Skip to main content

Blog number 883. ತೀರ್ಥಹಳ್ಳಿಯ ಲಕ್ಷ್ಮೀಶ್ ವಾರಪತ್ರಿಕೆ ಸಂಪಾದಕರಾದ ಲಕ್ಷ್ಮೀಶ್ ರ ಬರವಣಿಗೆಗೆ ನಾನು ಅವರ ಅಭಿಮಾನಿ, ಮೊನ್ನೆ ನನ್ನ ಕಛೇರಿಗೆ ಅವರ ಆಗಮನ.

#ತೀರ್ಥಹಳ್ಳಿಯ_ಲಕ್ಷ್ಮೀಶ್_ವಾರಪತ್ರಿಕೆ

#ಸಂಪಾದಕರಾದ_ಲಕ್ಷ್ಮೀಶ್_ನಮ್ಮಲ್ಲಿಗೆ

#ನಾನು_ಇವರ_ಬರವಣಿಗೆಯ_ಅಭಿಮಾನಿ

#ಬೆಂಗಳೂರಿಂದ_ಇವರು_ಪತ್ರಿಕೆ_ಮಾಡುತ್ತಿದ್ದರೆ_ಇನ್ನೊಬ್ಬ_ರವಿಬೆಳೆಗೆರೆ_ಆಗುತ್ತಿದ್ದರು.

  ತೀರ್ಥಹಳ್ಳಿಯ ಪತ್ರಿಕೆಗಳ ಒಡನಾಟ ನನ್ನ ಬಾಲ್ಯದಿಂದಲೇ ಪ್ರಾರಂಭ ಆಯಿತು, ನಮ್ಮ ತಂದೆಯ ಗೆಳೆಯರಾದ A.S.ಗಣಪತಿ ( ನಮ್ಮ ಊರಿಂದ 10 ಕಿ.ಮಿ.ದೂರದ ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿಯವರು ಅವರ ಇನಿಷಿಯಲ್ ನ A ಆಲಗೇರಿ ಮಂಡ್ರಿ ಇರಬಹುದಾ? ಗೊತ್ತಿಲ್ಲ) ಅವರ #ಛಲಗಾರ_ಪತ್ರಿಕೆ ನಮ್ಮ ಮನೆಗೆ ಪೋಸ್ಟ್ ನಲ್ಲಿ ಬರುತ್ತಿತ್ತು,ನಂತರ (ನನ್ನ ನೆನಪು1978 ರಿಂದ ಇರಬಹುದು) ನಮ್ಮ ಅಣ್ಣ ಛಲಗಾರ ಪತ್ರಿಕೆ ಏಜೆಂಟ್ ಕಂ ವರದಿಗಾರ, 7 ಅಥವ 8ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಕೆಲಸ ಬೆಳಿಗ್ಗೆ 9ಕ್ಕೆ ಬರುವ ಶಂಕರ್ ಬಸ್ಸಿನ ಡ್ರೈವರ್ ಹತ್ತಿರ ಪತ್ರಿಕೆ ಬಂಡಲ್ ತೆಗೆದುಕೊಂಡು ಬರುವುದು.
  ನನಗೆ ಹಾಯ್ ಬೆಂಗಳೂರು ರವಿ ಬೆಳೆಗೆರೆ ಬರಹದ ನಂತರ ಅಷ್ಟೇ ಇಷ್ಟವಾದ ಬರಹಗಳು ತೀರ್ಥಹಳ್ಳಿಯ ಲಕ್ಷ್ಮೀಶ್ ವಾರಪತ್ರಿಕೆಯ ಸಂಪಾದಕರಾದ ಲಕ್ಷ್ಮೀಶ್ ರವರದ್ದು.
   ಲಂಕೇಶರಂತೆ ಇವರದ್ದೇ ಸ್ವಂತ ಹೆಸರಿನ ವಾರಪತ್ರಿಕೆ ಇವರದ್ದು.
   ತೀರ್ಥಹಳ್ಳಿಯಲ್ಲಿ ಹಾಲಿ ಇರುವ ಪತ್ರಿಕೆಗಳು ಮತ್ತು ಪತ್ರಕರ್ತರು ತಾಲ್ಲೂಕಿನ ಪ್ರಸಕ್ತ ರಾಜಕಾರಣದ ಬಗ್ಗೆ ಸದಾ ತಾಜಾ ಸುದ್ದಿಗಳು ನೀಡುತ್ತಿದೆ, ತಾಲ್ಲೂಕಿನ ಆಡಳಿತದಲ್ಲಿ ಸರಿ ತಪ್ಪುಗಳ ವಿಮರ್ಶೆ ಮಾಡುತ್ತಾ ಜನ ಸಾಮಾನ್ಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಇದರಲ್ಲಿ ಲಕ್ಷೀಷ್ ರ ಪಾತ್ರವೂ ದೊಡ್ಡದು.
  ಎಂತಹ ಶಕ್ತಿಶಾಲಿ ಬಲಿಷ್ಟರನ್ನೂ ಎದುರು ಹಾಕಿಕೊಳ್ಳುವ, ಇಡೀ ಸಮಾಜವೇ ದೂರ ಮಾಡಿದ ವ್ಯಕ್ತಿ ಇವರಿಗೆ ಇಷ್ಟ ಆದರೆ ಅವರ ಪರವಹಿಸುವ ಇವರ ಪರಿಯ ಬರಹ ಪ್ರಕಟಿಸುವುದರಲ್ಲಿ ಇವರನ್ನು ಮೀರಿಸಿದವರಿಲ್ಲ
   ಬಹುಷಃ ಇವರ ನಿಷ್ಟೂರವಾದ ಬರವಣಿಗೆ ಇವರ ಮೇಲೆ ಹಲ್ಲೆಗೆ , ಪೋಲಿಸ್ ಕೇಸ್ ಗೆ ಮತ್ತು ನಿಂದನೆಗೆ ಕಾರಣವಾದ ಸುದ್ದಿಗಳನ್ನು ಆಗಾಗ್ಗೆ ಇವರು ನೆನಪಿನ ಸುದ್ದಿಗಳಾಗಿ ಬರೆದಾಗಲೇ ಗೊತ್ತಾಗುತ್ತದೆ.
  ಎರೆಡು ವರ್ಷದ ಹಿಂದೆ ಇವರ ಹೃದಯ ಶಸ್ತ್ರಚಿಕಿತ್ಸೆ ನಂಜಪ್ಪ ಆಸ್ಪತ್ರೆಯಲ್ಲಿ ಆಗಿತ್ತು ಆ ಸಂದರ್ಭದಲ್ಲಿ ಹೋಗಿ ಬೇಟಿ ಆಗಿದ್ದೆ ನಂತರ ಆಗಾಗ ಪೋನಿನಲ್ಲಿ ಮಾತು, ನನ್ನ ಪುಸ್ತಕ ಓದಿ ವಿಮರ್ಷೆ ಇತ್ಯಾದಿಗಳಲ್ಲೇ ಪುನಃ ಬೇಟಿ ಆಗಿರಲಿಲ್ಲ.
  ಮೊನ್ನೆ ತಮ್ಮ ತೋಟಕ್ಕಾಗಿ ರಿಪ್ಪನ್ ಪೇಟೆಯ #ಅಂಕುರ್_ನಸ೯ರಿ ಯ ಜವುಳಿಯವರ ಹತ್ತಿರ ಕೆಲ ಗಿಡಗಳ ಖರೀದಿಸಲು ಬಂದವರು ನನ್ನ ಆಹ್ವಾನದ ಮೇಲೆ ನನ್ನ ಕಛೇರಿಗೆ ಬಂದಿದ್ದರು, ಅವರ ಪತ್ನಿ - ಪುತ್ರ ಮತ್ತು ಪುತ್ರಿಯ ಪರಿಚಯವೂ ಆಯಿತು ಪತ್ರಿಕೆಯ ಜಟಾಪಟಿ ಹೋರಾಟದಲ್ಲಿ ಸದಾ ಇದ್ದರೂ ಇವರು ತಮ್ಮ ಕುಟುಂಬಕ್ಕೆ ಹೆಚ್ಚು ಸಮಯ ನೀಡುವುದು ಇವರ ಸುಖಿ ಸಂಸಾರಕ್ಕೆ ಕಾರಣವಾಗಿದೆ.
  ಜಿಲ್ಲೆಯ ವಿವಿದ ಕ್ಷೇತ್ರದಲ್ಲಿ ಪ್ರಖ್ಯಾತರಾದ ಪ್ರತಿಭಾವಂತರರು, ಸಾಹಸಿಗಳು ಬಂದಾಗ ಅವರಿಗೆ ಸಣ್ಣದಾಗಿ ಗೌರವಿಸಿ ಸಂತೋಷ ಪಡುವುದು ನನ್ನ ಹವ್ಯಾಸ ಅದರಂತೆ ಶಾಲು ಹೊದಿಸಿ ಅಭಿನಂದಿಸಿದೆ, ನಿಮ್ಮ ಬರವಣಿಗೆಯ ಓದುವ ನಿಮ್ಮ ಅಭಿಮಾನಿ ನಾನು ಅಂದೆ, ಒಂದು ಸುದ್ದಿಯನ್ನು ಶುರುಮಾಡಿ ಅದನ್ನು ಅಂತ್ಯದ ತನಕ ರೋಚಕವಾಗಿ ತರ್ಕದೊಂದಿಗೆ ಒಯ್ಯುತ್ತೀರಿ ಅಂದೆ.
    ನೆನಪಿನ ಕಾಣಿಕೆಯಾಗಿ ಇತ್ತೀಚೆಗೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ಶಿರವಂತೆ ಹಸೆ ಚಿತ್ರದ ಪ್ರಖ್ಯಾತ ಕಲಾವಿದರಾದ ಗೌರಮ್ಮ ಚಂದ್ರಶೇಖರ್ ರರಿಂದ ಖರೀದಿಸಿ ತಂದಿದ್ದ ಸಣ್ಣ ಹಸೆ ಚಿತ್ತಾರ ಬಿಡಿಸಿದ ಪೆನ್ / ಕಾರ್ಡ್ ಇಡುವ ಬಾಕ್ಸ್ ನೆನಪಿನ ಕಾಣಿಕೆಯಾಗಿ ನೀಡಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...