Skip to main content

Blog number 894.ಬಾರತದ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಂತ್ರಿಕ ಎನ್ನಿಸಿದ್ದ ಇ.ಎ.ಎಸ್. ಪ್ರಸನ್ನರ ಜನ್ಮಸ್ಥಳ ಶಿವಮೊಗ್ಗದ ದುರ್ಗಿಗುಡಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಜಿ ಆರ್.ವಿಶ್ವನಾಥರ ಜನ್ಮಸ್ಥಳ, ಇವರಿಬ್ಬರ ಮಾಹಿತಿಯ ಚಿತ್ರ ಪಟ ಶಿವಮೊಗ್ಗದ ಕ್ರಿಕೆಟ್ ಸ್ಟೇಡಿಯಂನಲ್ಲಿ ಇರುವಂತಾಗಲಿ, ಇವರಿಬ್ಬರ ಗೌರವಾರ್ಥ ಪ್ರಮುಖ ರಸ್ತೆಗೆ ನಾಮಕರಣ ಆಗಲಿ ಎಂದು ಜಿಲ್ಲೆಯ ಕ್ರಿಕೆಟ್ ಪ್ರಿಯರು ಒತ್ತಾಯಿಸಲಿ.

#ಭಾರತದ_ಪ್ರಸಿದ್ಧ_ಸ್ಪಿನ್_ಬೌಲಿಂಗ್_ಮಾಂತ್ರಿಕ_ಇ_ಎ_ಎಸ್_ಪ್ರಸನ್ನ_ಹುಟ್ಟಿದ್ದು_ಶಿವಮೊಗ್ಗದಲ್ಲಿ.

#ಕೇಂದ್ರಸರ್ಕಾರದ_ಪದ್ಮಶ್ರೀ_ಪ್ರಶಸ್ತಿ_ವಿಜೇತರು

#ಪ್ರಸನ್ನ_ಹುಟ್ಟಿದ್ದು_ಶಿವಮೊಗ್ಗದ_ದುರ್ಗಿಗುಡಿಯಲ್ಲಿ

#ಅವರು_ಜನಿಸಿದ_ಸ್ಥಳದಲ್ಲಿ_ಈಗ_ಹೋಟೆಲ್_ನಿಮಾ೯ಣ_ಆಗಿದೆ_ಅಂತೆ.

#ಪತ್ರಕರ್ತರಾದ_ಸಾಗರದ_ಡಿ_ಪಿ_ಸತೀಶ್_ನಿನ್ನೆ_ಅವರ_ಬೇಟಿ_ಮಾಡಿದ_ಬಗ್ಗೆ_ಪೋಸ್ಟಲ್ಲಿ_ಬರೆದಿದ್ದಾರೆ.

#ಜಿ_ಆರ್_ವಿಶ್ವನಾಥ್_ಭದ್ರಾವತಿಯವರು.
 
#ಶಿವಮೊಗ್ಗ_ಕ್ರಿಕೆಟ್_ಸ್ಟೇಡಿಯ೦ನಲ್ಲಿ_ಜಿಲ್ಲೆಯ_ಕ್ರಿಕೆಟ್_ದಿಗ್ಗಜರಾದ_ಪ್ರಸನ್ನ_ಜಿಆರ್_ವಿಶ್ವನಾಥರ
#ಚಿತ್ರ_ಮಾಹಿತಿ_ಆಳವಡಿಸಲಿ
  ನಿನ್ನೆ ಗೆಳೆಯರ ಒತ್ತಾಯದಿಂದ ಬೆಂಗಳೂರು ಸ್ಟೇಡಿಯಂಗೆ ಹೋಗಿದ್ದ ಅಂಬಾನಿ ಗುಂಪಿನ ಪತ್ರಿಕೋದ್ಯಮದ ದಕ್ಷಿಣ ಬಾರತ ಮತ್ತು ಶ್ರೀಲಂಕಾ ಮಾರಿಷಸ್ ನ ಜವಾಬ್ದಾರಿಯ ಹೊಂದಿರುವ ಸಾಗರ ತಾಲ್ಲೂಕಿನ ಡಿ.ಪಿ. ಸತೀಶ್ ಅಲ್ಲಿ ಮಳೆ ಕಾರಣ ಪಂದ್ಯ ಸರಿಯಾಗಿ ನಡೆಯದಾಗ ಡೈನಿಂಗ್ ಹಾಲ್ ಗೆ ಹೋದಾಗ ಅಲ್ಲಿ ಭಾರತದ ಕ್ರಿಕೆಟ್ ಬೌಲಿಂಗ್ ಮಾತ್ರಿಕ EAS ಪ್ರಸನ್ನರ ಬೇಟಿ ಮಾಡಿದಾಗ ಇವರು ಶಿವಮೊಗ್ಗ ಜಿಲ್ಲೆ ಅಂದಾಗ ಪ್ರಸನ್ನ ಅವರು "ತಾನೂ ಜನಿಸಿದ್ದು ಶಿವಮೊಗ್ಗದ ದುರ್ಗಿಗುಡಿಯಲ್ಲಿ, ಶಿವಮೊಗ್ಗ ಊರು ಸುಂದರ,ಅಲ್ಲಿನ ಜನ ಒಳ್ಳೆಯವರು" ಅಂತ ಮಾತಾಡಿದ್ದಾರೆ.
  ಏನೇ ಆಗಲಿ ಪ್ರಸನ್ನರ ಜನ್ಮಸ್ಥಳ ಶಿವಮೊಗ್ಗ ಎನ್ನುವುದು ಶಿವಮೊಗ್ಗ ಜಿಲ್ಲೆಯ ನಮಗೆಲ್ಲ ಹೆಮ್ಮೆಯ ವಿಷಯ ಕೂಡ, ಪ್ರಸನ್ನರು ಭಾರತ ಕ್ರಿಕೆಟ್ ತಂಡದಲ್ಲಿ ಮಾಡಿದ ಸಾದನೆಗಾಗಿ ಕೇಂದ್ರ ಸರ್ಕಾರ ಪದ್ಮ ಪುರಸ್ಕಾರವೂ ನೀಡಿದೆ.
  ಇನ್ನೊಬ್ಬ ಅದ್ಭುತ ಕ್ರಿಕೆಟ್ ತಾರೆ ಜಿ.ಆರ್.ವಿಶ್ವನಾಥ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು ಅವರ ವಿವಾಹ ಗವಾಸ್ಕರ್ ಸಹೋದರಿಯೊಂದಿಗೆ ಇದರ ಜೊತೆ ಪ್ರಸನ್ನರು ಸೇರಿದ್ದಾರೆ.
 ಶಿವಮೊಗ್ಗದ ದುರ್ಗಿಗುಡಿಯಲ್ಲಿ ಪ್ರಸನ್ನರು ಜನಿಸಿದ ಸ್ಥಳ ಈಗ ಯಾವುದೋ ಹೋಟೆಲ್ ನಿಮಾ೯ಣವಾಗಿದೆ ಅಂತೆ.
  ಬೆಂಗಳೂರಲ್ಲಿನ ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡಿದ್ದಾರೆ, ಇದೇ ರೀತಿ ಶಿವಮೊಗ್ಗದಲ್ಲೂ ಆಗಲಿ, ಶಿವಮೊಗ್ಗ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಸನ್ನರ, ಭದ್ರಾವತಿ ಮೂಲದ ಜಿ.ಆರ್.ವಿಶ್ವನಾಥರ ಚಿತ್ರ ಮಾಹಿತಿ ಅಳವಡಿಸುವಂತಾಗಲಿ.
 ಈರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ (EAS PRASANNA ) ಜನಿಸಿದ್ದು 22- ಮೇ -1940 ಆ ಕಾಲದ ಮಾಹಿತಿ ಯಾರಲ್ಲಾದರೂ ಇರಬಹುದು.
  ಡಿ.ಪಿ. ಸತೀಶರು ಅವರ ಸಾಗರ ತಾಲೂಕಿನ ಶರಾವತಿ ನದಿಯ ದಡದಲ್ಲಿನ ಮನೆಗೆ ಅವರನ್ನು ಆಹ್ವಾನಿಸಿದ್ದಾರೆ ಅವರು ಅಲ್ಲಿಗೆ ಬಂದಾಗ ಪ್ರಸನ್ನರ ಶಿವಮೊಗ್ಗ ಒಡನಾಟದ ಹೆಚ್ಚಿನ ಮಾಹಿತಿ ಸತೀಶರು ಹೊರ ತೆಗೆಯುತ್ತಾರೆ ಮತ್ತು ಇದು ಜಿಲ್ಲೆಯ ಕ್ರಿಕೆಟ್ ಪ್ರಿಯರಿಗೆ ಆಸಕ್ತಿಯ ಮತ್ತು ಕುತೂಹಲದ ಸಂಗತಿ ಕೂಡ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ