರು ಶಿವಮೊಗ್ಗ ಜಿಲ್ಲೆ ಅಂದಾಗ ಪ್ರಸನ್ನ ಅವರು "ತಾನೂ ಜನಿಸಿದ್ದು ಶಿವಮೊಗ್ಗದ ದುರ್ಗಿಗುಡಿಯಲ್ಲಿ, ಶಿವಮೊಗ್ಗ ಊರು ಸುಂದರ,ಅಲ್ಲಿನ ಜನ ಒಳ್ಳೆಯವರು" ಅಂತ ಮಾತಾಡಿದ್ದಾರೆ.   ಏನೇ ಆಗಲಿ ಪ್ರಸನ್ನರ ಜನ್ಮಸ್ಥಳ ಶಿವಮೊಗ್ಗ ಎನ್ನುವುದು ಶಿವಮೊಗ್ಗ ಜಿಲ್ಲೆಯ ನಮಗೆಲ್ಲ ಹೆಮ್ಮೆಯ ವಿಷಯ ಕೂಡ, ಪ