Skip to main content

Blog number 897. ಆನಂದಪುರಂ ಇತಿಹಾಸ ಭಾಗ-75. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಇಡೀ ಕನ್ನಡ ಚಿತ್ರರಂಗದ ತಾರೆಗಳ ಯಾತ್ರೆ ಆನಂದಪುರಂ ಬಸ್ ನಿಲ್ದಾಣದಲ್ಲಿ ಕನ್ನಡ ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂಬ ಗೋಕಾಕ್ ವರದಿ ಜಾರಿಗಾಗಿ ಸಭೆ ನಡೆದಿತ್ತು.

#ಆನಂದಪುರಂ_ಇತಿಹಾಸ_75.

#ಗೋಕಾಕ್_ಚಳವಳಿಯಲ್ಲಿ_ಆನಂದಪುರ೦ಗೆ_ರಾಜಕುಮಾರ್_ಸಿನಿತಂಡ 

#ಆ_ದಿನ_3_ಜುಲೈ_1982.

#ವಿ_ಕೃ_ಗೋಕಾಕ್_ಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಅಲ್ಪಕಾಲ_ಬೋದನೆ_ಮಾಡಿದ್ದರು.

#ಆನಂದಪುರಂನ_ಈ_ಕಾಯ೯ಕ್ರಮಕ್ಕೆ_ಆಗಿನ_ರಾಜಕುಮಾರ್_ಆಭಿಮಾನಿ_ಸಂಘಕ್ಕೆ_ಆದ_ವೆಚ್ಚ_43_ರೂಪಾಯಿ

#ರಾಜಕುಮಾರರನ್ನು_ನೋಡಲು_ಸೇರಿದ_ಜನ_ಸಹಸ್ರಾರು 

#ಶಿವಮೊಗ್ಗ_ಜಿಲ್ಲಾ_ರಾಜಕುಮಾರ್_ಅಭಿಮಾನಿ_ಸಂಘದ_ಆಗಿನ_ಗೌರವಾಧ್ಯಕ್ಷರು_ನೆಲ್ಲಿಲಾಡ್ಜ್_ವಿಠಲಮೂರ್ತಿ

#ಜಿಲ್ಲಾಧ್ಯಕ್ಷ_ಶ್ರೀನಿದಿ_ಟೆಕ್ಸಟೈಲ್ಸ್_ಶ್ರೀಧರಮೂರ್ತಿ

#ಸಾಗರ_ತಾಲ್ಲೂಕ್_ಅಧ್ಯಕ್ಷ_ಸಾಗರದ_SRS_ಮಿಲ್_ಮಹೇಶ್_ಮೂರ್ತಿ.
 

 ಆನ೦ದಪುರಂ ಇತಿಹಾಸ ಪುಸ್ತಕದಲ್ಲಿ ಕನ್ನಡದ ಪ್ರಖ್ಯಾತ ಚಲನಚಿತ್ರ ನಟ ಡಾ.ರಾಜ್ ಕುಮಾರ್ ಎರೆಡು ಬಾರಿ ದಾಖಲಾಗುತ್ತಾರೆ ಒಂದು ಗೋಕಾಕ್ ಚಳವಳಿಯ ಭಾಗವಾಗಿ ಇನ್ನೊಂದು ಅವರ ಆಕಸ್ಮಿಕ ಚಲನಚಿತ್ರದ ಚಿತ್ರಿಕರಣದಲ್ಲಿ.
 1980 ರ ದಶಕದಲ್ಲಿ ಡಾ.ರಾಜ್ ಕುಮಾರ್ ಕರ್ನಾಟಕದ ಆರಾಧ್ಯ ದೈವವೇ ಈ ಸಂದರ್ಭದಲ್ಲಿ ಅಂದರೆ 5- ಜುಲೈ -1980 ರಲ್ಲಿ ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಕನಾ೯ಟಕ ಸಕಾ೯ರದ ಮುಖ್ಯಮಂತ್ರಿ ಗುಂಡೂರಾಯರು ಶಾಲಾ ಶಿಕ್ಷಣದಲ್ಲಿ ಬಾಷಾ ನೀತಿ ಮರು ಯೋಜನೆಗೆ ಸಮಿತಿ ರಚಿಸುತ್ತಾರೆ.
  ತ್ರಿಬಾಷಾ ಸೂತ್ರದಡಿ ಕರ್ನಾಟಕ ರಾಜ್ಯದಲ್ಲಿನ ಶಾಲೆಯಲ್ಲಿ ಕನ್ನಡ ಮುಖ್ಯ ಬಾಷೆಯಾಗಿ ಪರಿಗಣಿಸುವಂತೆ ತಿದ್ದು ಪಡಿಗಾಗಿ ವಿ.ಕೃ.ಗೋಕಾಕ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ.
  ಇದಕ್ಕೆ ಅನೇಕ ಭಾಷಾ ವ್ಯಾಸಂಗಸ್ಥರ ವಿರೋದ ವ್ಯಕ್ತವಾದ್ದರಿಂದ ಸರ್ಕಾರ ಯಾವುದೇ ನಿರ್ದಾರ ತೆಗೆದುಕೊಳ್ಳುವುದಿಲ್ಲ.
  1956 ರಿಂದ ರಾಜ್ಯ ತ್ರಿಬಾಷಾ ಸೂತ್ರ ಅಳವಡಿಸಿಕೊಂಡು ಹಿಂದಿ-ಇಂಗ್ಲೀಷ್ ಕಡ್ಡಾಯ ಶಿಕ್ಷಣವಾಗಿ ಮಾಡಿತ್ತು ಇದಕ್ಕೆ ಕಾರಣ ರಾಜ್ಯದಲ್ಲಿ ಕನ್ನಡ ಅದಿಕೃತ ಭಾಷೆಯಾಗಿ ಸರ್ಕಾರ ಘೋಷಿಸಿರಲಿಲ್ಲ ಇದರಿಂದ ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆ ಆಗಿ ಅಭ್ಯಸಿಸದೇ ಶಿಕ್ಷಣ ಮುಂದುವರಿಸುತ್ತಿದ್ದರು.
  ಇವುಗಳಿಗೆ ಇತಿಶ್ರೀ ಹಾಡಲು ಗೋಕಾಕರ ಸಮಿತಿ ಸಿದ್ಧಪಡಿಸಿದ ವರದಿ ಅನುಷ್ಟಾನಕ್ಕಾಗಿ ನಡೆದ ಚಳವಳಿಯೇ ಗೋಕಾಕ್ ಚಳವಳಿ.
  ಆಗ ಬೆಂಗಳೂರಿನ ಕಬ್ಬನ್ ಪಾರ್ಕ್ ನಿಂದ ಕನ್ನಡ ಚಳವಳಿಗಾರ ಜಿ.ನಾರಾಯಣ ಕುಮಾರ್ ವಿಧಾನ ಸೌದ ಮುತ್ತಿಗೆಯ ಕಾರ್ಯಕ್ರಮ ಹಮ್ಮಿಕೊಂಡಾಗ ಸರ್ಕಾರ ಲಾಠಿ ಛಾರ್ಜ್ ಮಾಡುತ್ತದೆ ಇದನ್ನು ವಿರೋದಿಸಿ ಅನೇಕ ಸಂಘ ಸಂಸ್ಥೆ ಚಳವಳಿಗೆ ಬೆಂಬಲಿಸುತ್ತದೆ.
  ದಾರವಾಡದಲಿ ಚಂದ್ರಶೇಖರ ಪಾಟೀಲರು ಗೋಕಾಕ್ ವರದಿಗಾಗಿ ಚಳವಳಿ ಪ್ರಾರಂಬಿಸುತ್ತಾರೆ ಆಗಲೇ ಜಿ.ನಾರಾಯಣ ಕುಮಾರರು ಚೆನೈಗೆ ಹೋಗಿ ಕನ್ನಡ ಚಲನಚಿತ್ರರ೦ಗದ ಮೇರು ನಟ ಡಾ.ರಾಜ್ ಕುಮಾರರಿಗೆ ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆ ಆಗಿ ಸರ್ಕಾರ ಘೋಷಿಸುವ೦ತೆ ಗೋಕಾಕರ ವರದಿ ಅನುಷ್ಠಾನಕ್ಕೆ ಕನ್ನಡದ ನಟ ನಟಿಯರ ಭಾಗವಹಿಸುವಂತೆ ಒಪ್ಪಿಸಲು ಸಫಲರಾಗುತ್ತಾರೆ.
  ಡಾ.ರಾಜ್ ಕುಮಾರ್ ಬೆಂಗಳೂರಿಂದ ಬೆಳಗಾವಿ ತನಕ ಹಮ್ಮಿಕೊಂಡ ಗೋಕಾಕ್ ಚಳವಳಿಗೆ ಇಡೀ ಕನ್ನಡ ಚಿತ್ರರಂಗ ಭಾಗವಹಿಸುತ್ತದೆ, ಸಾಹಿತಿಗಳು, ಪತ್ರಕರ್ತರೂ ಬೆಂಬಲಿಸುತ್ತಾರೆ ಇಡೀ ರಾಜ್ಯದ ಜನತೆ ಒಕ್ಕೊರಲಿನಿಂದ ರಾಜ್ ಹೋರಾಟಕ್ಕೆ ಬೆಂಬಲಿಸಿದ್ದರಿಂದ ಸರ್ಕಾರ ಕನ್ನಡ ಭಾಷೆ ರಾಜ್ಯದ ಅಧಿಕೃತ ಬಾಷೆ ಆಗಿ ಘೋಷಣೆ ಮಾಡುತ್ತದೆ, ಶಿಕ್ಷಣದಲ್ಲಿ ಕನ್ನಡ ಮೊದಲ ಭಾಷೆ ಆಗಲು ಇದು ದೊಡ್ಡ ಹೋರಾಟ.
  ಆನಂದಪುರಂನಲ್ಲಿ ಹುಟ್ಟಿ ಇಲ್ಲಿನ ಕನ್ನಡ ಶಾಲೆಯಲ್ಲೆ ವ್ಯಾಸಂಗ ಮಾಡಿ, ದೇವರಾಜ ಅರಸರ ಸರ್ಕಾರದಲ್ಲಿ ರಾಜ್ಯದ ಶಿಕ್ಷಣ ಮತ್ತು ಸಂಸ್ಕೃತಿ ಮಂತ್ರಿಗಳಾಗಿದ್ದ ಬದರೀನಾರಾಯಣ ಅಯ್ಯಂಗಾರರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇತಿಹಾಸ ಇಂತಹ ಮಹತ್ವ ಇರುವ ಊರಿಗೆ ಗೋಕಾಕ್ ಚಳವಳಿಯ ಡಾ.ರಾಜ್ ಕುಮಾರ್ ರ ಕರೆಸುವಲ್ಲಿ ಸ್ಥಳಿಯ ಆ ಕಾಲದ ಯುವಕರ ಸಂಘಟನೆ ಮುಖ್ಯ ಕಾರಣವಾಗಿತ್ತು.
  ಈಗಿನ ಆನಂದಪುರಂ ಕನ್ನಡ ಸಂಘದ ಅಂದಿನ ಹೆಸರು ರಾಜ್ ಕುಮಾರ್ ಅಭಿಮಾನಿ ಸಂಘ ಇದರ ಆಗಿನ ಅಧ್ಯಕ್ಷ ನನ್ನ ಸಹೋದರ ಕೆ.ನಾಗರಾಜ್, ಕಾಯ೯ದಶಿ೯ ಹಾ. ಮೊ. ಬಾಷಾ, A.S. ಪ್ರಾಣೇಶ್ ಆಚಾರ್, ಕೆ.ವಿ.ಸುರೇಶ್, ಮೇಷ ರಾಮಚಂದ್ರ ಜೋಯಿಸ್, ಹೆಚ್. ಮಂಜುನಾಥ ಶೇಟ್, J.J. ಕಾಮತ್, K. T. ತಿಮ್ಮೇಷ, N. K. ಸುರೇಶ್ ನಾಯಕ್, ಮೋಹನ್, ಗೋಪಾಲ್, R. ಶ್ರೀನಿವಾಸ್, Y. ರಾಮೋಜಿ ಸೇರಿ 69 ಜನ ಸದಸ್ಯರ ಸಂಘವಾಗಿತ್ತು.
 ಇವರಿಗೆ ಆಗಿನ ಶಿವಮೊಗ್ಗ ಜಿಲ್ಲಾ ರಾಜ್ ಕುಮಾರ್ ಅಭಿಮಾನಿ ಸಂಘದ ಗೌರವಾಧ್ಯಕ್ಷರಾಗಿದ್ದ ನೆಲ್ಲಿ ಲಾಡ್ಜ್ ನ ವಿಠಲ್ ಮೂರ್ತಿ, ಅದ್ಯಕ್ಷರಾಗಿದ್ದ ಶ್ರೀನಿಧಿ ಟೆಕ್ಸಟೈಲ್ ಮಾಲಿಕರಾದ ಶ್ರೀಧರಮೂರ್ತಿ ಬೆಂಗಾವಲು.
  ಆಗ ಸಾಗರದಲ್ಲಿ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರು SRS ರೈಸ್ ಮಿಲ್ ನ ಮಹೇಶ್ ಕುಮಾರ್.
  ಶಿವಮೊಗ್ಗ ಸಭೆ ನಂತರ, ರಿಪ್ಪನ್ ಪೇಟೆ ಸಭೆ ನಂತರ ಆನಂದಪುರಂ ಬಸ್ ಸ್ಟಾಂಡ್ ನಲ್ಲಿ ಸಭೆ ಮುಗಿಸಿ ಸಾಗರದ ನೆಹರೂ ಮೈದಾನದಲ್ಲಿ ಬೃಹತ್ ಸಭೆ ಆಯೋಜಿಸಲಾಗಿತ್ತು.
  ಆನಂದಪುರಂ ಸಭೆಯ ಸ್ಥಳದಲ್ಲಿ ಗೋಕಾಕ್ ಚಳವಳಿಯ ಯಾತ್ರೆಯ ಗುರುತಿಗಾಗಿ ಸಂಪತ್ತಿಗೆ ಸವಾಲ್ ಚಿತ್ರದ ಪೋಸ್ಟರ್ ಬಿದಿರು ತಟ್ಟಿಗೆ ಅಂಟಿಸಿ ಕಟ್ಟಲಾಗಿತ್ತು.
  ರಾಜ್ ಕುಮಾರ್ ನೋಡಲು ಅವತ್ತು  ಅಂದರೆ 3ನೇ ತಾರೀಖು ಜುಲೈ ತಿಂಗಳು 1982ರ೦ದು ಆನಂದಪುರಂ ಬಸ್ ನಿಲ್ದಾಣದಲ್ಲಿ ಸೇರಿದ ಜನ ಕೆಲವು ಸಹಸ್ರ ಜನ.
  ಬಸ್ ನಿಂದ ನಿಗದಿತ ಸ್ಥಳದಲ್ಲಿ ರಾಜ್ ಕುಮಾರ್ ಮೊದಲಿಗೆ ಇಳಿದರು ಅವರಿಗೆ ಗುಲಾಭಿ ಹೂವು ನೀಡಿ ಸ್ವಾಗತಿಸಿದವರು ನನ್ನ ಸಹೋದರ ಆನಂದಪುರಂನ ರಾಜ್ ಕುಮಾರ್ ಅಭಿಮಾನಿ ಸಂಘದ ಸ್ಥಾಪಕ ಅಧ್ಯಕ್ಷ ಕೆ.ನಾಗರಾಜ್ ಅವಾಗ ಅವರಿಗೆ 25 ವರ್ಷದ ಪ್ರಾಯ ಪ್ರೇಕ್ಷನಾಗಿದ್ದ ನನ್ನ ವಯಸ್ಸು 15.
   ರಾಜ್ ಕುಮಾರ್ ರನ್ನು ಕೈ ಹಿಡಿದು ಬಸ್ಸಿನ ಹಿಂದಿನ ಏಣಿಯಲ್ಲಿ ಬಸ್ಸಿನ ಮೇಲ್ಬಾವಣಿಗೆ ಕರೆದೊಯ್ದು ಅವರ ಕೈಯಲ್ಲಿ ಮೈಕ್ ನೀಡಿ ಭಾಷಣ ಮಾಡಲು ಸಹಕರಿಸಿದವರು ಶಂಕರ್ ನಾಗ್, ಬಸ್ಸಿನಲ್ಲಿ ಇದ್ದವರು ವಿಷ್ಣುವರ್ಧನ್, ಅಂಬರೀಷ್, ಲೋಕೇಶ್ ಮುಂತಾದ ಆಕಾಲದ ನಟರು.
  ಅವತ್ತಿನ ಕಾಯ೯ಕ್ರಮಕ್ಕೆ ಆನಂದಪುರಂನ ಜನ ನೀಡಿದ ದೇಣಿಗೆ 150 ರೂಪಾಯಿ ಅದರಲ್ಲಿ ಖಚಾ೯ಗಿದ್ದು 43 ರೂಪಾಯಿ ಎಂದು ಸಂಘದ ಲೆಕ್ಕ ಪತ್ರದಲ್ಲಿ ನಮೂದಾಗಿದೆ.
  ನಂತರ ಸಾಗರದಲ್ಲಿ ನಡೆದ ಸಭೆಯಲ್ಲಿ ಮಳೆ ಬಂದರೂ ಜನ ಕದಲದೆ ರಾಜ್ ರ ಬಾಷಣ ಕೇಳಿದರು.
  ಹೀಗೆ ಕರ್ನಾಟಕ ಎಂಬ ನಾಮಕರಣದಲ್ಲಿ ಬದರಿನಾರಾಯಣ ಅಯ್ಯಂಗಾರರ ಪ್ರಮುಖ ಪಾತ್ರ ವಹಿಸಿದ ಅವರ ಹುಟ್ಟೂರು ಆನಂದಪುರಂನಲ್ಲಿ ಕನ್ನಡದ ಪ್ರಖ್ಯಾತ ನಟ ರಾಜಕುಮಾರರ ಗೋಕಾಕ್ ವರದಿ ಅನೂಷ್ಟಾನದ ಒತ್ತಾಯದ ಯಾತ್ರೆ ಆನಂದಪುರಂಗೆ ಕರೆತಂದ ಆಗಿನ ರಾಜಕುಮಾರ್ ಅಭಿಮಾನಿ ಸಂಘ (ಈಗಿನ ಕನ್ನಡ ಸಂಘ) ಸದಾ ಸ್ಮರಣೀಯವಾಗಿದೆ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ